ಕನ್ನಡ ಕಲಿಕೆಯ ಶಾಲೆ ಸಂಸ್ಥೆ
ನಿಲುಮೆ
ಸ್ನೇಹಿತರೆ ನಮಸ್ಕಾರ, ಈ ಪತ್ರದ ಮೂಲಕ ನಾವು ಇದೆ ಮೊದಲನೇ ಸಲ ಭೇಟಿಯಾಗುತ್ತಿದ್ದೇವೆ, ಎಲ್ಲರಿಗೂ ಶುಭವಾಗಲಿ . (ಒಂದು ಸೂಚನೆ: “ಈ ಪತ್ರ ಓದಲು ನಿಮಗೆ ಮೂರು ನಿಮಿಷ ಗಳಾದರೂ ಬೇಕಾಗುವುದರಿಂದ ದಯವಿಟ್ಟು ಸಮಯವಿದ್ದರಷ್ಟೇ ಮುಂದುವರಿಸಿ, ಇಲ್ಲದಿದ್ದರೆ ನಿಮ್ಮ ಬಿಡುವಿನ ವೇಳೆಯಲ್ಲಿ ಓದಿಕೊಳ್ಳಿ” – ಇದು ನಮ್ಮ ವಿನಂತಿ).
ಒಂದು ಕಾಲದಲ್ಲಿ “ಉದ್ಯಾನ ನಗರಿ” ಎಂದೇ ಪ್ರಸಿದ್ದಿ ಪಡೆದಿದ್ದ “ಬೆಂದಕಾಳೂರು”, ಇಂದು ಸಾಫ್ಟ್ವೇರ್ ಲೋಕದ ದಿಗ್ಗಜ ನಗರಗಳಲ್ಲಿ ಒಂದಾಗಿ ತಲೆಯೆತ್ತಿ ನಿಂತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಹಲವಾರು ಸಂಸ್ಥೆ ಗಳಿಗೆ ಹಾಗೂ ದೇಶ-ವಿದೇಶದ ನಾನಾ ಭಾಗ/ಪ್ರಾಂತ್ಯದ ಸಹಸ್ರಾರು ಜನರಿಗೆ ಆಶ್ರಯ ತಾಣವಾಗಿದೆ. ಹೇಗೆ ನಮ್ಮ ಮನೆಗೆ ಅತಿಥಿಗಳು ಬಂದಾಗ, ನಮ್ಮ ಬಗ್ಗೆ ಹಾಗೂ ನಮ್ಮ ಮನೆಯ ವಾತಾವರಣದ ಬಗ್ಗೆ ಪರಿಚಯ ಮಾಡಿಕೊಡುತ್ತೆವೋ ಹಾಗೆಯೇ ಇಲ್ಲಿಗೆ ಬರುವ ಸಹಸ್ರಾರು ಜನರಿಗೆ ನಮ್ಮ ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ಕೊಡುವ “ಜವಾಬ್ದಾರಿ” ಹಾಗೂ “ನಿರಂತರ ಪ್ರಯತ್ನ” ನಮ್ಮೆಲ್ಲರ ಮೇಲಿದೆ.