ವಿಷಯದ ವಿವರಗಳಿಗೆ ದಾಟಿರಿ

Archive for

27
ಮೇ

ಕೈದಾಳ..!

– ರವಿಶಂಕರ್

ಹೊಯ್ಸಳರ ಕಾಲದ ಶಿಲ್ಪ ಕಲೆಗೆ ಪ್ರಸಿದ್ದವಾದ ಬೇಲೂರು, ಹಳೇಬೀಡು ಇವುಗಳ ಹೆಸರನ್ನು ಎಲ್ಲರೂ ಕೇಳೇ ಇರುತ್ತೀರಿ! ಅದರ ಶಿಲ್ಪಿ ಜಕಣಾಚಾರಿಯ ಹೆಸರನ್ನು ಕೇಳದೇ ಇರುವವರೂ ಕಡಿಮೆ ಎಂದೇನನ್ನ ಅನಿಸಿಕೆ! ಇದರ ಹೊರತಾಗಿ ಜಕಣಾಚಾರಿಯ ಹುಟ್ಟೂರಾದ “ಕೈದಾಳ”ದ ಬಗ್ಗೆ ಕೇಳಿರುವುದು/ತಿಳಿದಿರುವುದು ಕಡಿಮೆ ಎಂದು ನನ್ನ ಬಲವಾದ ನಂಬಿಕೆ ;)! ಪ್ರೂವ್ ಮೀ ರಾಂಗ್!

“ಕ್ರೀಡಾಪುರ” ಇದು ಕೈದಾಳದ ಮೊದಲ ಹೆಸರು! ಇಲ್ಲಿ ಜನಿಸಿದ ಜಕಣಾಚಾರಿ ಶಿಲ್ಪಕಲೆಯಲ್ಲಿ ಪಳಗಿ, ಸ್ಥಳೀಯ ಮುಖ್ಯಸ್ಥನಾದ ‘ನೃಪ ಹಾಯ’ ಎಂಬುವನಲ್ಲಿ ತನ್ನ ವೃತ್ತಿಜೀವನವನ್ನು ಶುರು ಮಾಡಿದಎಂದು ತಿಳಿದು ಬಂದಿದೆ! ವೃತ್ತಿ ಜೀವನದ ಮಹತ್ವಾಕಾಂಕ್ಷೆಯಿಂದ ಮದುವೆಯ ನಂತರ ಮನೆ ಬಿಟ್ಟ ಯುವಕನಾದ ಜಕಣಾಚಾರಿ, ನಾಡಿನ ಉದ್ದಗಲಕ್ಕೂ ತಿರುಗಿ ತನ್ನ ಅಸ್ತಿತ್ವ ಹಾಗೂ ಖ್ಯಾತಿಯನ್ನು ಗಳಿಸಿದ್ದು ಹೊಯ್ಸಳರ ನಾಡಿನಲ್ಲಿ. ಇದರ ಸಾಕ್ಷಿಗಳೇ ಬೇಲೂರು ಹಾಗೂ ಹಳೇಬೀಡಿನ ದೇವಾಲಯಗಳು! ಮತ್ತಷ್ಟು ಓದು »