ವಿಷಯದ ವಿವರಗಳಿಗೆ ದಾಟಿರಿ

Archive for

6
ಆಗಸ್ಟ್

ಇಸ್ರೇಲ್ ಯುದ್ಧ ಹಮಾಸ್ ವಿರುದ್ಧವೇ ಹೊರತು ಗಾಜಾ ಮತ್ತು ಪ್ಯಾಲೆಸ್ತೈನಿಗಳ ಮೇಲಲ್ಲ

– ಅಶ್ವಿನ್ ಅಮಿನ್

ಇಸ್ರೇಲ್“Save Gaza… Save Palestine”
“ಗಾಜಾ ಉಳಿಸಿ, ಇಸ್ರೇಲ್ ಅಳಿಸಿ”
“Israel will Fail.. Palestine will  raise..”

ಭಾರತದಲ್ಲಿ ಕೆಲ ಸಂಘಟನೆಗಳು ರಸ್ತೆಬದಿಗಳ ಗೋಡೆಗಳಲ್ಲಿ, ಸಾಮಾಜಿಕ ತಾಣಗಳ ಗೋಡೆಗಳಲ್ಲಿ ಮೇಲ್ಕಂಡ ಘೋಷಣೆಗಳನ್ನೊಳಗೊಂಡ ಪೋಸ್ಟರ್ ಅಭಿಯಾನ ಪ್ರಾರಂಭಿಸಿರುವುದನ್ನು ಗಮನಿಸಿರುತ್ತೀರಿ.

ಆದರೆ ಅವರ ಈ ನೈತಿಕತೆ ಮುಂಬೈ ಸರಣಿ ಸ್ಪೋಟ, ತಾಜ್ ಹೋಟೆಲ್ ಧಾಳಿ, ಸಂಸತ್ ಮೇಲಿನ ಧಾಳಿ, ದೇಶದ ವಿವಿದೆಡೆ ನಡೆದ ಬಾಂಬ್ ಧಾಳಿಗಳಲ್ಲಿ ಅದೆಷ್ಟೋ ಮುಗ್ಧ ಭಾರತೀಯರು ಬಲಿಯಾಗುವಾಗ ಎಲ್ಲಿ ಅಡಗಿ ಹೋಗಿತ್ತು ಎಂಬುದು ಮಾತ್ರ  ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.

ಬಹುಶಃ ಸತ್ತು ಹೋಗಿರುವವರು ಭಾರತೀಯರು ಮತ್ತು ಧಾಳಿ ಸಂಘಟಿಸಿದವರು ನಮ್ಮ ಸಮಾಜದವರು ಎಂಬ ಅಭಿಮಾನ ಇದ್ದಿತ್ತೇನೋ.. !

ಅಷ್ಟಕ್ಕೂ ಈ “Save Gaza.. Save Palestine” ಅನ್ನುವ  ಕೂಗು ಯಾಕೆ ಬೇಕು..?
ನಿಜಕ್ಕೂ ಪ್ಯಾಲೆಸ್ತೀನ್ ಅಮಾಯಕವೇ..? ಇಸ್ರೇಲ್ ಸರ್ವಾಧಿಕಾರಿಯೇ..?

ಖಂಡಿತ ಅಲ್ಲ..

ಈ ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಮಸ್ಯೆ ಇಸ್ರೇಲ್ ಅಸ್ತಿತ್ವಕ್ಕೆ ಬಂದಾಗಿನಿಂದ ಇದೆ. ವಿಶ್ವದ ಏಕೈಕ ಯಹೂದಿ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದ ಇಸ್ರೇಲ್ ಅನ್ನು ಯಹೂದಿಗಳು ಧಾರ್ಮಿಕವಾಗಿ ತಮ್ಮ ಪವಿತ್ರ ಭೂಮಿ ಎಂದು ನಂಬುತ್ತಾರೆ. ಆ ನಂಬುಗೆಯೇ ವಿಶ್ವದಾದ್ಯಂತ ಹರಡಿದ್ದ ಯಹೂದಿಗಳನ್ನು ಇಸ್ರೇಲ್ ನಲ್ಲಿ ಸೇರಿಸಿತು. ಈ ಹಿಂದೆ ಇಸ್ಲಾಂ ಮತಾಂತರ ಹಾಗು ದೌರ್ಜನ್ಯಕ್ಕೆ ಹೆದರಿ ಊರು ತೊರೆದಿದ್ದ ಯಹೂದಿಗಳೆಲ್ಲ ಕ್ರಮೇಣ ಇಸ್ರೇಲ್ ಗೆ ವಾಪಸಾದರು. ಕಾಲಾಂತರದಲ್ಲಿ ಅದೇ ಇಸ್ರೇಲ್ ರಾಷ್ಟ್ರವಾಯಿತು. ಮುಂದೆ ವಿಶ್ವ ಸಂಸ್ಥೆಯು 1948 ರಲ್ಲಿ ಇಸ್ರೇಲ್ ಅನ್ನು ಅಧಿಕೃತ ದೇಶ ಎಂದು ಘೋಷಿಸುವುದರೊಂದಿಗೆ ಇಸ್ರೇಲ್ ನ ಅಸ್ತಿತ್ವಕ್ಕೆ ಅಧಿಕೃತ ಮುದ್ರೆ ಬಿತ್ತು.

ಮತ್ತಷ್ಟು ಓದು »

4
ಆಗಸ್ಟ್

ಕೊಳವೆಬಾವಿ ಅವಾಂತರ-ಕೊನೆ ಹೇಗೆ?

 – ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ

borewellಸೂರಜ್ (ಉತ್ತರ ಭಾರತ), ಪ್ರಿನ್ಸ್ (ಕುರುಕ್ಷೇತ್ರ), ವಂದನಾ (ಉತ್ತರ ಪ್ರದೇಶ), ಆರತಿ ಚಾವ್ಡಾ (ಭಾವನಗರ್), ನವನಾಥ್ (ಗುಲ್ಬರ್ಗಾ), ಕರಿಯ (ದಾವಣಗೆರೆ), ಕಾರ್ತಿಕ್ (ಆಂಧ್ರ), ತಿಮ್ಮ (ಚಿತ್ರದುರ್ಗ), ಸಂಧ್ಯಾ (ಬಳ್ಳಾರಿ), ಸಂದೀಪ್ (ರಾಯಚೂರು), ಸೋನು (ಆಂಧ್ರ), ಏಗವ್ವ (ಬಿಜಾಪುರ) –ಇವರೆಲ್ಲ ಎರಡರಿಂದ ಹತ್ತು ವರ್ಷದ ಮಕ್ಕಳು. ಹೀಗೆ ಹೆಸರನ್ನು ಹೇಳುತ್ತ ಹೋದರೆ ಪ್ರಾಥಮಿಕ ಶಾಲೆಯೊಂದರ ಹಾಜರಿ ಪಟ್ಟಿಯಂತೆ ಕಾಣುತ್ತದೆ. ಇವರು 2001ರಿಂದ ಈಚೆಗೆ ದೇಶಾದ್ಯಂತ ಕೊಳವೆ ಬಾವಿಯ ಕಗ್ಗತ್ತಲ ನರಕ ಕಂಡವರು.

ಇವರಲ್ಲಿ ಪ್ರಿನ್ಸ್, ವಂದನಾ ಮತ್ತು ಸಂಧ್ಯಾ ಎಂಬ ಮೂವರು ಮಕ್ಕಳು ಮಾತ್ರ ಬದುಕಿ ಬಂದು ಹೊಸ ಜೀವನ ಕಂಡಿದ್ದಾರೆ. ತೆರೆದ ಕೊಳವೆ ಬಾವಿಗೆ ಮಕ್ಕಳು ಆಗಾಗ ಬೀಳುತ್ತಲೇ ಇರುತ್ತಾರೆ. ಇದೀಗ ಈ ಪಟ್ಟಿಗೆ ಸೇರಿದ ಹೊಸ ಹೆಸರುಗಳು ನಾಲ್ಕು ವರ್ಷದ ಪೋರಿ ವಿಜಾಪುರದ ನಾಗಠಾಣಾದ ಅಕ್ಷತಾ ಹಾಗೂ ಇದೀಗ ಕೊಳವೆಬಾವಿಯಲ್ಲಿ ಬಿದ್ದು ಹೋರಾಟ ಮಾಡುತ್ತಿರುವ ಬಾಗಲಕೋಟೆಯ ಆರು ವರ್ಷದ ಬಾಲಕ ತಿಮ್ಮಣ್ಣ.

ನೀರಿನ ಲಭ್ಯತೆ ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಆಳದ ಕೊಳವೆ ಬಾವಿ ತೆಗೆದಂತೆಲ್ಲ ಸುತ್ತಲಿನ ತೋಡು ಬಾವಿಗಳ ನೀರು ಕೂಡ ಇಂಗಿ ಹೋಗುತ್ತದೆ. ಆಗ ಅನಿವಾರ್ಯವಾಗಿ ತೋಡು ಬಾವಿ ಉಳ್ಳವರೂ ಕೊಳವೆ ಬಾವಿ ತೆಗೆಸುತ್ತಾರೆ. ವಿಶ್ವಬ್ಯಾಂಕ್ ಭಾರತದ ಅಂತರ್ಜಲದ ಬಗ್ಗೆ ವರದಿಯೊಂದನ್ನು ನೀಡಿ ಅಂತರ್ಜಲ ಬಳಕೆ ಪ್ರಮಾಣ ಹೀಗೇ ಇದ್ದರೆ ಇನ್ನು 15 ವರ್ಷದಲ್ಲಿ ದೇಶದ ಶೇ. 60ರಷ್ಟು ಜಲಮೂಲಗಳು ಸಂಪೂರ್ಣ ಬತ್ತಿಹೋಗಲಿವೆ ಎಂದು ಎಚ್ಚರಿಸಿದೆ. ಅಂದರೆ ಕೊಳವೆ ಬಾವಿಗಳು ಮಾತ್ರವಲ್ಲ, ಕೆರೆ ಕೊಳ್ಳಗಳು ಮಾತ್ರವಲ್ಲದೇ ನದಿ ನೀರಿನ ಮೂಲಗಳು ಕೂಡ ಬತ್ತಲಿವೆ. ಕೊಳವೆ ಬಾವಿ ತಂದಿಟ್ಟ ದೊಡ್ಡ ಅಪಾಯದಲ್ಲಿ ಇದೂ ಒಂದು.

ಜನರಿಗೆ ಸುಲಭವಾಗಿ ನೀರು ಕುಡಿಸುವುದಕ್ಕೂ ಮತಬೇಟೆಗೂ ನೇರ ಸಂಬಂಧವಿದೆ. ಈಗಂತೂ ಸಂಸತ್‍ನಿಂದ ಹಿಡಿದು ನಗರ ಸಭೆ, ಪಂಚಾಯ್ತಿವರೆಗೆ ಒಂದಲ್ಲ ಒಂದು ಚುನಾವಣೆ ಆಗಾಗ ನಡೆಯುತ್ತಲೇ ಇರುವುದರಿಂದ ಕೊಳವೆಬಾವಿ ತೋಡಿಸಿ ನೀರಿನ ವ್ಯವಸ್ಥೆ ತೋರಿಸಿ ಜನರನ್ನು ಸುಲಭವಾಗಿ ಮರುಳುಗೊಳಿಸುವ ಯತ್ನ ನಡೆಯುತ್ತಲೇ ಇರುತ್ತದೆ. 2009ರ ಸಂಸತ್ ಚುನಾವಣೆಗೆ ಮುನ್ನ ಆಂಧ್ರದ ಪ್ರಕಾಶಂ ಜಿಲ್ಲೆಯ ಒಂದೇ ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಯಿತು!

ಮತ್ತಷ್ಟು ಓದು »

4
ಆಗಸ್ಟ್

ವಾಲ್ಮೀಕಿ ಯಾರು?

– ನವೀನ್ ನಾಯಕ್

ವಾಲ್ಮೀಕಿ ಯಾರುಕೆ.ಎಸ್ ನಾರಾಯಣಾಚಾರ್ಯರ ” ವಾಲ್ಮೀಕಿ ಯಾರು ” ಎಂಬ ಕೃತಿಗೆ ನಿಷೇಧದ ಭೀತಿ ಎದುರಾಗಿದೆ. ಕೆಳವರ್ಗದವರು ಮಹಾಗ್ರಂಥಗಳನ್ನು ಬರೆಯಲು ಸಾಧ್ಯವಿಲ್ಲ ಅದು ಕೇವಲ ಬ್ರಾಹ್ಮಣರ ಸೊತ್ತು ಎಂಬಂತೆ ಪುಸ್ತಕ ಸೂಚಿಸುತ್ತದೆ ಎಂಬ ಆರೋಪವನ್ನೂ ಹೊರಿಸಿ ಹಲವು ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ಎಲ್ಲಾ ವಿವಾದಗಳಿಗೆ ಮೂಲ ಕಾರಣ ವಾಲ್ಮೀಕಿಯವರ ಜನ್ಮ ವೃತ್ತಾಂತವನ್ನು ಕೆ ಎಸ್ ನಾರಾಯಣಾಚಾರ್ಯರು ತಡಕಾಡಿದ್ದು. ತಡಕಾಡಲು ಕಾರಣವನ್ನೂ ಅವರು ಕೃತಿಯಲ್ಲೇ ನೀಡಿದ್ದಾರೆ. ವಾಲ್ಮೀಕಿ ರಾಮಾಯಣ ಮತ್ತು ಆನಂದರಾಮಾಯಣದ ಆಧಾರವನ್ನೇ ಈ ಕುರಿತ ಚರ್ಚೆಗೆ ಬಳಸಿದ್ದಾರೆ.

ವಾಲ್ಮೀಕಿ ಬ್ರಾಹ್ಮಣ ಪುತ್ರನೋ ಇಲ್ಲವೋ ಎಂಬುದಕ್ಕೆ ಲೇಖಕರು ಕೊಟ್ಟ ಆಧಾರಗಳು ಇಂತಿವೆ.ವಾಲ್ಮೀಕಿಯವರ ಆಶ್ರಮದಲ್ಲಿ ನೆಲೆಸಿ ಲವ ಕುಶರನ್ನು ಹಡೆದ ಸೀತಾಮಾತೆಯನ್ನು ಮತ್ತೆ ಶ್ರೀರಾಮನೆದುರು ನಿಲ್ಲಿಸಿ ” ಈಕೆ ಪರಿಶುದ್ಧೆ ! ಸ್ವೀಕರಿಸು ” ಎನ್ನುವಾಗ ಮಹರ್ಷಿಯು ತಾನು ಸುಳ‍್ಳಾಡುವವನು ಅಲ್ಲ ಎಂದು ಪ್ರತಿಜ್ಞೆ ಮಾಡಿ ತನ್ನ ಕುಲಗೋತ್ರವನ್ನು ತಂದೆಯವರನ್ನು ಸ್ಮರಿಸಿ ಹೇಳುತ್ತಾರೆ ” ಪ್ರಚೇತಸೋಹಂ ದಶಮಃ ಪುತ್ರೋ , ರಾಘವನಂದನ” |

( ಉತ್ತರಾಯಣ 96-16 ). ಹೇ ಶ್ರೀರಾಮ ! ನಾನು ಪ್ರಚೇತಸನೆಂಬ ಮಹರ್ಷಿಯ ಹತ್ತನೆಯ ಮಗ. ಎರಡನೆಯದಾಗಿ ಲವಕುಶರು ಶ್ರೀರಾಮನೆದುರೇ ರಾಮಾಯಣವನ್ನು ಗಾನ ಮಾಡಿ ತೋರಿಸಿದಾಗ ಶ್ರೀರಾಮಚಂದ್ರನು ಇದನ್ನು ಬರೆದವರಾರು ಎಂದು ಕೇಳಿದಾಗ, ಮಕ್ಕಳು ಇದನ್ನು ಭಾರ್ಗವ ಗೋತ್ರದ ಮಹರ್ಷಿ ವಾಲ್ಮೀಕಿ ಬರೆದರು ಎನ್ನುತ್ತಾರೆ. ಇದಲ್ಲದೇ ಇತರ ಪುರಾಣಗಳಲ್ಲೂ ಅಲ್ಲಲ್ಲಿ ವಾಲ್ಮಿಕಿಯನ್ನು ” ಪ್ರಾಚೇತಸ , ಭಾರ್ಗವ, ವರುಣಪುತ್ರ, ಭೃಗುಸೋದರ ” ನೆಂದೂ ಹೇಳಿದೆ.

ವಾಲ್ಮೀಕಿಯವರು ಬೇಡನಾಗಲು ಇರುವ ಕಾರಣಗಳನ್ನು ಹಲವಾರು ಕಾವ್ಯಗಳು ಎರಡು-ಮೂರು ರೀತಿಯಲ್ಲಿ ಚಿತ್ರಿಸಿವೆ. ಬೇಡನಾದ ನಂತರ ವಾಲ್ಮೀಕಿಯವರಿಗೆ ಸಪ್ತರ್ಷಿಗಳು ಅಥವ ನಾರದರ ಅನುಗ್ರಹದಿಂದ ರಾಮ ಮಂತ್ರದ ಉಪದೇಶವನ್ನು ಪಡೆದು ಜಪಿಸತೊಡಗಿದರು. ಕಾಲ ಚಲಿಸಿದಂತೆ ಬೇಡನ ಸುತ್ತ ಹುತ್ತ ( ವಾಲ್ಮೀಕ ) ಬೆಳೆಯಿತು. ನಂತರ ಸಪ್ತರ್ಷಿಗಳು ಬೇಡನನ್ನು ಹೊರ ಬರುವಂತೆ ಕರೆದಾಗ ಹುತ್ತವನ್ನೊಡೆದುಕೊಂಡು ಹೊರ ಬಂದು ವಾಲ್ಮೀಕರೆಂದು ಪ್ರಖ್ಯಾತರಾದರು. ಇದರಲ್ಲಿ ಆಚಾರ್ಯರು ಯಾವುದಾದರೂ ವಿಷಯವನ್ನು ಸೃಷ್ಟಿಸಿರುವುದು ಕಂಡು ಬರುತ್ತದೆಯೇ ? ಇಲ್ಲವಲ್ಲ. ಕೃತಿಯ ಮದ್ಯಭಾಗದಲ್ಲಿ ಲೇಖಕರು ಬರೆಯುತ್ತಾರೆ, ಪಾಮರನಾದ ಬೇಡನೊಬ್ಬ ದಿಢೀರನೆ ರಾಮಾಯಣದಂತಹ ಕಾವ್ಯ ಬರೆದ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ. ಈ ವಾಕ್ಯದ ಕುರಿತಾದ ದೃಷ್ಠಿಕೋನವನ್ನು ಈಗ ತಿರುಚಿರುವುದೇ ವಿವಾದಕ್ಕೆ ಮೂಲವಾಗಿರುವುದು.
ಮತ್ತಷ್ಟು ಓದು »

1
ಆಗಸ್ಟ್

’ನನ್ನ ಅದೃಷ್ಟದ ಮಗುವಿದು’ ಎನ್ನುವ ಮುನ್ನ…..

– ಗುರುರಾಜ್ ಕೊಡ್ಕಣಿ

ಮಗುಕೆಲವು ದಿನಗಳ ಹಿ೦ದಿನ ಮಾತು.ವಿಶೇಷ ಔತಣಕೂಟವೊ೦ದರ ನಿಮಿತ್ತ ಸ್ನೇಹಿತನ ಮನೆಗೆ ಹೋಗಿದ್ದೆ.’ನಾವಿಬ್ಬರು,ನಮಗಿಬ್ಬರು’ ಎನ್ನುವ೦ತೆ ಎರಡು ಮಕ್ಕಳ ಸು೦ದರ ಸ೦ಸಾರ ಆತನದು.ಅವನ ಹಿರಿಯ ಮಗನಿಗೆ ಸುಮಾರು ಏಳು ವರ್ಷ ವಯಸ್ಸಾಗಿದ್ದರೇ,ಕಿರಿಯ ಪುತ್ರನಿಗೆ ಮೂರು ಸ೦ವತ್ಸರಗಳು ತು೦ಬಿವೆ.ತು೦ಬ ದೊಡ್ಡದಲ್ಲದಿದ್ದರೂ ತೃಪ್ತಿಕರ ಸ೦ಬಳ ತರುವ ಕೆಲಸದಲ್ಲಿದ್ದಾನೆ ನನ್ನ ಮಿತ್ರ.ಸುಶೀಲ,ಸದ್ಗುಣಸ೦ಪನ್ನೆಯಾದ ಮಡದಿಯೊ೦ದಿಗಿರುವ ಅವನದು ಒಟ್ಟಾರೆಯಾಗಿ ಚಿಕ್ಕ ಚೊಕ್ಕ ಸ೦ಸಾರ. ಆದರೆ ಅವನ ಮನೆಯಲ್ಲಿ ಅ೦ದು ನಡೆದ ಚಿಕ್ಕ ಘಟನೆಯೊ೦ದು ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ.ನನ್ನ ಸ್ನೇಹಿತ ಸಣ್ಣದೊ೦ದು ಸೈಟು ಖರೀದಿಸಹೊರಟಿದ್ದ.ಅವನ ನಿರೀಕ್ಷೆಗಿ೦ತ ಕಡಿಮೆ ಬೆಲೆಯಲ್ಲಿ ಆ ಜಾಗ ಅವನಿಗೆ ಸಿಗುವುದರಲ್ಲಿತ್ತು.ನಾನು ಆತನ ಮನೆಯಲ್ಲಿ ಕುಳಿತಿದ್ದಾಗಲೇ ಆತ ಖರೀದಿಸಬೇಕಿದ್ದ ಜಮೀನಿಗೆ ಸ೦ಬ೦ಧಪಟ್ಟ೦ತೆ ಕರೆಯೊ೦ದು ಆತನಿಗೆ ಬ೦ದಿತು.ಫೋನಿನಲ್ಲಿ ಮಾತು ಮುಗಿಸಿದವನು ’ಒ೦ದು ಹತ್ತು ನಿಮಿಷ ಕೂತಿರು ಗುರು,ಸಣ್ಣ ಕೆಲಸವೊ೦ದಿದೆ.ಮುಗಿಸಿಕೊ೦ಡು ಬೇಗ ಬ೦ದು ಬಿಡ್ತೀನಿ’ ಎ೦ದವನೇ ತನ್ನ ಬೈಕಿನ ಕೀಯನ್ನು ಕೈಗೆತ್ತಿಕೊಳ್ಳುತ್ತಾ,’ಚಿನ್ನು,ಬಾ ಪುಟ್ಟಾ,ಇಲ್ಲೇ ಹೋಗಿ ಬರೋಣ’ ಎ೦ದು ತನ್ನ ಕಿರಿಯ ಮಗನನ್ನು ಕೂಗಿದ.ಅಪ್ಪನ ಧ್ವನಿಯನ್ನು ಕೇಳಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಓಡಿ ಬ೦ದ ಕಿರಿಯ ಮಗನನ್ನು ಬೈಕಿನಲ್ಲಿ ಕೂರಿಸಿಕೊ೦ಡು ಅದರ ಪಕ್ಕೆಗೊ೦ದು ಒದೆ ಕೊಟ್ಟು ಎಕ್ಸಲರೇಟರ್ ತಿರುವಲಾರ೦ಭಿಸಿದ ಅವನು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಮನೆಯೊಳಗಿ೦ದ ಓಡಿ ಬ೦ದ ಅವನ ಹಿರಿಯ ಮಗ,’ಅಪ್ಪಾ ನಾನೂ ಬರ್ಲಾ ನಿನ್ನ ಜೊತೆ.?’ ಎ೦ದು ಕೇಳಿದ .’ನೀನು ಬೇಡ,ಇಲ್ಲೇ ಇರು ಮನೆಲಿ’ ಎ೦ದು ಸಣ್ಣಗೆ ಸಿಡುಕುತ್ತಲೇ ನುಡಿದ ಅವನ ಅಪ್ಪ.ಆದರೆ ಅಷ್ಟಕ್ಕೆ ಸುಮ್ಮನಾಗದ ಅವನ ಹಿರಿಯ ಮಗ ’ಅಪ್ಪಾ..’ ಎ೦ದು ಪುನ: ರಾಗವೆಳೆಯತೊಡಗಿದ.’ಒಮ್ಮೆ ಹೇಳಿದ್ರೆ ಗೊತ್ತಾಗಲ್ವಾ,ಹೋಗೋ ಕತ್ತೆ, ಒಳಗೆ ’ಎ೦ದು ಜೋರಾಗಿ ಗದರಿದ ಅಪ್ಪನ ಮಾತಿಗೆ ಬೆದರಿದ ಆ ಹುಡುಗ ಜೋಲು ಮೋರೆ ಹಾಕಿಕೊ೦ಡು ಅರೇ ಮನಸ್ಸಿನಿ೦ದ ನಿಧಾನವಾಗಿ ಮನೆಯೊಳಗೆ ಹೋದ.

ಹುಡುಗನ ಕಣ್ಣ೦ಚಿನಲ್ಲಿ ಜಿನುಗುತ್ತಿದ್ದ ನಿರಾಸೆಯ ಕಣ್ಣೀರನ್ನು ನಾನು ಗಮನಿಸಿದ್ದೆ.ನನಗೆ ಅವನ ಬಗ್ಗೆ ಅನುಕ೦ಪವು೦ಟಾಗಿ,’ಪಾಪ,ಅವನನ್ನೂ ಕರ್ಕೊ೦ಡು ಹೋಗೋ ನಿನ್ನ ಜೊತೆ’ಎ೦ದು ಗೆಳೆಯನಿಗೆ ತಿಳಿಸಿದೆ.’ನಿನಗೆ ಗೊತ್ತಿಲ್ಲ ಕಣೋ ,ಅವನು ಸಿಕ್ಕಾಪಟ್ಟೆ ಅನ್ ಲಕ್ಕಿ,ಅವನನ್ನ ಕರ್ಕೊ೦ಡು ಹೋದ್ರೆ ಯಾವ ಕೆಲ್ಸಾನೂ ಆಗಲ್ಲ,ಅನಿಷ್ಟ ಮು೦ಡೆದು’ ಎ೦ದು ಬಯ್ದು ಅವನು ಹೊರಟು ಹೋದ.ನನಗೆ ಅಕ್ಷರಶ; ಚೇಳು ಕುಟುಕಿದ ಅನುಭವ.ತಾನು ಹೆತ್ತ ಮಗನನ್ನೇ ’ಅನಿಷ್ಟ’ ಎ೦ದ ನನ್ನ ಸ್ನೇಹಿತನ ಮಾತುಗಳನ್ನು ಅರಗಿಸಿಕೊಳ್ಳುವುದು ನನಗೆ ಕಷ್ಟವೆನಿಸಿತು.ಆತ ಹೇಳುವ೦ತೆ,ಅವನ ಹಿರಿಯ ಮಗ ಹುಟ್ಟುವಾಗ ತು೦ಬ ದುಡ್ಡಿನ ತೊ೦ದರೆಯಾಗಿ,ಕ೦ಡಕ೦ಡಲ್ಲಿ ಸಾಲ ಮಾಡಿ ಹೆ೦ಡತಿಯ ಹೆರಿಗೆ ಮಾಡಿಸಿದ್ದನ೦ತೆ. ಸಾಲಗಾರರು ಕೊಟ್ಟ ಕಾಟ ಅಷ್ಟಿಷ್ಟಲ್ಲವ೦ತೆ.ಆದರೆ ಅವನ ಎರಡನೇ ಪುತ್ರ ಹಾಗಲ್ಲವ೦ತೆ,ಅವನು ಹುಟ್ಟುವ ಗಳಿಗೆಯಲ್ಲಿ ಇವನ ಕೈತು೦ಬ ಹಣವಿತ್ತ೦ತೆ,ಎರಡನೇ ಮಗ ಹುಟ್ಟುತ್ತಲೇ ಇವನು ಬೈಕು ಖರೀದಿಸಿದನ೦ತೆ,ಹೆ೦ಡತಿಗೆ ಚಿನ್ನದ ಒಡವೆಗಳನ್ನು ಮಾಡಿಸಿಕೊಟ್ಟನ೦ತೆ,ಹಾಗಾಗಿ ಕಿರಿಯ ಮಗ ತನ್ನ ಲಕ್ಕಿ ಸ್ಟಾರ್ ಎ೦ದು ಹೆಮ್ಮೆಯಿ೦ದ ವಿವರಿಸಿದ ಆ ನನ್ನ ಗೆಳೆಯ. ನನಗೆ ಏನು ಹೇಳಬೇಕೋ ತಿಳಿಯದ೦ತಾಯಿತು.ಆತ ನನಗೆ ಸುಮಾರು ಹತ್ತು ವರ್ಷಗಳಿ೦ದ ಪರಿಚಯ.ತನ್ನ ತ೦ದೆಗೆ ಹಿರಿಯ ಮಗನಾದ ಅವನಿಗೆ ಇಬ್ಬರು ಸೋದರಿಯರಿದ್ದರು.
ಮತ್ತಷ್ಟು ಓದು »