ವಿಷಯದ ವಿವರಗಳಿಗೆ ದಾಟಿರಿ

Archive for

27
ನವೆಂ

ಒಂದಿಡಿ ಜನಾಂಗಕ್ಕೆ ಕಂಟಕವಾದವರನ್ನು ವೈಭವೀಕರಿಸುವುದೇಕೆ?

– ಡ್ಯಾನಿ ಪಿರೇರಾ,ಹಳ್ಳಿಮೈಸೂರು

Frncis Xvierನ.16 ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ ‘ಫ್ರಾನ್ಸಿಸ್ ಕ್ಸೇವಿಯರ್ ಪಾರ್ಥಿವ ಶರೀರ ಪ್ರದರ್ಶನಕ್ಕೆ ಅಪಸ್ವರ’ ಎಂಬ ಶೀರ್ಷಿಕೆ ಅಡಿಯಲ್ಲಿ ಸಂತನೆಂದು ಹೇಳಲಾಗುವ ಪ್ರಾನ್ಸಿಸ್ ಕ್ಸೇವಿಯರ್‍ರ ಬಗ್ಗೆ ವರದಿಯಾಗಿತ್ತು. ಆತನ ಪಾರ್ಥಿವ ಶರೀರ ನ.22 ರಿಂದ ಜ.4 ರ ವರೆಗೆ ಸಾರ್ವಜನಿಕ ದರ್ಶನಕ್ಕಿಡಲಾಗುತ್ತಿದೆ.

ಈ ನಡುವೆ ಈ ವಿವಾದಿತ ಸಂತನ ವಿಚಾರದಲ್ಲಿ ಆತನು ನಡೆಸಿದ ಮತಾಂತರದ ಕ್ರೌರ್ಯ ಹಾಗೂ ಮಾರಣಹೋಮ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದೂ ಈತ ಒಬ್ಬ ಮಹಾನ್ ಸಂತ ಎಂದು ಆತನನ್ನು ವೈಭವೀಕರಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಭಾರತದ ಸಂತ ಪರಂಪರೆಗೂ ಪಾಶ್ಚತ್ಯ ಸಂತ ಪರಂಪರೆಗೂ ಅಜಗಜಾಂತರ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿ ಆತ ಯಾವುದೇ ಜಾತಿಗೆ ಸೇರಿರಲಿ ಆತ ಮಾಡಿದ ಮಾನವತೆಯ ಸೇವೆಯನ್ನು ಅತ್ಯಂತ ಕೃತಜ್ಞತೆಯನ್ನು ಸ್ಮರಿಸಿ, ಆತನಿಗೆ ಸಂತ ಪದವಿ ನೀಡುವುದು ಈ ನೆಲದ ಪರಂಪರೆ. ಆದರೆ ಪಾಶ್ಚತ್ಯ ಜಗತ್ತಿನ ಸಂತ ಪದವಿಯನ್ನೇರಲು ಇಂಥಹ ಮಾನದಂಡವೇನಿಲ್ಲ ಎನಿಸುತ್ತದೆ!  ಒಬ್ಬ ವ್ಯಕ್ತಿ ತನ್ನ ಮತದ ಹಿತಕ್ಕೆ ಪೂರಕವಾಗಿ ನಡೆದು, ಇತರ ಮತಗಳ ಅವಹೇಳನ ಗೈದು ಇತರ ಮತೀಯರ ಮೇಲೆ ಮರಣ ಮೃದಂಗ ಬಾರಿಸಿದರೆ ಆತ ಶ್ರೇಷ್ಠನೆಂದು ಪರಿಗಣಿತವಾಗುತ್ತದೆ ಎನ್ನುವುದಕ್ಕೆ ಕ್ಸೇವಿಯರ್ ಸಂತ ಪದವಿ ಅಲಂಕರಿಸಿದ್ದೇ ಸಾಕ್ಷಿ ಎನ್ನಬೇಕಾಗುತ್ತದೆ. ಇನ್ನೊಂದು ಮತದ ನಂಬಿಕೆಗಳ ವಿರುದ್ಧ ನಡೆದುಕೊಂಡಾಗಲೂ ಅವನನ್ನು ಆರಾಧಿಸುವ ಮನಸ್ಥಿತಿ ಏರ್ಪಟ್ಟರೆ ಅತನನ್ನು ಯಾವ ಅರ್ಥದಲ್ಲಿ ಸಂತ ಎನ್ನ ಬಹುದು ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಈ ಹಿನ್ನೆಲೆಯಲ್ಲಿ ಕ್ಸೇವಿಯರ್ ಒಬ್ಬ ಸಂತನೆಂದು ಕ್ರೈಸ್ತ ಸಮಾಜ ಒಪ್ಪಿಕೊಂಡರೂ ಮಾನವತೆಯ ನೆಲೆಗಟ್ಟಿನಲ್ಲಿ ಯೋಚಿಸುವ ಯಾವುದೇ ಜನಾಂಗ ಇದನ್ನು ಒಪ್ಪಲು ಸಾಧ್ಯವಾಗುವುದಿಲ್ಲ.
ಮತ್ತಷ್ಟು ಓದು »