ವಿಷಯದ ವಿವರಗಳಿಗೆ ದಾಟಿರಿ

Archive for

1
ಫೆಬ್ರ

ಭಾರತೀಯ ಸಂಸ್ಕೃತಿಯನ್ನು ವಿರೂಪಗೊಳಿಸುವ ಪಾಶ್ಚಾತ್ಯ ಚಿಂತನಾ ಮಾರ್ಗಗಳು

ಶಿವಕುಮಾರ ಮತ್ತು ಡಂಕಿನ್ ಝಳಕಿ

Swami Vivekanandaದಿನೇಶ್ ಅಮೀನ್ ಮಟ್ಟು ಅವರು ಪ್ರತಿಷ್ಠಿತ ಪತ್ರಿಕೆಯೊಂದಕ್ಕೆ ೨೦೧೨ರಲ್ಲಿ ಬರೆದ ವಿವೇಕಾನಂದರ ಕುರಿತ ಲೇಖನ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಈ ಲೇಖನದ ವಿರುದ್ಧ ಎದ್ದ ದನಿಗಳ ಕುರಿತು ತಮ್ಮ ಸಮರ್ಥನೆಯನ್ನು ಹೊಸೆಯುತ್ತಾ, ತಮ್ಮ ಫೇಸ್ಬುಕ್ ಪುಟದಲ್ಲಿ, ತಮ್ಮ ಲೇಖನ ಐತಿಹಾಸಿಕವಾಗಿ ಸರಿಯಾಗಿದೆ ಮತ್ತು ತಾವು ವಿವೇಕಾನಂದರ ಬಗ್ಗೆ ಪ್ರಕಟವಾಗಿರುವ ಸುಮಾರು 200 ಪುಸ್ತಕಗಳನ್ನು ಓದಿದ್ದಾಗಿ ಹೇಳಿಕೊಳ್ಳುತ್ತಾರೆ. ಅವರ ಪರವಾಗಿ ವಾದಿಸುತ್ತ ಮತ್ತೊಬ್ಬರು, ‘ರೋಗಿಷ್ಟ’ ಎನ್ನುವುದು ಬೈಗುಳವೇ ಅಲ್ಲ, ‘ಕಡಿಮೆ ಅಂಕ ಗಳಿಸುವವ’ ಎಂಬುದು ‘ಅವಮಾನದ’ ವಿಷಯವಲ್ಲ ಎಂದು ಹೇಳ ತೊಡಗಿದ್ದಾರೆ. ಈ ಹೊತ್ತಿನಲ್ಲಿ ಕೆಲವು ವಿಚಾರಗಳನ್ನು ಮತ್ತೊಮ್ಮೆ ಚರ್ಚೆಗೆತ್ತಿಕೊಳ್ಳುವುದು ಈ ಪುಟ್ಟ ಲೇಖನದ ಉದ್ದೇಶ.

ಮಟ್ಟುರವರ ವಿವೇಕಾನಂದರ ಕುರಿತ ಲೇಖನದ ಈ ಸಾಲುಗಳನ್ನು ನೋಡಿ: “ಸ್ವಾಮಿ ವಿವೇಕಾನಂದರು ದಡ್ಡ ವಿದ್ಯಾರ್ಥಿಯಾಗಿದ್ದರು. … ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು. ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. … ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. … ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ … ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. … ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. … (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ…. ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ.” ಇವು ಲೇಖನದ ವಾದದ ಕೆಲವೊಂದು ಝಲಕ್ ಅಷ್ಟೇ.

ಮತ್ತಷ್ಟು ಓದು »