ಹುಣಸೆಮರ ಮತ್ತು ಪ್ರವೀಣ
ಪವನ್ ಪಾರುಪತ್ತೇದಾರ
ಯಾಕೋ ಈ ನಡುವೆ ಪ್ರವೀಣನಿಗೆ ದುಗುಡಗಳೇ ಹೆಚ್ಚಾಗಿತ್ತು, ಏನು ಕೆಲಸ ಮಾಡಬೇಕಾದರೂ ಭಯ, ಉತ್ಸಾಹವಿಲ್ಲ, ಜಗತ್ತಿನಲ್ಲಿ ತಾನೇನನ್ನೋ ಕಳೆದುಕೊಂಡವನ ಹಾಗೆ ಇರುತಿದ್ದ. ಯಾವಾಗಲೂ ಮನೆಯ ಜಗುಲಿಯ ಮೇಲೆ ಕೂತು ಮನೆ ಮುಂಭಾಗದ ಕಂಬವನ್ನೇ ದಿಟ್ಟಿಸಿ ನೋಡುತಿದ್ದ.ಅಕ್ಕ ಪಕ್ಕದ ಮನೆಯವರೆಲ್ಲ ಇವನಿಗ್ಯಾವುದೇ ಗರ ಬಡಿದಿರಬಹುದು ಎಂದುಕೊಂಡರು, ಬರು ಬರುತ್ತಾ ಮನೆಯವರಿಗೂ ಚಿಂತೆ ಅತಿಯಾಗಿ ಏನು ಮಾಡಲು ತೋಚದ ಸ್ಥಿತಿಯಲ್ಲಿರುವಾಗ ದೂರದ ನೆಂಟರೊಬ್ಬರು ಸಲಹೆ ಕೊಟ್ಟರು, ತಮ್ಮೂರಿನಲ್ಲೊಬ್ಬ ಭೂತ ಬಿಡಿಸುವವನಿದ್ದಾನೆ, ನಿಮ್ಮ ಮಗನಿಗೆ ಯಾವುದೋ ಭೂತ ಮೆಟ್ಟಿದೆ ಆದ್ದರಿಂದಲೇ ಹೀಗೆ ಇರುವುದು ಎಂದರು. ಹೆದರಿದ ಅಪ್ಪ ಅಮ್ಮ ಮಗನ ಭೂತ ಬಿಡಿಸಲು ಆ ನೆಂಟರ ಊರಿಗೆ ಹೊರಟರು.
ಭೂತ ಬಿಡಿಸುವ ಮಂತ್ರವಾದಿ ಬೇವಿನೆಲೆ, ತಲೆಬುರುಡೆ ಮುಂತಾದವುನೆಲ್ಲ ಹಿಡಿದು ವಿಚಿತ್ರವಾದ ಮಂತ್ರಗಳನ್ನೊದುರುತಿದ್ದ. ಈ ಮಂತ್ರವಾದಿಗಿಂತ ಪ್ರವೀಣನೆ ಮೇಲು ಸುಮ್ಮನೆ ಶಾಂತನಾಗಿ ಒಂದು ಕಡೆ ಕುಳಿತುಬಿಡುತಿದ್ದ ಅಂತ ಪ್ರವೀಣನ ಅಪ್ಪ ಗೊಣಗಿಕೊಂಡರು. ಪ್ರವೀಣನ ಅಮ್ಮ ಭಕ್ತಿ ಭಾವದಿಂದ ಮತ್ತು ಭಯದಿಂದ ಸ್ವಾಮಿ ನನ್ನ ಮಗ ತುಂಬಾ ಮಂಕಾಗಿ ಬಿಟ್ಟಿದ್ದಾನೆ, ಈ ನಡುವೆ ಯಾರ ಬಳಿಯೂ ಸರಿಯಾಗಿ ಮಾತಾಡೋಲ್ಲ. ಸುಮ್ಮನೆ ಕುಳಿತಿರುತ್ತಾನೆ, ಕೆಲಸಕ್ಕೂ ಹೋಗ್ತಿಲ್ಲ. ಏನಾದ್ರು ಬೈದರೂ ಸುಮ್ಮನೇ ಕೂರುತ್ತಾನೆ, ಏನು ಮಾಡೋದೋ ಗೊತ್ತಾಗ್ತಿಲ್ಲ ದಯವಿಟ್ಟು ನೀವೇ ಏನಾದ್ರು ಪರಿಹಾರ ಕೊಡಿ ಅಂತ ಬೇಡಿಕೊಂಡರು. ಮಂತ್ರವಾದಿ ಆಆಹಹಹ ಅಂತ ಅರಚುತ್ತಾ, ಬೇವಿನ ಸೊಪ್ಪನ್ನು ಒಂದೆರಡು ಬಾರಿ ಪ್ರವೀಣನೆ ಮೇಲೆ ಒದರಿ, ಕಪಾಲದಲ್ಲಿಂದ ತೀರ್ಥವನು ಪ್ರೋಕ್ಷಣೆ ಮಾಡಿ, ಪ್ರವೀಣನನ್ನೆ ದಿಟ್ಟಿಸಿ ನೋಡುತ್ತ, ನಿಮ್ಮ ಮಗನ ಮೇಲೆ ಯಾವುದೋ ಭೂತ ಹತ್ತಿದೆ, ಅವನ ಮುಖ ನೋಡಿದ್ರೆ ಗೊತ್ತಾಗುತ್ತೆ, ಖಂಡಿತ ಇದು ಮೋಹಿನಿಯೇ ಅಂದ. ಹೆದರಿದ ಪ್ರವೀಣನ ಅಪ್ಪ, ಸ್ವಾಮಿಗಳೇ ಈಗೇನು ಇದಕ್ಕೆ ಪರಿಹಾರ, ನಮಗಿರೋವ್ನು ಒಬ್ಬನೇ ಮಗ ನೀವೇ ದಾರಿ ತೋರಿಸ್ಬೇಕು ಅಂದ್ರು. ಆಗ ಮಂತ್ರವಾದಿ ಮನದಲ್ಲೇ ಏನೋ ಲೆಕ್ಕಾಚಾರ ಹಾಕಿಕೊಳ್ಳುತ್ತ, ಕಣ್ಣು ಗುಡ್ಡೆಯ ಮೇಲೆ ಮಾಡಿ ಯಾರ ಬಳಿಯೋ ಮಾತನಾಡಿದಂತೆ ಮಾಡಿ, ನಿಮ್ಮ ಮನೆ ಹತ್ರ ಯಾವುದಾದ್ರು ದೊಡ್ಡ ಮರ ಇದ್ಯ ಅಂದ. ಅದಕ್ಕೆ ಪ್ರವೀಣನ ಅಪ್ಪ ಹೌದು ಸ್ವಾಮಿ ನಮ್ಮ ತಾತನವರು ಹಾಕಿದ ಹುಣಸೆ ಮರ ಇದೆ, ನಮ್ಮ ಜಮೀನಲ್ಲೆ ಇದೆ ಅಂದ. ಥಟ್ಟನೆ ಮಂತ್ರವಾದಿ ಆ ಮರದಲ್ಲಿ ಅಡಗಿರೋ ದೆವ್ವಾನೆ ನಿಮ್ಮ ಮಗನ ಮೈ ಮೇಲೆ ಹೊಕ್ಕಿರೋದು. ಈಗ ಪರಿಹಾರ ಅಂದ್ರೆ ನಾನು ನಿಮ್ಮ ಮಗನಲ್ಲಿರುವ ದೆವ್ವಾನ ಮತ್ತೆ ಆ ಮರಕ್ಕೆ ಓಡುಸ್ತೀನಿ ಆಮೇಲೆ ನೀವು ಆ ಮರಾನ ಕಡಿದು ಹಾಕ್ಬೇಕು ಅಂದ.
ಒಮ್ಮೆ ಜನಮತಸಾಂದ್ರತೆ (Demography) ಬದಲಾದರೆ…
– ಎಂ.ಡಿ ಸುಬ್ರಮಣ್ಯ ಮಾಚಿಕೊಪ್ಪ
ಪ್ರದೇಶವೊಂದನ್ನು (ಅದು ರಾಜ್ಯವಾಗಿರಲಿ ಅಥವಾ ರಾಜ್ಯವೊಂದರ ಭಾಗವಾಗಿರಲಿ) ದೇಶದಲ್ಲಿ ಇರುವಂತೆ ಮಾಡುವ ಅನೇಕ ಸಮಾನ ಅಂಶಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾಗಿದ್ದು ಆ ಪ್ರದೇಶದ ಜನಮತಸಾಂದ್ರತೆ (demography) ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಒಮ್ಮೆ ಆ ಪ್ರದೇಶದ ಜನಮತಸಾಂದ್ರತೆ ಬದಲಾದರೆ ಎಲ್ಲವೂ ಬದಲಾಗುತ್ತದೆ. ಇಲ್ಲಿ ಎಲ್ಲವೂ ಅಂದರೆ ಆ ಪ್ರದೇಶದ ಭಾಷೆ, ಆಚಾರ-ವಿಚಾರ, ರಾಷ್ಟ್ರನಿಷ್ಠೆ, ನಾಯಕರುಗಳು-ಎಲ್ಲವೂ ಬದಲಾಗುತ್ತದೆ!!! ಇದಕ್ಕೆ ಕಶ್ಮೀರಕಣಿವೆಯ ಉದಾಹರಣೆಯೇ ನಮ್ಮ ಕಣ್ಣುಮುಂದೆ (ಕಣ್ಣಿದ್ದವರಿಗೆ) ಕಾಣುತ್ತಿದೆ. ಕಲ್ಹಣ ಸಾಹಿತ್ಯ ರಚಿಸಿದ ಆ ಕಾಶ್ಮೀರಿ ಭಾಷೆ ಕಣಿವೆಯಲ್ಲಿ ಎಲ್ಲಿದೆ? ಬೋರ್ಡ್ ಗಳಲ್ಲೆಲ್ಲಾ ಅರಬಿ ಲಿಪಿ. ‘India’ ಎಂದು ಕಾಣುವ ಬೋರ್ಡ್ ಗಳ ಮೇಲೆ ಕಲ್ಲು, ಆಗಸ್ಟ್ ೧೫ ಬಂದ್!! ವಿಜೃಂಭಣೆಯ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ!!! ನಾಗಲ್ಯಾಂಡ್, ಮಿಜೊರಾಂ ಪರಿಸ್ಥಿತಿಯೂ (ಸದ್ಯಕ್ಕೆ ತಣ್ಣಕ್ಕಿದ್ದಂತೆ ಕಂಡರೂ) ತುಂಬವೇನು ಭಿನ್ನವಾಗಿಲ್ಲ. ಒಟ್ಟು ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು ಕಶ್ಮೀರ, ನಾಗಲ್ಯಾಂಡ್ ಮತ್ತು ಮಿಜೋರಾಂಗಳಲ್ಲಿ ಅವರು ತುಂಬಾ ಅಲ್ಪಸಂಖ್ಯಾತರಾಗಿದ್ದು ಮುಸ್ಲಿಂ ಹಾಗೂ ಕ್ರೈಸ್ತರು ಅಲ್ಲಿ ಬಹುಸಂಖ್ಯಾತರಾಗಿರುವುದೇ ಇದಕ್ಕೆ ಕಾರಣ. (ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಆದರೆ ಬೌದ್ದರೇ ಸಾಕಷ್ಟು ಸಂಖ್ಯೆಯಲ್ಲಿರುವ ಲಡಕ್ ಪ್ರದೇಶದಲ್ಲಿ ಈ ಸಮಸ್ಯೆ ಅಷ್ಟಿಲ್ಲ!!) ಒಮ್ಮೆ ಜನಮತಸಾಂದ್ರತೆ ಬದಲಾದರೆ ರಾಷ್ಟ್ರನಿಷ್ಟೆಯೂ ಬದಲಾಗುತ್ತದೆಂಬುದು (ಪ್ರಪಂಚ ಮಟ್ಟದಲ್ಲಿ) ಅಪ್ರಿಯ ಸತ್ಯ.