ವಿಷಯದ ವಿವರಗಳಿಗೆ ದಾಟಿರಿ

Archive for

8
ಮೇ

ಗೆಳತಿ ನಿನ್ನದೇ ನೆನಪು…

-ರವಿ ಮೂರ್ನಾಡು
ಈ ದಿನ ನಿನ್ನದೇ ನೆನಪು
ಹಗಲು ಸಾಯುವ ಹೊತ್ತು
ಕತ್ತೆಲೆಗೆ ಹೆದರಿ ಉರಿಯುವ ದೀಪಕೆ
ಮತ್ತೆ ಬಾ ಹಗಲೆಂದ ಕನಸು..!
ನೀ ನಡೆದ ದಾರಿಯಲಿ
ತಲೆದೂಗಿದ ಗಿಡಗಂಟಿಗಳು
ಮರವಾಗಿ ಆಗಸಕೆ ಬೆಳೆದ ಸೊಗಸು..!
7
ಮೇ

ಕಳ್ಳಹೊಳೆ ಮತ್ತು ಹೇಮಾವತಿ

– ಹಂಸಾನಂದಿ

ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ, ಹೊಳೆಯ ಪಾತ್ರದಲ್ಲಿ ಆಟವಾಡುತ್ತಿದ್ದ ಮಕ್ಕಳು, ದನ ಕರುಗಳೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದವಂತೆ. ಯಾವಾಗ ನೀರು ಬರುತ್ತೆ ಅನ್ನೋದು ಗೊತ್ತಾಗದೇ, ಕಳ್ಳನ ತರಹ ಜನ ಜಾನುವಾರನ್ನೆಲ್ಲ ನುಂಗಿಕೋತಾ ಇದ್ದಿದ್ದರಿಂದಲೇ ಇದು ಕಳ್ಳ ಹೊಳೆ ಅಂತ ಹೆಸರಾಗಿತ್ತಂತೆ. ಇವೆಲ್ಲ ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದ ವಿಷಯಗಳು.

ಮೂರನೇ ತರಗತಿಯಲ್ಲಿ ನಮಗೆ ಎರಡು ಪಠ್ಯ ಪುಸ್ತಕಗಳಿದ್ದವು – ಒಂದು ನಮ್ಮ ರಾಜ್ಯ ಅಂತ, ಮತ್ತೊಂದು ನಮ್ಮ ಜಿಲ್ಲೆ ಅಂತ. ನಮ್ಮ ಜಿಲ್ಲೆ ಅಂದರೆ ನೋಡುವ ಸ್ಥಳಗಳು ಬೇಲೂರು ಹಳೇಬೀಡು ಶ್ರವಣಬೆಳಗೊಳ; ಬೆಳೆಯೋ ಬೆಳೆಗಳು ರಾಗಿ ಆಲೂಗೆಡ್ಡೆ ಕಾಫಿ ಬೀಜ; ಕೈಗಾರಿಕೆ ಅಂದರೆ ಯಂತ್ರಭಾಗಗಳ ಕಾರ್ಖಾನೆ, ಕಾಫಿ ಬೀಜ ಸಂಸ್ಕರಣೆ ಅಂತ ನಾವು ಓದಿಕೊಂಡಿದ್ದೇ ಓದಿಕೊಂಡಿದ್ದು. ಅದರಲ್ಲಿ ಜಿಲ್ಲೆಯ ನದಿಗಳು ಅಂದರೆ ಕಾವೇರಿ ಹೇಮಾವತಿ ಮತ್ತೆ ಯಗಚಿ ಅಂತಲೂ ಇರ್ತಿತ್ತು. ನನ್ನ ಊರಿಗೆ ತೀರ ಹತ್ತಿರವಿದ್ದ ಯಗಚಿಯ ಹರಿವನ್ನ ನಾನು ನೋಡಿದ್ದೇ ಕಡಿಮೆ. ಊರಿನ ಪಶ್ಚಿಮದ ಹಾಲುಬಾಗಿಲು ಅನ್ನುವ ಕಡೆ ಯಗಚಿ ಹೊಳೆ ಪಕ್ಕದಲ್ಲಿ ಒಂದು ನೀರನ್ನು ಶುಚಿಮಾಡಿ, ಊರಿಗೆ ಸರಬರಾಜು ಮಾಡುವ ವ್ಯವಸ್ಥೆ ಇತ್ತು. ಕೆಲವೊಮ್ಮೆ ನಮ್ಮ ತರಗತಿಯ ಕೆಲವು ಹುಡುಗರು ಹಾಲುಬಾಗ್ಲಿನಲ್ಲಿ ಹೋಗಿ ಈಜಿ ಬಂದೆವು ಅಂತ ಹೇಳ್ತಿದ್ದಿದ್ದೂ ಉಂಟು.

ಮತ್ತಷ್ಟು ಓದು »

7
ಮೇ

ಕನಸ ಕಾಯುತ್ತಲೇ ಇರಬೇಕೆ?

ರೂಪ ಬೆಂಗಳೂರು

ಆ ಕ್ಷಣದ ಕಾಯುವಿಕೆಯಲ್ಲೂ ಎಷ್ಟೊಂದು ಸಂತಸವಿದೆ ಅನ್ನಿಸಿತು.

ಹೌದು , ಆವತ್ತು ಅಮ್ಮನ ಬಳಿಯಲ್ಲಿ ತನ್ನ ಅವನ ಪ್ರೀತಿಯ ಬಗ್ಗೆ ಹೇಳಿದ್ದೇ ಬಂತು, ಸಿಡುಕು ಮೋರೆ ಹೊತ್ತು ಅಮ್ಮ ಅಪ್ಪನ ಕಿವಿ ಕಚ್ಚಿ ಅಪ್ಪ ತನ್ನನ್ನ ದುರುದುರು ನೋಡಿ, ಸ್ವಲ್ಪ ಹೊತ್ತಿನಲ್ಲಿಯೇ ಕಿರುನಗೆ ನಕ್ಕು
“ಹೋಗಲಿ ಬಿಡು ಅವಳೇನು ಬೇರೆಯವರನ್ನ ಪ್ರೀತಿಸಲಿಲ್ಲವಲ್ಲ. ಅವನೂ ನಮ್ಮ ಜಾತೀನೆ, ಜೊತೆಗೆ ಒಳ್ಳೆ ಕೆಲಸದಲ್ಲಿ ಇದ್ದಾನೆ, ನಮ್ಮಕೆಲಸ ಹಗುರ ಮಾಡಿದಳು ಬಿಡು “ಎಂದು ನುಡಿದಾಗ ಸ್ವರ್ಗಕ್ಕೆ ಮೂರೇ ಗೇಣು
ಅತ್ತ ಅವನೂ ಫೋನ್ ಮಾಡಿದ್ದ
“ಶೀತಲ್ ನಮ್ಮ ಮನೆಯಲ್ಲೂ ಒಪ್ಪಿದರು ಕಣೇ, ಇನ್ನು ಮುಂದೇ ಬರೀ ಕನಸುಗಳ ಜಾತ್ರೇ, ಆ ಜಾತ್ರೆಯ ದೇವಿ ನೀನೆ, ನಿನ್ನ ಹೊತ್ತ ಪೂಜಾರಿ ನಾನೇ ಅಲ್ಲ್ವವೇನೇ?”
ಅಲ್ಲಿಯವರೆಗೆ ಇರದ ನಾಚಿಕೆ ದ್ವನಿಯಲ್ಲಿ ಬಂದುಬಿಟ್ಟಿತ್ತು
“ಹೂ ” ಎಂದಷ್ಟೇ ಉತ್ತರಿಸಿದ್ದೆ
“ಆಹಾಹ ಎಷ್ಟೊಂದು ನಾಚಿಕೆ ಬಂದು ಬಿಟ್ಟಿದೆ ನನ್ನರಗಿಳಿಗೆ” ಛೇಡಿಸಿದ್ದ
ಮಾತಾಡಿರಲಿಲ್ಲ.
ಕನಸಿನ ಕೋಟೆಯ ಬಾಗಿಲ ಕೀಲಿ ಕೊಟ್ಟಂತಾಗಿತ್ತು,
ಆ ಕೋಟೆಯಲ್ಲಿ ನಾನು ಅವನು , ಅವನು ಮತ್ತೆ ನಾನು , ಕೇವಲ ನಾವಿಬ್ಬರೇ ಮತ್ತಾರಿಗೂ ಪ್ರವೇಶವಿಲ್ಲ.
ಅಂದಿನಿಂದ ಇಬ್ಬರ ಫೋನುಗಳಿಗೂ ಬಿಡುವಿರಲಿಲ್ಲ
ಘಂಟಾನುಗಟ್ಟಲೆ ಮಾತನಾಡುತ್ತಾ ಹರಟುತಿದ್ದರೆ
ಹೊತ್ತು ಹೋಗಿದ್ದೆ ತಿಳಿಯುತ್ತಿರಲಿಲ್ಲ
ಕಣ್ಣುಗಳ ತುಂಬ ಅವನದೇ ಬಿಂಬ , ಹೊಂಗನಸುಗಳು, ಅಮಲಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಸವಿ ಸವಿ ಕ್ಷಣಗಳು ಸವಿ ಸವಿ ಕನವರಿಕೆಗಳು , ಮನಸು ಅವನ ಸ್ಪರ್ಷಕ್ಕೆ ಹಾತೊರೆಯತೊಡಗಿತ್ತು.  ಮೈ ಮನಗಳಲ್ಲಿ ನವ ಚೇತನ ತುಂಬಿದಂತಾಗುತ್ತಿತ್ತು.
ಎಷ್ಟೋ ರಾತ್ರಿ ಕನಸುಗಳಲ್ಲಿ ಏನೇನೋ ಆಗತೊಡಗಿ ಒಂದು ಕ್ಷಣ ಕಂಪನ, ಜೊತೆಗೇ ಆ ಸಂತಸವನ್ನು ಮನಸಾರೆ ಸವಿಯುತ್ತಿದ್ದೆ
ಯಾವಾಗಲಾದರೂ ಅವನು “ಸೌಮ್ಯ ಏನೇ ನಾನು ನಿನ್ನಕನಸಲ್ಲಿ ಬರ್ತೀನೇನೆ,”ಎಂದಾಗ ” ಹೂ” ಎನ್ನುತ್ತಿದ್ದೆನಾದರೂ “ಬಂದು ಏನು ಮಾಡ್ತೀನಿ ” ಎಂದು ನಗುತ್ತಾ ಕೇಳುತ್ತಿದ್ದಾಗ ಒಮ್ಮೆಲೇ ಗಾಭರಿಯಾಗಿ “ಏನಿಲ್ಲ ಹೀಗೆ ಬಂದು ಹೋಗ್ತೀರಾ ” ಎಂದಂದು ಮುಖ ಮುಚ್ಚಿಕೊಳ್ಳುತ್ತಿದ್ದೆ.  ಎಲ್ಲಿ ತನ್ನ ಭಾವನೆಗಳು ಅವನಿಗೆ ಗೊತ್ತಾಗುತ್ತದೆ ಎಂದು… ಮತ್ತಷ್ಟು ಓದು »
6
ಮೇ

ಹೊಳೆಯಲ್ಲಿ ಇಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?!!

– ರಾಘವೇಂದ್ರ ನಾವಡ ಕೆ ಎಸ್

  ಊಹೆ ನಿಜವಾಗುವ ಎಲ್ಲಾ ಲಕ್ಷಣಗಳೂ ಕ೦ಡುಬರುತ್ತಿವೆ! ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆ೦ದೋಲನ ಠುಸ್ಸಾಗುವ ಎಲ್ಲಾ ಸಾಧ್ಯತೆಗಳೂ ಇವೆ! ಇಲ್ಲಿ ನಾನೀಗ ಹೇಳ ಹೊರಟಿರುವುದು ಅಣ್ಣಾ ಹಜಾರೆಯವರ ಶಕ್ತಿ ಕು೦ದಿತೆ೦ದಲ್ಲ… ಅಥವಾ ಉತ್ತರ ಕುಮಾರನ ಪೌರುಷವನ್ನು ಅಣ್ಣಾ ಹಜಾರೆ ತೋರಿಸಿದರೆ೦ದಲ್ಲ! ಬದಲಾಗಿ ಹೇಗೆ ನಾವೇ ಆರಿಸಿ ಕಳುಹಿಸಿದ ನಮ್ಮ ಕಲ್ಯಾಣದ ಬಗ್ಗೆ ಯೋಚಿಸಬೇಕಾದ ನಾಯಕರು ತಮ್ಮನ್ನು ಹಾಗೂ ತಮ್ಮ ಗಳಿಕೆಯನ್ನು ರಕ್ಷಿಸಿಕೊಳ್ಳಲು ಮು೦ದಾಗಿರುವ ಬಗ್ಗೆ.. ಅದಕ್ಕಾಗಿ ತುಳಿದಿರುವ ಹಾದಿಗಳ ಬಗ್ಗೆ..!

ಮೊದಲನೆಯದಾಗಿ ಭಾರತದ ಯಾವ ರಾಜಕೀಯ ನಾಯಕನಿಗೂ ಲೋಕಪಾಲ ಮಸೂದೆಯ ಮ೦ಡನೆಯಾಗುವುದು ಬೇಕಿಲ್ಲ! ಆ ಮೂಲಕ ತಾವು ಬಟಾ ಬಯಲಿಗೆ ಬೀಳುವುದು ಇಷ್ಟವಿಲ್ಲ.. ತನ್ನ ಮಕ್ಕಳು ಮರಿ ಮೊಕ್ಕಳು ಅವರ… ಹೀಗೆ ಹತ್ತಾರು ತಲೆಮಾರುಗಳು ಆರಾಮಾಗಿ ಕುಳಿತು ತಿನ್ನಲೆ೦ದು ಮಾಡಿಕೊ೦ಡ ಆಸ್ತಿಯನ್ನು ಯಾರು ತಾನೇ ತನ್ನ ಜಮಾನಾದಲ್ಲೇ ಅದನ್ನು ಕಳೆದುಕೊಳ್ಳಲು ಇಷ್ಟ ಪಡುತ್ತಾನೆ? ಮು೦ದೆ ನಮ್ಮ ಅಪ್ಪ ನಮಗಾಗಿ ಏನನ್ನೂ ಮಾಡಿಟ್ಟಿಲ್ಲ! ಎ೦ಬ ಮಾತನ್ನು ಕೇಳಲು ಅವರು ಸಿಧ್ಧರಿಲ್ಲ! ನಾಯಕರ ಈ ಹಪಾಹಪಿಯೇ ಆದಷ್ಟೂ ಹಜಾರೆ ಹಾಗೂ ಅವರ ಟೀಮ್ ನ ದಿಕ್ಕು ತಪ್ಪಿಸುವತ್ತ ತನ್ನೆಲ್ಲಾ ಪಟ್ಟುಗಳನ್ನೂ ಬಳಸಿಕೊ೦ಡು ಆಖಾಡಕ್ಕೆ ಇಳಿದಿದೆ! ಮು೦ದೇನು? ಕಾದು ನೋಡಬೇಕು!!

ಮತ್ತಷ್ಟು ಓದು »

6
ಮೇ

ಅಮೇರಿಕಾ ಕಲಿಸಿದ ಪಾಠ…?

 ಅರೆಹೊಳೆ ಸದಾಶಿವ ರಾವ್

ಅಂತ:ಶಕ್ತಿ ಮತ್ತು ಅಂತರಿಕ ದೌರ್ಬಲ್ಯದ ಬಗ್ಗೆ ಒಂದು ಮಾತಿದೆ. ಅಂತ:ಶಕ್ತಿ ಲಾಭದಾಯಕವಾದರೆ, ಅಂತರಿಕ ದೌರ್ಬಲ್ಯ ಅಪಾಯಕಾರಿ. ವಿಶ್ವದ ಉಗ್ರರ ಪಟ್ಟಿಯಲ್ಲಿ ನಂ.೧ ನೆಯ ಸ್ಥಾನದಲ್ಲಿದ್ದವನು ಒಸಾಮಾ ಬಿನ್ ಲ್ಯಾಡೆನ್. ಅಮೇರಿಕಾ ಅವನನ್ನು ಹತ್ತುವರ್ಷಗಳ ಭೇಟೆಯ ನಂತರ ಕೊಂದು ಮುಗಿಸಿದೆ. ಗುಣಕ್ಕೆ ಮತ್ಸರವಿಲ್ಲದಂತೆ ಭಾವಿಸಿದರೆ, ಅಮೆರಿಕಾಕ್ಕೆ ಈ ವಿಷಯದಲ್ಲಿ ಹ್ಯಾಟ್ಸ್ ಆಫ್ ಹೇಳಲೇ ಬೇಕು.
ಹಾಗೇ ಸುಮ್ಮನೇ ಒಮ್ಮೆ ನಮ್ಮ ಪರಿಸ್ಥಿತಿಗೆ ಈ ಘಟನೆಯನ್ನು ಸಮೀಕರಿಸಿಕೊಳ್ಳೋಣ. ಭಾರತದ ಪವಿತ್ರ ಸಂಸತ್ತಿನ ಮೇಲೆ ಉಗ್ರ ಅಫ್ಜಲ್ ದಾಳಿ ಮಾಡಿದ ಮತ್ತು ಸಿಕ್ಕಿ ಬಿದ್ದ. ಮುಂಬೈ ತಾಜ್ ಹೋಟೆಲ್ ಮೇಲಿನ ದಾಳಿಯಲ್ಲಿ ಕಸಬ್ ಸಿಕ್ಕಿ ಬಿದ್ದ. ನಾವು, ಇಬ್ಬರನ್ನೂ ಕಟ Pಟೆಯಲ್ಲಿ ನಿಲ್ಲಿಸಿದೆವು. ಇಬ್ಬರಿಗೂ ಅವರ ಪರವಾಗಿ ವಾದ ಮಾಡಲೆಂದು, ಒಲ್ಲೆ ಒಲ್ಲೆನೆಂದರೂ ವಕೀಲರನ್ನು ಸರಕಾರಿ ಖರ್ಚಿನಲ್ಲಿ ಒದಗಿಸಿಕೊಟ್ಟೆವು. ವಾದ ವಿವಾದಗಳು ನಡೆದುವು. ಎಲ್ಲರೂ ನಿರೀಕ್ಷಿಸಿದ್ದಂತೆ, ನ್ಯಾಯಾಲಯ ನ್ಯಾಯ ನೀಡಿತು. ಜೊತೆಗಿದ್ದ ಕೆಲವರು ಆರೋಪ ಮುಕ್ತರಾದರೆ, ಈ ದಾಳಿಗಳ ರೂವಾರಿಗಳಾದ ಅಫ್ಜಲ್, ಕಸಬ್‌ರಿಗೆ ಮರಣದಂಡನೆಯನ್ನು ನ್ಯಾಯಾಲಯ ಘೋಷಿಸಿತು. ಈಗ ಕಸಬ್ ಕಾನೂನು ಸಮರ ಮುಂದುವರಿಸಿದ್ದರೆ, ಅಫ್ಜಲ್ ದಯಾ ಭಿಕ್ಷೆಯನ್ನುಕೇಳಿಕೊಂಡು, ಕೆಲವು ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ. ಅಫ್ಜಲ್‌ನ ಕಥೆ ಏನು ಎಂಬುದಕ್ಕೆ ಯಾವ ಸರಕಾರವೂ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ‘ರಾಜಕೀಯ’ ಲೆಕ್ಕಾಚಾರದಲ್ಲಿ ಸಿಗಬಹುದಾದ ಲಾಭಕ್ಕಾಗಿ ಕಾದು ಕುಳಿತಿದ್ದಾರೆ.
ಹಲವು ಸಾವಿಗೆ ಕಾರಣರಾದ ಉಗ್ರರಾದ ಅಫ್ಜಲ್ ಮತ್ತು ಕಸಬ್‌ರ ‘ರಕ್ಷಣೆ’ಗಾಗಿ ನಮ್ಮ ಸರಕಾರಗಳು ಕೋಟಿ ಕೋಟಿ ವ್ಯಯಿಸುತ್ತಿವೆ. ಮತ್ತೊಂದರ್ಥದಲ್ಲಿ ನಮ್ಮ ಮೇಲೆ, ನಮ್ಮ ಸ್ವಾಭಿಮಾನದ ಮೇಲೆ ಮತ್ತು ತೀರಾ ನಮ್ಮ ಮಾತ್ರಭೂಮಿಯ ಮೇಲೆ, ದಾಳಿಯ ಮೂಲಕ ಅಕ್ಷಮ್ಯ ಅಪರಾಧವನ್ನು ಮಾಡಿದ ಈ ಉಗ್ರರನ್ನು ನಾವು ‘ರಕ್ಷಿ’ಸುತ್ತಿದ್ದೇವೆ. ಮತ್ತಷ್ಟು ಓದು »

6
ಮೇ

ಬ್ಲಾಗು ಕದಿಯುವ ಪತ್ರಿಕೆಗಳಿವೆ ಎಚ್ಚರ…!

– ನಿಲುಮೆ

ಇಂತದ್ದೊಂದು ತಲೆಬರಹ ಕೊಡುವುದೇ ಅಷ್ಟು ಚಂದ ಕಾಣುತ್ತಿಲ್ಲ,ಆದರೇನು ಮಾಡುವುದು ನಡೆದ ವಿಷಯವನ್ನ ಹೇಳ ಹೊರಟಾಗ ಹೀಗೆ ಆಗುತ್ತದೆ. ಕಳೆದ ತಿಂಗಳ ೨೭ರಂದು ಅರೆಹೊಳೆ ಸದಾಶಿವ ರಾವ್ ಅವರ ’‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು’ ಲೇಖನ ಹಾಗೆ ೨೫ರಂದು ರಶ್ಮಿ ಕಾಸರಗೋಡು ಅವರ  ’‘ಎಂಡೋ ನಿಷೇಧಿಸಿ’ – ಶರದ್ ಪವಾರ್ ಗೊಂದು ಬಹಿರಂಗ ಪತ್ರ’ ಅನ್ನುವ  ಲೇಖನವನ್ನ ನಿಲುಮೆಯ ಓದುಗರೆಲ್ಲ ನೋಡಿಯೆ ಇರುತ್ತೀರಿ. ಕಳೆದ ೨೮ರಂದು ’ಕರಾವಳಿ’ಯ ಪತ್ರಿಕೆಯೊಂದು ಏಕಾಏಕಿ ಲೇಖಕ/ನಿಲುಮೆಯ ಅನುಮತಿಯಿಲ್ಲದೆ ಈ ಲೇಖನಗಳನ್ನ ಕದ್ದಿದ್ದು ಅಲ್ಲದೇ ಕಡೆ ಪಕ್ಷ ಕೃಪೆ ಅಂತಲೂ ಹಾಕದೇ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ’ಕರಾವಳಿ’ಯ ಜನರಿಗೆ ಹಂಚಿದೆ.(ಆ ಪತ್ರಿಕೆಯ ಹೆಸರಿಗೆ ನಮ್ಮಿಂದ ಸ್ವಲ್ಪವು ಧಕ್ಕೆ ಬಾರದಿರಲಿ ಅನ್ನುವ ಏಕೈಕ ಉದ್ದೇಶದಿಂದ ಆ ಪತ್ರಿಕೆಯ ಹೆಸರನ್ನ ನೇರವಾಗಿ ಬರೆಯುತ್ತಿಲ್ಲ).

ಮತ್ತಷ್ಟು ಓದು »

5
ಮೇ

ಒಸಾಮಾ – ಒಬಾಮಾ…!

ಡಾ.ಅಜಕ್ಕಳ ಗಿರೀಶ್ ಭಟ್

ಅಂತೂ ಅಮೆರಿಕ ಒಸಾಮಾನನ್ನು ಕೊಂದಿದೆ ಅನ್ನುವುದನ್ನು ಅದು ಅಧಿಕೃತವಾಗಿ ಘೋಷಿಸಿದೆ. ಹೀಗೆ ಕೊಲ್ಲುವುದು ಅಮೆರಿಕಕ್ಕೆ ಏನೂ ಕಷ್ಟದ ಸಂಗತಿಯಲ್ಲ. ಅದು ಅದನ್ನು ದಕ್ಕಿಸಿಕೊಳ್ಳಬಲ್ಲುದು. ಆದರೆ ಹಲವು ಪ್ರಶ್ನೆಗಳು ಎಲ್ಲರ ಮನಸ್ಸಲ್ಲೂ ಏಳುವುದು ಸಹಜ. ಕೆಲದಿನಗಳಾದ ನಂತರ ಆ ಪ್ರಶ್ನೆಗಳನ್ನು ಎಲ್ಲರೂ ಮರೆಯುತ್ತಾರೆ ಅನ್ನೋದು ಕೂಡ ನಮಗೆಲ್ಲ ಗೊತ್ತು.ನಾವು ಕೂಡ ಮರೀತೇವೆ.ಹಾಗೆ ಮರೆಯುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಮುಖ್ಯ.ಆದರೂ ಈಗ ಮನಸಲ್ಲಿ ಬಂದ ಆಲೋಚನೆಗಳಲ್ಲಿ ಕೆಲವನ್ನು ಮರುನೆನೆದುಕೊಳ್ಳುತ್ತೇನೆ.ಇವು ನನ್ನ ಮನಸಲ್ಲಿ ಮಾತ್ರ ಬಂದ ಪ್ರಶ್ನೆಗಳಲ್ಲವಾದ್ದರಿಂದ ಈ ಪ್ರಶ್ನೆಗಳ ಬಗ್ಗೆ ನಾನು ಯಾವುದೇ ಕಾಪಿರೈಟ್ ಕ್ಲೈಮ್ ಮಾಡುವುದಿಲ್ಲ!!!

ನೋಡಿ,ಇದು ಅನ್ಯಾಯವಲ್ಲವೇ? ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಕೊಲ್ಲುವುದು ನ್ಯಾಯವೇ?

ಆಧುನಿಕ ನ್ಯಾಯಶಾಸ್ತ್ರದಲ್ಲಿ ಎಲ್ಲಾದರೂ ವಿಚಾರಣೆಯಿಲ್ಲದೆ ಹೀಗೆ ಶಿಕ್ಷೆ ನೀಡುವುದನ್ನು ಸಮರ್ಥಿಸಲಾಗಿದೆಯೇ? ಲಾಡೆನ್ ಗೆ ಫೇರ್ ಟ್ರಯಲ್ ನೀಡಲಾಗಿಲ್ಲ. ಅವನನ್ನು ಯಾವ ಕೋರ್ಟಿನಲ್ಲಿ ವಿಚಾರಣೆ ಮಾಡಲಾಗಿದೆ? ತಾನು ಕೊಲೆ ಮಾಡಿದ್ದೇನೆ ಅಂತ ಒಬ್ಬ ವ್ಯಕ್ತಿ ಹೇಳಿದ ಕೂಡಲೇ ಯಾವ ಕೋರ್ಟು ಕೂಡ ವಿಚಾರಣೆಯಿಲ್ಲದೆ ಆ ವ್ಯಕ್ತಿಯನ್ನು ಗಲ್ಲಿಗೆ ಹಾಕುವುದಿಲ್ಲ. ಹಾಗಿರುವಾಗ ,ಅಮೆರಿಕವಿರಬಹುದು ಅಥವಾ ಅದರಪ್ಪನಿರಬಹುದು, ಕಾನೂನನ್ನು ಕೈಗೆ ತೆಗೆದುಕೊಳ್ಳುವುದೆಂದರೇನು? ಓಯ್!! ಅಮ್ನೆಸ್ಟಿ ಇಂಟರ್ ನ್ಯಾಷನಲ್ ಅನ್ನುವ ಸಂಸ್ಥೆಯವರೇ!!!ಎಲ್ಲಿದ್ದೀರಿ? ಒಸಾಮಾನ ಮಾನವ ಹಕ್ಕಿಗೆ ಬೆಲೆ ಇಲ್ಲವೇ???

ಮತ್ತಷ್ಟು ಓದು »

4
ಮೇ

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ

– ಚಾಮರಾಜ ಸವಡಿ

’ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಅಂದ ನನ್ನ ಪತ್ರಕರ್ತ ಮಿತ್ರನೊಬ್ಬ.

ಹಾಗಾದರೆ, ಬರಹಗಾರರೆಂದರೆ ಯಾರು? ಅಂದೆ.

ಅವನ ಉತ್ತರ ಕೇಳಿ ನನಗೆ ದಿಗ್ಭ್ರಮೆಯಾಯಿತು. ನಂತರ ಮರುಕ ಹುಟ್ಟಿತು. ಆತನ ಪ್ರಕಾರ, ಪತ್ರಿಕೆಗಳಲ್ಲಿ ಬರೆಯುವವರು ಮಾತ್ರ ಬರಹಗಾರರು. ಉಳಿದವರೆಲ್ಲ ತಮ್ಮ ತೆವಲಿಗೆ ಬರೆಯುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವಕ್ಕೆ ಮೌಲ್ಯವಿಲ್ಲ.

ಆತನ ಜೊತೆ ವಾದಿಸುವುದು ವ್ಯರ್ಥ ಅನಿಸಿ ಸುಮ್ಮನಾದೆ. ಆದರೆ, ಈ ವಿಷಯ ಪ್ರಸ್ತಾಪಿಸುವುದು ಉತ್ತಮ ಅನಿಸಿ ಇಲ್ಲಿ ಬರೆಯುತ್ತಿದ್ದೇನೆ.

ಹಿಂದೊಮ್ಮೆ ಇಂಥದೇ ವಿಷಯದ ಬಗ್ಗೆ ಓದಿದ್ದು ನೆನಪಾಯಿತು. ಟಿವಿ ದಾಂಗುಡಿಯಿಡುತ್ತಿದ್ದ ದಿನಗಳವು. ಟಿವಿ ತಾರೆಯರು ಸಿನಿಮಾ ತಾರೆಯರಂತೆ ಜನಪ್ರಿಯತೆ ಗಳಿಸುತ್ತಿದ್ದರು. ಆಗ ಕೆಲ ನಟ, ನಟಿಯರು ಮೇಲಿನ ಅಭಿಪ್ರಾಯವನ್ನೇ ಬಿಂಬಿಸುವಂಥ ಮಾತು ಹೇಳಿದ್ದರು: ಸಿನಿಮಾ ನಟನೆಯೇ ನಿಜವಾದ ನಟನೆ. ಟಿವಿ ನಟನೆಗೆ ಮೌಲ್ಯವಿಲ್ಲ.

ಮತ್ತಷ್ಟು ಓದು »

4
ಮೇ

ನಿಮಗೆ ದೇವರ ಅಸ್ಥಿತ್ವದಲ್ಲಿ ನಂಬಿಕೆ ಇದೆಯೇ?

– ಗೋವಿಂದ ರಾವ್

ವಿಜ್ಞಾನ ಮಾರ್ಗ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕತೆ ಮುಂತಾದ ವಿಷಯಗಳ ಕುರಿತು ನಾನು ಆಯೋಜಿಸುತ್ತಿದ್ದ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದವರು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆ ಇದು. ಅಂಥ ಸಂದರ್ಭಗಳಲ್ಲಿ ನಾನು ನೀಡುತ್ತಿದ್ದ ಸ್ಪಷ್ಟ ಉತ್ತರ ಇಂತಿರುತ್ತಿತ್ತು – ‘ಖಂಡಿತ ಇದೆ. ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕತೆ ಪರಸ್ಪರ ವೈರುಧ್ಯಗಳಲ್ಲ, ಪೂರಕಗಳು. ವೈಜ್ಞಾನಿಕತೆ ಕಂದಾಚರಗಳನ್ನೂ ಯಾಂತ್ರಿಕ ಮತೀಯ ಆಚರಣೆಗಳನ್ನೂ ವಿರೋಧಿಸುತ್ತದೆಯೇ ವಿನಾ ಪ್ರಾಮಾಣಿಕ ಸತ್ಯಾನ್ವೇಷಣೆಯನ್ನಲ್ಲ, ಪ್ರಾಮಾಣಿಕ ಸತ್ಯಾನ್ವೇಷಕರನ್ನಲ್ಲ. ವೈಜ್ಞಾನಿಕ ಮನೋಧರ್ಮದ ಪ್ರವರ್ತಕರು ಇಂದಿನ ‘ಸ್ವಘೋಷಿತ ಜಗದ್ಗುರುಗಳು’ ‘ಧರ್ಮ’ದ ಹೆಸರಿನಲ್ಲಿ ಪೋಷಿಸುತ್ತಿರುವ ಮೌಢ್ಯವನ್ನೂ ಕಂದಾಚರಣೆಗಳನ್ನೂ ಪ್ರದರ್ಶಿಸುತ್ತಿರುವ ‘ಪವಾಡ’ಗಳನ್ನೂ ವಿರೋಧಿಸುತ್ತಿದ್ದಾರೆಯೇ ವಿನಾ ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ, ಗೌತಮಬುದ್ಧನ, ಬಸವಣ್ಣನವರ ಆಧ್ಯಾತ್ಮಿಕ ಚಿಂತನೆಗಳನ್ನಲ್ಲ.’

ನಾನು ನಂಬಿರುವ ‘ದೇವರು’ ಯಾವುದು? (ಗಮನಿಸಿ: ಯಾರು? ಅಲ್ಲ). ಹಾಲಿ ಅಸ್ಥಿತ್ವದಲ್ಲಿ ಇರುವ ವಿಶ್ವ ಯಾವುದರಿಂದ ಮೂಡಿ ಬಂದಿತೋ ಅದೇ ನಾನು ನಂಬುವ ‘ದೇವರು’. ನಾನು ನೋಡದೇ ಇದ್ದರೂ ಇದೆಯೆಯೆಂದು ನಂಬಿರುವ ‘ದೇವರ’ ಕಿರು ಪರಿಚಯ ಈಗ ಮಾಡಿಕೊಡುತ್ತೇನೆ. ಈ ದೇವರ ವೈಜ್ಞಾನಿಕ ಹೆಸರು ‘ವಿಚಿತ್ರತೆ’. ‘ವೈಚಿತ್ರ್ಯ’ ಎಂದು ಕರೆದರೂ ಆದೀತು. ‘Singularity’ ಎಂಬ ಇಂಗ್ಲಿಷ್ ಪದದ ಭಾಷಾಂತರ ಇದು (ನೋಡಿ: ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು). ಈ ದೇವರನ್ನು ಆವಿಷ್ಕರಿಸಿದವರು ವಿಶ್ವವಿಜ್ಞಾನಿಗಳು (Cosmologists).

ಮತ್ತಷ್ಟು ಓದು »

3
ಮೇ

ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆಸಹಾಯ ಮಾಡಿ

-ನಾಗರಾಜ್
 
ಎಲ್ಲರಿಗೂ ನಮಸ್ಕಾರ,

ಇಂಡಿಯಾ ಸುಧಾರ್ ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು,
ಮಧುಗಿರಿ ಮತ್ತು ಕೋಲಾರ ಜಿಲ್ಲೆಯಲ್ಲಿ ಸುಮಾರು 60 ಸರ್ಕಾರಿ ಶಾಲೆಗಳಲ್ಲಿ ಸುಮಾರು
9000 ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಪೆನ್ನ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಇತ್ಯಾದಿ
ಸಾಮಾಗ್ರಿಗಳನ್ನು ಈ ಶೈಕ್ಷಣಿಕ ವರ್ಷದಲ್ಲಿ ನೀಡುತ್ತಿದೆ.

ಮತ್ತಷ್ಟು ಓದು »