ವಿಷಯದ ವಿವರಗಳಿಗೆ ದಾಟಿರಿ

Archive for

12
ಫೆಬ್ರ

ದೆಹಲಿ ಚುನಾವಣೆಯ ಫಲಿತಾಂಶ ಕುರಿತು ಫೇಸ್ಬುಕ್ಕಿನಲ್ಲಿ …

– ರಾಘವೇಂದ್ರ ಸುಬ್ರಹ್ಮಣ್ಯ

Bedi,Kejriwal,Makenನನ್ನ ಮಾತು ಬಹಳಷ್ಟು ಜನರಿಗೆ ಹಿಡಿಸಲಿಕ್ಕಿಲ್ಲ…ಆದರೂ ಹೇಳದೇ ವಿಧಿಯಿಲ್ಲ.

ಮೋದಿ ಎಲ್ಲಾದ್ರೂ ಹಿಂದುತ್ವದ ಬಗ್ಗೆ ಭಾಷಣ ಮಾಡಿದ್ದು ಕೇಳಿದ್ರಾ? ಮೋದಿ ‘ಘರ್ ವಾಪಸಿ ಮಾಡ್ಲೇಬೇಕು’ ಅಂತಾ ಅವಲತ್ತುಕೊಂಡಿದ್ದು ಒತ್ತು ಕೊಟ್ಟಿದ್ದು ನೋಡಿದ್ರಾ? ಮೋದಿ ಯಾವಾತ್ತಾದ್ರೂ ಇತ್ತೀಚೆಗೆ ‘ರಾಮ್ ಮಂದಿರ ಕಟ್ಟಿ ಮುಗಿಸ್ತೀನಿ’ ಅಂತಾ ಕೂಗಾಡಿದ್ದು ಕೇಳಿದ್ರಾ?

ಅವರು ತನ್ನ ಪಾಡಿಗೆ ಅಭಿವೃದ್ಧಿ, ಸ್ವಚ್ಚ ಭಾರತ, ರಸ್ತೆ ಸುರಕ್ಷತೆ, ಸಾಮರಸ್ಯ, ಮನ್ ಕಿ ಬಾತ್ ಅಂತಾ ದೇಶದ ಬೆಳವಣಿಗೆ ಬಗ್ಗೆ ಮಾತಾಡ್ತಾ ಇದ್ರೆ, ಉಳಿದವರು ಮರುಮತಾಂತರ, ಗೋಹತ್ಯಾ ನಿಷೇಧ, ರಾಮಮಂದಿರ, ಹತ್ತು ಮಕ್ಕಳನ್ನು ಹೆರೋದು ಇದ್ರಲ್ಲೇ ಮುಳುಗಿದ್ದಾರೆ. ಜನ ಅಲ್ಪಸಂಖ್ಯಾತರ ತುಷ್ಟೀಕರಣದ ವಿರುದ್ದ ಇದ್ದಾರೆ ಅಂದ್ರೆ ಅರ್ಥ ಹಿಂದುತ್ವದ ಅಜೆಂಡಾ ಪರ ಇದ್ದಾರೆ ಅಂತ ಅಲ್ಲ! ಬರ್ತಾ ಬರ್ತಾ ದೇಶ, ಅಭಿವೃದ್ಧಿ ಅನ್ನೋದೆಲ್ಲಾ ಮೋದಿಯೊಬ್ಬರ ಮಾತಷ್ಟೇ ಆಗಿ ಉಳೀತಿದೆ! ಉಳಿದವರೆಲ್ರೂ ಅದೇ ಹಳೇ ಹಿಂದುತ್ವಕ್ಕೆ ಹೊಸ ಟ್ಯೂನ್ ಹಾಕ್ಕೊಂಡು ಕುಣೀತೀದಾರೆ! ಜನ ತಮಗೆ ಯಾಕೆ ಓಟು ಹಾಕಿ ಗೆಲ್ಸಿದ್ದಾರೆ ಅನ್ನೋದನ್ನೂ ಅರ್ಥಮಾಡಿಕೊಳ್ಲದ ಇವರು ಬಹುಬೇಗ ತಮ್ಮ ಪತನವನ್ನು ತಾವೇ ಕಾಣ್ತಾರೆ ಅನ್ನೊಸೋಲ್ವಾ! ಮೋದಿ ಸರ್ಕಾರಕ್ಕೆ ಇವರೆಲ್ಲ ಬಗಲಮುಳ್ಳು.

ಮತ್ತಷ್ಟು ಓದು »