ವಿಷಯದ ವಿವರಗಳಿಗೆ ದಾಟಿರಿ

ಜುಲೈ 7, 2011

6

ಮಾರಿಯಾ ಸುಸೈರಾಜ್ it’s not a controversy story

‍ನಿಲುಮೆ ಮೂಲಕ
-ಮಂಸೋರೆ, ಬೆಂಗಳೂರು

 ಒಂದು ಬಾರಿ ತಪ್ಪು ಮಾಡಿದವರು ಜೀವನ ಪೂರ್ತಿ ಆ ತಪ್ಪಿನ ಶಿಕ್ಷೆಯನ್ನು ಅನುಭವಿಸಬೇಕಾ? ತಪ್ಪು ಮಾಡಿದವರಿಗೆ ತಿದ್ದುಕೊಳ್ಳುವ ಅವಕಾಶವನ್ನೇ ನೀಡಬಾರದೇ? ಅಂತಹ ಅವಕಾಶವನ್ನು ಕಲ್ಪಿಸುವವರು ಕೂಡ ತಪ್ಪಿತಸ್ಥರಾ?

ಮಾರಿಯಾ ಮೋನಿಕಾ ಸೂಸೈರಾಜ್ ಮತ್ತು ರಾಮ್ ಗೋಪಾಲ ವರ್ಮಾ ವಿಷಯದಲ್ಲಿ ಈಗಿನ ಮಾಧ್ಯಮದವರು ರಾಜಕೀಯ ನಾಯಕರು ನಡೆಸುತ್ತಿರುವ ಪ್ರಹಸನಗಳನ್ನು ಗಮನಿಸಿದಾಗ ಈ ಮೇಲಿನ ಪ್ರಶ್ನೆಗಳು ಉದ್ಬವಿಸುತ್ತಾವೆ.

ಈ ಎಲ್ಲ ಪ್ರಹಸನಗಳು ಪ್ರಾರಂಭಕ್ಕೆ ಮುನ್ನುಡಿ ರಾಮ್ ಗೋಪಾಲ್ ವರ್ಮಾ ನೀರಜ್ ಗ್ರೋವರ್ ಹತ್ಯೆಯನ್ನು ಕುರಿತಾದ ಸಿನಿಮಾದಲ್ಲಿ ಪ್ರಮುಖ ಆರೋಪಿಯಾದ ಮಾರಿಯಾಳನ್ನೇ ತನ್ನ ಸಿನಿಮಾದಲ್ಲಿನ ಪಾತ್ರಕ್ಕೆ ಆಯ್ಕೆ ಮಾಡಿರುವುದು.

ಇದರಲ್ಲಿ ಮಾಧ್ಯಮದವರಿಗೆ ಮತ್ತು ರಾಜಕೀಯ ಪಕ್ಷಗಳ ಕಾಮಾಲೆ ಕಣ್ಣಿಗೆ ಕಂಡ ಘೋರ ಅಪರಾದವೇನು ಎಂದೇ ಗೊತ್ತಾಗುತ್ತಿಲ್ಲ.

ಇಷ್ಟಕ್ಕೂ ಈ ಹತ್ಯೆಯ ಹಿಂದಿನ ನಿಜವಾದ ಕಾರಣವೇನು ಎಂದು ತಿಳಿದುಕೊಳ್ಳುವ ಕೋರಿಕೆ ಯಾರಿಗು ಇಲ್ಲ. ಮಾರಿಯಾ ಅದರಲ್ಲಿ ತಪ್ಪಿತಸ್ಥೆ ಅದೊಂದೇ ನೆಪ ಸಾಕಾಗಿದೆ ಅವರವರ ಟಿ.ಆರ್.ಪಿ ಜಾಸ್ತಿ ಮಾಡಿಕೊಳ್ಳೋದಿಕ್ಕೆ ಮತ್ತು ರಾಜಕೀಯ ಪಕ್ಷಗಳಿಗೆ ತಮ್ಮ ಇಮೇಜ್ ಬೆಳೆಸಿಕೊಳ್ಳುವುದರ ಜೊತೆಗೆ ಸದಾ ಸುದ್ದಿಯಲ್ಲಿರಲು.

ಉದ್ದೇಶಪೂರಕವೋ ಅಥವಾ ಆಕಸ್ಮಿಕವೋ ಹತ್ಯೆಮಾಡುವುದು, ಇನ್ನೊಬ್ಬರ ಜೀವ ತೆಗೆಯುವುದು ಜೀವನಪರ್ಯಂತ ಅನುಭವಿಸಬೇಕಾದ ಶಿಕ್ಷೆ ಕೊಡಲೇ ಬೇಕೆಂದಿದ್ದರೆ ಈ ಹಿಂದೆ ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಾರು ಚಲಾಯಿಸಿ ಅಮಾಯಕರ ಸಾವಿಗೆ ಕಾರಣನಾದ ಸಲ್ಮಾನ್ ಖಾನ್ ಗು ಅದೇ ಶಿಕ್ಷೆ ಆಗಬೇಕಲ್ಲ. ಆದರೆ ಅವನು ಈಗ ಸೆಲೆಬ್ರಿಟಿ, ಮುಂಬೈ ಗಲಭೆಗೆ ಸಂಬಂದಪಟ್ಟಂತೆ ಆರೋಪಿಯಾಗಿ, ಶಿಕ್ಷೆಯನ್ನು ಅನುಭವಿಸಿದ ಸಂಜಯ್ ದತ್ ಕೂಡ ಈಗ ಸೆಲೆಬ್ರಿಟಿ ನಟ. ಇವರಿಗಿಲ್ಲದ ಶಿಕ್ಷೆ, ಕಾನೂನು, ನಿರ್ಬಂದಗಳು ಮಾರಿಯಾಗೆ ಯಾಕೆ?

ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ ಮುತ್ತಪ್ಪ ರೈ ಕನ್ನಡದ ಕಟ್ಟಾಳಾಗಬಹುದಾದರೆ, ಮತ್ತೊಬ್ಬ ಭೂಗತ ರೌಡಿ ಶ್ರೀದರ್ ಅಗ್ನಿ ಪತ್ರಿಕೆ ಸ್ಥಾಪಿಸಿ, ಕನ್ನಡಸೇನೆಯ ಸೈನ್ಯಾಧಿಪತಿ(?)ಯಾಗಿ, ಸಿನಿಮಾ ನಿರ್ದೇಶಕನಾಗಿ, ನೈಸ್ ವಿರುದ್ದ ಧರಣಿ ನಡೆಸುಬಹುದಾದರೆ ಮಾರಿಯಾ ತನ್ನದೇ ಕಥೆಯ ತನ್ನದೇ ಪಾತ್ರವನ್ನು ಯಾಕೆ ನಿರ್ವಹಿಸಬಾರದು?  ಆ ರೀತಿಯ ಚಿತ್ರವನ್ನು ರಾಮ್ ಗೋಪಾಲ ವರ್ಮಾ ಯಾಕೆ ಮಾಡಬಾರದು?

ನೀರಜ್ ಅವರ ಮನೆಯವರ ಸಂಬಂಧಿಕರಿಗೆ ನೋವಾಗುತ್ತದೆ ಅಂತಾದರೆ. ಇಷ್ಟಕ್ಕು ಈ ಕೊಲೆ ಯಾಕೆ ನಡೆಯಿತು? ಎಂಬ ವಿಷಯ ಮೊದಲಿಗೆ ಬರುತ್ತದೆ. ಅಸಲಿಗೆ ಮಾರಿಯಾ ಹುಟ್ಟಿನಿಂದಲೇ ಕ್ರಿಮಿನಲ್ ಹಿನ್ನಲೆ ಕೊಲೆಗಡುಕಿ ಆಗಿರಲಿಲ್ಲವಲ್ಲ. ಹಾಗಿದ್ದು ಒಂದು ಕೊಲೆಗೆ ಸಹಾಯ ಮಾಡಿದ್ಲು ಕೊಲೆ ಮಾಡಿದ್ಲು ಅನ್ನೋದಾದರೆ ಅದಕ್ಕೆ ಪ್ರೇರೆಪಿಸಿದ ಅಂಶಗಳು ಏನು ಎಂಬುದರ ಹಿನ್ನಲೆ ಎಲ್ಲೂ ವಿವರಗಳಿಲ್ಲ.

ಕೊಲೆಗೆ ಸಂಬಂದಪಟ್ಟ ಸಿನಿಮಾ ಮಾಡಲೇ ಬಾರದು ಅನ್ನೋದಾದ್ರೆ ಬಹುಶಃ ಸಿನಿಮಾ ರಂಗದಲ್ಲಿ ಸಿನಿಮಾಗಳೇ ತಯಾರಾಗುತ್ತಿರಲಿಲ್ಲ.

ಈ ಸಿನಿಮಾ ಮಾಡಬಾರದೆಂದು ನೋಟೀಸು ರೂಪದ ಬೆದರಿಕೆ ಪತ್ರವನ್ನು ನೀಡಿರುವ ಸೋ ಕಾಲ್ಡ್ ಹಿಂದುಗಳ ಪಕ್ಷ ಬಿಜೆಪಿ, ತನ್ನ ಅಸ್ತಿತ್ವದ ಮೂಲಾಧಾರವಾದ ಶ್ರೀರಾಮನ ಕಥೆ, ಪುರಾಣವನ್ನು ಬರೆದ ವಾಲ್ಮೀಕಿ ಕೂಡ ಕೊಲೆಗಡುಕನೇ ಎಂಬ ಅಂಶವನ್ನು ಹೇಗೆ ಮರೆಯುತ್ತದೆ.

ಈ ಹಿಂದೆ ಇಂತಹದ್ದೇ ಪ್ರಯೋಗದ ಸಿನಿಮಾ ಮಾಡಿದ್ದರಿಂದಲೇ ಸ್ಟಾರ ನಿರ್ದೇಶಕ ಆದವನು ಪ್ರೇಮ್. ಕರಿಯ ಸಿನಿಮಾದಲ್ಲಿ ನಿಜಜೀವನದ ರೌಡಿಗಳನ್ನೇ ತನ್ನ ಸಿನಿಮಾದಲ್ಲಿ ರೌಡಿಗಳ ಪಾತ್ರಧಾರಿಗಳನ್ನಾಗಿಸಿದ್ದ. ಇಷ್ಟೆಲ್ಲಾ ಸಾಧ್ಯವಾಗಿದ್ದೂ ತನ್ನ ಪಾಡಿಗೆ ತಾನು ಸಿನಿಮಾ ಮಾಡುವ ವರ್ಮಾನನ್ನು ಅನಾವಶ್ಯಕವಾಗಿ ಪಾಪುಲರ್ ಮಾಡುವುದರಲ್ಲಿ, ಅವನಿಗೆ ಸಂಬಂದಿಸಿದಂತೆ ವಿವಾದಗಳನ್ನು ಹುಟ್ಟಿಸಿ, ಬೆಳೆಸುವುದು ಯಾವ ಪುರುಷಾರ್ತಕ್ಕಾಗಿ?

ಇಷ್ಟೆಲ್ಲಾ ಉದಾಹರಣೆಗಳಿದ್ದು ಇಲ್ಲಿಯವರೆಗು ಅಪರಾಧಕೃತ್ಯದ ನೈಜ ಘಟನೆಯಲ್ಲಿ ಆರೋಪಿತ ವ್ಯಕ್ತಿ , ಅದೇ ಘಟನೆಯನ್ನು ಸಿನಿಮಾ ಮಾಡಿದಾಗ ತನ್ನ ಪಾತ್ರವನ್ನು ತಾನೆ ಮಾಡುವುದಾದರೆ ಅದು ಭಾರತೀಯ ಚಿತ್ರರಂಗದಲ್ಲಿ ದಾಖಲೆಯೇ ಸರಿ.

*******************

ಚಿತ್ರ ೃಪೆ: bangalore365.com


Read more from ಲೇಖನಗಳು
6 ಟಿಪ್ಪಣಿಗಳು Post a comment
  1. ಆಸು ಹೆಗ್ಡೆ's avatar
    ಜುಲೈ 7 2011

    ಸಮಸ್ಯೆ ರಾಮ ಗೋಪಾಲ ವರ್ಮ ಚಿತ್ರ ಮಾಡುತ್ತಿರುವುದಲ್ಲ.
    ಆತ ಮಾರಿಯಾಳನ್ನು ಆ ಚಿತ್ರದಲ್ಲಿ ಸೇರಿಸಿಕೊಳ್ಳುತ್ತಿರುವುದೂ ಅಲ್ಲ.
    ಆದರೆ ಆಕೆಯನ್ನು ಕೆಳಸ್ಥರದ ನ್ಯಾಯಾಲಯವೊಂದು ಬಡುಗಡೆಗೊಳಿಸಿದ ಸಂದರ್ಭದಲ್ಲಿ ಉಂಟಾದ ಸಾಮಾಜಿಕ ಕಳಕಳಿಯ ನಡುವೆ, ಮಾನವೀಯತೆ ಮೆರೆಯುವ ಸೋಗಿನಲ್ಲಿ ಆತ ಆಡಿದ ನಾಟಕದ್ದೇ ಸಮಸ್ಯೆ.
    ಮಾನವೀಯತೆ ಮೆರೆಯಲು ಆತನಿಗೆ ಸಿನಿಮಾರಂಗದವನೇ ಆದ ಗ್ರೋವರ‍್ನ ಸಂಸಾರ ಇತ್ತಲ್ಲವೇ?
    ಅವರ ಬಗ್ಗೆ ಸಹಾನುಭೂತಿ ಎಂದಾದರೂ ತೋರಿಸಿ ಮಾನವೀಯತೆ ಮೆರೆದಿದ್ದನೇ ಈತ?
    ಅಮಾಯಕನಾಗಿ ಹತ್ಯೆಯಾದವನ ಕುಟುಂಬದ ಬಗ್ಗೆ ಇಲ್ಲದ ಸಹಾನುಭೂತಿ ಇನ್ನೆಲ್ಲೋ ಪ್ರಕಟವಾದರೆ, ಅನುಮಾನ ಮೂಡುವುದು ಸಹಜ.
    ಮನೆಗೆ ಬೆಂಕಿ ಬಿದ್ದಾಗ ಬೀಡಿ ಹಚ್ಚಿಸಿಕೊಂಡವರ ಹಾಗೆ ವರ್ತಿಸಿದರೆ, ಸಮಾಜ ಕಿಡಿಕಾರದಿರುತ್ತದೆಯೇ?
    ಇನ್ನೂ ಮೇಲ್ಸ್ಥರದ ನ್ಯಾಯಾಲಯಗಳಲ್ಲೂ ಆಕೆ ಬೇರಾವ ಶಿಕ್ಷೆ ಪಡೆಯದೇ ಮುಕ್ತಳಾದರೆ, ಆ ಮಾತು ಬೇರೆ.
    ವಿದ್ಯಾವಂತರಾದವರು ತಾವು ಬಾಳುವ ಶೈಲಿಯಲ್ಲಿ ತಾವು ವಿದ್ಯಾವಂತರಂದು ತೋರಿಸಿಕೊಳ್ಳದೇ ಇದ್ದರೆ ಆಗುವ ಅನಾಹುತಗಳಿವು.

    ಉತ್ತರ
    • ವಿಜಯ ಪೈ's avatar
      ವಿಜಯ ಪೈ
      ಜುಲೈ 7 2011

      >> ಅಮಾಯಕನಾಗಿ ಹತ್ಯೆಯಾದವನ <<

      ನೀರಜ್ ಗ್ರೋವರ್ ಅಮಾಯಕನಲ್ಲ..ಆತ ಬೇಲಿ ಹಾರಿದ ಮನುಷ್ಯನೆ!. ಕೊಲೆಯಾದಾಗ ಈತ ಮರಿಯಾಳ ಮನೆಯಲ್ಲಿದ್ದ. ಕೊಲೆಮಾಡಿದ ಜಿರೋಮ್ ಮರಿಯಾಳನ್ನು ಮದುವೆಯಾಗುವವನಾಗಿದ್ದ. ಮರಿಯಾಳ ಲೀಲೆಯಲ್ಲಿ ಒಬ್ಬ ಜೈಲಿಗೆ ಹೋದ, ಇನ್ನೊಬ್ಬ ಮೇಲೆ ಹೋದ. ನಮ್ಮ ರಾಮಗೋಪಾಲಣ್ಣ ನೀವೇಳಿದಂತೆ ಬೀಡಿ ಹಚ್ಚಿಕೊಳ್ಳುವ ಕೆಲಸ ಮಾಡಿದರು!. ಮುಂಬೈ ಮೇಲೆ ಉಗ್ರಗಾಮಿಗಳ ಅಟ್ಯಾಕ್ ನಂತರ ಇವರು ರಿತೇಶ ದೇಶಮುಖ್ ಜೊತೆಗೆ ತಾಜ್ ಹೊಟೇಲ್ ನೋಡಲು ಹೋಗಿದ್ದರು..ಸಿನೇಮಾ ಮಾಡುವ 'ದುರಾ'ಲೋಚನೆಯೊಂದಿಗೆ. ಆಗ ಕೂಡ ಜನರಿಂದ ಉಗಿಸಿಕೊಂಡಿದ್ದರು.

      ಉತ್ತರ
      • ಆಸು ಹೆಗ್ಡೆ's avatar
        ಜುಲೈ 7 2011

        ತಮ್ಮ ಮಾತುಗಳು ನಿಜ ವಿಜಯ್,
        ಆದರೂ, ನನ್ನ ಅನಿಸಿಕೆಯಂತೆ ಮಾರಿಯಾ ಲೀಲೆಗೆ ಬಲಿಯಾದ ಈರ್ವರೂ ಒಂದು ತೆರನಾಗಿ ಅಮಾಯಕರೇ!
        ಅವರೀರ್ವರನ್ನೂ ತನ್ನ ಲೀಲೆಗೆ ಬಲಿಯಾಗಿಸಿ ಅಮಾಯಕರಂತೆ ಆಟವಾಡುತ್ತಿರುವವಳು ಮಾತ್ರ ಅಮಾಯಕಳಲ್ಲ.

        ಉತ್ತರ
  2. harish shetty, shirva's avatar
    harish shetty, shirva
    ಜುಲೈ 7 2011

    ತಾನು ಮಾಡಿದ ದುಷ್ಟ ಕೃತ್ಯಕ್ಕೆ ಒಪ್ಪಿ , ಅದರ ಶಿಕ್ಷೆ ಅನುಬವಿಸಿದ ನಂತರ ತಿದ್ದುಕೊಳ್ಳುವ ಅವಕಾಶವನ್ನು ನೀಡಬಹುದು …ಮಂಸೋರೆ, , ಆದರೆ ತಾನು ಮಾಡಿದ ಕೃತ್ಯಕ್ಕೆ ತಾನು ಮಾಡಿಲ್ಲ ಎಂದು ಪ್ರೆಸ್ ಕಾಂಫ್ರೆನ್ಚೆ ಮಾಡಿ, ಪ್ರಚಾರ ಒಟ್ಟು ಮಾಡುವ ಮಾರಿಯಳಿಗೆ ಅವಕಾಶ ನೀಡುಹುದು ತಪ್ಪು…….

    ಉತ್ತರ
  3. Pradeep CS's avatar
    Pradeep CS
    ಜುಲೈ 7 2011

    ಈಸ್ಟೆಲ್ಲಾ ಆದರೂ ಮಾರಿಯ ಸೊಸೈಟೀ ಮುಂದೆ ನಿಂತಿದ್ದಾಳೆ ಅದು ಅಲ್ಲದೇ ಪ್ರೆಸ್ಸ್ಸ್ ಮೀಟಿಂಗ್ ಮಾಡಿದ್ದರೆ ಅದನ್ನ ಧೈರ್ಯ ಅನ್ನಬೇಕೋ ಅಥವಾ ಬಂದ ಧೈರ್ಯ ಅನ್ನಬೇಕೋ ಗೊತ್ತಾಗ್ತಿಲ್ಲ..

    ಇರಲಿ ಅವರು ಮತ್ತೊಂದು ಹೊಸ ಜೀವನಕ್ಕೆ ಕಾಲಿಟ್ಟರೆ ಸ್ವಾಗತಿಸೋಣ
    ಎಲ್ಲದಕ್ಕೂ ಟೈಮ್ ಸರಿಯಾದ ಉತ್ತರ ಹೇಳುತ್ತೆ

    ಆಸ್ಟಕ್ಕೂ ತಪ್ಪು ಮಾಡದಾವ್ರು ಯಾರವ್ರೆ? ತಪ್ಪೇ ಮಾಡದಾವ್ರು ಎಲ್ಲವ್ರೆ? ಅಲ್ವೇ

    ಉತ್ತರ
  4. ರಂಜಿತ್'s avatar
    ಜುಲೈ 7 2011

    ರಾಮ್ ಗೋಪಾಲ್ ವರ್ಮಾ, ತಾನು ಆಕೆಯನ್ನು ನಾಯಕಿಯನ್ನಾಗಿಸಿ ಸಿನೆಮಾ ಮಾಡಲು ಸಿದ್ಧ ಅಂದಿದ್ದು ಅಷ್ಟೇ. ಲೇಖನದಲ್ಲಿ ಅಂದಂತೆ ಆಯ್ಕೆ ಮಾಡಿಲ್ಲ..

    ಆಕೆಯ ಕಥೆಯನ್ನೇ ಸ್ಪೂರ್ತಿಯನ್ನಾಗಿಸಿ ರಾಮ್ ಗೋಪಾಲ್ ವರ್ಮಾ ಸಿನೆಮಾ ಆಗಲೇ ಮಾಡಿಮುಗಿಸಿದ್ದು ಅದರಲ್ಲಿ ನಾಯಕಿ, ಮಾಹಿ ಗಿಲ್. ಸೋ, ಆ ಕಥೆಗೇ ಮಾರಿಯಾಳನ್ನು ನಾಯಕಿಯನ್ನಾಗಿಸುವ ಸಾಧ್ಯತೆ ಈಗಿಲ್ಲ..

    ಉತ್ತರ

Leave a reply to ರಂಜಿತ್ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments