ವಿಷಯದ ವಿವರಗಳಿಗೆ ದಾಟಿರಿ

Archive for

11
ಆಕ್ಟೋ

ಪ್ರತಿಭಟನೆ ಮಾಡಿದವರೆಲ್ಲ ಕೃತಿಯನ್ನು ಓದಿದ್ದರೇ?

– ವೃಷಾಂಕ ಭಟ್

ವಾಲ್ಮೀಕಿ ಯಾರುಡಾ.ಕೆ.ಎಸ್.ನಾರಾಯಣಾಚಾರ್ಯರು ಬರೆದ ‘ವಾಲ್ಮೀಕಿ ಯಾರು?’ ಎಂಬ ಪುಸ್ತಕದ ವಿರುದ್ಧ ಹಲವು ಪ್ರತಿಭಟನೆಗಳನು ನಡೆದವು. ನನಗೆ ಹೆಚ್ಚು ಹಾಸ್ಯಾಸ್ಪದವೆನಿಸಿದ್ದು ಸಿಪಿಎಂ ನಡೆಸಿದ ಪ್ರತಿಭಟನೆ. ದೇವರ ಅಸ್ಥಿತ್ವವನ್ನೇ ಒಪ್ಪದ ಎಡಪಂಥೀಯರು ರಾಮನನ್ನು ದೇವರೆಂದು ಬರೆದ ವಾಲ್ಮೀಕಿ ಪರ ವಕಾಲತ್ತು ವಸಿದ್ದಕ್ಕೆ ಏನು ಹೇಳಬೇಕು? ಓಟ್ ಬ್ಯಾಂಕ್ ಸೃಷ್ಟಿಸಲು ತಮ್ಮ ಸಿದ್ಧಾಂತವನ್ನೇ ಮರೆತ ಪಕ್ಷವಲ್ಲವೇ? ಅದೇನೇ ಇರಲಿ, ಕೃತಿಯೊಂದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯಾದಾಗ, ಆ ಕೃತಿಯನ್ನೋದಬಯಸುತ್ತದೆ ಮನಸ್ಸು. ಹಿಂದೆ ‘ಡುಂಡಿ’ ಬಿಡುಗಡೆಯಾದಗಲೂ ಕದ್ದು ಓದುವ ಪ್ರಯತ್ನ ಮಾಡಿದ್ದೆ. ಕದ್ದು ಓದಿದ್ದೇಕೆಂದರೆ ಆ ಕೃತಿಯನ್ನು ನಿಷೇಸಲಾಗಿತ್ತು. ಹೀಗೆ ಕದ್ದು ಓದಲು ಯತ್ನಿಸಿದ ಡುಂಡಿಯನ್ನು ಹತ್ತು ಪುಟಕ್ಕಿಂತ ಹೆಚ್ಚು ಓದಲಾಗಲಿಲ್ಲ. ‘ವಾಲ್ಮೀಕಿ ಯಾರು’ ಕೃತಿಯೂ ಇದರಿಂದ ಹೊರತಾಗಿರದು ಎಂಬ ಪೂರ್ವಾಲೋಚನೆಯಲ್ಲಿದ್ದವನನ್ನು, ಕೃತಿ ಸೋಲಿಸಿತು!

ಈ ಕೃತಿಯ ವಿರುದ್ಧ ಹೋರಾಟನಡೆಸಿದವರಲ್ಲಿ ಹೆಚ್ಚಿನವರು ಕೃತಿಯನ್ನೇ ಓದಿರುವುದಿಲ್ಲ ಎಂದು ನಾನು ಪಂದ್ಯ ಕಟ್ಟಬಲ್ಲೆ. ಅದರಲ್ಲಿ ಹಂಗಿದೆಯಂತೆ, ಹಿಂಗಿದೆಯಂತೆ ಎಂದು ಹರಡುವ ಮಾತನ್ನೇ ನಂಬಿ ಕೆಲವರು ದೊಂಬಿ ಎಬ್ಬಿಸುತ್ತಾರೆ. ಉಳಿದವರು ಕುರಿಗಳಂತೆ ಸೇರಿಕೊಳ್ಳುತ್ತಾರೆ. ಆದರೆ ಈ ಲೇಖನ ಬರೆಯುವ ಮುನ್ನ ನಾನು ಕೃತಿಯನ್ನು ಸಂಪೂರ್ಣವಾಗಿ ಓದ್ದೇನೆ. ಓದಿದ್ದನ್ನು ನನ್ನ ಸಾಮರ್ಥ್ಯಕ್ಕೆ ನಿಲುಕುವಷ್ಟು ಅರ್ಥೈಸಿಕೊಂಡಿದ್ದೇನೆ. ಕೃತಿಯ ವಿರುದ್ಧ ಗಲಾಟಗಳಾದ ಕೂಡಲೇ ಈ ಲೇಖನವನ್ನು ಬರೆಯಬಹುದಿತ್ತು. ಆದರೆ ಪ್ರತಿಭಟನಕಾರರ ಮನಸ್ಸು ಇನ್ನೊಬ್ಬರ ಮಾತನ್ನು ಆಲಿಸುವಷ್ಟು ಮಟ್ಟಿಗೆ ಶಾಂತವಾಗುವ ತನಕ ಬರೆಯದೇ ಇರುವುದು ಲೇಸು ಎನ್ನಿಸಿತು. ಎಲ್ಲಕ್ಕೂ ಮಿಗಿಲಾಗಿ, ಈ ಕೃತಿಯ ಬಗ್ಗೆ ಇಷ್ಟೆಲ್ಲಾ ಗಲಾಟೆ ಇದ್ದರೂ, ಹೆಚ್ಚಿನವರಿಗೆ ಓದಲು ಈ ಪುಸ್ತಕ ಸಿಕ್ಕಿಲ್ಲ. ಅವರೆಲ್ಲರ ಕುತೂಹಲವೂ ತಣಿಯಬಹುದೆಂಬ ನಂಬಿಯಿದೆ.

ಮೊದಲಿಗೆ ಆಚಾರ್ಯರು ಬರೆದ ಯಾವ ಸಾಲುಗಳಿಂದ ವಾಲ್ಮೀಕಿ ಜನಾಂಗದವರಿಗೆ ನೋವುಂಟಾಗಿರಬಹುದೆಂಬುದನ್ನು ತಿಳಿಯಲು ಯತ್ನಿಸೋಣ.

1. ಪಾಮರನಾದ ಬೇಡನೊಬ್ಬ ದಿಢೀರನೆ ಕಾವ್ಯ ಬರೆದ ರೀತಿ ಇದೆಂದು ಹೇಳುವುದು ಹಾಸ್ಯಾಸ್ಪದವೇ ಆಗುತ್ತದೆ.
2. ವಾಲ್ಮೀಕಿಯ ವಾಗ್ವೈಭವಕ್ಕೆ ಈವರೆಗೆ ನಾವು ಅವನ ಪಾತ್ರರಚನೆ, ಪೋಷಣೆ, ವಾಕ್ಯಗಳ ವಿವರಣೆಗಳನ್ನು ಇತ್ತಿರುವುದೆಲ್ಲ ಸಾಕ್ಷಿ ಎಂದ ಮೇಲೆ ಹೆಚ್ಚು ಹೇಳುವುದೇನಿದೆ? ಪಾಮರನಿಗೆ ಇವೆಲ್ಲ ಶಕ್ಯವೇ?
3. ವಾಲ್ಮೀಕಿ ಬೇಡನೆಂಬುದಕ್ಕೆ ‘ಶ್ರೀ ವಾಲ್ಮೀಕಿ ರಾಮಾಯಣ’ದಲ್ಲಿ ಯಾವ ಆಧಾರಗಳೂ ಇಲ್ಲ.
4. ಕೃತಿಗಳನ್ನು ಓದದೆ ಕೇವಲ ಹೆಸರು ಅಂಟಿಸಿಕೊಂಡರೆ ಅವರಿಗೂ ಅಪಕೀರ್ತಿ, ನಿಮಗೂ ಹಾನಿ!
ಮತ್ತಷ್ಟು ಓದು »