ವಿಷಯದ ವಿವರಗಳಿಗೆ ದಾಟಿರಿ

Archive for

6
ಜನ

ನಾನ್ ವೆಜ್ ತಿನ್ನುವ ಬಗ್ಗೆ ಒಂದು ವಿಶ್ಲೇಷಣೆ

– ವಿಕ್ರಂ ಪತ್ತಾರ್

ತಂದೂರಿ ಚಿಕನ್ಮನುಷ್ಯನು ಕೆಲವೊಂದು ಅನವಶ್ಯಕ ಬಂಧನಗಳಿಗೆ ಧರ್ಮದ ಹೆಸರಿನಲ್ಲಿ ಸಿಲುಕುತ್ತಾನೆ.ಧರ್ಮದ ತಾತ್ಪರ್ಯವನ್ನಾಗಲೀ ಅಥವಾ ತತ್ವಗಳ ಮರ್ಮವನ್ನಾಗಲೀ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಒದ್ದಾಡುತ್ತಾನೆ ಅಲ್ಲದೇ ಕೆಲವೊಮ್ಮೆ ಇಂಥ ಸಂಗತಿಗಳೇ ವ್ಯರ್ಥ ಗುದ್ದಾಟಕ್ಕೆ ಈಡು ಮಾಡುವದಲ್ಲದೇ ಸೂಕ್ತ ತೀರ್ಮಾನಕ್ಕೆ ಬರುವಲ್ಲಿ ಹೆಣಗುತ್ತಾನೆ.ಅಂಥವುಗಳಲ್ಲಿ ಈ ನಾನ್ ವೆಜ್ ತಿನ್ನುವದು ಕೂಡ ಒಂದು.

ಮನುಷ್ಯನ ಅಂತಃಕರಣ ಏನಾದರೂ ಹಿಂಸಾತ್ಮಕ ಸನ್ನಿವೇಶವನ್ನು ನೋಡಿದಾಗ ಮರುಗುತ್ತದೆ. ನೀವು ಪರಿಪೂರ್ಣ ಅಹಿಂಸೆಯನ್ನಾಚರಿಸಿದರೆ ಬದುಕುವದಕ್ಕಾಗುವದಿಲ್ಲ.ನಿಮಗೆ ಅರಿವಿಲ್ಲದೇ ಅನೇಕ ಸೂಕ್ಷ್ಮಜೀವಿಗಳ ನಾಶಕ್ಕೆ ನಾವು ಕಾರಣವಾಗುತ್ತೇವೆ.ಕೃಷಿಯಲ್ಲಿ ಭೂಮಿಯನ್ನು ಊಳುವಾಗ ಅನೇಕ ಜೀವಿಗಳ ಸಾವಿಗೆ ಕಾರಣವಾಗುತ್ತೇವೆ.ಅದಕ್ಕಾಗಿಯೇ ಪ್ರಾರಂಭದಲ್ಲಿ ಜೈನ ಧರ್ಮವು ಕೃಷಿಯನ್ನು ಅಹಿಂಸೆಯ ಹೆಸರಿನಲ್ಲಿ ನಿಷೇಧಿಸಿತ್ತು.ಪ್ರಾಣಿಗಳಿಗೆ ಜೀವವಿದೆ,ಭಾವನೆಗಳಿವೆ ಎಂಬುದು ಎಷ್ಟು ಸತ್ಯವೋ ಸಸ್ಯಗಳಿಗೆ ಜೀವ ಮತ್ತು ಭಾವನೆಗಳಿವೆ ಎಂಬುದು ಅಷ್ಟೇ ಸತ್ಯ.ನೀವು ಹಿಂಸೆಯೆಂದು ಭಾವಿಸಿದರೆ ಸಸ್ಯಗಳನ್ನು ಆಹಾರವಾಗಿ ಬಳಸುವದನ್ನು ಬಿಡಲೇಬೇಕಾಗುತ್ತದೆ,ಕೃಷಿಯನ್ನು ನಿಷೇಧಿಸಬೇಕಾಗುತ್ತದೆ. ಮಹಾಭಾರತದಲ್ಲಿ ಒಂದು ಸಸ್ಯವನ್ನು ಕಡಿದರೆ ನೂರು ಮಕ್ಕಳನ್ನು ಕೊಂದ ಪಾಪ ಬರುತ್ತದೆ ಎಂಬ ಭಾವನೆಯಿತ್ತು.ಆದರೆ ಅದೇ ಮಹಾಭಾರತದಲ್ಲಿ ಸೈನ್ಯದಲ್ಲಿ ರಥಗಳು, ಮನೆಯಲ್ಲಿ ಕಟ್ಟಿಗೆಯ ಉಪಕರಣಗಳನ್ನು ಹೇಗೆ ಮಾಡುತ್ತಿದ್ದರು? ಮರಗಳನ್ನು ಕಡಿಯುವದರಿಂದಲೇ ಅಲ್ಲವೇ ? ಹಾಗಾದರೆ ಬಡಗಿಗಳೆಲ್ಲರೂ ಪಾಪಿಗಳಾ?

ಮತ್ತಷ್ಟು ಓದು »