ಹಿಂದುತ್ವವೇ ನಮ್ಮ ತತ್ವ ಎಂದು ಸಾರುತ್ತ ಮಾಡಿದ್ದೇನು?
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಸಂಭ್ರಮ…ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಂಡು ಸಂತೋಷದಿಂದ ಬದುಕು ಸಾಗಿಸಬಹುದು ಎನ್ನುವ ಅಸೆಯ ಅಂಬಾರಿಯನ್ನು ಹೊಡೆದು ಉರುಳಿಸಿದರಲ್ಲಾ ಎನ್ನುವ ಭಾವನೆ ಮೂಡಿದರೆ ತಪ್ಪಲ್ಲ. ಕಾರಣ ರಾಜ್ಯದ ರಾಜಕೀಯದಲ್ಲಿನ ಪ್ರಸ್ತುತ ಬೆಳವಣಿಗೆ. 1950ರಲ್ಲಿ ಸಂವಿಧಾನ ರಚನೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು ಶಾಸಕಾಂಗ,ನ್ಯಾಯಾಂಗ,ಕಾರ್ಯಾಂಗ ಹಾಗೂ ಮಾಧ್ಯಮರಂಗಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಪ್ರಮುಖ ಪಾತ್ರಧಾರಿಗಳು ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದ ಕಾಲ ಮರೆಯಾಗಿದೆ. ಆದರೆ ಯಾವುದೇ ರಂಗದಲ್ಲಿ ಲೋಪದೋಷಗಳಾದರೂ ಕಷ್ಟ ಅನುಭವಿಸುವವರು ಸಾಮಾನ್ಯ ಜನತೆ ಎನ್ನುವುದು ಸ್ಪಷ್ಟ.
ಯತ್ಖಲು ಖಲಮುಖಹುತವಹವಿನಿಹಿತಮಪಿ ಶುದ್ದಿಮೇವ ಪರಮೇತಿ
ತದನಲ ಶೌಚಮಿವಾಂಶುಕಮಿಹ ಲೋಕೇ ದುರ್ಲಭಂ ಪ್ರೇಮ||
ನೀಚರ ಬಾಯೆಂಬ ಬೆಂಕಿಯಲ್ಲಿ ಬಿದ್ದದ್ದೆಲ್ಲ ಶುದ್ದವಾಗುವುದೆಂಬ ಮಾತು ಸರ್ವಥಾ ಸರಿಯಲ್ಲ. ಏಕೆಂದರೆ ಬೆಂಕಿಯಲ್ಲಿ ಬಿದ್ದು ಶುದ್ದವಾಗಿ ಉಳಿದು ಬಂದ ಬಟ್ಟೆಯೆಷ್ಟು ದುರ್ಲಭವೋ ದುಷ್ಟರ ಬಾಯಿಗೆ ಸಿಲುಕಿ ಶುದ್ದವಾಗಿ ಹೊರಬಂದ ಸದ್ಗುಣಗಳು ಅಷ್ಟೇ ದುರ್ಲಭ.





