ವಿಷಯದ ವಿವರಗಳಿಗೆ ದಾಟಿರಿ

Archive for

21
ಜನ

ತೆಲಿಯಲೇರು ರಾಮ ಭಕ್ತಿ ಮಾರ್ಗಮುನು

– ಹಂಸಾನಂದಿ

ತ್ಯಾಗರಾಜಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ.

ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು ‘ತೆಲಿಯಲೇರು ರಾಮ ಭಕ್ತಿಮಾರ್ಗಮುನು’ ಎಂಬ ಧೇನುಕ ರಾಗದ ರಚನೆ. ಈ ರಚನೆಗೆ ನಾನು ಮಾಡಿದ ಕನ್ನಡ ಅನುವಾದ ಇಲ್ಲಿದೆ.

ತಿಳಿಯಲಾರರು ಭಕ್ತಿಮಾರ್ಗವನ್ನು ||ತಿಳಿಯಲಾರರು ||

ತಿರೆಯೆಲ್ಲವ ತಿರುಗುತ್ತ ಕನ
-ವರಿಸುತಿಹರೆಲ್ಲ ರಾಮ || ತಿಳಿಯಲಾರರು ||

ಹಾಸಿಗೆಯಿಂದೆದ್ದು ಮುಳುಗು ಹಾಕಿ ಬೂದಿ
ಪೂಸಿ ತೋರಿಕೆಗೆ ಬೆರಳನೆಣಿಸಿ
ಕಾಸು ಗಳಿಕೆಯಲ್ಲೇ ತಮ್ಮ ಮನವನಿಡುತ
ಲೇಸು ತ್ಯಾಗರಾಜ ವಿನುತನ|| ತಿಳಿಯಲಾರರು ||

ಮತ್ತಷ್ಟು ಓದು »

21
ಜನ

ಮೋದಿ vs. ಕೇಜ್ರಿವಾಲ್ ; ನಾನೇಕೆ ಮೋದಿಯನ್ನು ಬೆಂಬಲಿಸುತ್ತೇನೆ?

ರಾಕೇಶ್ ಶೆಟ್ಟಿ

ಮೋದಿ Vs ಕೇಜ್ರಿವಾಲ್Politics is the last resort for the scoundrels” ಅಂದವನು George Bernard Shaw.ಆತನ ಮಾತಿಗೆ ಪೂರಕವಾಗಿಯೇ ನಮ್ಮ ದೇಶದ ಕೆಲವು ರಾಜಕಾರಣಿಗಳೂ ಮಾಡಿ ತೋರಿಸಿದ ಮೇಲೆ,ಚುನಾವಣೆ ಬಂತೆಂದರೆ ಮತ್ತೊಬ್ಬ ನವಪುಢಾರಿಯ ಜನನ ಅಂದುಕೊಳ್ಳುತ್ತ ನಮ್ಮ ಜನರು, ಅದರಲ್ಲೂ ಮುಖ್ಯವಾಗಿ ನಗರ ಕೇಂದ್ರಿಕೃತ ಮತದಾರರು ಈ ಚುನಾವಣೆ,ರಾಜಕೀಯಗಳಿಂದಲೇ ದೂರವುಳಿಯುತಿದ್ದರು.ರಾಜಕೀಯ ಅಂದರೆ ಗಲೀಜು ಅಂತೆಲ್ಲ ರೇಜಿಗೆ ಪಟ್ಟುಕೊಳ್ಳುವವರೇ ಹೆಚ್ಚಿದ್ದರು.

ಎಲ್ಲ ಕೆಟ್ಟದಕ್ಕೂ ಒಂದು ಅಂತ್ಯವಿದ್ದಂತೆ,ಒಳ್ಳೆಯದಕ್ಕೂ ಆರಂಭವಿರಬೇಕಲ್ಲವೇ? ಇತ್ತೀಚೆಗೆ ಮುಗಿದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯಕರ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ.ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ಎಲ್ಲರನ್ನು ಚಕಿತಗೊಳಿಸಿದ ಮತ್ತೊಂದು ಪ್ರಧಾನ ಅಂಶ, ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ‘ಆಪ್’ ಪಕ್ಷ ೨೮ ಸೀಟುಗಳನ್ನು ಗೆದ್ದು,ಕಡೆಗೆ ಕಾಂಗ್ರೆಸ್ಸ್ ಪಕ್ಷದ ಬಾಹ್ಯಬೆಂಬಲದಿಂದ ಸರ್ಕಾರವನ್ನು ರಚಿಸಿ ಮುಖ್ಯಮಂತ್ರಿ ಗದ್ದುಗೆಯೇರಿದ್ದು. ಎಲ್ಲಾ ರಾಜಕೀಯ ಪಕ್ಷಗಳು ಕಾಂಗ್ರೆಸ್ಸ್ ಹಾಕಿಕೊಟ್ಟ ಹಾದಿಯಲ್ಲೇ ಸಾಗಿ ರಾಜಕಾರಣ ಮಾಡುವಾಗ ಭಿನ್ನ ಹಾದಿಯಿಡಿದು  ‘ಆಪ್’ ಪಕ್ಷ ೨೮ ಸೀಟು ಗೆದ್ದಿದ್ದು ಸಾಮಾನ್ಯ ಸಂಗತಿಯೇನಲ್ಲ.

ಸಹಜವಾಗಿಯೇ ಮೀಡಿಯಾಗಳ ಹೊಸ ಡಾರ್ಲಿಂಗ್ ಆಗಿ ಕೇಜ್ರಿವಾಲ್ ಹೊರಹೊಮ್ಮಿದರು.ಅಲ್ಲಿಯವರೆಗೂ ಮೋದಿಯ ಎದುರಿಗೆ ಯಾರು,ಯಾರು ಅಂದುಕೊಳ್ಳುತಿದ್ದವರಿಗೆ ಎದುರಿಗೆ ನಿಲ್ಲಿಸಲು ಒಬ್ಬ ಸಿಕ್ಕಂತಾಗಿತ್ತು.ಆಗ ‘ಮೋದಿ vs ಕೇಜ್ರಿವಾಲ್’ ಅನ್ನುವ ಹೊಸ ರಾಗ ಶುರುವಿಟ್ಟುಕೊಂಡರು.

ಸತತ ೧೩ ವರ್ಷಗಳ ಕಾಲದಿಂದ ಮುಖ್ಯಮಂತ್ರಿಯಾಗಿದ್ದುಕೊಂಡು,೪ ನೇ ಬಾರಿಗೆ ಗೆದ್ದು,ಗದ್ದುಗೆ ಹಿಡಿದು ತನ್ನ ಅಭಿವೃದ್ಧಿ ಮಂತ್ರದಿಂದಲೇ ದೇಶದ ಗಮನ ಸೆಳೆದು ಇಂದು ‘ಪ್ರಧಾನಿ ಅಭ್ಯರ್ಥಿ’ಯಾಗಿ ನಿಂತ ನಾಯಕನೊಬ್ಬನ ಎದುರಿಗೆ ಒಂದು ವರ್ಷದ ಹಿಂದಷ್ಟೇ ‘ಅಣ್ಣಾ ಹಜಾರೆ’ಯವರ ಹೋರಾಟದ ಗರ್ಭ ಸೀಳಿ, ನಂಬಿದವರಿಗೆ ಮೋಸ ಮಾಡಿಕೊಂಡು ಜನಿಸಿದ ಆಪ್ ಪಕ್ಷದ ಕೇಜ್ರಿವಾಲ್ ಅವರನ್ನು ನಿಲ್ಲಿಸಿ ನೋಡುವುದೇ ಮೊದಲಿಗೆ ಹಾಸ್ಯಾಸ್ಪದವಾದದ್ದು ಎನಿಸುತ್ತದೆ.

ಮತ್ತಷ್ಟು ಓದು »