ಖೆಡ್ಡಾ – ೨ : ನಿಮಗೆ ಬೇಕಾ….. ಪ್ರೀತಿ!
ಹೇಮಂತ್ ಕುಮಾರ್
ಯಾವನಾದರೂ ಇನ್ನು ಮುಂದೆ ಲವ್ ಆಗಿದ್ಯ ನಿನಗೆ ಅಂತ ಕೇಳಿದ್ರಿ ಅಂದ್ರೆ ಹಿಗ್ಗಾ ಮುಗ್ಗಾ ಒದೆ ತಿಂತೀರಾ ಹುಶಾರಾಗಿರಿ ಹೇಳಿದ್ದೀನಿ. ಲವ್ ಅಂತೇ ಲವ್ವು ಸುಡುಗಾಡು. ಬರೀ ಬೂಟಾಟಿಕೆ. ಲವ್ವು ಅಂದದ್ದೇ ಹದಿನೈದರಿಂದ ಇಪ್ಪತ್ತೈದು ವರ್ಷದ ಹುಡುಗ ಹುಡುಗಿಯ ಚಿತ್ರವನ್ನ ಮನದ ಮುಂದೆ ತಂದು ನಿಲ್ಲಿಸಿಕೊಂಡು, ಪಾರ್ಕು, ಥಿಯೇಟರು, ಕಾಫೀ ಡೇ, ರೆಸಾರ್ಟುಗಳಿಗೆಲ್ಲಾ ಹೋಗಿಬಂದುಬಿಡ್ತೀರಿ. ನಾಚಿಕೆ ಆಗಲ್ವೇನ್ರೀ ಯಾರಿಗೂ. ನಾನೂ ನಂಬಿದ್ದೆ ಪ್ರೀತಿ ಇನ್ನೂ ಉಳ್ಕೊಂಡಿದೆ ಅಂತ. ಆದರೆ ಎಲ್ಲಿ ಉಳ್ಕೊಂಡಿದೆ ಅಂತ ಹುಡುಕೋಕೆ ಹೊರಟಾಗಲೇ ಗೊತ್ತಾಗಿದ್ದು…….
ಮುಖ್ಯವಾಹಿನಿಯ ಜಾಣಗುರುಡು
– ಡಾ.ಅಶೋಕ್ ಕೆ.ಆರ್
ಹೆಂಡತಿ ಗಂಡನಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಗಂಡ ಹೆಂಡತಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಪೂನಂ ಪಾಂಡೆ ಬೆತ್ತಲಾದದ್ದು, ಐಶ್ವರ್ಯ ರೈ ದಪ್ಪಗಾಗಿದ್ದು ಮುಖಪುಟ ಸುದ್ದಿ! ಅಧಿಕಾರಿ, ರಾಜಕಾರಣಿ, ಸನ್ಯಾಸಿ ಮಾಡಿದ ತಪ್ಪುಗಳು ‘ಬ್ರೇಕಿಂಗ್ ನ್ಯೂಸ್’ [ofcourse ಯಾವ ವಾಹಿನಿ ವೀಕ್ಷಿಸುತ್ತಿದ್ದೀರೆಂಬುದರ ಮೇಲೆ ಈ ಕೊನೆಯ ಬ್ರೇಕಿಂಗ್ ನ್ಯೂಸ್ ಬದಲಾಗುತ್ತಿರುತ್ತದೆ!]. ಪತ್ರಕರ್ತನೊಬ್ಬ ನೆಲದ ಕಾನೂನಿಗೆ ಗೌರವ ಕೊಡದೆ ನಡೆದುಕೊಂಡಾಗ? ಅದು ಸುದ್ದಿಯೂ ಅಲ್ಲ, ರದ್ದಿಗೆ ಹಾಕುವಂಥ ವಿಷಯ ಎಂಬುದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ನಿಲುವು!
ಶೇರು ಮಾರುಕಟ್ಟೆ : ಭಾಗ -೧
– ವೆಂಕಟೇಶ್ ಗುರುರಾಜ್
ಹಣ ಯಾರಿಗೆ ಬೇಡ? ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಮತ್ತು ಅವನು ಸತ್ತಮೇಲೆ ಅವನ ಅಂತ್ಯಕ್ರಿಯಯನ್ನು ಮಾಡುವ ಅವನ ಮನೆಯವರಿಗೂ ಹಣ ಬೇಕೇಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾಮಕರಣದಿಂದ ತಿಥಿಯವರೆಗೆ. ನಾವು ನೀವೆಲ್ಲರೂ ನಮ್ಮ ಜೀವಿತ ಅವಧಿಯಲ್ಲಿ ಹಣವನ್ನು ನಮ್ಮ ಇತಿಮಿತಿಯಲ್ಲಿ ಸಂಪಾದಿಸುತ್ತೇವೆ. ಕೆಲವರು ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ಸ್ವಂತ ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ವ್ಯಾಪಾರ ವಹಿವಾಟು ಮಾಡಿ, ಮತ್ತೆ ಕೆಲವರು ಹಣದಿಂದ ಹಣವನ್ನು ಸಂಪಾದಿಸುತ್ತಾರೆ. ಮೊದಲ ಮೂರು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕೊನೆಯದಾದ ಹಣದಿಂದ ಹಣವನ್ನು ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಸ್ವಲ್ಪ ಗಮನ ಕೊಡೋಣ. ಇದನ್ನು ಬಂಡವಾಳ ಹೂಡಿಕೆ ಎಂದೂ ಸಹ ಕರೆಯುತ್ತಾರೆ. ಬಂಡವಾಳ ಎಂದರೆ ಏನು ಎಂಬುದರ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣವೇ?
ಬಂಡವಾಳ ಹೂಡುವುದೆಂದರೆ ಜನಸಾಮಾನ್ಯರಲ್ಲಿ ಅದು ಲಕ್ಷ/ಕೋಟಿಗಳ ರೂಪದಲ್ಲಿ ಇರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ಸುಳ್ಳು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಜನ ಸಾಮಾನ್ಯರೂ ಸಹ ಸ್ವಲ್ಪ ಮಟ್ಟಿನ ಬಂಡವಾಳ ಹೂಡಿಕೆದಾರರೇ. ಕೆಲವರು ತಮ್ಮ ಹೆಚ್ಚುವರಿ ಸಂಪಾದನೆಯನ್ನು ಅಥವಾ ತಮ್ಮ ಉಳಿತಾಯದ ಹಣವನ್ನು ನಿಶ್ಚಿತ ಠೇವಣಿಯಾಗಿ ಬ್ಯಾಂಕ್/ಅಂಚೆ ಕಚೇರಿಯಲ್ಲಿ ಇಟ್ಟು ಅದರಲ್ಲಿ ಬರುವ ಬಡ್ದಿಯನ್ನು ಪಡೆಯುತ್ತಾರೆ. ಇದೂ ಸಹ ನಿಮ್ಮ ಹಣ ವೃದ್ದಿಸುತ್ತದೆ. ಭೂಮಿಯ ಮೇಲೆ ಹಾಕಿದ ಹಣ ನಿಮ್ಮ ಮೂಲ ಹಣವನ್ನು ಅನೇಕ ಬಾರಿ ವೃದ್ದಿಸುತ್ತದೆ. ಚಿನ್ನ, ಬೆಳ್ಳಿಯ ಮೇಲೆ ಹಾಕಿದ ಹಣ ನಿಮಗೆ ದುಪ್ಪಟ್ಟು, ತಿಪ್ಪಟ್ಟಾಗುತ್ತದೆ. ಶೇರು/ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿದ ಹಣ ನಿಮಗೆ ಲಾಭವನ್ನು ತಂದುಕೊಡುತ್ತದೆ.
ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ
– ಎ.ವಿ.ಜಿ ರಾವ್
ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ. ಎಲ್ಲ ಗುಣಲಕ್ಷಣಗಳನ್ನು ಒಟ್ಟಾರೆಯಾಗಿ ಪರಿಗಣಿಸಿದರೆ ಈ ಭೂಮಿಯ ಮೇಲೆ ಒಬ್ಬ ವ್ಯಕ್ತಿಗೆ ಪ್ರತಿಶತ ೧೦೦ ರಷ್ಟು ಸರಿಸಾಟಿಯಗಬಲ್ಲ ಇನ್ನೊಬ್ಬ ವ್ಯಕ್ತಿ ಇರುವುದಿಲ್ಲ. ಏಕಾಂಡಜ ಯಮಳರ ನಡುವೆ (ಐಡೆಂಟಿಕಲ್ ಟ್ವಿನ್ಸ್-ಇವರ ಜೈವಿಕ ಆನುವಂಶೀಯತೆ ಒಂದೇ ಆಗಿರುತ್ತದೆ) ಕೂಡ ಪ್ರತಿಶತ ೧೦೦ರಷ್ಟು ಸಮತೆ ಇರುವುದಿಲ್ಲ. ಅಂದ ಮಾತ್ರಕ್ಕೆ, ಮಾನವರಲ್ಲಿ ಸಮತೆ ಇಲ್ಲವೇ ಇಲ್ಲ ಎಂದು ತೀರ್ಮಾನಿಸ ಕೂಡದು. ಸಮತೆ ಮತ್ತು ವಿವಿಧತೆ ಇವೆರಡನ್ನೂ ಮಾನವರಲ್ಲಿ ಕಾಣಬಹುದು. ಯಾವದೇ ಒಂದು ಜೀವಿಜಾತಿಯನ್ನು ವೀಕ್ಷಿಸಿದರೂ ಸಾರ್ವತ್ರಿಕ ಲಕ್ಷಣಗಳಲ್ಲಿ ಸಮತೆಯೂ ನಿರ್ದಿಷ್ಟ ಲಕ್ಷಣಗಳಲ್ಲಿ ವಿವಿಧತೆಯೂ ಇರುವುದು ಗೋಚರಿಸುತ್ತದೆ. ಅಳತೆ ಮಾಡಬಹುದಾದ ಯಾವುದೇ ಮಾನವ ಲಕ್ಷಣವನ್ನು ಅಧ್ಯಯಿಸಿದರೂ ಈ ನಿಸರ್ಗ ನಿಯಮ ಸ್ಪಷ್ಟವಾಗುತ್ತದೆ. ಜೈವಿಕ ಆನುವಂಶೀಯತೆ ಮತ್ತು ಪರಿಸರಗಳ ನಡುವಿನ ಅನ್ಯೋನ್ಯಕ್ರಿಯೆಯೇ ಈ ವೈಚಿತ್ರ್ಯಕ್ಕೆ ಕಾರಣ.
ಸಹೋದರ ಸಹೋದರಿಯರ ಜನ್ಮದಾತೃಗಳು ಉಭಯಸಾಮಾನ್ಯರಾಗಿದ್ದರೂ ಅವರ ಜೈವಿಕ ಆನುವಂಶೀಯತೆ ಒಂದೇ ಆಗಿರುವುದಿಲ್ಲ. ವಂಶಪಾರಂಪರ್ಯವಾಗಿ ಬರಬಹುದಾದ ಗುಣಗಳ ವಾಹಕಗಳು ವಂಶವಾಹಿ (ಜೀನ್)ಗಳು ಎಂಬ ತಥ್ಯ ನಿಮಗೆ ತಿಳಿದಿದೆ. ಏಕಾಂಡಜ ಯಮಳರನ್ನು ಹೊರತುಪಡಿಸಿದರೆ ಬೇರೆ ಯಾವ ಇಬ್ಬರಲ್ಲಿಯೂ (ಅವರಿಬ್ಬರೂ ಒಂದೇ ಜನ್ಮದಾತೃಗಳಿಂದ ತಮ್ಮ ವಂಶವಾಹಿಗಳನ್ನು ಪಡೆದಿದ್ದರೂ) ಇವುಗಳು ಒಂದೇ ಆಗಿರುವುದು ಸಾಧ್ಯವೇ ಇಲ್ಲ. ಅಂದ ಮೇಲೆ, ಪ್ರತಿಯೊಬ್ಬ ವ್ಯಕ್ತಿಯ ಜೈವಿಕ ಆನುವಂಶೀಯತೆ ಅದ್ವಿತೀಯ ಅನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ವ್ಯಕ್ತಿಗಳ ಅದ್ವಿತೀಯತೆಗೆ ಇದು ಒಂದು ಕಾರಣ
ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬಾರದು – ಅಲ್ಲವೇ?
– ಸಿದ್ದಾಂತ್
ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ.ಹೀಗಿರುವಾಗ ಇಂದಿನ ತಾಯಂದಿರು ತಮ್ಮ ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ರೂಪಿಸುವಲ್ಲಿ ಯಾವ ಪಾತ್ರ ವಹಿಸಿದ್ದಾರೆ? ಮಗುವಿನ ಸರ್ವಾಂಗೀಣ ಬೆಳವಣಿಗೆ ಎಂದರೆ ಅವನ/ಅವಳ ಶಾರೀರಿಕ, ಮಾನಸಿಕ, ಬ್ಹುದ್ದಿಕ, ಆಧ್ಯಾತ್ಮಿಕ,ಆತ್ಮಿಕ, ಹಾಗು ಆತ್ಮಸ್ತೈರ್ಯದ ವಿಕಾಸವೇ ಆಗಿದೆ. ಆದರೆ ಇಂದಿನ ತಂದೆ ತಾಯಂದಿರು ತಮ್ಮ ಮಕ್ಕಳ ಶಾರೀರಿಕ, ಶೈಕ್ಷಣಿಕ ಹಾಗು ಸಾಂಸ್ಕೃತಿಕ ಬೆಳವಣಿಗೆಯನ್ನು ಮಾತ್ರವೇ(ಸ್ಪರ್ದೆಗಳಲ್ಲಿ ಗೆಲ್ಲುವುದು) ಸರ್ವಾಂಗೀಣ ಬೆಳವಣಿಗೆ ಎಂದು ಅರ್ಥೈಸಿಕೊಂಡಿರುವಂತಿದೆ…?
ಇದಕ್ಕೆ ಸಂಬಂಧಿಸಿಧ ಮತ್ತೊಂದು ವಿಷಾದನೀಯ ಸಂಗತಿ ಎಂದರೆ ಇಂಥಹುದನ್ನು ಪ್ರಹಿಸುವಂತೆ ಟಿವಿಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಮಕ್ಕಳಿಗೆ ದುಭಾರಿಯಾದಂತಹ ಆಹಾರ(ಹೆಲ್ತ್ ಡ್ರಿಂಕ್ಸ್) , ಪಾನೀಯಗಳನ್ನು ಪೋಷಕರು ಕೊಡಿಸುವ ಭ್ರಮೆಯಲ್ಲಿರುತ್ತಾರೆ. ಇದನ್ನು ಕುಡಿದರೆ ಮಾತ್ರ ತಮ್ಮ ಮಕ್ಕಳು ವಿಶೇಷವಾದದನ್ನು ಸಾಧಿಸಬಲ್ಲರು ಎಂಬ ಭ್ರಮೆಯನ್ನು ಜಾಹೀರಾತುಗಳಲ್ಲಿ ಬರುವ ಸೆಲೆಬ್ರಿಟಿಗಳು ಮತ್ತು ಪೋಷಕರು ಮಕ್ಕಳ ಮನಸ್ಸಿನಲ್ಲಿ ಉಂಟುಮಾಡುವುದು ಎಷ್ಟರಮಟ್ಟಿಗೆ ಸರಿ? ಹೀಗೆ ನೋಡಿದರೆ ಹಿಂದಿನ ಕಾಲದಲ್ಲಿ ಮಕ್ಕಳು(ಆಧುನಿಕ ಹೆಲ್ತ್ ಪಾನಿಯಗಳಿಲ್ಲದ ಕಾಲದಲ್ಲಿ ) ಏನ್ನನ್ನೂ ಸಾಧಿಸಿರಲಿಲ್ಲವೆ?
ಖೆಡ್ಡಾ-೧ : ಪಡುವಣದಲ್ಲುದಯರವಿ!
– ಹೇಮಂತ್ ಕುಮಾರ್
[ಗೆಳೆಯ ಹೇಮಂತ್ ಕುಮಾರ್ ರವರು ಇನ್ನು ಮುಂದೆ ಪ್ರತಿ ಶನಿವಾರ ನಮ್ಮ ನಿಲುಮೆ ಓದುಗರನ್ನ ತಮ್ಮ ಕಥೆಗಳ ಖೆಡ್ಡಾಗೆ ಬೀಳಿಸಲಿದ್ದಾರೆ, ಓದುಗರೆಲ್ಲ ಇವರ ಕಥೆಗಳನ್ನ ಓದಿ ಈ ಯುವ ಬರಹಗಾರನಿಗೆ ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ]
ಅಪ್ಪ ನನಗೆ ವಯಸ್ಸಾಗ್ತಾ ಬಂತು ಕೂದಲು ಉದುರಿಹೋಗುವ ಮುನ್ನ ಮದುವೆ ಮಾಡಿಬಿಡಪ್ಪಾ! ಒಮ್ಮಿಂದೊಮ್ಮೆಗೆ ಇಪ್ಪತ್ತಾರು ವರ್ಷದ ತನ್ನ ಮಗ ಎದುರು ನಿಂತು ಹೀಗೆ ಕೇಳುವನೆಂದು ಯೋಚಿಸಿರಲಿಲ್ಲವೇನೋ ಮಂಜುನಾಥಯ್ಯನವರು. ಯಾವುದೋ ಲೆಕ್ಕಾಚಾರದಲ್ಲಿ ಮುಳುಗಿದ್ದವರು ಕಾಲ್ಕುಲೇಟರನ್ನು ಕೆಳಗಿಟ್ಟು ಕನ್ನಡಕವನ್ನು ಕಣ್ಣಿನಿಂದ ತೆಗೆದು ಕೈಗೆ ಅಲಂಕರಿಸಿ ಮಗನನ್ನು ಕಾಲಿನಿಂದ ತಲೆಯವರೆಗೂ ಒಮ್ಮೆ ಸ್ಕಾನ್ ಮಾಡುವರು. ಏನಪ್ಪಾ, ನನಗೂ ಸಂಗಾತಿ ಬೇಕು ಅನ್ನಿಸ್ತಿದೆ ಇದೇ ಸರಿಯಾದ ಸಮಯ ಮದುವೆ ಮಾಡಿಬಿಡಿ, ಎಂದು ಮತ್ತೊಮ್ಮೆ ಹೇಳಿದ್ದನ್ನು ಕೇಳಿದ ನಂತರ ಲೆಕ್ಕಾಚಾರದಿಂದ ಸಂಪೂರ್ಣ ಹೊರಗೆ ಬಂದ ಮಂಜುನಾಥಯ್ಯನವರು, ನಿಧಾನಕ್ಕೆ ಕುರ್ಚಿಗೆ ಒರಗಿ ಹಾ ಆಗಪ್ಪಾ ಯಾರು ಬೇಡ ಅಂದ್ರು ಇವಾಗ, ಎನ್ನುವರು. ಅರೆ ಇದೇನು ಅಪ್ಪ ಹೀಗೆ ಹೇಳುತ್ತಿರುವರಲ್ಲಾ ಎಂದು ಅಚ್ಚರಿಯಾಗಿ ಹೆಣ್ಣು ಹುಡುಕಿ ಮತ್ತೆ ಎಂದು ಮತ್ತೆ ನಾಚಿಕೆ ಬಿಟ್ಟು ಹೇಳುವನು.
ಕನ್ನಡ ಕಲಿಕೆಯ ಶಾಲೆ ಸಂಸ್ಥೆ
ನಿಲುಮೆ
ಸ್ನೇಹಿತರೆ ನಮಸ್ಕಾರ, ಈ ಪತ್ರದ ಮೂಲಕ ನಾವು ಇದೆ ಮೊದಲನೇ ಸಲ ಭೇಟಿಯಾಗುತ್ತಿದ್ದೇವೆ, ಎಲ್ಲರಿಗೂ ಶುಭವಾಗಲಿ . (ಒಂದು ಸೂಚನೆ: “ಈ ಪತ್ರ ಓದಲು ನಿಮಗೆ ಮೂರು ನಿಮಿಷ ಗಳಾದರೂ ಬೇಕಾಗುವುದರಿಂದ ದಯವಿಟ್ಟು ಸಮಯವಿದ್ದರಷ್ಟೇ ಮುಂದುವರಿಸಿ, ಇಲ್ಲದಿದ್ದರೆ ನಿಮ್ಮ ಬಿಡುವಿನ ವೇಳೆಯಲ್ಲಿ ಓದಿಕೊಳ್ಳಿ” – ಇದು ನಮ್ಮ ವಿನಂತಿ).
ಒಂದು ಕಾಲದಲ್ಲಿ “ಉದ್ಯಾನ ನಗರಿ” ಎಂದೇ ಪ್ರಸಿದ್ದಿ ಪಡೆದಿದ್ದ “ಬೆಂದಕಾಳೂರು”, ಇಂದು ಸಾಫ್ಟ್ವೇರ್ ಲೋಕದ ದಿಗ್ಗಜ ನಗರಗಳಲ್ಲಿ ಒಂದಾಗಿ ತಲೆಯೆತ್ತಿ ನಿಂತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಹಲವಾರು ಸಂಸ್ಥೆ ಗಳಿಗೆ ಹಾಗೂ ದೇಶ-ವಿದೇಶದ ನಾನಾ ಭಾಗ/ಪ್ರಾಂತ್ಯದ ಸಹಸ್ರಾರು ಜನರಿಗೆ ಆಶ್ರಯ ತಾಣವಾಗಿದೆ. ಹೇಗೆ ನಮ್ಮ ಮನೆಗೆ ಅತಿಥಿಗಳು ಬಂದಾಗ, ನಮ್ಮ ಬಗ್ಗೆ ಹಾಗೂ ನಮ್ಮ ಮನೆಯ ವಾತಾವರಣದ ಬಗ್ಗೆ ಪರಿಚಯ ಮಾಡಿಕೊಡುತ್ತೆವೋ ಹಾಗೆಯೇ ಇಲ್ಲಿಗೆ ಬರುವ ಸಹಸ್ರಾರು ಜನರಿಗೆ ನಮ್ಮ ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ಕೊಡುವ “ಜವಾಬ್ದಾರಿ” ಹಾಗೂ “ನಿರಂತರ ಪ್ರಯತ್ನ” ನಮ್ಮೆಲ್ಲರ ಮೇಲಿದೆ.
ಕಸದ ಬುಟ್ಟಿ
ಪ್ರೀತೀಶ
ಛೀಮಾರಿ ಹಾಕಬೇಡಿ. ಇದೇನು ಬರೆಯುವಂಥ ವಿಷಯವೇ ಎಂದು ಪ್ರಶ್ನಿಸಬೇಡಿ. ಪ್ರಶ್ನೆ ಸರಿಯಾದುದೇ. ಆದರೆ ಉತ್ತರವಿಲ್ಲವಲ್ಲ! ಏನು ಮಾಡಲಿ ಹೇಳಿ? ಬರೆಯಲು ಎಷ್ಟು ತಿಣುಕಾಡಿದರೂ ಒಂದೂ ವಿಷಯ ಸಿಗಲಿಲ್ಲ. ಅದಕ್ಕೆ ಕಾಲಬುಡದಲ್ಲಿ ಸಿಕ್ಕ ಬಡಪಾಯಿಯ ಅಪಮಾನ ಮಾಡುವ ದರಿದ್ರ ಕೆಲಸಕ್ಕಿಳಿದಿರುವೆ. ಕ್ಷಮೆಯಿರಲಿ. ಕ್ಷಮೆ? ಅದಕ್ಕೆ ಅರ್ಹನೇ ನಾನು? ಪ್ರಶ್ನೆಯನ್ನು ಒಂದಿನಿತು ಹೊತ್ತು ಬದಿಗಿಟ್ಟು ಓದಿ ನಂತರ ನಿಮ್ಮ ಉತ್ತರ ನಕಾರಾತ್ಮಕವಾಗಿದ್ದರೆ ಒಂದಿಷ್ಟು ಝಾಡಿಸಿ ಒದೆಯಿರಿ. (ಒದೆ ತಿನ್ನಲು ಎದುರಿಗೆ ನಾನಿಲ್ಲವಲ್ಲ ಎಂದು ಒಳಗೊಳಗೆ ನಾನು ನಕ್ಕುದನ್ನು ತಾವು ನೋಡಿಲ್ಲವೆಂಬುದು ನನ್ನ ಭ್ರಮೆ) ಇಂಥ ರಸಹೀನ, ಕೊಳಕು, ದರಿದ್ರ ವಸ್ತುವನ್ನು ಆಯ್ದುಕೊಳ್ಳುವಾಗ ಇದನ್ನು ಓದಲು ನೀವು ಆಯ್ದುಕೊಂಡಾಗ ಆದಷ್ಟೇ ನನಗೂ ಅಸಹ್ಯವಾಯಿತು. ಆದರೆ ಜಗತ್ತಿನ ಕೊಳಕನ್ನೆಲ್ಲ ತನ್ನ ಒಡಲಲ್ಲಿ ಅವಿತಿಟ್ಟುಕೊಂಡ, ಕೆಲವೊಮ್ಮೆ ತೆರೆದುಕೊಂಡ, ಬಹಳಷ್ಟು ಸಾರಿ ಸುತ್ತೆಲ್ಲ ಚೆಲ್ಲಿಕೊಂಡ ಈ ಕಸದ ಬುಟ್ಟಿಯ/ತೊಟ್ಟಿಯ (ಸಂಕ್ಷಿಪ್ತವಾಗಿ ಕ.ಬು.) ಬಗ್ಗೆ ಯೋಚಿಸಲು ತೊಡಗಿದಾಗ ನನಗೆ ಆದ ಜ್ಞಾನೋದಯದಿಂದ ಬೆಚ್ಚಿ ಇದನ್ನೆಲ್ಲ ತಮ್ಮ ಮುಂದೆ ಕಾರಿಕೊಳ್ಳಲು ಸನ್ನಧ್ಧನಾದೆ. ಸುಮ್ಮನೆ ವಸ್ತುವಿನ ಬಗ್ಗೆಯೇ ಕಿರಿಕಿರಿ ಮಾಡುವುದನ್ನು ಬಿಟ್ಟು ಏನು ಕೊರೆಯುವುದಿದೆಯೋ ಅದನ್ನು ಕೊರೆದು ಮುಗಿಸಪ್ಪ ಎಂದು ಬೇಜಾರಾಗಬೇಡಿ.
ಕ.ಬು. ನಮ್ಮಂಥ ಹೇಳಹೆಸರಿಲ್ಲದ, ಅಕ್ಷರ ಬರೆಯಲು ಬಂದರೆ ಲೇಖಕನಾದೆ ಎಂಬ ಹುಸಿಗರ್ವದಿಂದ ಮೆರೆವ ಯಾರೂ ಗುರುತಿಸದ ಲೇಖಕರಿಗೆ ಹೊಸದೇನಲ್ಲ. ಜಗತ್ತಿನಲ್ಲಿ ಎಲ್ಲ ಕ.ಬು.ಗಳೂ ಬಹುಶ: ಅತೀ ಹೆಚ್ಚಾಗಿ ಬೆದರುವ ಕಸವೆಂದರೆ ನಾವು ಬರೆದ ಕವನಗಳು (?), ಕತೆಗಳು (?), ಲೇಖನಗಳು (?). ವೊದಲಿಗೆ ಬರೆಯಬೇಕೆಂಬ ಹುಂಬತನದಿಂದ ಎಷ್ಟೆಲ್ಲ ಗುದ್ದಾಡಿ ಒಂದು ವಸ್ತುವನ್ನು ಹುಡುಕಿ, ಅದರ ಬಗ್ಗೆ ಎಷ್ಟೆಲ್ಲ ಯೋಚಿಸಿ, ತಲೆ ಕೆರೆದುಕೊಂಡು, ಎಲ್ಲೆಲ್ಲೋ ತಡಕಾಡಿ ಯಾರಿಗೂ ಗೊತ್ತಾಗದಂತೆ ಹತ್ತಿಪ್ಪತ್ತು ಕವನಗಳಿಂದ ತುಣುಕುಗಳ ತುಡುಗು ಮಾಡಿ, ನಿಘಂಟನ್ನೆಲ್ಲ ಬರಿದು ಮಾಡಿ ಒಂದು ಕವನ ಬರೆಯುವಾಗ ಒಂದೋ ಎರಡೋ ಕ.ಬು.ಗಳು ತುಂಬಿಕೊಂಡಿರುತ್ತವೆ. ಹೀಗೆ ಕೊನೆಗೂ ಬರೆದು ಮುಗಿಸಿದ ಕವನ ಎಷ್ಟೆಲ್ಲ ಪತ್ರಿಕಾ ಕಾರ್ಯಾಲಯಗಳಿಗೆ ಹೋಗಿ ಅವರಿಗೆ ಹೇಸಿಗೆ ಬಂದು ಒಂದು ಕವನಕ್ಕಾಗಿ ಅವರೂ ಒಂದೋ ಎರಡೋ ಕ.ಬು.ಗಳ ತುಂಬಿ, ಪ್ರಕಟಗೊಂಡ ಕವನಗಳ ಓದಲಾಗದೇ ಓದುಗರು ಇನ್ನೆಷ್ಟೋ ಕ.ಬು. ತುಂಬಿ… ಅಯ್ಯಯ್ಯೋ ಈ ಕಸದ ಬುಟ್ಟಿಯಷ್ಟು ಸಹನೆ ನಮಗೆ ಇರಬಾರದೇ ಎನಿಸದಿರದು. ಕ.ಬು.ಗಳು ಇಲ್ಲಿಯವರೆಗೆ ಮುಚ್ಚಿಟ್ಟುಕೊಂಡ ಅತ್ಯಂತ ಹೆಚ್ಚಿನ ಕೊಳಕೂ ಅದೇ ಎಂಬುದು ನನ್ನ ಖಡಾಖಂಡಿತವಾದ ನಂಬುಗೆ. ಅದು ನಿಜವೆಂದು ಒಪ್ಪಲು ಮನಸ್ಸು ತಯಾರಿಲ್ಲ. ಕ.ಬು. ಮಾಡುವ ಬಹಳ ಮಹತ್ವದ ಸಮಾಜಸೇವೆಯೇ ಈ ಕೊಳಕನ್ನು ಜನರ ಕಣ್ಣಿನಿಂದ ದೂರ ಇಟ್ಟಿರುವುದು. ಆ ಪುಣ್ಯದ ಕೆಲಸಕ್ಕಾಗಿ ಕಸದ ಬುಟ್ಟಿ ಯಾವಾಗಲೋ ಸ್ವರ್ಗ ಸೇರಿ ಆರಾಮಾಗಿ ಇರಬಹುದಿತ್ತು. ಆದರೆ ಜಗತ್ತಿನ ಒಳ್ಳೆಯ ಕೊಳಕೆಲ್ಲ ಧರಣಿ ಹೂಡಿ ಭೂಮಿಯಲ್ಲೇ ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ಸು ಪಡೆದದ್ದು ಯಾವ ಇತಿಹಾಸದಲ್ಲೂ ದಾಖಲಾಗದ ಒಂದು ಕಟುಸತ್ಯ.
ಟಿ ವಿ ಎಂಬ ಸುಂದರಿ ..
– ಅನಿತ ನರೇಶ್ ಮಂಚಿ
ವಾಶಿಂಗ್ ಪೌಡರ್ ನಿರ್ಮ, ವಾಶಿಂಗ್ ಪೌಡರ್ ನಿರ್ಮ..’ ಇದು ಗೆಳತಿಯ ಬಾಯಲ್ಲಿ ಕೇಳಿ ಬರುತ್ತಿದ್ದ ಹೊಸ ಹಾಡು. ‘ಯಾರೇ ಹೇಳ್ಕೊಟ್ಟಿದ್ದು’ ಕೊಂಚ ಅಸೂಯೆ ಇತ್ತು ನನ್ನ ಧ್ವನಿಯಲ್ಲಿ. ‘ಹೇಳ್ಕೊಡೋದ್ಯಾಕೆ..? ನಾನೇ ಕೇಳಿ ಕಲ್ತಿದ್ದು, ಟಿ ವಿ ನೋಡಿ… ಗೊತ್ತಾ ನಿಂಗೆ , ನಮ್ಮಲ್ಲಿ ಹೊಸ ಟಿ ವಿ ತಂದಿದ್ದಾರೆ.., ಇದರ ಡ್ಯಾನ್ಸ್ ಕೂಡ ಇದೆ ನಿಲ್ಲು ತೋರಿಸ್ತೀನಿ,ಮೊದ್ಲು ಬಟ್ಟೆ ಮಣ್ಣಾಗಿರುತ್ತೆ, ಹೀಗೆ ಮಾಡಿದ ಮೇಲೆ ಬಟ್ಟೆ ಹೊಸದಾಗಿ ಹೊಳೆಯುತ್ತೆ’ ಎಂದು ತನ್ನ ಫ್ರಾಕಿನ ಎರಡೂ ತುದಿಗಳನ್ನು ಬೆರಳುಗಳಲ್ಲಿ ಅಗಲಿಸಿ ಹಿಡಿದು ಉರುಟುರುಟಾಗಿ ಸುತ್ತಿದಳು ರಸ್ತೆಯಲ್ಲಿಯೇ.. !!
ಮೀಸಲಾತಿ ಕೇವಲ ಉಳ್ಳವರಿಗೆ ಮಾತ್ರನಾ?
– ಮುರುಳಿಧರ್ ದೇವ್
ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಒಬ್ಬ ದಲಿತ ಹೆಂಗಸು ತನ್ನ ಮಗ ಕರ್ನಾಟಕ ಸರಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ೧೨೦೦೦ ರ್ಯಾಂಕ್ ಬಂದಿರೋದನ್ನ ತುಂಬಾ ಖುಷಿಯಿಂದ ಹೇಳ್ಕೋತ ಇದ್ಲು. ಇದೇನು ೧೨೦೦೦ ರ್ಯಾಂಕ್ ಬಂದಿರೋದು ಅಂತ ದೊಡ್ಡ ವಿಷಯ ಅಂತ ಅನ್ಕೋಬೇಡಿ. ಅವಳು ಮನೆ ಮನೆಗಳಲ್ಲಿ ಪಾತ್ರೆ ತೊಳೆದು ತನ್ನ ಮಗನನ್ನು ಓದುಸ್ತ ಇರೋದು. ಅವರ ಕುಟುಂಬದಲ್ಲಿರೋದು ನಾಲ್ಕು ಜನ, ಗಂಡ ದಿನ ಕುಡಿದು ಬಂದು ಇವಳನ್ನು ಹೊಡೆಯೋದು, ಮಗಳು ಈಗ ೯ನೆ ತರಗತಿ ಓದ್ತಾ ಇರೋದು. ಸಂಪೂರ್ಣ ಮನೆಯ ಜವಾಬ್ದಾರಿ ಇವಳ ಹೆಗಲಿಗೆ. ಆದರೆ ಆ ಹುಡುಗನ ಮುಖದಲ್ಲಿ ಸಂತಸಕ್ಕಿಂತ ಮುಂದೇನು ಅನ್ನೋ ಚಿಂತೆಯೇ ಬಹುವಾಗಿ ಕಾಡ್ತಾ ಇತ್ತು. ಮಾತಿನ ಮಧ್ಯೆ ಯಾಕಿಷ್ಟು ಚಿಂತೆ ಪಡ್ತಿಯ, ಹೇಗಿದ್ರು ಸರಕಾರದವರು ದಲಿತರಿಗಾಗಿ ಶೈಕ್ಷಣಿಕ ಸೌಲಭ್ಯ ಕೊಡುತ್ತೆ, ನಿನ್ನ ಫೀಸ್ ಬಗ್ಗೆನು ಯೋಚಿಸಬೇಡ ಅಂತ ಹೇಳ್ತಾ ಇದ್ದೆ. ಆದ್ರೆ ಇದ್ಯಾವುದರಿನ್ದಾನು ಆತನ ಮುಖದಲ್ಲಿನ ಚಿಂತೆ ಕಡಮೆ ಆಗ್ಲಿಲ್ಲ.
ಕೊನೆಗೆ ಆತನೇ, ಸರಕಾರದವರೆನೋ ಶುಲ್ಕ ತುಂಬುತ್ತಾರೆ, ಆದರೆ ಮಿಸಲಾತಿ ಇದ್ದರು ಒಳ್ಳೆಯ ಕಾಲೇಜ್ ನಲ್ಲಿ ಸೀಟು ದೊರಕೋದು ಕಷ್ಟ ಅಂದ. ನಾನೋ ಅದ್ಯಾಕೆ ಮಿಸಲಾತಿ ಇರೋದು ಹಿಂದುಳಿದ ಜನಾಂಗ ಮುಂದೆ ಬರಲಿ ಅಂತ ಹೇಳಿದ್ರೆ ಎಲ್ಲಿತ್ತೋ ಕೋಪ ಎಲ್ಲ ಸೇರ್ಸಿ ಹೇಳ್ದ, ನಂಗೆ ಮನೇಲಿ ಕಷ್ಟ ಇದೆ ಅದ್ಕೆ ೧೨೦೦೦ ರ್ಯಾಂಕ್ ಬಂದಿದೆ ಸ್ವಲ್ಪ ಮಟ್ಟಿಗೆ ತೀರ ಒಳ್ಳೇದು ಅಲ್ಲದೆ ಇದ್ರುನು ಉತ್ತಮ ಕಾಲೇಜ್ ನಲ್ಲಿ ಸೀಟು ಸಿಗಬಹುದು, ಆದರೆ ನಮ್ಮ ಅಮ್ಮ ಕೆಲಸಕ್ಕೆ ಹೋಗೋ ಮನೆಯ ಯಜಮಾನ ಸರಕಾರದಲ್ಲಿ ಉನ್ನತ ಹುದ್ದೆಲಿ ಇದ್ದಾರೆ, ಅವರ ಮಗನಿಗೆ ಖಾಸಗಿಯಾಗಿ ಕೋಚಿಂಗ್ ಕೊಡ್ಸಿದಾರೆ, ಇಷ್ಟಾಗಿಯೂ ಅವನಿಗೂ ನನಗು ಇರೋ ರ್ಯಾಂಕ್ ವ್ಯತ್ಯಾಸ ಕೇವಲ ೫೦೦.