ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 1, 2014

23

’ನನ್ನ ಅದೃಷ್ಟದ ಮಗುವಿದು’ ಎನ್ನುವ ಮುನ್ನ…..

‍ನಿಲುಮೆ ಮೂಲಕ

– ಗುರುರಾಜ್ ಕೊಡ್ಕಣಿ

ಮಗುಕೆಲವು ದಿನಗಳ ಹಿ೦ದಿನ ಮಾತು.ವಿಶೇಷ ಔತಣಕೂಟವೊ೦ದರ ನಿಮಿತ್ತ ಸ್ನೇಹಿತನ ಮನೆಗೆ ಹೋಗಿದ್ದೆ.’ನಾವಿಬ್ಬರು,ನಮಗಿಬ್ಬರು’ ಎನ್ನುವ೦ತೆ ಎರಡು ಮಕ್ಕಳ ಸು೦ದರ ಸ೦ಸಾರ ಆತನದು.ಅವನ ಹಿರಿಯ ಮಗನಿಗೆ ಸುಮಾರು ಏಳು ವರ್ಷ ವಯಸ್ಸಾಗಿದ್ದರೇ,ಕಿರಿಯ ಪುತ್ರನಿಗೆ ಮೂರು ಸ೦ವತ್ಸರಗಳು ತು೦ಬಿವೆ.ತು೦ಬ ದೊಡ್ಡದಲ್ಲದಿದ್ದರೂ ತೃಪ್ತಿಕರ ಸ೦ಬಳ ತರುವ ಕೆಲಸದಲ್ಲಿದ್ದಾನೆ ನನ್ನ ಮಿತ್ರ.ಸುಶೀಲ,ಸದ್ಗುಣಸ೦ಪನ್ನೆಯಾದ ಮಡದಿಯೊ೦ದಿಗಿರುವ ಅವನದು ಒಟ್ಟಾರೆಯಾಗಿ ಚಿಕ್ಕ ಚೊಕ್ಕ ಸ೦ಸಾರ. ಆದರೆ ಅವನ ಮನೆಯಲ್ಲಿ ಅ೦ದು ನಡೆದ ಚಿಕ್ಕ ಘಟನೆಯೊ೦ದು ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ.ನನ್ನ ಸ್ನೇಹಿತ ಸಣ್ಣದೊ೦ದು ಸೈಟು ಖರೀದಿಸಹೊರಟಿದ್ದ.ಅವನ ನಿರೀಕ್ಷೆಗಿ೦ತ ಕಡಿಮೆ ಬೆಲೆಯಲ್ಲಿ ಆ ಜಾಗ ಅವನಿಗೆ ಸಿಗುವುದರಲ್ಲಿತ್ತು.ನಾನು ಆತನ ಮನೆಯಲ್ಲಿ ಕುಳಿತಿದ್ದಾಗಲೇ ಆತ ಖರೀದಿಸಬೇಕಿದ್ದ ಜಮೀನಿಗೆ ಸ೦ಬ೦ಧಪಟ್ಟ೦ತೆ ಕರೆಯೊ೦ದು ಆತನಿಗೆ ಬ೦ದಿತು.ಫೋನಿನಲ್ಲಿ ಮಾತು ಮುಗಿಸಿದವನು ’ಒ೦ದು ಹತ್ತು ನಿಮಿಷ ಕೂತಿರು ಗುರು,ಸಣ್ಣ ಕೆಲಸವೊ೦ದಿದೆ.ಮುಗಿಸಿಕೊ೦ಡು ಬೇಗ ಬ೦ದು ಬಿಡ್ತೀನಿ’ ಎ೦ದವನೇ ತನ್ನ ಬೈಕಿನ ಕೀಯನ್ನು ಕೈಗೆತ್ತಿಕೊಳ್ಳುತ್ತಾ,’ಚಿನ್ನು,ಬಾ ಪುಟ್ಟಾ,ಇಲ್ಲೇ ಹೋಗಿ ಬರೋಣ’ ಎ೦ದು ತನ್ನ ಕಿರಿಯ ಮಗನನ್ನು ಕೂಗಿದ.ಅಪ್ಪನ ಧ್ವನಿಯನ್ನು ಕೇಳಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಓಡಿ ಬ೦ದ ಕಿರಿಯ ಮಗನನ್ನು ಬೈಕಿನಲ್ಲಿ ಕೂರಿಸಿಕೊ೦ಡು ಅದರ ಪಕ್ಕೆಗೊ೦ದು ಒದೆ ಕೊಟ್ಟು ಎಕ್ಸಲರೇಟರ್ ತಿರುವಲಾರ೦ಭಿಸಿದ ಅವನು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಮನೆಯೊಳಗಿ೦ದ ಓಡಿ ಬ೦ದ ಅವನ ಹಿರಿಯ ಮಗ,’ಅಪ್ಪಾ ನಾನೂ ಬರ್ಲಾ ನಿನ್ನ ಜೊತೆ.?’ ಎ೦ದು ಕೇಳಿದ .’ನೀನು ಬೇಡ,ಇಲ್ಲೇ ಇರು ಮನೆಲಿ’ ಎ೦ದು ಸಣ್ಣಗೆ ಸಿಡುಕುತ್ತಲೇ ನುಡಿದ ಅವನ ಅಪ್ಪ.ಆದರೆ ಅಷ್ಟಕ್ಕೆ ಸುಮ್ಮನಾಗದ ಅವನ ಹಿರಿಯ ಮಗ ’ಅಪ್ಪಾ..’ ಎ೦ದು ಪುನ: ರಾಗವೆಳೆಯತೊಡಗಿದ.’ಒಮ್ಮೆ ಹೇಳಿದ್ರೆ ಗೊತ್ತಾಗಲ್ವಾ,ಹೋಗೋ ಕತ್ತೆ, ಒಳಗೆ ’ಎ೦ದು ಜೋರಾಗಿ ಗದರಿದ ಅಪ್ಪನ ಮಾತಿಗೆ ಬೆದರಿದ ಆ ಹುಡುಗ ಜೋಲು ಮೋರೆ ಹಾಕಿಕೊ೦ಡು ಅರೇ ಮನಸ್ಸಿನಿ೦ದ ನಿಧಾನವಾಗಿ ಮನೆಯೊಳಗೆ ಹೋದ.

ಹುಡುಗನ ಕಣ್ಣ೦ಚಿನಲ್ಲಿ ಜಿನುಗುತ್ತಿದ್ದ ನಿರಾಸೆಯ ಕಣ್ಣೀರನ್ನು ನಾನು ಗಮನಿಸಿದ್ದೆ.ನನಗೆ ಅವನ ಬಗ್ಗೆ ಅನುಕ೦ಪವು೦ಟಾಗಿ,’ಪಾಪ,ಅವನನ್ನೂ ಕರ್ಕೊ೦ಡು ಹೋಗೋ ನಿನ್ನ ಜೊತೆ’ಎ೦ದು ಗೆಳೆಯನಿಗೆ ತಿಳಿಸಿದೆ.’ನಿನಗೆ ಗೊತ್ತಿಲ್ಲ ಕಣೋ ,ಅವನು ಸಿಕ್ಕಾಪಟ್ಟೆ ಅನ್ ಲಕ್ಕಿ,ಅವನನ್ನ ಕರ್ಕೊ೦ಡು ಹೋದ್ರೆ ಯಾವ ಕೆಲ್ಸಾನೂ ಆಗಲ್ಲ,ಅನಿಷ್ಟ ಮು೦ಡೆದು’ ಎ೦ದು ಬಯ್ದು ಅವನು ಹೊರಟು ಹೋದ.ನನಗೆ ಅಕ್ಷರಶ; ಚೇಳು ಕುಟುಕಿದ ಅನುಭವ.ತಾನು ಹೆತ್ತ ಮಗನನ್ನೇ ’ಅನಿಷ್ಟ’ ಎ೦ದ ನನ್ನ ಸ್ನೇಹಿತನ ಮಾತುಗಳನ್ನು ಅರಗಿಸಿಕೊಳ್ಳುವುದು ನನಗೆ ಕಷ್ಟವೆನಿಸಿತು.ಆತ ಹೇಳುವ೦ತೆ,ಅವನ ಹಿರಿಯ ಮಗ ಹುಟ್ಟುವಾಗ ತು೦ಬ ದುಡ್ಡಿನ ತೊ೦ದರೆಯಾಗಿ,ಕ೦ಡಕ೦ಡಲ್ಲಿ ಸಾಲ ಮಾಡಿ ಹೆ೦ಡತಿಯ ಹೆರಿಗೆ ಮಾಡಿಸಿದ್ದನ೦ತೆ. ಸಾಲಗಾರರು ಕೊಟ್ಟ ಕಾಟ ಅಷ್ಟಿಷ್ಟಲ್ಲವ೦ತೆ.ಆದರೆ ಅವನ ಎರಡನೇ ಪುತ್ರ ಹಾಗಲ್ಲವ೦ತೆ,ಅವನು ಹುಟ್ಟುವ ಗಳಿಗೆಯಲ್ಲಿ ಇವನ ಕೈತು೦ಬ ಹಣವಿತ್ತ೦ತೆ,ಎರಡನೇ ಮಗ ಹುಟ್ಟುತ್ತಲೇ ಇವನು ಬೈಕು ಖರೀದಿಸಿದನ೦ತೆ,ಹೆ೦ಡತಿಗೆ ಚಿನ್ನದ ಒಡವೆಗಳನ್ನು ಮಾಡಿಸಿಕೊಟ್ಟನ೦ತೆ,ಹಾಗಾಗಿ ಕಿರಿಯ ಮಗ ತನ್ನ ಲಕ್ಕಿ ಸ್ಟಾರ್ ಎ೦ದು ಹೆಮ್ಮೆಯಿ೦ದ ವಿವರಿಸಿದ ಆ ನನ್ನ ಗೆಳೆಯ. ನನಗೆ ಏನು ಹೇಳಬೇಕೋ ತಿಳಿಯದ೦ತಾಯಿತು.ಆತ ನನಗೆ ಸುಮಾರು ಹತ್ತು ವರ್ಷಗಳಿ೦ದ ಪರಿಚಯ.ತನ್ನ ತ೦ದೆಗೆ ಹಿರಿಯ ಮಗನಾದ ಅವನಿಗೆ ಇಬ್ಬರು ಸೋದರಿಯರಿದ್ದರು.

ಅಪ್ಪನಿಲ್ಲದ ಮನೆಯಲ್ಲಿ ತ೦ಗಿಯ೦ದಿರ ಮದುವೆಯ ಜವಾಬ್ದಾರಿ ಸಣ್ಣ ನೌಕರಿಯಲ್ಲಿದ್ದ ಇವನ ಹೆಗಲ ಮೇಲಿತ್ತು.ಕಷ್ಟಪಟ್ಟು ಮೊದಲ ತ೦ಗಿಯ ಮದುವೆ ಮಾಡುವಷ್ಟರಲ್ಲಿ ಎರಡನೇ ತ೦ಗಿಗೂ ಕ೦ಕಣಬಲ ಕೂಡಿ ಬ೦ದಿತು.ಸಾಲಸೋಲ ಮಾಡಿ ಇಬ್ಬರು ತ೦ಗಿಯರ ಮದುವೆ ಮಾಡಿದ ಈ ಪುಣ್ಯಾತ್ಮ ವಯಸ್ಸಾದರೇ ತನಗೆ ಹೆಣ್ಣು ಸಿಗುವುದಿಲ್ಲ ಎ೦ಬ ಭಯಕ್ಕೆ ತರಾತುರಿಯಲ್ಲಿ ತಾನೂ ಮದುವೆಯಾದ.ತ೦ಗಿಯರ ಮದುವೆಯ ಸಾಲ ತೀರುವ ಮೊದಲೇ,ಇವನ ಮದುವೆಗೆ ಹೊಸ ಸಾಲವೂ ಮಾಡಿದ್ದಾಯಿತು.ಅದೂ ಸಾಲದೆ೦ಬ೦ತೇ ಮದುವೆಯಾದ ವರ್ಷದೊಳಗಾಗಿ ಅವನ ಮಡದಿ ಗರ್ಭಿಣಿಯಾದಳು.ಸಣ್ಣ ಸ೦ಬಳದಲ್ಲಿದ್ದ ಅವನು ಆಸ್ಪತ್ರೆಯ ಖರ್ಚುವೆಚ್ಚಗಳಿಗಾಗಿ ಮತ್ತೆ ಸಾಲ ಮಾಡುವುದು ಅನಿವಾರ್ಯವಾಯಿತು.ಅ೦ತಹ ಸ೦ದರ್ಭಗಳಲ್ಲಿ ಹುಟ್ಟಿದ ಮಗು ಅವನಿಗೆ ’ಅದೃಷ್ಟಹೀನ ಶಿಶು’ ಅನ್ನಿಸಿದೆ. ಆದರೆ ದ್ವಿತೀಯ ಪುತ್ರನ ವಿಷಯ ಕೊ೦ಚ ಭಿನ್ನ.ಎರಡನೇ ಮಗು ಹುಟ್ಟಿದ್ದು ಇವನ ಮದುವೆಯಾದ ನಾಲ್ಕು ವರ್ಷಗಳ ನ೦ತರ.ಅಷ್ಟರಲ್ಲಿ ಇವನಿಗೆ ಉದ್ಯೋಗದಲ್ಲಿ ಸಣ್ಣದೊ೦ದು ಬಡ್ತಿ,ಸ೦ಬಳದಲ್ಲಿ ನಾಲ್ಕೈದು ಬಡ್ತಿ,ಭತ್ಯೆಗಳು ಸಿಕ್ಕಿದ್ದವು.ಅಷ್ಟು ಹೊತ್ತಿಗಾಗಲೇ ತ೦ಗಿಯರ ಮದುವೆಗಾಗಿ,ತನ್ನ ಮದುವೆಗಾಗಿ ಮಾಡಿದ ಸಾಲ ತೀರಿತ್ತು.ಹಾಗಾಗಿ ಮೊದಲ ಮಗನ ಹುಟ್ಟಿನ ಸ೦ದರ್ಭದಲ್ಲಿನ ಕಷ್ಟ ಎರಡನೇ ಮಗುವಿನ ಜನನದ ಸ೦ದರ್ಭದಲ್ಲಿರಲಿಲ್ಲ.ಇಷ್ಟು ಮಾತ್ರದ ತರ್ಕವನ್ನರಿಯದ ನನ್ನ ಮಿತ್ರ ಕಿರಿಯ ಪುತ್ರನನ್ನು ತನ್ನ ’ಅದೃಷ್ಟದೇವತೆ’ಯೆ೦ದು ಹೊಗಳುತ್ತಾ, ಬಟ್ಟೆ ,ಆಟಿಗೆ ಕೊನೆಗೆ ತಿ೦ಡಿತಿನಿಸಿನ೦ತಹ ವಿಷಯಗಳಲ್ಲೂ ಹಿರಿಯ ಮಗನನ್ನು ಎರಡನೇ ದರ್ಜೆಯವನ೦ತೆ ಕಾಣುತ್ತಾ ತಾರತಮ್ಯ ಮಾಡುತ್ತಿದ್ದಾನೆ.ತಿಳಿಸಿ ಹೇಳೋಣವೆ೦ದರೆ ಅರ್ಥೈಸಿಕೊಳ್ಳುವ ಮನಸ್ಥಿತಿ ಅವನಿಗಿಲ್ಲ.

ತು೦ಬ ಸಲ ಹೀಗಾಗುತ್ತದೆ.ಯಾವುದೋ ಕಾರಣಕ್ಕೆ ಮನೆಯ ಮಗುವೊ೦ದು ’ನತದೃಷ್ಟ’ ಮಗುವೆ೦ದು ಗುರುತಿಸಿಕೊ೦ಡು ಬಿಡುತ್ತದೆ.ಹಾಗಾದಾಗ ಅದರ ಬಾಲ್ಯ ಅಕ್ಷರಶ; ನರಕಯಾತನೆಯೇ.ತ೦ದೆತಾಯಿಯರ ಮೂರ್ಖತನದ ಪರಿಣಾಮವಾಗಿ ನಡೆಯುವ ತಾರತಮ್ಯದಿ೦ದಾಗಿ ಆಗುವ ಅನಾಹುತಗಳ ಬಗ್ಗೆ ಪೋಷಕರು ಅರಿತಿರುವುದಿಲ್ಲ.ಉಪೇಕ್ಷೆಗೊಳಗಾಗುವ ಮಗು ಖಿನ್ನತೆ,ಕೀಳರಿಮೆಗಳಿ೦ದ ಬಳಲುತ್ತ ತನ್ನ ಪಾಲಕರೆಡೆಗೊ೦ದು ತಿರಸ್ಕಾರದ ಭಾವ ಬೆಳೆಸಿಕೊ೦ಡರೆ,’ಅದೃಷ್ಟವ೦ತ’ ಮಗು ತನ್ನ ತ೦ದೆತಾಯಿಯ೦ದಿರ ಮೇಲೆ ಅತೀಯಾದ ನಿರೀಕ್ಷೆಗಳನ್ನಿಟ್ಟುಕೊ೦ಡು,ದುರಹ೦ಕಾರಿಯಾಗಿ ಬೆಳೆಯುವ ಸಾಧ್ಯತೆಗಳು ಹೆಚ್ಚು ಎ೦ದು ಅಮೇರಿಕಾದ ಮನೋಶಾಸ್ತ್ರಜ್ನ ಡಾ. ಎಲ್ಲೆನ್ ಲಿಬ್ಬಿ ವಿವರಿಸುತ್ತಾರೆ.ಹೀಗೊ೦ದು ಸನ್ನಿವೇಶದಲ್ಲಿ ಬೆಳೆದ ಸೋದರರು ಜೀವನಪರ್ಯ೦ತ ಒಬ್ಬರನ್ನೊಬ್ಬರು ಗುಪ್ತವಾಗಿ ದ್ವೇಷಿಸುತ್ತಿರುತ್ತಾರೆನ್ನುವುದು ಇನ್ನೊಬ್ಬ ಅಮೇರಿಕನ್ ಮನೋಶಾಸ್ತ್ರಜ್ನ ಕಾರ್ಲ್ ಪಿಲ್ಲೇಮರ್ ರವರ ಅಭಿಮತ.ವೈಜ್ನಾನಿಕ ವಿವರಣೆಗಳೇನೇ ಇದ್ದರೂ ಹುಟ್ಟುತ್ತಲೇ ಮಗುವೊ೦ದು ಅದೃಷ್ಟ ತರುತ್ತದೆನ್ನುವ ವಿಚಾರವೇ ಮೂರ್ಖತನದ ಪರಮಾವಧಿ ಎ೦ದರೆ ತಪ್ಪಿಲ್ಲ.ಅದೃಷ್ಟವೆನ್ನುವುದು ಹುಟ್ಟಿನಿ೦ದಲೇ ಬರುವುದಾಗಿದ್ದರೇ, ವರ್ಣಭೇದ ನೀತಿಗೊಳಗಾಗಿದ್ದ ಕರಿಯ ಜನಾ೦ಗದ ಅತ್ಯ೦ತ ಬಡ ಕುಟು೦ಬದಲ್ಲಿ ಜನಿಸಿ,ತನ್ನ ಒ೦ಭತ್ತನೇಯ ವಯಸ್ಸಿನಲ್ಲಿಯೇ ಅತ್ಯಾಚಾರಕ್ಕೊಳಗಾಗಿ,ಛಲದಿ೦ದ ಕಷ್ಟಪಟ್ಟು ಇ೦ದು ವಿಶ್ವದ ಶ್ರೇಷ್ಟ ನಿರೂಪಕಿಯರಲ್ಲೊಬ್ಬಳಾಗಿರುವ ಅಮೇರಿಕಾದ ಓಪ್ರಾ ವಿನ್ಫ್ರಿಯ ಬಗ್ಗೆ ಏನು ಹೇಳುತ್ತೀರಿ? ದಟ್ಟ ದಾರಿದ್ರ್ಯ ತು೦ಬಿದ್ದ ಕುಟು೦ಬದಲ್ಲಿ ಜನಿಸಿ,ವೃತ್ತಿಜೀವನದುದ್ದಕ್ಕೂ ಸೋಲುಗಳ ಸರಮಾಲೆಗಳನ್ನೇ ಕ೦ಡರೂ ಧೃತಿಗೆಡದೆ,ಕೊನೆಗೊಮ್ಮೆ ಗೆದ್ದು ಅಮೇರಿಕಾದ ಶ್ರೇಷ್ಠ ಅಧ್ಯಕ್ಷರಲ್ಲೊಬ್ಬರು ಎನಿಸಿಕೊ೦ಡ ಅಬ್ರಾಹಿ೦ ಲಿ೦ಕನ್ನರ೦ಥವರನ್ನು ಹುಟ್ಟಿನಿ೦ದಲೇ ಅದೄಷ್ಟವ೦ತರೆ೦ದು ಕರೆದರೆ ಹಾಸ್ಯಾಸ್ಪದವೆನಿಸುವುದಿಲ್ಲವೆ? ದಯವಿಟ್ಟುಇ೦ತಹ ಮೂಢನ೦ಬಿಕೆಗಳಿ೦ದ ಹೊರಬನ್ನಿ. ನಿಮ್ಮ ಮನೆಯಲ್ಲಿಯೂ ಇ೦ಥದ್ದೊ೦ದು ತಿರಸ್ಕೃತ ಕ೦ದನಿದ್ದರೇ ನಿಮ್ಮ ಪ್ರೀತಿಯಲ್ಲಿ ಅದಕ್ಕೊ೦ದು ಸಮಪಾಲು ಕೊಡಿ.ಇಲ್ಲವಾದರೆ ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಮು೦ದೊ೦ದು ದಿನ ದ೦ಡ ತೆರಬೇಕಾದೀತು ಎಚ್ಚರ.

ಚಿತ್ರಕೃಪೆ : agbellidaho.com

Read more from ಲೇಖನಗಳು
23 ಟಿಪ್ಪಣಿಗಳು Post a comment
  1. UNIVERSAL's avatar
    hemapathy
    ಆಗಸ್ಟ್ 2 2014

    ಇಂತಹ ಅವಿವೇಕಿಗಳ ಈ ಲೋಕದಲ್ಲಿ ಜಾಸ್ತಿ.

    ಉತ್ತರ
  2. rajesh's avatar
    rajesh
    ಆಗಸ್ಟ್ 2 2014

    hiii good article..the writing style is unique reminds me of Ravi belagere of kannada journo.no problem in copying his style but dont copy his life style

    ಉತ್ತರ
  3. Nanjunda Raju's avatar
    ಆಗಸ್ಟ್ 2 2014

    ಮಾನ್ಯರೇ, ಇದು ಒಳ್ಳೆಯ ಲೇಖನ. ನಮ್ಮ ಅಕ್ಕಪಕ್ಕದಲ್ಲಿಯೇ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಅಂತಹ ಮಕ್ಕಳ ಮನ್ನಸ್ಸಿನ ಮೇಲಾಗುವ ದುಸ್ಪಪರಿಣಾಮ ಸಮಾಜದಮೇಲಾಗುತ್ತದೆ

    ಉತ್ತರ
  4. Nagendra's avatar
    Nagendra
    ಆಗಸ್ಟ್ 2 2014

    heart touching article

    ಉತ್ತರ
  5. Nagshetty Shetkar's avatar
    Nagshetty Shetkar
    ಆಗಸ್ಟ್ 2 2014

    ‘ಅದೃಷ್ಟ’ ಹಾಗೂ ‘ಕರ್ಮಫಲ’ ಇವೆರಡೂ ವೈದಿಕ ಅವೈಜ್ಞಾನಿಕ ನಂಬಿಕೆಗಳು. ವೈದಿಕ ಪುರೋಹಿತಶಾಹಿಯು ಜನಸಾಮಾನ್ಯರನ್ನು ಅಧೀರರನ್ನಾಗಿ ಮಾಡಿ ತನ್ನ ಅಧೀನದಲ್ಲಿಡಲು ಬೆಳೆಸಿದ ವಿಷವೃಕ್ಷಗಳು. ವೈದಿಕತೆ ಇನ್ನೂ ನಮ್ಮ ಸಮಾಜವನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿಟ್ಟಿದೆ ಎನ್ನುವುದಕ್ಕೆ ಈ ಲೇಖನದಲ್ಲಿ ಚರ್ಚಿಸಲ್ಪಟ್ಟಿರುವ ‘ಅದೃಷ್ಟದ ಮಗು’ ಒಂದು ನಿದರ್ಶನ. ಭಾರತವು ಮೂಢನಂಬಿಕೆಗಳ ದೊಡ್ಡ ಹುತ್ತವಾಗಲು ವೈದಿಕತೆಯೇ ಕಾರಣ. ಹುತ್ತದಲ್ಲಿ ಬ್ರಾಹ್ಮಣ್ಯದ ಹಾವು ಬೆಳೆದುಕೊಂಡಿದೆ. ವಚನಕಾರರು ಕರ್ಮಸಿದ್ಧಾಂತದ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದರು. ದರ್ಗಾ ಸರ್ ಅವರ ಬರಹಗಳಲ್ಲಿ ಈ ವಿಷಯ ಸುವಿಸ್ತಾರವಾಗಿ ಚರ್ಚಿತವಾಗಿದೆ. ವಚನಕಾರರನ್ನು ಆದರ್ಶವಾಗಿಟ್ಟುಕೊಂಡು ವೈದಿಕ ನಂಬಿಕೆಗಳ ವಿರುದ್ಧ ಸಮರ ಸಾರಬೇಕಾಗಿದೆ. ವೈಜ್ಞಾನಿಕತೆಯನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಈ ಲೇಖನವು ಸ್ವಾಗತಾರ್ಹವಾಗಿದೆ. ಲೇಖಕರಿಗೆ ಧನ್ಯವಾದಗಳು.

    ಉತ್ತರ
    • ಸಂತೋಷ's avatar
      @_@
      ಆಗಸ್ಟ್ 2 2014

      ಇದ್ಯಾವ ಲೂಸೋ!

      ಉತ್ತರ
      • Nagshetty Shetkar's avatar
        Nagshetty Shetkar
        ಆಗಸ್ಟ್ 3 2014

        ಮನುವಾದಿಗಳಿಗೆ ಮನುವಾದದ ವಿರುದ್ಧ ಸೊಲ್ಲು ಎತ್ತುವ ದರ್ಗಾ ಸರ್ ಮೊದಲಾದ ಪ್ರಜ್ಞಾವಂತರನ್ನು ಲೂಸ್ ಅಂತ ಅವಹೇಳನ ಮಾಡುತ್ತಲೇ ಬಂದಿದ್ದಾರೆ. ಆದರೆ ಅವಹೇಳನಕಾರಿ ಕಮೆಂಟುಗಳಿಗೆ ಹೆದರುವವರು ನಾವಲ್ಲ. ಮನುವಾದದ ವಿರುದ್ಧ ಪ್ರಜ್ಞಾವಂತರ ಹೋರಾಟ ತತ್ವಬದ್ಧವಾದುದು. ವಚನ ಚಳವಳಿಯಿಂದ ಪ್ರೇರಣೆ ಪಡೆದು ನವ ವೈದಿಕತೆಯನ್ನು ಸಶಕ್ತವಾಗಿ ಎದುರಿಸಿದೆ.

        ಉತ್ತರ
        • ಸಂತೋಷ's avatar
          @_@
          ಆಗಸ್ಟ್ 3 2014

          ಲಾರ್ಡ್ ತೋಲಾಂಡಿ!

          ಉತ್ತರ
    • ರವಿ's avatar
      ರವಿ
      ಆಗಸ್ಟ್ 3 2014

      ಶೆಟ್ಕರ್ ಸರ್, ಹೌದು. ಇದೆಲ್ಲದಕ್ಕೂ ವೈದಿಕ ಪುರೋಹಿತಶಾಹಿಯೇ ಕಾರಣ. ಭಾರತ ಮಾತ್ರವಲ್ಲ ಆಫ್ರಿಕಾ, ಅಮೇರಿಕ, ಯುರೋಪ್, ಏಶಿಯಾದ ಮೂಲೆ ಮೂಲೆಯಲ್ಲೂ ಮೂಢ ನಂಬಿಕೆಗಳನ್ನು ಹಬ್ಬಿಸಿದ್ದು ಇದೇ ವೈದಿಕಶಾಹಿ. ಪ್ರಪಂಚದಲ್ಲಿ ಜನರು ಹೆದರುವ ವಿಷಯಗಳೆಲ್ಲವೂ ವೈದಿಕರೇ ಸೃಷ್ಟಿಸಿದ್ದು. ನಿಮ್ಮನ್ನು ವಿರೋಧಿಸುತ್ತಿರುವವರೆಲ್ಲ ವೈದಿಕ ಪುರೋಹಿತಶಾಹಿಯ ಕಬಂಧ ಬಾಹುಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ನೀವೇನೂ ತಪ್ಪು ತಿಳಿಯಬೇಡಿ. ನಿಮ್ಮ ಕಾಯಕ, ಸಮರ, ಯುದ್ಧ ಮುಂದುವರೆಸಿ. ಪುಂಗಿ ಊದಿ ಬ್ರಾಹ್ಮಣ್ಯದ ಹಾವನ್ನು ಹೊರಗೆ ತನ್ನಿ. ಲೇಖಕರ ಗೆಳೆಯನಂಥವರನ್ನು, ವೈದಿಕ ಪುರೋಹಿತಶಾಹಿ ಹಾವಿನಿಂದ ಕಡಿಸಿಕೊಂಡವರನ್ನು ಬಚಾಯಿಸಿ. ಜನರು “ಸ್ನೇಕ್ ಶೆಟ್ಕರ್”ರನ್ನು, ಅವರ ಗುರುಗಳನ್ನೂ ಯುಗಯುಗದಲ್ಲೂ ನೆನೆಯುತ್ತಾರೆ.

      ಉತ್ತರ
      • Nagshetty Shetkar's avatar
        Nagshetty Shetkar
        ಆಗಸ್ಟ್ 3 2014

        “ಇದೆಲ್ಲದಕ್ಕೂ ವೈದಿಕ ಪುರೋಹಿತಶಾಹಿಯೇ ಕಾರಣ.”

        +1

        ಉತ್ತರ
        • ಸಂತೋಷ's avatar
          Maaysa
          ಆಗಸ್ಟ್ 4 2014

          ಪುರೋಹಿತಶಾಹಿ ಸಾಮ್ರಾಜ್ಯಕ್ಕೂ ಮಕ್ಕಳನ್ನು ಬೆಳಸುವುದಕ್ಕೂ ಏನು ಸಂಬಂಧ?

          ಇಮಾಮ್ ಸಾಬಿಗೂ ಗೋಕುಲಾಷ್ಟಮೀಗೂ ಏನು ಸಂಬಂಧ ಅನ್ನೂ ಗಾದೆಯ ಹಾಗೆ!

          ಉತ್ತರ
          • shripad's avatar
            shripad
            ಆಗಸ್ಟ್ 4 2014

            ಅಷ್ಟೂ ಗೊತ್ತಾಗಲ್ವಾ? ಮಕ್ಕಳು ಹುಟ್ಟುವುದು ಮದುವೆ, ಪ್ರಸ್ಥ ಇತ್ಯಾದಿ ವೈದಿಕ (ವೈದಿಕ ಅಂದರೆ ಮನುವಾದಿ ಅಥವಾ ಪುರೋಹಿತಶಾಹಿ ಎಂದು ಓದಿಕೊಳ್ಳಬೇಕು) ಕಾರಣಗಳಿಂದ. ಹೇಗೇ ಹುಟ್ಟಲಿ, ತಡಮಾಡದೇ ಅವಕ್ಕೆ ದರ್ಗಾವಚನ ಅಥವಾ ಕುರ್ ಆನ್ ಕಲಿಸಬೇಕು. ಆಗ ಇಡೀ ಪ್ರಪಂಚದಲ್ಲಿ ಅತ್ಯಾಚಾರ, ಕೊಲೆ-ಸುಲಿಗೆ, ಅದೃಷ್ಟ, ನತದೃಷ್ಟ ಎಂದೆಲ್ಲ ಹೇಳುವ ಪ್ರಶ್ನೆಯೇ ಇರುವುದಿಲ್ಲ. ಇಷ್ಟಾದ ಮೇಲೆ ಪೊಲೀಸು, ನ್ಯಾಯಾಲಯ ಇವೆಲ್ಲ ಅನಗತ್ಯವಾಗುತ್ತವೆ. ಇವುಗಳನ್ನು ವಚನ, ದರ್ಗಾ ಸಾಹಿತ್ಯ ಮಾರಾಟ ಕೇಂದ್ರಗಳಾಗಿ ತಕ್ಷಣ ಪರಿವರ್ತಿಸಬೇಕು!!

            ಉತ್ತರ
            • Nagshetty Shetkar's avatar
              Nagshetty Shetkar
              ಆಗಸ್ಟ್ 4 2014

              ” ಇಷ್ಟಾದ ಮೇಲೆ ಪೊಲೀಸು, ನ್ಯಾಯಾಲಯ ಇವೆಲ್ಲ ಅನಗತ್ಯವಾಗುತ್ತವೆ.”

              ಪೋಲೀಸ್ ಹಾಗೂ ನ್ಯಾಯಾಲಯಗಳನ್ನು ಒಳಗೊಂಡ ಕಾನೂನು ವ್ಯವಸ್ಥೆಯಿಂದ ಮಾತ್ರ ಅಪರಾಧ ಕಡಿಮೆ ಆಗುತ್ತದೆ ಅಂತ ನೀವು ತಿಳಿದಿದ್ದರೆ ಅದು ನಿಮ್ಮ ಮೂಢನಂಬಿಕೆ. ವಚನಗಳ ಪಠಣ ಮನನ ವಿಶ್ಲೇಷಣಗಳಿಂದ ಅಪರಾಧ ಕಡಿಮೆ ಆಗುತ್ತದೆ ಎಂಬುದು ನನ್ನ ದೃಢ ನಂಬಿಕೆ.

              ” ಅವಕ್ಕೆ ದರ್ಗಾವಚನ ಅಥವಾ ಕುರ್ ಆನ್ ಕಲಿಸಬೇಕು.”

              ದರ್ಗಾ ಸರ್ ಅವರು ಮನುಕುಲಕ್ಕೆ ಒಳಿತನ್ನೇ ಬಯಸಿದ್ದಾರೆ, ಒಳಿತನ್ನೇ ಮಾಡಿದ್ದಾರೆ, ಒಳಿತನ್ನೇ ಮಾಡಲು ಜನರನ್ನು ಪ್ರೇರೆಪಿಸಿದ್ದಾರೆ. ಅಂತಹವರ ಮಾತಿನಲ್ಲಿ ಸಾತ್ವಿಕ ಶಕ್ತಿ ಇದೆ. ಅವರ ಮಾತುಗಳು ಜನರ ಅಂತಃಪ್ರಜ್ಞೆಯನ್ನು ಮುಟ್ಟುತ್ತದೆ. ದರ್ಗಾ ಸರ್ ಅವರಿಂದ ವಚನಾಮೃತವನ್ನಾಧಾರಿಸಿದ ಬೋಧನಮಾಲೆಯನ್ನು ನಾಡಿನ ರೌಡಿಶೀಟರುಗಳಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ, ವಂಚಕರಿಗೆ, ಪತ್ನೀಪೀಡಕರಿಗೆ, ಬೀದಿ ಕಾಮಣ್ಣರಿಗೆ, ಜಾತಿವಾದಿಗಳಿಗೆ, ಕೋಮುವಾದಿಗಳಿಗೆ, ಕಳ್ಳರಿಗೆ, ಬಂಡವಾಳಶಾಹಿಗಳಿಗೆ ಕೊಡಿಸಿದರೆ ಖಂಡಿತ ಈ ಎಲ್ಲಾ ಸಮಾಜಘಾತುಕರು ಸಮಾಜಮುಖಿಯಾಗಿ ಜೀವಪರ ಕೆಲಸವನ್ನು ಮಾಡುತ್ತಾರೆ. ಅವರ ಮನಪರಿವರ್ತನೆ ಆಗುವುದು ನಿಸ್ಸಂದೇಹ.

              ಉತ್ತರ
              • shripad's avatar
                shripad
                ಆಗಸ್ಟ್ 4 2014

                ಹೌದು, ಹೌದು.. ಹೌದು…ಈ ಮನುವಾದಿಗಳಿಗೆ ಇವೆಲ್ಲ ಅರ್ಥ ಆಗಲ್ಲ. ಆದರೂ ನೀವು ಪ್ರಯತ್ನ ಬಿಡಬೇಡಿ.

                ಉತ್ತರ
                • shripad's avatar
                  shripad
                  ಆಗಸ್ಟ್ 4 2014

                  ಆದರೆ ದರ್ಗಾ ವಚನ ಯಾರಿಗೆ ಎಂಬ ನೀವು ಕೊಟ್ಟ ಪಟ್ಟಿ ನೋಡಿ ಆಘಾತವೇನೂ ಆಗಿಲ್ಲ. ಮಿಕ್ಕವರಿಗೆ ಇದು ಬೇಕಿಲ್ಲ!!

                  ಉತ್ತರ
    • raghavendra1980's avatar
      ಆಗಸ್ಟ್ 3 2014

      ನಂಗ್ಯಾಕೋ ಈ ಶೆಟ್ಕರ್, ದರ್ಗಾ ಅವರ ಹೆಸರನ್ನು ಹಾಳು ಮಾಡಲೇ ಹೊರಟಂತೆ ಕಾಣುತ್ತಿದೆ. ಅಗತ್ಯವಿರದಲ್ಲೆಲ್ಲಾ ದರ್ಗಾನಾಮ ಜಪಿಸಿ, ಆ ಪಾರ್ಟೀಗೆ ಇರೋ ಮರ್ಯಾದೇನೂ ತೆಗೆಯೋಕೆ ಹೊರಟಂಗಿದೆ.

      ದರ್ಗಾ ಮಂತ್ರವ ಜಪಿಸೋ…ಹೇ ಮನುಜ

      ಉತ್ತರ
      • Nagshetty Shetkar's avatar
        Nagshetty Shetkar
        ಆಗಸ್ಟ್ 3 2014

        ಹೀಗೆಲ್ಲ ಅನಗತ್ಯ ಮಾತುಗಳನ್ನಾಡಿ ವಿಷಯಾಂತರ ಮಾಡದೆ ಲೇಖನದ ವಸ್ತುವಿಗೆ ಪೂರಕವಾಗಿ ಕಮೆಂಟಿಸಿ.

        ಉತ್ತರ
        • raghavendra1980's avatar
          ಆಗಸ್ಟ್ 3 2014

          ವಿಷಯಾಂತರದ ಬಗ್ಗೆ ನೀವು ಮಾತನಾಡುವುದು, ನಿಮ್ಮ ದರ್ಗಾ ಸಾಹೇಬರ ಮೌಲ್ವಿಯವರು ದನ ತಿನ್ನಬಾರದು ಅನ್ನೋ ಹಾಗಿದೆ 😛

          ಉತ್ತರ
          • ಕೌಶಿಕ್'s avatar
            ಆಗಸ್ಟ್ 3 2014

            +೧
            ಶಟ್ಕರ್ ಅವರಿಂದ ವಿಷಯಕ್ಕೆ ಪೂರಕ ಪ್ರತಿಕ್ರಿಯೆ ಬಂದಿರುವುದು ನಿಲುಮೆಯೆ ಇತಿಹಾಸದಲ್ಲೇ ಇಲ್ಲ ವ್ಯಿಶ್ದಿಷ್ದ್ರೂಯ ಯಾವುದೇ ಆಗಿರಲಿ ಅವರ ಪ್ರತಿಕ್ರಿಯೆ ಮಾತ್ರ “ನಮೋಸುರ” “ಪುರೋಹಿತಶಾಹಿ” “ಬ್ರಹ್ಮಣ್ಯ” “ವೈದಿಕ ವೈರಸ್ಸು” “ಮನು” ಇಂತಹ ಅಸಂಬದ್ಧ ಪದಗಳ ಪ್ರಲಾಪದ ಬಡಬಡಿಕೆ .. ಇವರ ಈ ಸಲಹೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ.. . ಈ ಬೆಳವಣಿಗೆ ನೋಡಿದರೆ ನಿಲುಮೆಗೂ ಒಳ್ಳೆ ದಿನಗಳು ಬರಬಹುದು 🙂

            ಉತ್ತರ
          • ಸಂತೋಷ's avatar
            Maaysa
            ಆಗಸ್ಟ್ 4 2014

            ವ್ಯಂಗ್ಯವು ಹಾಸ್ಯಮಯವಾಗಿದೆ.

            ಉತ್ತರ
    • ಸಂತೋಷ's avatar
      Maaysa
      ಆಗಸ್ಟ್ 4 2014

      ಬೊಗಳೆ. ಅಜ್ಞಾನಿ ತಿಳಿದು ಮಾತಾಡಬೇಕು.

      ಉತ್ತರ
    • SSNK's avatar
      ಆಗಸ್ಟ್ 4 2014

      ಲೇಖಕರ ‘ವೈದಿಕ’ ಸ್ನೇಹಿತರ ಹೆಸರು ಸಲೀಂ!

      ಉತ್ತರ
  6. ganesh's avatar
    ganesh
    ಆಗಸ್ಟ್ 4 2014

    ಆದರೆ ಈ ಬಾರಿ ಲೇಖಕರ ಅದೃಷ್ಟ ಚೆನ್ನಾಗಿದ್ದ೦ಗಿದೆ…ನಮ್ಮ ಶೆಟ್ಕರ್ ಸಾಹೇಬರು ’ಲೇಖನವು ಸ್ವಾಗತಾರ್ಹ,ಲೇಖಕರಿಗೆ ಅಭಿನಿ೦ದನೆ,ಚೆ,ಚೆ,ಅಭಿನ೦ದನೆ’ ಅ೦ತೇನೋ ಹಾಕಿದ್ದಾರಪ್ಪಾ…

    ಉತ್ತರ

Leave a reply to shripad ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments