ವಿಷಯದ ವಿವರಗಳಿಗೆ ದಾಟಿರಿ

Archive for

15
ಮಾರ್ಚ್

ಮಾಧ್ಯಮಗಳ ಟಿ.ಆರ್.ಪಿ ದಾಹಕ್ಕೆ ಬಲಿಯಾದಳೇ ಸುಹಾನಾ ಸೈಯದ್ ?

– ಸುರೇಶ್ ಮುಗಬಾಳ್

ಬಹಳಷ್ಟು ಮಂದಿಗೆ ‘ಸುಹಾನಾ ಸೈಯದ್’ ಎಂಬ ಸಂಗೀತ ಪ್ರತಿಭೆಯ ಪರಿಚಯವೇ ಇರಲಿಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರದ ಯಾವುದೋ ಮೂಲೆಯಲ್ಲಿದ್ದ ಸುಹಾನಾ, ತಾನು ಹಾಡಿದ ಒಂದೇ ಒಂದು ಹಾಡಿನಿಂದ ಇಡೀ ದೇಶದಲ್ಲಿ ಮನೆಮಾತಾಗಿಬಿಟ್ಟಳು. ಅವಳ ಆ ಹಾಡಿನಲ್ಲೇನಿದೆ ಅಂತಹ ವಿಶೇಷತೆ ? ಸಂಗೀತ ಕಲಿತ ಯಾರು ಬೇಕಾದರೂ ಹಾಡಬಲ್ಲರು, ಎಷ್ಟೋ ಸಂಗೀತ ಪ್ರತಿಭೆಗಳು ತಾವು ವಾಸವಿರುವ ಮನೆಯ ಪಕ್ಕದ ಕೇರಿಗೂ ಪರಿಚಯವಿರುವುದಿಲ್ಲ, ಅಂತಹುದರಲ್ಲಿ ಸುಹಾನಾ ಹೇಗೆ ಇಷ್ಟು ಪ್ರಚಾರ ಪಡೆದುಕೊಂಡಳು? ಕಾರಣಗಳಿಷ್ಟೇ; ಅವಳು ಶ್ರೀನಿವಾಸನ ಹಾಡು ಹಾಡಿದಳು, ಅವಳು ಹಿಜಾಬ್ ಧರಿಸಿದ್ದಳು, ಅವಳು ಒಬ್ಬ ಮಹಿಳೆಯಾಗಿದ್ದಳು, ಅವಳು ಸುಂದರ ವದನ ಹೊಂದಿದ್ದಳು ಇದೆಲ್ಲದಕ್ಕಿಂತ ಮುಖ್ಯವಾಗಿ ಅವಳು ಮುಸ್ಲಿಂ ಧರ್ಮೀಯಳಾಗಿದ್ದಳು.

ಮತ್ತಷ್ಟು ಓದು »