ವಿಷಯದ ವಿವರಗಳಿಗೆ ದಾಟಿರಿ

Archive for

16
ಜನ

ಉದಾರತೆಗೊಂದು ಉದಾಹರಣೆ

– ಮಧು ಚಂದ್ರ ಎಚ್.ಬಿ , ಭದ್ರಾವತಿ

ಉದಾರತೆಗೊಂದು ಉದಾಹರಣೆ

ಉದಾರತೆಗೊಂದು ಉದಾಹರಣೆ

ವ್ಯಾಪಾರಿ ಮನೋಭಾವ ಇಂದಿನ ನಮ್ಮ ನಿಮ್ಮೆಲ್ಲರಲ್ಲಿ ಕಂಡುಬರುವ ಅತಿ ಪ್ರಮುಖ ಅಂಶ. ಏನಾದರೂ ಮಾಡಿ ಅವರಿಂದ ಅಥವಾ ಅದರಿಂದ ಹೆಚ್ಚು ಲಾಭ ಪಡೆಯಬೇಕು ಎನ್ನುವ ಮನೋಭಾವ ಇಂದು ಮನುಷ್ಯನ ವ್ಯಕ್ತಿತ್ವವನ್ನೇ ಮಾರಿ ಕೊಳ್ಳುವ ಹಾಗೆ ಮಾಡಿದೆ. ಇದರಿಂದ ಯೋಗ್ಯವಾದುದು ಸಹ ಅಯೋಗ್ಯವೆನಿಸಿಕೊಳ್ಳುತ್ತಿದೆ. ಹತ್ತಿಪ್ಪತ್ತು ವರ್ಷಗಳಿಂದ ಇಚೆ ಮಣ್ಣು, ನೀರು, ಗಾಳಿ ಮಾರಿ ಹಣ ಮಾಡಿಕೊಳ್ಳುವ ದಂಧೆ ಆರಂಭವಾಗಿ ಈಗ ವಿಷಮ ಪರಿಸ್ಥಿತಿಯಲ್ಲಿದೆ.ಇವೆಲ್ಲವೂ ಪ್ರಕೃತಿಯಲ್ಲಿ ಸಿಗುವ ಎಲ್ಲರ ಆಜನ್ಮ ಸಿದ್ಧ ಹಕ್ಕುಗಳು ಆದರು ಹಣ ಕೊಟ್ಟು ಪಡೆಯುವ ಪರಿಸ್ಥಿತಿಯೊದಗಿದೆ ನಮಗೆ. ಇದಕ್ಕೆ ಶಿಕ್ಷಣವೂ ಸಹ ಸೇರ್ಪಡೆಯಾಗಿದ್ದು ನಮ್ಮ ದೌರ್ಭಾಗ್ಯವೇ ಸರಿ. ಉತ್ತಮ ಶಿಕ್ಷಣ ಕೊಡುತ್ತೇವೆಂದು ಹೇಳಿ ಹಣ ಸುಲಿಗೆ ಮಾಡುವ ಶಿಕ್ಷಣ ಸಂಸ್ಥೆಗಳು ಅನೇಕ, ಆದರೆ ಅವರು ಕೊಡುವ ಗುಣಮಟ್ಟವು ಸಹ ಅಷ್ಟಕಷ್ಟೇ. ಅನಗತ್ಯವಾಗಿ ನೆರೆಯ ಶಿಕ್ಷಣ ಸಂಸ್ಥೆ ಒಂದು ರೂಪಾಯಿ ಹೆಚ್ಚಿಗೆ ಹಣ ಕೇಳುವುದು ಗೊತ್ತಾದರೆ ಮೊತ್ತೊಂದು ಸಂಸ್ಥೆ ಸಹ ಹೆಚ್ಚಿಗೆ ಹಣ ಕೇಳುತ್ತದೆ. ಕಡೆಗೆ ಉತ್ತಮ ನಾಗರಿಕರನ್ನು ಸೃಷ್ಟಿ ಮಾಡಬೇಕಾದ ಸಂಸ್ಥೆಗಳು ಸೃಷ್ಟಿ ಮಾಡುವುದು ಹೆಚ್ಚು ಹಣ ಕೀಳುವ ವ್ಯಾಪಾರಿ ಮನೋಭಾವದ ವೃತ್ತಿ ಪರರನ್ನೇ ಹೊರತು ಸಜ್ಜನರನ್ನು ಅಲ್ಲ. ಅದ್ದರಿಂದ ಎಲ್ಲರೂ ಉದಾರ ಮನೋಭಾವ ಬೆಳಸಿಕೊಳ್ಳುವ ಅವಶ್ಯಕತೆಯಿದೆ ಇಲ್ಲದಿದ್ದರೆ ಮಾನವ ಜನಾಂಗವೆಲ್ಲಾ ಪರಸ್ಪರ ಕಿತ್ತಾಡುವ ಸಮಯ ಈಗಾಗಲೇ ಬಂದಿದೆ. ಉದಾರ ಮನೋಭಾವಕ್ಕೆ ನಮ್ಮ ಹಿರಿಯರು ಮಾದರಿ ಎನ್ನುವುದಕ್ಕೆ ಒಂದು ನಿದರ್ಶನ ಇಲ್ಲಿದೆ.

ಹಿಂದೆ ಶೇಷಾದ್ರಿ ಅಯ್ಯರ್ ಅವರು ಮೈಸೂರಿನ ದಿವಾನರಾಗಿದ್ದ ಕಾಲ.

ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಒಮ್ಮೆ ಬ್ರಿಟೀಶ್ ರೆಸಿಡೆಂಟ್ ಲಿ ವಾರ್ನೆರ್ ಭೇಟಿ ಕೊಟ್ಟಿದ್ದ. ಅವನು ಅಲ್ಲಿ ನಡೆಯುತ್ತಿದ್ದ ತರಗತಿಗೆ ಭೇಟಿಕೊಟ್ಟು. ಅಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುತ್ತಿದ್ದ. ಹೀಗೆ ಅಲ್ಲಿದ್ದ ಒಬ್ಬ ಹುಡುಗನನ್ನು ಕುರಿತು

ಮತ್ತಷ್ಟು ಓದು »