ವಿಷಯದ ವಿವರಗಳಿಗೆ ದಾಟಿರಿ

Archive for

17
ಆಕ್ಟೋ

ಶ್ರೇಣಿಕೃತ ವ್ಯವಸ್ಥೆ ಜಾತಿಗಳಿಗೆ ಮಾತ್ರ ಸೀಮಿತವೇ?

– ಪ್ರಸನ್ನ ಬೆಂಗಳೂರು

ಜಾತಿ ವ್ಯವಸ್ಥೆಕನ್ನಡಪ್ರಭದಲ್ಲಿ ರಾಕೇಶ್ ಶೆಟ್ಟಿಯವರ ಲೇಖನವನ್ನು ಅರ್ಥ ಮಾಡಿಕೊಳ್ಳದ ಕೆಲವರು ಜಾಲತಾಣದಲ್ಲಿ ಆ ಲೇಖನದ ವಿಶ್ಲೇಷಣೆಗಿಳಿದು ವ್ಯಂಗ್ಯ ವಿಡಂಬನೆ ಮೂಲಕ ಆ ಲೇಖನದ ಬಿಸಿಯನ್ನು ತಗ್ಗಿಸಲು ಪ್ರಯತ್ನಿಸಲು ನಿಂತರು. ಲೇಖನವನ್ನು ಬರೆಯಲು ಷಣ್ಮುಖ ಅರ್ಮುಗಂ ಅವರೂ ಕೂಡ ಹಲವಾರು ಬಾರಿ ಒತ್ತಾಯಿಸಿದ್ದರೂ ಸಹ ಯಾವುದೇ ವಿಷಯ ನನ್ನೊಳಗೆ ಕುದ್ದು ಖೋವ ಆಗದೆ ಬರಹ ರೂಪಕ್ಕಿಳಿಯಲಾಗದು ಎಂಬ ಕನ್ನಡದ ಅತ್ಯುತ್ಕೃಷ್ಹ ಸಾಹಿತಿ ಭೈರಪ್ಪನವರ ಮಾತಿನಂತೆ ಆ ವಿಷಯ ನನ್ನೊಳಗೆ ಹರಳುಗಟ್ಟಲು ಬಿಟ್ಟಿದ್ದೆ. ಪುರೋಹಿತಶಾಹಿ ಎಂದರೇನು ಎನ್ನುವುದನ್ನು ನಾನಿಲ್ಲಿ ವಿವರಿಸಲು ಹೊರಟಿಲ್ಲ. ಅಂತಹ ಯಾವ ವ್ಯವಸ್ಥೆಯೂ ಇಲ್ಲವೆಂದು ಈಗಾಗಲೆ CSLC ತಂಡ ಧೃಢಪಡಿಸಿದೆ. ಆದರೆ, ಜಾತಿ ವ್ಯವಸ್ಥೆಯ ಬಗ್ಗೆ ಪದೇ ಪದೇ ಪ್ರಶ್ನೆಗಳು ಏಳುತ್ತಿರುತ್ತವೆ. ಜಾತಿ ಇಲ್ಲವೆ? ಪದ್ದತಿ ಇಲ್ಲವೆ? ವ್ಯವಸ್ಥೆ, ಶ್ರೇಣಿ ಇಲ್ಲವೆ? ಎಂಬ ಪ್ರಶ್ನೆಗಳು ಏಳುವುದು ಸಾಮಾನ್ಯ.

ಈ ಸಂಶೋಧನಾ ತಂಡದ ಪ್ರಕಾರ ಹೇಳುವುದಾದರೆ, ಭಾರತೀಯ ಸಮಾಜವು ವ್ಯವಸ್ಥಿತವಾಗಿ ಯೂರೋಪಿಯನ್ನರು ಹೇಳುವಂತೆ ಇರಲಿಲ್ಲ. ಯೂರೋಪಿಯನ್ನರು ಅವರ ಕನ್ನಡಕದಲ್ಲಿ ಭಾರತೀಯ ಸಮಾಜವನ್ನು ನೋಡಿ ಅವರ ಸಮಾಜಕ್ಕೆ ಸಮೀಕರಿಸಿಕೊಂಡು ಅನರ್ಥೈಸಿ ಕಥೆಗಳನ್ನು ಹೆಣೆದರು. ಆ ಕಥೆಗಳನ್ನೇ ‘ವಾಸ್ತವ ಸತ್ಯ’ ವೆಂದು ನಂಬಿಕೊಂಡ ನಮ್ಮ ಮೂರ್ಖಶಿಖಾಮಣಿಗಳು ಈಗ ಕೂಗಾಟ ಅರಚಾಟ, ಹಾರಾಟ ಓರಾಟಗಳಲ್ಲಿ ತೊಡಗಿದ್ದಾರೆ. ಹೀಗೆ ಭಾರತದ ಕುರಿತ ಯುರೋಪಿಯನ್ನರ ಚಿತ್ರಣ ಮತ್ತು ಅವುಗಳನ್ನೇ ಸತ್ಯವೆಂದು ನಂಬಿ ಆ ನಕಲುಗಳನ್ನೇ ಪುನರುತ್ಪಾದಿಸುತ್ತಿರುವ ಚಿಂತನೆಗಳ ಮಿತಿಯನ್ನು, ವಿಫಲತೆಯನ್ನು ಎತ್ತಿ ತೋರಿಸುವ ಮೂಲಕ ವಾಸ್ತವವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವ ಹೊಸ ಸಾಧ್ಯತೆಗಳನ್ನು ಈ ಸಂಶೋಧನಾ ತಂಡ ಶೋಧಿಸುತ್ತಿದೆ. ಅದರಲ್ಲಿ ಬಹುತೇಕ ಯಶಸ್ಸನ್ನೂ ಕಂಡಿದೆ. ಆದರೆ ಇದನ್ನೆಲ್ಲಾ ಹೇಳ ಹೊರಟರೆ ಈ ಎಡಬಿಡಂಗಿಗಳಿಗೆ ತಮ್ಮ ಮೂಲಕ್ಕೆ ಪೆಟ್ಟು ಬಿದ್ದು ಹೊಟ್ಟೆಹೊರೆಯುವಿಕೆ ನಿಂತು ಹೋಗುತ್ತದೆಂಬ ಭಯದಿಂದ ಶತಾಯಗತಾಯ ಅದನ್ನು ವಿರೋಧಿಸುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿ ರಾಜಕೀಯ ಒತ್ತಡ ತಂದು ಆ ಕೇಂದ್ರವನ್ನು ಮುಚ್ಚಿಸಿದ್ದೂ ಅದಕ್ಕಾಗಿ ಖುಷಿ ಪಟ್ಟಿದ್ದೂ ಆಯ್ತು.

ಜಾತಿ, ಶ್ರೇಣಿಕರಣ, ಪುರೋಹಿತಶಾಹಿ ಪರಿಕಲ್ಪನೆಗಳಲ್ಲಿನ ಸಮಸ್ಯೆಗಳನ್ನು ವಿವರಿಸಲು ತಮ್ಮ ಸಂಶೋಧನಾ ಭಾಷೆ ಮತ್ತು ಗ್ರಾಂಥಿಕ ಶಬ್ಧಗಳು ಮತ್ತು ಪಠ್ಯ ಪುಸ್ತಕ ಮಾದರಿ ಶಬ್ಧಗಳ ಮೂಲಕ ವಿವರಿಸಲು ಸಂಶೋಧಕರು ತೊಡಗುವುದು ಸಾಮಾನ್ಯರಾದ ನಮಗೆ ಅರ್ಥವಾಗುವುದು ಕಷ್ಟವಾಗುತ್ತದೆ. ಇದೇನೋ ಸಂಶೋಧಕರಿಗೆ ಮಾತ್ರ ಸೀಮಿತ ಎಂದು ಸುಮ್ಮನಾಗುವ ಸಾಧ್ಯತೆಯೂ ಇದೆ.

ಮತ್ತಷ್ಟು ಓದು »