ವಿಷಯದ ವಿವರಗಳಿಗೆ ದಾಟಿರಿ

Archive for

16
ಮಾರ್ಚ್

ಉತ್ತರಕಾಂಡದೊಳಗೆ ಉಳಿದ ಒಂದಷ್ಟು ಪ್ರಶ್ನೆಗಳು.

– ನರೇಂದ್ರ ಎಸ್ ಗಂಗೊಳ್ಳಿ.

ಎಸ್ ಎಲ್ ಭೈರಪ್ಪನವರ ಬರಹಗಳನ್ನು ದೊಡ್ಡ ನೆಲೆಯಲ್ಲಿ ವಿಮರ್ಶಿಸುವಷ್ಟು ನಾನು ಓದಿಕೊಂಡವನಲ್ಲ. ಇಲ್ಲಿ ಉತ್ತರಕಾಂಡ ಓದಿದ ಬಳಿಕ ಓರ್ವ ಓದುಗನಾಗಿ ನನಗೆ ಅನ್ನಿಸಿದ್ದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಒಂದು ಪ್ರಯತ್ನವಿದು.

ನಿಜ ಉತ್ತರಕಾಂಡ ಓದಿದ ಬಳಿಕ ಒಂದು ದೊಡ್ಡದಾದ ನಿಟ್ಟುಸಿರು ಎಂತವರಿಗಾದರೂ ಹೊರಬಾರದಿರದು. ರಾಮಾಯಣದ ಕತೆ ತಿಳಿದಿಲ್ಲದವರಿಗೆ ಇಲ್ಲಿನ ವಿಷಯಗಳು ಬರೀ ಶಬ್ದಗಳಾಗಿಯಷ್ಟೇ ಉಳಿಯುವುದು ಸತ್ಯ. ಆದರೆ ರಾಮಾಯಣವನ್ನು ಅರಿತವರಿಗೆ ಇಲ್ಲಿನ ಸೀತೆಯ ದೃಷ್ಟಿಯಿಂದ ನೋಡಿದಂತಹ ರಾಮಾಯಣದ ದೃಷ್ಟಿಕೋನ ಹೊಸತೇಯಾದ ಅನುಭವವನ್ನು ನೀಡುವುದು ಅಷ್ಟೇ ಸತ್ಯ. ಭೈರಪ್ಪನವರ ಹಿಂದಿನ ಕಾದಂಬರಿ ಪರ್ವಕ್ಕೆ ಹೋಲಿಸಿದರೆ ಕೊಂಚ ನೀರಸ ಎನ್ನಿಸಿದರೂ ಇಡೀ ಕಾದಂಬರಿಯಲ್ಲಿ ಭೈರಪ್ಪನವರು ಕಟ್ಟಿಕೊಡುವ ಊರು, ರಾಜ್ಯ, ಹೊಲ, ದಂಡಕಾರಣ್ಯ, ಅಂತಪುರ, ದಾಸಿಯರು, ಪ್ರಕೃತಿ, ಸಂಬಂಧಗಳು, ಮಾತುಗಳು, ಧರ್ಮ, ಮಕ್ಕಳಾಟ ಹೀಗೆ ಎಲ್ಲದರ ಚಿತ್ರಣವೂ ಒಂದಕ್ಕಿಂತ ಒಂದು ಚೆಂದ ಎನ್ನಿಸುವಂತೆ ಮೂಡಿಬಂದಿದೆ. ಮತ್ತಷ್ಟು ಓದು »