ವಿಷಯದ ವಿವರಗಳಿಗೆ ದಾಟಿರಿ

Archive for

19
ಆಕ್ಟೋ

ಇತಿಹಾಸದಿಂದ ಏನನ್ನೂ ಕಲಿಯಲು ಸಿದ್ಧರಾಗಿದ್ದಲ್ಲಿ,ಮರುಕಳಿಸುವ ಇತಿಹಾಸವನ್ನೇ ನೋಡಬೇಕಾಗುತ್ತದೆ

 – ಮಯೂರಲಕ್ಷ್ಮಿ

ಇತಿಹಾಸಜಾರ್ಜ ಸಂತಾಯನ ಎನ್ನುವ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ ಇತಿಹಾಸವನ್ನು ಕುರಿತು ತನ್ನ ಅಭಿಪ್ರಾಯವನ್ನು ಹೀಗೆ ತಿಳಿಸಿದ್ದಾನೆ.

ಒಂದು ದೇಶದ ಸಂಸ್ಕೃತಿಯ ದ್ಯೋತಕ ಅದರ ಪರಂಪರೆ ಧ್ಯೇಯ ನಿಷ್ಠೆ ಮತ್ತು ಅದರ ಇತಿಹಾಸವನ್ನೂ ಅವಲಂಬಿಸಿದೆ.

ಉನ್ನತ ಸಂಸ್ಕೃತಿಯನ್ನು ಹೊಂದಿದ ದೇಶಗಳು ಸುಭಿಕ್ಷವಾಗುವುದು ತನ್ನಲ್ಲಿ ಅಂತರ್ಗತವಾಗಿರುವ ಐತಿಹಾಸಿಕ ಮೌಲ್ಯಗಳ ಜಾಗೃತಿಯಿಂದ ಮಾತ್ರ.

ತಮ್ಮ ಅಸಾಧಾರಣ ಇಚ್ಛಾಶಕ್ತಿಯಿಂದ ಅಪರಿಮಿತ ಸಂಕಲ್ಪಶಕ್ತಿಯಿಂದ ಇತಿಹಾಸವನ್ನೇ ನಿರ್ಮಿಸಿದವರ ಸಂಖ್ಯೆ ಅತ್ಯಾಧಿಕ. ಇಂತಹ ಇತಿಹಾಸದ ಅರಿವು ಶಿಕ್ಷಣದಿಂದ ಮಾತ್ರ ಸಾಧ್ಯವೇ? ಹಾಗಿದ್ದಲ್ಲಿ ಇತಿಹಾಸವನ್ನು ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕಡ್ಡಾಯವಾಗಿ ಇತಿಹಾಸ ಇರಬೇಕೋ ಅಥವಾ ಐಚ್ಛಿಕವಾಗಿ ಕಲಿಯಬೇಕೋ ಎನ್ನುವ ಪ್ರಶ್ನೆ ಮೂಡುವುದು.

ಒಂದು ವ್ಯವಸ್ಥೆಯಲ್ಲಿ ಸಾಗುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಯ ಇತಿಮಿತಿಗಳನ್ನರಿತು ಅವಲೋಕಿಸಿದಾಗ ನಮ್ಮ ಮುಂದಿನ ದೇಶದ ರೂವಾರಿಗಳಾದ ಇಂದಿನ ಯುವಶಕ್ತಿಗೆ ಇತಿಹಾಸವನ್ನೂ ಇತಿಹಾಸದಿಂದ ನಾವು ಕಲಿತಿರುವ ಮತ್ತು ಕಲಿಯಬೇಕಾಗಿರುವುದನ್ನೂ ಅರಿಯಬೇಕಾದ ಇತಿಹಾಸ ಪ್ರಜ್ಞೆ ಇದೆಯೇ? ಅಥವಾ ಜಾಗೃತವಾಗಿಲ್ಲವೇ? ನಮ್ಮ ತರುಣ ಪೀಳಿಗೆಯನ್ನು ಗತವೈಭವ ಎನ್ನುವ ನಮ್ಮ ಇತಿಹಾಸದತ್ತ ಸಂಪರ್ಕಿಸುವಲ್ಲಿ ನಾವು ಸೋಲುತ್ತಿದ್ದೇವೆಯೇ?

ಮತ್ತಷ್ಟು ಓದು »