ಸತ್ತ ನಂತರ ‘ಒಳ್ಳೆಯವರಾಗಿಬಿಡುವ’ ಪರಿಗೆ ಅಚ್ಚರಿಗೊಳ್ಳುತ್ತ….
‘ಸತ್ತವರ ಬಗ್ಗೆ ಕೆಟ್ಟದ್ದಾಡಬಾರದಂತೆ’; ಅವರು ಬದುಕಿದ್ದಾಗ ಕೆಟ್ಟವರಾಗಿದ್ದಾಗಲೂ ಸಹ! ವ್ಯಕ್ತಿಯೇ ಸತ್ತು ಹೋದ ಮೇಲೆ ಆತನ ಹಳೆಯ ಪುರಾಣಗಳನ್ನು ಕೆದಕುವುದು ಬೇಡವೆಂಬ ಭಾವನೆಯನ್ನೇನೋ ಒಪ್ಪಬಹುದು ಆದರೆ ಇದ್ದ – ಇರದ – ಸೃಷ್ಟಿಸಲ್ಪಟ್ಟ ವಿಶೇಷಣಗಳನ್ನೆಲ್ಲ ಸತ್ತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಆರೋಪಿಸಿ ಸತ್ತವರಿಗೇ ಬೇಸರ ಬರಿಸುವಷ್ಟು ಹೊಗಳುವುದು ಎಷ್ಟರಮಟ್ಟಿಗೆ ಸರಿ?! ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯ ಮರಣದ ನಂತರ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಬಾಳ ಠಾಕ್ರೆಯ ಬಗ್ಗೆ ಬರುತ್ತಿರುವ ವರದಿಗಳನ್ನು ಓದಿದರೆ ನಮ್ಮ ಸಮಾಜದ ಅಧಃಪತನದ ಮನಸ್ಥಿತಿಯ ಪ್ರತಿಬಿಂಬದಂತೆಯೇ ಕಾಣಿಸುತ್ತಿದೆ.
‘ಮರಾಠಿ ಮಾನೂಸ್’ ಸೃಷ್ಟಿಸಿ ಅದರ ಬೆಂಕಿಯಲ್ಲೇ ರಾಜಕೀಯದಾಟವಾಡಿದ, ಹಿಂದೂ ಮುಸ್ಲಿಮರ ದ್ವೇಷ ಹೆಚ್ಚಳಕ್ಕೆ ತನ್ನ ಕೈಲಾದ ಸಹಾಯ ಮಾಡಿದ ವ್ಯಕ್ತಿಯೊಬ್ಬ ಇಂದು ರಾಷ್ಟ್ರನಾಯಕರಂತೆ, ದೇಶಭಕ್ತನಂತೆ ಚಿತ್ರಿಸಲ್ಪಡುತ್ತಿದ್ದಾರೆ. ಶಿವಸೇನೆಯ ಕಟ್ಟರ್ ಹಿಂದುತ್ವದ ಬೆಂಬಲಿಗರು ಠಾಕ್ರೆಯ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರನ್ನು ತೋರಿಸುತ್ತ ಆತ ಒಬ್ಬ ಮಹಾನ್ ನಾಯಕನೇ ಹೌದು ಎಂದ್ಹೇಳಬಹುದು. ಹಿಟ್ಲರನಿಗೂ ಅಪಾರ ಸಂಖ್ಯೆಯ ಬೆಂಬಲಿಗರಿದ್ದರು ಮತ್ತು ಬಾಳ ಠಾಕ್ರೆ ಸಂದರ್ಶನಗಳಲ್ಲಿ ಹಿಟ್ಲರನನ್ನು ಹಾಡಿ ಹೊಗಳಿದ್ದೂ ಇದೆ! ಮತ್ತಷ್ಟು ಓದು 
ಮತ್ತೊಮ್ಮೆ ಕಾರ್ನಾಡ್: ಸಂಸ್ಕೃತಿ ಚಿಂತನೆಯ ಮುಂದಿರುವ ಸವಾಲುಗಳು
ಮೊಬೈಲಿನಲ್ಲಿ ಕನ್ನಡ ಒಂದು ಸರ್ವೇ
-ರವಿ ಸಾವ್ಕರ್
ಸರ್ವೆಯಲ್ಲಿ 564 ಜನರು ಭಾಗವಹಿಸಿದ್ದರು . 31% ಜನರ ಮೊಬೈಲುಗಳಲ್ಲಿ ಕನ್ನಡ SMS ಅನ್ನು ಓದಬಹುದು ಎಂದು ತಿಳಿಸಿದ್ದಾರೆ .
ಒಂದು ಸೋಲಿನ ವೃತ್ತಾಂತ; ಪಾಠ ಕಲಿಯದ ದುರಂತ
-ರಾಕೇಶ್ ಏನ್ ಎಸ್
ಸೋಲು… ಸೋಲು… ಸೋಲು
ಸೋಲು ಅಕ್ಷ್ಯಮ್ಯ, ಅದರಲ್ಲಿಯೂ ಯುದ್ಧಭೂಮಿಯಲ್ಲಿನ ಅಪಜಯಕ್ಕೆ ಕ್ಷಮೆಯೇ ಇಲ್ಲ ಎಂದು ಕೊಂಡಿರುವ ಪರಂಪರೆ ನಮ್ಮದು. ಸೋತವ ಎಂಬ ಹಣೆಪಟ್ಟಿ ಯಾರಿಗೂ ಬೇಡ, ಸೋಲು ಎಂದಿಗೂ ತಬ್ಬಲಿ.
ಸರಿಯಾಗಿ ೫೦ ವರ್ಷಗಳ ಹಿಂದೆ, ಇದೇ ಸಮಯದಲ್ಲಿ ಹಿಮಾಲಯದ ಧವಳಗಿರಿಗಳ ಮಧ್ಯೆ ಭಾರತೀಯರನ್ನು ಅಪ್ಪಿಕೊಳ್ಳಲು ಇಂತಹದ್ದೆ ಒಂದು ಸೋಲು ಹೊಂಚು ಹಾಕಿ ಕುಳಿತಿತ್ತು. ಚೀನಾದ ಕೆಂಪು ಪಡೆ ಹೆದ್ದೆರೆಯೋಪಾದಿಯಲ್ಲಿ ನಡೆಸಿದ ದಾಳಿಗೆ ಗಣತಂತ್ರ ಸ್ವತಂತ್ರ ಭಾರತ ಬೆರಗಾಗಿತ್ತು, ಬೆನ್ನು ಬಾಗಿಸಿ ವಂದಿಸಿ ಸೋತು ಹೋಗಿತ್ತು.
ಭಾರತ ಮತ್ತು ಚೀನಾ ಪ್ರಾಚೀನ ನಾಗರಿಕತೆಗಳ ತವರೂರು. ಹಾಗೆಯೆ ಜಾಗತಿಕರಣಗೊಂಡ ಜಗತ್ತನ್ನು ಹೊತ್ತು ಸಾಗಿಸುವ ಗಾಲಿಗಳು. ಈ ಎರಡು ದೇಶಗಳಿಗೆ ಭೂತ ಮತ್ತು ಭವಿಷ್ಯದಲ್ಲಿರುವ ಪ್ರಾಮುಖ್ಯತೆ ಆಪಾರ. ಆದರೆ ಭಾರತ ಮತ್ತು ಚೀನಾದ ಮಧ್ಯೆ ಹುಟ್ಟಿಕೊಂಡ ಸಂಘರ್ಷದ ಕಾಲಘಟ್ಟ ಬಹಳ ವಿಚಿತ್ರವಾದದ್ದು.
೧೯೫೦ರ ದಶಕದಲ್ಲಿ ಚೀನಾವು ಮಾವೋ ತ್ಸೆತುಂಗ್ನ ತೆಕ್ಕೆಯಲ್ಲಿ ಅಪರಿಮಿತ ವೇಗದ ಅಭಿವೃದ್ಧಿಯ ಕನಸನ್ನು ಹೊಸೆಯುತ್ತಿದ್ದರೆ, ಭಾರತ ಬ್ರಿಟಿಷರಿಂದ ಮುಕ್ತವಾಗಿ ಪ್ರಜಾರಾಜ್ಯದ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದ ಸಮಯ, ಸಂದರ್ಭವದು. ಆಗ ಈ ಎರಡು ದೇಶಗಳಿಗೆ ಯುದ್ಧವೆಂಬ ಹೊರೆ ಬೇಕಾಗಿರಲಿಲ್ಲ.
ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ’ಹಿಂದಿ ಚೀನಿ ಭಾಯಿ ಭಾಯಿ’ ಎಂಬ ಉದ್ಘೋಷವನ್ನು ೧೯೫೦ರ ದಶಕದಲ್ಲಿ ಮುನ್ನೆಲೆಗೆ ತಂದಿದ್ದರು. ತೈವಾನ್ ವಿವಾದದಿಂದಾಗಿ ವಿಶ್ವ ಗುಂಪಿನಲ್ಲಿ ಚೀನಾ ಮೂಲೆಗುಂಪಾದ ಸಂದರ್ಭದಲ್ಲಿ ಅದನ್ನು ಒಂದು ದೇಶವೆಂದು ಪರಿಭಾವಿಸಿ ಅದರೊಂದಿಗೆ ಸ್ನೇಹ ಸಂಬಂಧ ಬೆಳೆಸಿದ ದೇಶಗಳಲ್ಲಿ ಭಾರತವು ಒಂದು. ಇಂತಹ ಮಧುರ ಸಂಬಂಧ ಉತ್ತುಂಗಕ್ಕೇರುತ್ತಲೇ ಪರಸ್ಪರ ಅನುಮಾನದ ಪಾತಳಕ್ಕೆ ಕುಸಿದದ್ದು ಚರಿತ್ರೆಯ ವೈಚಿತ್ರ. ಮತ್ತಷ್ಟು ಓದು 
ಬಿಟ್ಟೇ ಹೋಗುವ ಬೆಂಗಳೂರು ಅರಮನೆ
-ಪ್ರಶಸ್ತಿ ಪಿ ಸಾಗರ
ಬೆಂಗಳೂರು ಅರಮನೆ
ಬೆಂಗಳೂರಲ್ಲಿ ಲಾಲ್ ಬಾಗ್ , ವಿಧಾನ ಸೌಧ, ಕಬ್ಬನ್ ಪಾರ್ಕ್ ಗೊತ್ತು. ಇದೆಲ್ಲಿಂದ ಬಂತಪ ಅರಮನೆ ಅಂದ್ಕಂಡ್ರಾ ? ಮೈಸೂರು ಅರಮನೆ ಬಗ್ಗೆ ಬರೆಯೋಕೆ ಪೀಟಿಕೆ ಹಾಕ್ತಿದೀನಿ ಅಂದ್ಕಂಡ್ರಾ ? ಇಲ್ಲ ಸ್ವಾಮಿ . ನಾ ಹೇಳೋಕೆ ಹೊರಟಿರೋದು ಅರಮನೆ ರೋಡಲ್ಲಿರೋ ಮಹಾರಾಜರ ಬೇಸಿಗೆ ಅರಮನೆ ಬಗ್ಗೆನೇ . ಟಿಪ್ಪು ಅರಮನೆ ಅಂತ ಮಾರ್ಕೆಟ್ ಹತ್ರ ಇದ್ಯಲ ಅಂದ್ರ್ರ ? ಅದ್ರ ಬಗ್ಗೆನೂ.. ಹರಿಕತೇನೆ ನಿಮಗೆ ನಿದ್ದೆ ತರಿಸೋ ಮೊದ್ಲು ಅರಮನೆಗೆ ವಾಪಾಸ್ ಬರೋಣ.
ಹಿಂದಿನ ವಾರ ನಾವು ಗೆಳೆಯರು ಬೆಂಗಳೂರು ಅರಮನೆಗೆ ಹೋಗಿದ್ವಿ .ಮೂರು ಬಣ್ಣದ ರಕ್ಷಕರ ಭದ್ರತೆ ಕಾಣ್ತಿತ್ತು ಹೊರಗಿಂದ . ಗೂಗಲ್ ದೈವ ದಯಪಾಲಿಸಿದ್ದ ಚಿತ್ರಗಳನ್ನ್ನು ನ್ನೋಡಿಯೇ ಕೆರಳಿದ್ದ ನಮ್ಮ ಕುತೂಹಲ ಪೋಲಿಸ್ ಮಾವಂದಿರ ದರ್ಶನದಿಂದ ಇನ್ನು ಹೆಚ್ಚಾಯ್ತು. ಹೊರಗಿನಿಂದಲೂ ಚಿತ್ರ ತೆಗೆಯಕ್ಕೆ ಬಿಡಲಿಲ್ಲ ಅಲ್ಲಿ ಸಿಬ್ಬಂದಿ. ಅದರೂ ಮೊಬೈಲ್ ಕ್ಯಾಮರ ಸಮಾಧಾನಿಸುತ್ತ ಒಳ ಸಾಗಿದ ನಮಗೆ ಮತ್ತೊಂದು ಬೇಸರ ಕಾದಿತ್ತು. ಪ್ರವೇಶ ಶುಲ್ಕ ೨೦೦ ರೂ. ಮೈಸೂರು ಅರಮನೆಯಲ್ಲೂ ನೂರರ ಮೇಲಿಲ್ಲ . ತಾಜಮಹಲ್ , ಕೆಂಪುಕೋಟೆ ಹೀಗೆ ಭಾರತದಲ್ಲೇ ಭಾರತೀಯರಿಗೆ ಎಲ್ಲೂ ಇರದಷ್ಟು ಶುಲ್ಕ ಇಲ್ಲಿ !! ಆದರೆ ಬರೋದು ಬಂದಾಗಿದೆ .ನೋಡ್ಕೊಂಡೆ ಹೋಗೋದು ಅಂತ ತೀರ್ಮಾನ ಮಾಡಿದ್ವಿ. ಗೆಳೆಯರ ಹತ್ರ ಇದ್ದ ಬದ್ದ ದುಡ್ಡೆಲ್ಲ ಗುಡ್ಡೆ ಹಾಕಿ ಅಂತೂ ಒಳಗೆ ಸೇರಿದ್ವಿ. ಅಲ್ಲಿರೋ ಎಲ್ಲದರ ಮಾಹಿತಿ ಇದ್ದ ಆಡಿಯೋ ಗೈಡ ಉಚಿತ ಅನ್ನೋದಷ್ಟೇ ಅವಾಗಿದ್ದ ಸಮಾಧಾನ.
ಮೊದಲ್ನೇ ಜಾಗ ಅಂದ್ರೆ ಮತ್ತೆ ಹೊರಬಾಗಿಲಿಗೆ ಬಂದ್ವಿ. ಈ ಅರಮನೆಯನ್ನು ೧೮೭೩ರಲ್ಲಿ ಕಟ್ಟಲಾಯಿತಂತೆ. ಅದನ್ನು ಕಟ್ಟಿದ ಪರಿ, ಆಗಿನ ರಾಜ ವೊಡೆಯರರ ಮೈಸೂರು ಸಂಸ್ಥಾನದ ಪರಿ, ನೀರಾವರಿಯಿಂದ , ಅಭಿವೃದ್ದಿ ಯೋಜನೆಗಳೆಡೆಗೆ ಸಂಸ್ಥಾನ ಗಮನ ಹರಿಸಿದ ರೀತಿಯನ್ನು ಕೇಳುತ್ತ ಅಭಿಮಾನ ಕನಕಣದಲ್ಲೂ ಉಕ್ಕಿದ ಅನುಭವ. “ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು ” .. ಹಾಡಿನ ಹಿಮ್ಮೇಳ ಕೇಳಿದಂತಾಯ್ತು ಒಮ್ಮೆ . ಮತ್ತಷ್ಟು ಓದು 
ಕೋಳಿಮೊಟ್ಟೆ ನ್ಯಾಯ ಅರಿಯುವ ತುರ್ತಿದೆ
– ಚಕ್ರವರ್ತಿ ಸೂಲಿಬೆಲೆ
‘ಇವನ್ಯಾಕೋ ಏಳು ತಿಂಗಳಿಗೇ ಹುಟ್ಟಿದವನ ಹಾಗೆ ಆಡ್ತಾನಲ್ಲ!’ ಹಾಗಂತ ಹೇಳೋದನ್ನು ಕೇಳಿದ್ದೀರಾ? ಪ್ರತಿಯೊಂದನ್ನೂ ತುರ್ತುತುರ್ತಾಗಿ, ಮುಂದಾಲೋಚನೆ ಇಲ್ಲದೆ ಅರ್ಧಂಬರ್ಧ ಕೇಳಿ ನಿರ್ಣಯ ತೆಗೆದುಕೊಳ್ಳೋರಿಗೆ ಹೇಳುವ ಮಾತು ಇದು. ಕೆಲವೊಮ್ಮೆ ಹೀಗೆ ಮಾಡಿದ ಕೆಲಸಗಳು ತಮಾಷೆಯಾಗಿರ್ತವೆ, ಕೆಲವೊಮ್ಮೆ ಬೋಧಪ್ರದವಾಗಿರುತ್ತವೆ, ಮತ್ತು ಕೆಲವೊಮ್ಮೆ ಭಯಾನಕ ಪರಿಣಾಮವನ್ನೂ ಉಂಟು ಮಾಡುತ್ತವೆ.
ಕುರುಕ್ಷೇತ್ರ ಯುದ್ಧದಲ್ಲಿ ಅಶ್ವತ್ಥಾಮನೆಂಬ ಆನೆ ಸತ್ತಾಗ ಧರ್ಮರಾಯ ಹೇಳಿದ ಮಾತು ಹಾಗೇ ಅಲ್ಲವೆ? ’ಅಶ್ವತ್ಥಾಮೋ ಹತಃ’ ಇಷ್ಟು ಮಾತನ್ನು ಕೇಳುತ್ತಲೇ ಪುತ್ರವ್ಯಾಮೋಹಿಯಾದ ದ್ರೋಣರು ಶಸ್ತ್ರತ್ಯಾಗ ಮಾಡಿ ರಣರಂಗ ಮಧ್ಯದಲ್ಲಿ ಕುಳಿತುಬಿಟ್ಟರು. ಅಲ್ಲೇ ಅವರ ವಧೆಯಾಯಿತು. ’ಕುಂಜರಃ’ ಎಂದು ಹೇಳಿದ್ದನ್ನು ಕೇಳುವ ವ್ಯವಧಾನ ಅವರಿಗಿರಲಿಲ್ಲ, ಅಥವಾ ಬಹುಶಃ ಧರ್ಮರಾಯನೇ ಹೇಳಿದ್ದು ಸರಿಯಾಗಿ ಕೇಳುವಂತಿರಲಿಲ್ಲ.
’ಅಹಿಂಸಾ ಪರಮೋಧಮಃ’ ಎಂಬ ವಾಕ್ಯವನ್ನ ಪದೇಪದೇ ಕೇಳಿದ್ದೇವಲ್ಲ, ಅದೊಂಥರಾ ನಮ್ಮ ಘೋಷ ವಾಕ್ಯ. ಅದರ ಆಧಾರದ ಮೇಲೆಯೇ ರಾಷ್ಷ್ರವನ್ನು ಕಟ್ಟುವ ಭ್ರಮೆಯ ಮೇಲಿದ್ದೇವೆ ನಾವು. ಹಾಗೆನ್ನುತ್ತಲೇ ಬ್ರಿಟಿಷರ ಲಾಠಿಗೆ ಎದೆ ಕೊಟ್ಟೆವು, ಪಾಕಿಸ್ತಾನ ಕಳಕೊಂಡೆವು. ಹಾಗೆನ್ನುತ್ತಲೇ ಚೀನಾಕ್ಕೆ ಸಾವಿರಾರು ಹೆಕ್ಟೇರ್ಗಳಷ್ಟು ಭೂಮಿಯನ್ನು ಬಿಟ್ಟುಕೊಟ್ಟೆವು. ಅಹಿಂಸೆಯ ಆರಾಧನೆ ಮಾಡುತ್ತಲೇ ಕಸಬ್ನನ್ನು ಅಳಿಯನಂತೆ ಗೌರವದಿಂದ ಸಾಕಿಕೊಂಡೆವು. ಆದರೆ ಇದೇ ವಾಕ್ಯದ ಉತ್ತರಾರ್ಧ ’ಧರ್ಮ ಹಿಂಸಾ ತಥೈವ ಚ’ ನಮಗೆ ಕೇಳಿಸಲೇ ಇಲ್ಲ. ಧರ್ಮ ಸ್ಥಾಪನೆಗೋಸ್ಕರ ಹಿಂಸೆ ಮಾಡಿದರೆ ತಪ್ಪಲ್ಲ ಎನ್ನುವುದೂ ಈ ರಾಷ್ಟ್ರದ ಘೋಷ ವಾಕ್ಯವೇ. ಹೀಗಾಗಿಯೇ ಪರಮ ಶಾಂತ, ಧ್ಯಾನ ಸಿದ್ಧರೂ ಹತ್ತು ಕೈಗಳಲ್ಲಿ ಆಯುಧ ಹಿಡಿದ ದೇವಿಯನ್ನೇ ಪೂಜಿಸುವುದು. ಧರ್ಮ, ಶಾಂತಿ, ಹಿಂಸೆಗಳ ಪರಿಧಿಯನ್ನು ಚೆನ್ನಾಗಿ ಅರಿತವನು ಅವನು.
ತುಳುತ ಈ ಸ್ಥಿತಿಗು ತುಳುವೇರೆ ಕಾರಣ
– ದೀಕ್ಷಿತ್ ಕುಡ್ಲ
ಬೇತೆ ಭಾಷೆ, ಭಾಷಿಗೆರೆನ್ ತೂದು ತುಳುವೆರ್ ಕಲ್ಪುಲೇ….!!!!!!!!!
ದುಂಬು ನಮ್ಮ ತುಳುನಾಡ್ ಗೋಕರ್ಣರ್ದ್, ಚಂದ್ರಗಿರಿ ಮುಟ್ಟ ಇತ್ತ್೦ಡ್..! ಆಂಡ ಬೇತೆ ಭಾಷೆಲೆದ ಪ್ರಭಾವರ್ದ್ ತುಳು ಭಾಷೆದ ವ್ಯಾಪ್ತಿ ಕಮ್ಮಿ ಆವೊಂದು ಬತ್ತ್೦ಡ್..! ಇತ್ತೆಲ ಕಮ್ಮಿ ಆವೊಂದುಂಡು.. ತುಳು ಭಾಷೆಗ್ ಸಾವ್ ಇಜ್ಜಿ. ಅವ್ ನಾಶ ಆಪುಜಿ ಪಂದ್ ನಮ ಪನ್ಪ. ಆಂಡ ತುಳು ಭಾಷೆಗ್ ಒಂಜಿ ಸರಿಯಾಯಿನ ನಿಲೆ ಬೋಡು ಪನ್ಪುನೆನ್ ಏರ್ಲ ಅರ್ಥ ಮಲ್ತೊನುಜೆರ್. ಬಲಿಷ್ಠ ಭಾಷೆಲೆದ ಹಾವಳಿ ಸರಾಗ್ ತುಳುನಾಡ್’ಡ್ ಆವೊಂದು ಇತ್ತ್೦ಡಲ ಅವೆನ
್ ಕುರುಡು ಪ್ರೀತಿಡ್ ಸ್ವೀಕಾರ ಮಲ್ತೊಂದುಪ್ಪುನ ತುಳುವರೆನ್ ತೂನಗ ಬುಲಿಪೊಡಾ, ತೆಲಿಪೊಡಾ ಗೊತ್ತಾವೊಂದಿಜ್ಜಿ…! ಕನ್ನಡ, ಇಂಗ್ಲಿಷ್, ಕೊಂಕಣಿ, ಮಲಯಾಳಂ ಭಾಷೆಲು ತುಳುನಾಡ್’ಡ್ ಭದ್ರ ಆದ್ ಕುಲ್ಲೆರೆ, ಅಡಿಪಾಯ ಪಾಡ್ಯೆರೆ, ಸ್ಪರ್ಧೆ ಮಲ್ತೊಂದಿತ್ತಿಲಕನೆ ತುಳುನಾಡ್’ಡ್ ತುಳು ಭಾಷೆದ ಭವಿಷ್ಯ ರಡ್ಡ್ ದೋಣಿಗ್ ಕಾರ್ ದೀತಿಲಕ ಆತ್೦ಡ್…!
ಕೊಂಕಣಿ ಭಾಷೆ ನಮ್ಮೊಟ್ಟುಗು ದುಂಬುರ್ದಿ೦ಚ ಇತ್ತ್ ದ್, ಕೊಂಕಣೆರ್ ನಮ್ಮಕುಲೇ ಆದ್ ಪೋತೆರ್. ಅಂಚಾದ್ ಕೊಂಕಣಿ ಮೂಲ ಸ್ಥಳೀಯ ಭಾಷೆ ಅತ್ತ್೦ಡಲ ತುಳುನಾಡ್’ದ ನನೊಂಜಿ ಭಾಷೆ೦ದ್ ಪನೊಲಿ. ಆಂಡಲ ಅಕ್ಲೆನ ಭಾಷಾ ಮೋಹ, ಪ್ರೀತಿ, ಬೇಲೆನ್ ತುಳುವೆರ್ ತೂದು ದಾಯೆ ಕಲ್ತೊಂದಿಜ್ಜೆರ್ ಪನ್ಪುನನೆ ಯಕ್ಷ ಪ್ರಶ್ನೆ..! ನೆನಪು ದೀಲೆ ತುಳುನಾಡ್’ಡ್ ತುಳು ಭಾಷೆರ್ದ್ ದುಂಬು ಶಾಲೆಡ್ ಐಚಿಕ ಭಾಷೆ ಆದ್ ಸೇರ್ಪಡೆ ಆಯಿನ ಭಾಷೆ ಕೊಂಕಣಿ..! ಕೊಂಕಣಿ ಭಾಷೆಗ್ ಪ್ರತ್ಯೇಕ ರಾಜ್ಯ ಇತ್ತ್೦ಡಲ, ಅಲ್ಪರ್ದ್ ಜಾಸ್ತಿ ಕೊಂಕಣಿ ಭಾಷೆದ ಬೇಲೆ ನಡತೊಂದುಪ್ಪುನಿ ತುಳುನಾಡ್’ಡ್…! ವಿಶ್ವ ಕೊಂಕಣಿ ಕೇಂದ್ರ ಉಪ್ಪುನಿಲ ತುಳುನಾಡ್’ಡ್ …!
ಕನ್ನಡ ಭಾಷೆಲ ತುಳುನಾಡ್’ಡ್, ತುಳು ಭಾಷೆಡ್, ತುಳುವೆರ್ನ ಒಟ್ಟುಗು ಬೆರಕೆ ಆದ್ ಪೋದು ಆತ್೦ಡ್..! ಅಂಚಾದ್ ಕನ್ನಡ ಭಾಷೆನ್ ತುಳು ಭಾಷೆರ್ದ್ ಜಾಸ್ತಿ ಮೋಕೆ ಮಲ್ಪುನ ತುಳುವೆರ್ ಮಸ್ತ್ ಜನ ಉಲ್ಲೆರ್. ತುಳುನಾಡ್ ಬುರ್ದ್ ಕರ್ನಾಟಕದ ಒರಿದಿನ ಜಾಗೆಲೆಡ್ ಕನ್ನಡ ಭಾಷೆಗೊಸ್ಕರ, ಸಂಸ್ಕೃತಿ, ನಾಡು-ನುಡಿಗೊಸ್ಕರ ಹೋರಾಟ ಮಲ್ಪುನೆನ್, ಸತ್ಯಾಗ್ರಹ ಮಲ್ಪುನೆನ್, ಗಲಾಟೆ ಮಲ್ಪುನೆನ್ ನಮ ತೂವೊಂದುಪ್ಪುವ. ಅಕ್ಲೆಗ್ ಪ್ರೋತ್ಸಾಹ ಕೊರೊಂದುಪ್ಪುವ. ಅಕ್ಲೆನ ಒಟ್ಟುಗು ಸೇರ್ವ..! ಆಂಡ ಒರಾಂಡಲ ನಮ್ಮ ಅಪ್ಪೆ ಭಾಷೆ ಐರ್ದ್ ಜಾಸ್ತಿ ಕಷ್ಟಡ್ ಉಂಡು.. ಐಕೋಸ್ಕರಲ ಇಂಚಿತ್ತಿನ ಹೋರಾಟ ನಡಪುನ ಅವಶ್ಯಕತೆ ಉಂಡು ಪನ್ಪುನೇನ್ ತುಳುವೆರ್ ಅರ್ಥ ಮಲ್ತೊನುಜೆರ್…!
ಜ್ಞಾನಿಗಳಿಗೆ ಸಾವಿಲ್ಲ. ಆದರೆ ಗಡ್ಕರಿ, ದಾವೂದ್ ನಂತಹ ಬುದ್ದಿವಂತರಿಗೆ ಸಾವಿದೆ!
– ಮಹೇಂದ್ರ ಕುಮಾರ್
ಸ್ವಾಮಿ ವಿವೇಕಾನಂದರು ಮತ್ತು ದಾವೂದ್ ಇಬ್ರಾಹಿಂ, ಇಬ್ಬರೂ ಸಮಾನ ಬುದ್ದಿವಂತರು. ಸ್ವಾಮಿ ವಿವೇಕಾನಂದರು ತಮ್ಮ ಬುದ್ದಿವಂತಿಕೆಯನ್ನು ಸದುಪಯೋಗ ಪಡಿಸಿಕೊಂಡರು. ಆದರೆ ದಾವೂದ್ ಇಬ್ರಾಹಿಂ ದುರುಪಯೋಗ ಪಡಿಸಿಕೊಂಡ. ಈ ಹೇಳಿಕೆಯನ್ನು ದೇಶದ ಮಹಾನ್ ರಾಷ್ಟ್ರಭಕ್ತಿಯ ಪ್ರತೀಕ ಎಂದು ಹೇಳಿಕೊಳ್ಳುವ ಭಾರತೀಯ ಜನತಾಪಕ್ಷದ, ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿ ಏಕಾಏಕಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬಾಯಿಂದ ಉದುರಿರುವ ಅಣಿಮುತ್ತುಗಳು..
ಹೇಳಿಕೇಳಿ ಈತ ದೇಶಭಕ್ತರನ್ನು ಹುಟ್ಟು ಹಾಕುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳು. ಪ್ರತೀ ವರ್ಷ ವಿವೇಕಾನಂದ ಜಯಂತಿಯನ್ನು ಆಚರಿಸುವ ಪಕ್ಷದ ರಾಷ್ಟ್ರನಾಯಕ. ಇಷ್ಟೇ ಅಲ್ಲದೇ ರಾಷ್ಟ್ರೀಯ ಕಾರ್ಯಕಾರಣಿಗಳಿಂದ ಹಿಡಿದು ಸಣ್ಣ ಸಣ್ಣ ಕಾರ್ಯಕ್ರಮಗಳವರೆಗೂ ವಿವೇಕಾನಂದರ ಭಾವಚಿತ್ರಗಳನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷದ ಮುಂದಾಳು.
ಈ ಹೇಳಿಕೆಯನ್ನು ಕೊಡುವಾಗ ಒಂದೋ ತಲೆ ಕೆಟ್ಟಿರಬೇಕು, ಇಲ್ಲವಾದಲ್ಲಿ ವಿವೇಕಾನಂದರ ಬಗ್ಗೆ ಮತ್ತು ಅವರ ಆದರ್ಶ ಚಿಂತನೆಗಳ ಬಗ್ಗೆ ಯಾವುದೇ ಅರಿವಿಲ್ಲದೇ ಒಬ್ಬ ಸಾದಾರಣ ಇವರ ನಾಯಕರೆಂದು ಭಾವಿಸಿರಬೇಕು.. ವಿವೇಕಾನಂದರ ಬಗ್ಗೆ ಸಣ್ಣ ಅರಿವೂ ನಿತಿನ್ ಗಡ್ಕರಿಗೆ ಇದ್ದಿದ್ದೇ ಆದಲ್ಲಿ ಆತನ ಬಾಯಿಂದ ಈ ಮಾತುಗಳು ಹೊರಬರುತ್ತಿರಲಿಲ್ಲ. ಇವರುಗಳಿಗೆ ಆದರ್ಶ ವ್ಯಕ್ತಿಗಳು ಬಳಕೆಗೆ ಮಾತ್ರಾ…
“ ಗ್ರಾಮಭಾರತ “ ಸಾಧನೆಯ ಸಾಕ್ಷಾತ್ಕಾರಕ್ಕೆ ಕೊನೆಗೂ ಸ೦ದ ಪೂರ್ಣಾನುಗ್ರಹ!
-ರಾಘವೇಂದ್ರ ನಾವಡ
ಏನೂ ಮಾಡದೇ ಇರುವುದಕ್ಕಿ೦ತ ಏನನ್ನಾದರೂ ಮಾಡುವುದು ಸಾವಿರ ಪಾಲು ಉತ್ತಮವೆ೦ಬ ನಾವಡ ಉವಾಚವಿದೆ.. ಏನನ್ನಾದರೂ ಮಾಡುತ್ತಲೇ ಇರುವುದು ವ್ಯಕ್ತಿಯೋರ್ವನ ಸತತ ಕ್ರಿಯಾಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ಏನನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವ ಆಯ್ಕೆ ಮಾತ್ರ ನಮ್ಮದು! ಕೆಲವರು ತಾವು ಬೆಳೆದುಬ೦ದದ್ದನ್ನು ಮರೆಯದೇ ಬೆಳೆದ ನ೦ತರ ಊರವರಿಗೆ ತನ್ನ ಗ್ರಾಮಕ್ಕೆ ಏನನ್ನಾದರೂ ಕೊಡುಗೆಯನ್ನು ನೀಡಬೇಕೆ೦ದು ಬಯಸಿದರೆ, ಏನನ್ನೂ ಮಾಡದಿದ್ದವರು ಇರುವವರಿ೦ದಲೇ ಎಲ್ಲವನ್ನೂ ಕಿತ್ತುಕೊ೦ಡು ತಮ್ಮ ಬೇಳೆ ಬೇಯಿಸಿಕೊಳುತ್ತಾರೆ!
ಎಲ್ಲವುದಕ್ಕಿ೦ತಲೂ ಮುಖ್ಯವಾಗಿ ಒಬ್ಬ ವ್ಯಕ್ತಿ ಸಮಾಜದಲ್ಲಿ ಒ೦ದು ಹ೦ತದಕ್ಕೆ ಮುಟ್ಟಿದನೆ೦ದರೆ ಜನತೆ ಅವರಿ೦ದ ನಿರೀಕ್ಷಿಸುವುದು ಬಹಳಷ್ಟಿರುತ್ತದೆ! ಕೆಲವರು ಆ ನಿರೀಕ್ಷೆಯ ಸಾಫಲ್ಯತೆಗಾಗಿ ಸ್ವಲ್ಪವಾದರೂ ಪ್ರಯತ್ನ ಪಟ್ಟರೆ.. ಇನ್ನು ಕೆಲವರು ನಿರೀಕ್ಷೆಗಳ ಹಿ೦ದೆ ಓಡುತ್ತಾ ತಮ್ಮ ಬದುಕನ್ನು ಗೋಜಲಿನೊಳಗೆ ಸಿಲುಕಿಸಿಕೊಳ್ಳಲು ಇಷ್ಟಪಡುವುದಿಲ್ಲ.. ದೇವರಿಟ್ಟ ಹಾಗೆ ಇರಲಿ! ಎನ್ನುವ೦ತೆ…
ಅದಕ್ಕೆ೦ದೇ ಮಾನವ ಕನಸನ್ನು ಕಾಣಬೇಕು ಎನ್ನುವುದು!.. ಕನಸು ಮು೦ದಿನ ಸಾಧನೆಯ ಹ೦ತಕ್ಕೆ ನಮ್ಮನ್ನು ಕೊ೦ಡೊಯ್ಯುವ ದಾರಿ ದೀಪ. ಕೆಲವರು ಕ೦ಡ ಕನಸಿನ ಬೆನ್ನನ್ನು ಹತ್ತುತ್ತಾರೆ.. ಇನ್ನು ಕೆಲವರು ರಾತ್ರಿ ಕ೦ಡ ಕನಸನ್ನು ಮತ್ತೊಬ್ಬರೊ೦ದಿಗೆ ಚರ್ಚಿಸುತ್ತಾ ಸುಮ್ಮನಿದ್ದು ಬಿಡುತ್ತಾರೆ!








