ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ (ಭಾಗ-1)
– ತಾರನಾಥ ಸೋನ
ಲೆಫ್ಟಿನಂಟ್ ಮುಸ ಬಂಗುರಾ ಬಂಧಿಯಾಗಿದ್ದ ಗುಂಡಿ ತುಂಬಾ ಆಳವೇನೂ ಇರಲಿಲ್ಲ, ಕೇವಲ 2 ಮೀಟರ್ ಅಷ್ಟೇ. ಆದರೆ ಸುತ್ತಲು ಹರಡಿದ್ದ ಮಾನವ ತ್ಯಾಜ್ಯ, ಕೆಸರು ನರಕದರ್ಶನ ಮಾಡಿಸುತಿತ್ತು. ಅದಲ್ಲದೆ ಹಲ್ಲೆಯಿಂದ ದೇಹದಲ್ಲಿ ಅದ ಗಾಯಗಳು ಅಪಾರ ಹಿಂಸೆ ಉಂಟುಮಾಡುತ್ತಿದ್ದವು. ಮದ್ಯ ಮತ್ತು ಮಾದಕ ಪದಾರ್ಥ ಸೇವಿಸಿ ಕ್ರೂರವಾಗಿ ದಂಡಿಸುತ್ತಿದ್ದ ನರ ರಾಕ್ಷಸರ ಕೈಯಿಂದ ಹೊರಬಂದು ಬದುಕುವ ಸಾಧ್ಯತೆಯೂ ಇರಲಿಲ್ಲ. ”ಉಳಿದ ಬ್ರಿಟಿಷರನ್ನು ಅವರು ಬಿಟ್ಟುಬಿಡಬಹುದು, ಆದರೆ ನಾನು ಅವರಷ್ಟು ಮೌಲ್ಯಯುತವಾಗಿಲ್ಲ, ಸೇನೆಗೆ ನಿಷ್ಠನಾಗಿ ಸೇವೆ ಸಲ್ಲಿಸಿದಕ್ಕೆ ಬಂಡುಕೋರರಿಂದ ಸಿಕ್ಕ ಶಿಕ್ಷೆ ಇದು” ಎಂದು ಅವರ ಮನಸ್ಸು ಹೇಳುತ್ತಿತ್ತು. ಏಕೆಂದರೆ ಅವರು ಸಿಯಾರ್ ಲಿಯೋನ್ ಸೇನೆಯ ಸೈನಿಕ. ಮತ್ತಷ್ಟು ಓದು