ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೩
– ಮು. ಅ. ಶ್ರೀರಂಗ, ಬೆಂಗಳೂರು
ಭಾನುವಾರ ಬೆಳಗ್ಗೆ ಪೀರಾಯರು ಎಂದಿನಂತೆ ವಾಯುವಿಹಾರ ಮುಗಿಸಿಕೊಂಡು ಬಂದು, ಸ್ನಾನ ಮುಗಿಸಿ ತಿಂಡಿ ತಿನ್ನಲು ಹೊರಡಬೇಕು ಆ ವೇಳೆಗೆ ಮೊಬೈಲ್ ರಿಂಗಾಯಿತು. Raju Vasishtha calling ಎಂದು ಮೊಬೈಲ್ ಸ್ಕ್ರೀನ್ ಮೇಲೆ ಮೂಡಿ ಬಂದ ಪದಗಳನ್ನು ನೋಡಿ ಇವತ್ತು ಬರುತ್ತೇನೆ ಎಂದು ಹೇಳಲು ಫೋನ್ ಮಾಡಿರಬೇಕು ಎಂದು ಕೊಂಡು ಕಾಲ್ ರಿಸೀವ್ ಮಾಡಿದರು. ‘ಹಲೋ ಪೀರಾವ್ ಸಾರಿ ಕಣಯ್ಯಾ. ಇವತ್ತು ನಾನು ಬರಕ್ಕೆ ಆಗ್ತಿಲ್ಲ. ಅರ್ಜೆಂಟ್ ಆಗಿ ಡೆಲ್ಲಿಗೆ ಹೋಗಬೇಕಾಗಿದೆ. ಈಗ ಏರ್ ಪೋರ್ಟ್ಗೆ ಆಫೀಸ್ ಕಾರ್ ನಲ್ಲಿ ಹೋಗ್ತಾಯಿದೀನಿ. ನಿನಗೆ ನಮ್ಮೂರು ಬೇಸರವಾದರೆ ಬೆಂಗಳೂರಿಗೆ ಹೊರಡು. ನಾನು ಬೆಂಗಳೂರಿಗೆ ಬಂದ ಮೇಲೆ ಫೋನ್ ಮಾಡ್ತೀನಿ. ಈಗ ಇನ್ನೂ ಒಂದಿಬ್ಬರಿಗೆ ಫೋನ್ ಮಾಡಬೇಕು. see you’ ಎಂದು ಒಂದೇ ಉಸಿರಲ್ಲಿ ಹೇಳಿ ಮುಗಿಸಿದ. ಕಾಲ್ ಕಟ್ ಆಯ್ತು. ಮತ್ತಷ್ಟು ಓದು