ವಿಷಯದ ವಿವರಗಳಿಗೆ ದಾಟಿರಿ

Archive for

1
ಸೆಪ್ಟೆಂ

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 3

– ಪ್ರೊ.ರಾಜಾರಾಮ್ ಹೆಗಡೆ,

ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logo

ಕರ್ನಾಟಕದ ಕುರಿತಂತೆ ವೃತ್ತಿಪರ ಇತಿಹಾಸಕಾರರ ಒಂದು ಇತಿಹಾಸ ಬಂದಿದ್ದೇ 1970 ರಲ್ಲಿ. ಅಂದರೆ, ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಇತಿಹಾಸಕ್ಕೇ ಪ್ರತ್ಯೇಕ ಪತ್ರಿಕೆಗಳನ್ನು ಪ್ರಾರಂಭಿಸಿದ ನಂತರ. ಕರ್ನಾಟಕದ ಕುರಿತ ವೃತ್ತಿಪರ ವ್ಶೆಜ್ಞಾನಿಕ ಇತಿಹಾಸವು ಒಂದು ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ವಸಾಹತು ಮತ್ತು ರಾಷ್ಟ್ರೀಯ ಇತಿಹಾಸದ ಚೌಕಟ್ಟಿನಲ್ಲಿ ಮೂಡಿಬಂದಿದೆ. ಏಕೀಕೃತ ಕರ್ನಾಟಕದ ಇತಿಹಾಸವಾಗಿ ಪಿ. ಬಿ. ದೇಸಾಯಿ ಮತ್ತಿತರರು 1970ರಲ್ಲಿ ಹೊರತಂದ A History of Karnataka ದ ಮುನ್ನುಡಿಯಲ್ಲಿ ಈ ಕರ್ನಾಟಕದ ಗಾಥೆಯನ್ನು ಈ ರೀತಿ ಇಡಲಾಗಿದೆ: ‘ ಈ ಶತಮಾನದ ಪ್ರಾರಂಭದ ಏಕೀಕರಣ ಪೂರ್ವದ ಕರ್ನಾಟಕದ ಇತಿಹಾಸವು ಅತ್ಯಂತ ಕತ್ತಲೆಯ ಕಾಲವಾಗಿದೆ, ಇದಕ್ಕೆ ನೆಲವಿರಲಿಲ್ಲ, ಭಾಷೆಯಿರಲಿಲ್ಲ, ಇತಿಹಾಸವಿರಲಿಲ್ಲ.. ಆದರೆ ಈಗ ಕರ್ನಾಟಕಕ್ಕೆ ಇತಿಹಾಸವರುವುದೊಂದೇ ಅಲ್ಲದೇ, ಅದು ವೈಭವೊಪೇತವೂ, ಅಸೂಯೆ ಹುಟ್ಟಿಸುವಂಥದ್ದೂ ಆಗಿದೆ ಎಂಬುದು ಗೊತ್ತಾಗಿದೆ.. ಆದಿಮ ಗತಕಾಲದಿಂದ ಅನೇಕ ಶತಮಾನಗಳ ಸುದೀರ್ಘ ಕಾಲದವರೆಗೆ ಅಡೆತಡೆಯಿಲ್ಲದೇ ಅಭಿಮುಖವಾಗಿ ಅದು ಚಲಿಸುತ್ತಿದೆ… ಕರ್ನಾಟಕದ ಜನತೆಗೆ ಯಾವುದೇ ನಾಗರಿಕ ರಾಷ್ಟ್ರವು ನ್ಯಾಯೋಚಿತವಾಗಿ ಹೆಮ್ಮೆಪಡಬಹುದಾದಂಥ ಉನ್ನತ ಸಾಧನೆಗಳಿವೆ.’ (ಸಂಕ್ಷಿಪ್ತಗೊಳಿಸಲಾಗಿದೆ) ಇಷ್ಟೇ ಅಲ್ಲದೆ, ಪ್ರಸ್ತುತ ಇತಿಹಾಸವು ಏನನ್ನು ನಿರ್ದೇಸುತ್ತದೆ? ಇದು ಒಂದು ಜನತೆಯು ನಾಗರೀಕ ಪೂರ್ವ ಅವಸ್ಥೆಯಿಂದ ನಾಗರೀಕ ಅವಸ್ಥೆಗೆ ಪದಾರ್ಪಣ ಮಾಡಿದ ಕಥನವಾಗಿದೆ. ಸದಾಕಾಲವೂ ಮಹೋನ್ನತ ಭಾರತ ರಾಷ್ಟ್ರದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡೇ ಒಂದು ಒಟ್ಟಂದದ ಸಾಂಸ್ಕೃತಿಕ ಘಟಕವಾಗಿ ಅವರ ವಿಕಾಸ, ಏಳ್ಗೆ, ಅವನತಿ ಮತ್ತು ವಿಘಟನೆಗಳು, ಹಾಗೂ ಆಧುನಿಕ ಕಾಲದಲ್ಲಿ ಮತ್ತೆ ಒಂದು ಏಕೀಕೃತ ಪ್ರಭುತ್ವದ ಜನತೆಯಾಗಿ ಅವರ ಪುನರುತ್ಥಾನ..(ಗಳ ಕಥನವಾಗಿದೆ)’ ಇವುಗಳ ಜೊತೆಗೇ ಇಂದಿನ ಕರ್ನಾಟಕದ ಹೊರಗಿನ ಪ್ರದೇಶಗಳ ಮೇಲೆ ಹಿಂದೆ ಅದಕ್ಕಿದ್ದ ಪ್ರಭುತ್ವ ಮತ್ತು ಪ್ರಭಾವಗಳನ್ನು ‘ಮಹಾನ್ ಕರ್ನಾಟಕ’ (Greater Karnataka) ಎಂಬ ಪರಿಭಾಷೆಯಲ್ಲಿ ವರ್ಣಿಸಲಾಗಿದೆ. ‘ ಅತ್ಯಂತ ಹೆಚ್ಚಿನ ರಾಜರನ್ನು ಸೃಷ್ಟಿಸಿದ ಏಕಮೇವ ಪ್ರದೇಶ ಇದಾಗಿದೆ. ಇಲ್ಲಿನ ರಾಜರು ಓರಿಸ್ಸಾ, ಗೋವಾ, ಗುಜರಾಥ್, ಬಿಹಾರ, ರಾಜಸ್ಥಾನ, ಬೆಂಗಾಲ ಇತ್ಯಾದಿ ಪ್ರದೇಶಗಳಲ್ಲಿ ಆಳಿದ್ದಾರೆ. ಅದರ ಸಂಸ್ಸೃತಿಯ ಪ್ರಭಾವ ಹೊರಭಾಗಗಳಮೇಲೆ ಹೇಗಾಯಿತು, ಹಾಗೂ ‘ಮಹಾನ್ ಭಾರತ’ ಕ್ಕೆ ಕರ್ನಾಟಕದ ಕಾಣಿಕೆ ಏನು? ಇತ್ಯಾದಿಗಳ ಕುರಿತೂ ಪ್ರಸ್ತಾವನೆಯಲ್ಲಿ ಚರ್ಚಿಸಲಾಗಿದೆ.

ಮತ್ತಷ್ಟು ಓದು »