ಅಂಕಿತಾರಾಣೆ – ಪಾನಿಪುರಿ ಪುರಾಣ…!
– ಉಮೇಶ ದೇಸಾಯಿ
ನೀವು ಪಾನಿಪೂರಿ ಪ್ರಿಯರೇ? ಹಾಗಿದ್ದರೆ ಇದನ್ನು ತಪ್ಪದೇ ಓದಿ…!
ಹೌದು ಇದೊಂಥರಾ ವಿಚಿತ್ರ ಟೈಟಲ್ಲು.ಹತ್ತು ನಿಮಿಷದ ತನ್ನ ಬೊಗಳೆಯಲ್ಲಿ ರಾಜಪುರೋಹಿತ್ ಎಂಬ ವ್ಯಕ್ತಿ ಸ್ವತಃ ಕೆಡುವುದಲ್ಲದೇ ತನ್ನ ಪಾರ್ಟಿ ಬಿಜೆಪಿಯ ವರ್ಚಸ್ಸನ್ನೂ ಹಾಳುಗೆಡವಿದ.ಅಂಕಿತಾಳ ವ್ಯಕ್ತಿತ್ವ ಮತ್ತು ಚಾರಿತ್ರ್ಯ ವಧೆ ಮಾಡುವ ಮಾತು ಆಡಿದ ರಾಜಪುರೋಹಿತ್ ಈಗ ಅವಳ ಕ್ಷಮೆ ಕೇಳಿದ್ದಾನೆ.
ನಮ್ಮಲ್ಲಿ ಒಂದು ಗಾದೆ ಇದೆ “ಗೋಡೆಯಲ್ಲಿರುವ ಮೊಳೆ ತಗೊಂಡು…ದಲ್ಲಿ ಚುಚ್ಚಿಕೊಂಡ” ಅಂತ.ಈ ಗಾದೆ ರಾಜಪುರೋಹಿತ ಸಾಹೇಬಗೆ ಅಕ್ಷರಶಃ ಅನ್ವಯವಾಗುತ್ತದೆ.
ಅಂಕಿತಾ ಮಾಡಿದ್ದು ಏನು.ತಾ ವಾಸಿಸುತ್ತಿರುವ ಬಿಲ್ಡಿಂಗಿನ ಹೊರಗೆ ಇರುವ ಪಾನಿಪುರಿ ಅಂಗಡಿಯವ ಹಾಡುಹಗಲಲ್ಲಿ ತನ್ನ ಗಾಡಿಯ ಕೆಳಗೆ ಶೆಲ್ಫನಲ್ಲಿಟ್ಟ ಜಗ್ನಲ್ಲಿ ಮೂತ್ರ ಉಯ್ಯುವುದನ್ನು ಅವಳ ಮೊಬೈಲಿನಲ್ಲಿ ಸೆರೆಹಿಡಿದಳು.ಪಾನಿಪುರಿ ಅದನ್ನು ತಿಂದು ಆಗಬಹುದಾದ ಅಪಾಯಗಳನ್ನು ಪುಷ್ಟಿಕರಿಸಲು ತಾ ತೆಗೆದ ವಿಡಿಯೋ ಸಹಾಯ ಆಗಬಹುದು ಇದು ಅವಳ ಹವಣಿಕೆ.ಅದೇ ಹಂಬಲದಲ್ಲಿ ಅವಳು ವಿಡಿಯೋ ನೆಟ್ನಲ್ಲಿ ಹರಿಯಬಿಟ್ಟಳು.
ಮತ್ತಷ್ಟು ಓದು 
ಗೆಳತಿ ನಿನ್ನದೇ ನೆನಪು…





