ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೩
– ವಿನಾಯಕ ಹಂಪಿಹೊಳಿ
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨
ದರ್ಶನಗಳಲ್ಲಿ ತರ್ಕ:
“ಭಗವಂತನಲ್ಲಿ ತನ್ನನ್ನು ಆರಾಧಿಸುವವರ ಮೇಲೆ ಪ್ರೀತಿ, ತನ್ನನ್ನು ಆರಾಧಿಸದವರ ಮೇಲೆ ಕ್ರೋಧ, ತನಗಿಷ್ಟ ಬಂದ ಹಾಗೆ ಮಾಡುವ ಸ್ವೇಚ್ಛೆ ಇವೆಲ್ಲವೂ ತುಂಬಿಕೊಂಡಿವೆ.” ಎಂಬ ಈ ಸೆಮೆಟಿಕ್ ರಿಲಿಜನ್ನಿನ ವಾಕ್ಯವನ್ನು ಭಾರತೀಯ ದಾರ್ಶನಿಕನೊಬ್ಬನಿಗೆ ಹೇಳಿ ನೋಡಿ. ಆಗ ಆತನ ಪ್ರತಿಕ್ರಿಯೆ ಹೇಗಿರುತ್ತದೆ? “ಛೇ! ಕೋಪ, ಆಸೆಗಳನ್ನು ಇಟ್ಟುಕೊಂಡವನು ಭಗವಂತ ಹೇಗಾದಾನು?” ಎಂದೇ ಪ್ರತಿಕ್ರಿಯೆ ನೀಡುತ್ತಾನಲ್ಲವೇ? ಕಾರಣ ನಮ್ಮ ಭಾರತೀಯ ದರ್ಶನಗಳ ತಳಹದಿಯೇ ಬೇರೆ. ದರ್ಶನಗಳಲ್ಲಿಯೂ ತರ್ಕಕ್ಕೆ ರಿಲಿಜನ್ನುಗಳಂತೆ ಪ್ರಥಮ ಪ್ರಾಶಸ್ತ್ಯವಿಲ್ಲ. ತರ್ಕದಿಂದ ಭಗವತ್ಪ್ರಾಪ್ತಿಯೂ ಇಲ್ಲ, ಮೋಕ್ಷವೂ ಇಲ್ಲ. ಆದರೆ “ಈ ಸಿದ್ಧಾಂತವೇ ಸತ್ಯ” ಎಂದು ಎದ್ದು ನಿಂತು ಒಬ್ಬ ಹೇಳಬೇಕಾದರೆ, ಆತ ಆ ತನ್ನ ಸಿದ್ಧಾಂತವನ್ನು ತರ್ಕಾಗ್ನಿಪರೀಕ್ಷೆಗೆ ದೂಡಿ ಪವಿತ್ರವಾಗಿ ಹೊರತರಬೇಕು. ರಿಲಿಜನ್ನುಗಳಂತೆ ಪುಸ್ತಕವೇ ಪರಮ ಸತ್ಯವಲ್ಲ ಈ ದರ್ಶನಗಳಲ್ಲಿ. ಅನುಭವವೇ ಪ್ರಧಾನ. “ವೇದಗಳು ಅಗ್ನಿ ತಣ್ಣಗಿದೆ ಎಂದು ಸಾವಿರ ಸಾರಿ ಹೇಳಿದರೂ ಅನುಭವವನ್ನೇ ಅನುಸರಿಸಬೇಕು” ಎಂದು ಶಂಕರರು ಹೇಳಿದ್ದಾರೆ. ಉಪನಿಷತ್ತುಗಳೂ ಕೂಡ “ಇಲ್ಲಿ ವೇದಗಳು ವೇದಗಳಾಗಿರುವದಿಲ್ಲ” ಎಂದು ಸಾರುತ್ತವೆ. ಅಂದರೆ ವೇದಕ್ಕಿಂತಲೂ ಅನುಭವಕ್ಕೇ ಪ್ರಥಮ ಪ್ರಾಶಸ್ತ್ಯ. ಸಹಸ್ರಾರು ಅನುಭವಿಗಳ ಅನುಭವದೊಂದಿಗೆ ತಾಳೆಯಾಗುವದರಿಂದಲೇ ವೇದ ಉಪನಿಷತ್ತು, ಗೀತೆಗಳಿಗೆ ನಮ್ಮಲ್ಲಿ ಹೆಚ್ಚು ಗೌರವ.
ಅನೇಕ ದರ್ಶನಗಳು ಅನೇಕ ತರ್ಕಗಳನ್ನನುಸರಿಸಿವೆ. ವೇದವನ್ನೊಪ್ಪದ ಬೌದ್ಧ ಮತ್ತು ಚಾರ್ವಾಕ ದರ್ಶನಗಳು ತಮ್ಮದೇ ತರ್ಕ ವ್ಯವಸ್ಥೆಯನ್ನು ಹಾಕಿಕೊಂಡಿವೆ. ವೇದಗಳನ್ನೊಪ್ಪುವ ಸಾಂಖ್ಯ, ಪೂರ್ವಮೀಮಾಂಸ ಮತ್ತು ವೇದಾಂತ ಮತಗಳೂ ಕೂಡ ವೇದ/ಉಪನಿಷತ್ತುಗಳಲ್ಲಿ ಬರುವ ತರ್ಕವನ್ನು ಆಧಾರವಾಗಿಟ್ಟುಕೊಂಡಿವೆ. ಇಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಮತ್ತು ದೇಶಾದ್ಯಂತ ಅನೇಕ ವಿದ್ವಜ್ಜನರು ಒಪ್ಪಿರುವ ಅದ್ವೈತ ವೇದಾಂತ ದರ್ಶನವನ್ನು ತೆಗೆದುಕೊಳ್ಳೋಣ. ಮುಖ್ಯವಾಗಿ ವೇದಾಂತಗಳಲ್ಲಿ ಕಾಣುವ ತರ್ಕ ಅತ್ಯಂತ ಜಟಿಲ. ಕಾರಣ ಉಪನಿಷತ್ತುಗಳು ಅನುಸರಿಸುವ ತರ್ಕ ರೋಮಾಂಚನಗೊಳಿಸುವಂಥದ್ದು. ಏಕೆಂದರೆ ಅದು ಮನುಷ್ಯನ ಮೂಲಭೂತ ನಂಬಿಕೆಗಳನ್ನೇ ಪ್ರಶ್ನಿಸುತ್ತದೆ. “ಆತ್ಮದ ವಿಷಯದಲ್ಲಿ, ಇದೆ ಎಂದು ಕೆಲವರು ಇಲ್ಲ ಎಂದು ಕೆಲವರು” ಎಂಬುದರೊಂದಿಗೆ ಆರಂಭವಾಗುವ ಕಠೋಪನಿಷತ್ತು, “ಆತ್ಮನು ಇದ್ದಾನೆ” ಎಂಬುದನ್ನು ತಾರ್ಕಿಕವಾಗಿ ಸಾಧಿಸಿ ಮುಕ್ತಾಯಗೊಳ್ಳುತ್ತದೆ. ಹಾಗೆಯೇ, ಶಂಕರರು “ಮನುಷ್ಯನಿಗೆ ಇಷ್ಟವಾದದ್ದನ್ನು ಪಡೆದುಕೊಳ್ಳುವದು ಮತ್ತು ಅನಿಷ್ಟವಾದದ್ದನ್ನು ಕಳೆದುಕೊಳ್ಳುವದು ಸ್ವಾಭಾವಿಕವಾಗಿದೆ. ಈ ಇಷ್ಟಪ್ರಾಪ್ತಿ-ಅನಿಷ್ಟಪರಿಹಾರವೆಂಬುದು ಜೀವಿಗಳ ಸ್ವಭಾವವು. ಉಪನಿಷತ್ತುಗಳ ಉದ್ದೇಶವೇ ಈ ಸ್ವಭಾವದ ಕಾರಣವನ್ನು ಅರಿಯುವದು” ಎಂದು ಹೇಳಿದ್ದಾರೆ. ಹೀಗೆ ಮನುಷ್ಯನ ಮೂಲ ನಂಬಿಕೆಯನ್ನೇ ತರ್ಕಕ್ಕೆ ಒಡ್ಡುವಲ್ಲಿ ಉಪನಿಷತ್ತುಗಳು ತೋರಿದ ಧೈರ್ಯ ಯಾವ ರಿಲಿಜನ್ನುಗಳಲ್ಲೂ ಕಂಡು ಬಂದಿಲ್ಲ.
ಈಶಾನ್ಯ ಭಾರತದೆಡೆಗೂ ಕ್ಯಾಮೆರಾ ತಿರುಗಿಸಿ ಮಾಧ್ಯಮಗಳೇ
– ವಿದ್ಯಾ ಕಾಶೀಕರ
ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಮುದುವರಿಯುತ್ತಿರುವ ದೇಶದಲ್ಲಿ ಭಾರತ ಒಂದು.ಐತಿಹಾಸಿಕ,ಸಾಂಸ್ಕೃತಿಕ,ಪರಂಪರೆ ಮತ್ತು ಉದಾರ ವ್ಯಕ್ತಿತ್ವಕ್ಕಾಗಿ ಈ ದೇಶ ಯಾವಗಲೂ ಬೇರೆ ದೇಶಗಳಿಂದ ಗೌರವ ಪಡೆದಿದೆ.ವಿಶ್ವಕ್ಕೆ ಶಾಂತಿ,ಸಹಬಾಳ್ವೆಪ್ರಜಾಪ್ರಭುತ್ವವನ್ನು ಅಪ್ಪಿಕೊಂಡು ಬಾಳುತ್ತಿರುವ ಈ ದೇಶವನ್ನು ಎಷ್ಟೆಲ್ಲಾ ಆಕ್ರಮಣ, ದೌರ್ಜನ್ಯಗಳು ನಡೆದರೂ ಮತ್ತೆ ವಿಶ್ವದಲ್ಲಿ ತನ್ನ ಛಾಪನ್ನುಮೂಡಿಸಿದೆ.ಶೋಚನೀಯ ಸಂಗತಿಯೆಂದರೆ, ಯಾವ ಕಾರಣಕ್ಕಾಗಿ ನಾವು ಗೌರವಿಸುವಿಸಲ್ಪಡುತ್ತಿದ್ದೇವೋ ಅದನ್ನು ತೊರೆದು,ಬೇರೊಂದು ಸಂಸ್ಕೃತಿಯೆಡೆಗೆ ಆಕರ್ಷಿತರಾಗಿ ಅಂಧಾನುಕರಣೆ ಮಾಡುವುದಲ್ಲದೇ, ನಮ್ಮ ಮೂಲವನ್ನೇ ಅವಹೇಳನ ಮಾಡುವ ಸ್ಥಿತಿಗೆ ಈಗಿನ ಯುವ ಜನಾಂಗ ತಲುಪಿರುವುದು. ನಮ್ಮ ಜನರ ಭಕ್ತಿಯು ಕೇವಲ ಮಂದಿರ-ಗುಡಿಗಳಲ್ಲಿ ಪ್ರಾರ್ಥಿಸುವಾಗ ಮಾತ್ರ ಉದ್ಭವವಾಗುತ್ತದೆ. ಅಲ್ಲಿಂದ ಹೊರಬಂದ ಮರುಕ್ಷಣದ ಸನ್ನಿವೇಶವೇ ಬೇರೆ.ನೈಜಭಕ್ತಿಯು,ನನ್ನ ದೇಶ, ನನ್ನ ನಾಡು-ಭಾಷೆ, ವಿಷಯಗಳಲ್ಲಿ ವ್ಯಕ್ತವಾಗಬೇಕು. ಮಂದಿರಗಳಲ್ಲಿ ಶುದ್ಧನಾಗಿ ಸೇವೆ ಸಲ್ಲಿಸಿ ,ಮಂದಿರದ ಸುತ್ತ ಹೊಲಸು ಮಾಡಿದರೆ ಮೆಚ್ಚನಾ ಪರಮಾತ್ಮನು, ಹಣ್ಣಿನ ಸಿಪ್ಪೆಯನ್ನೋ, ಇನ್ನಾವುದೋ ತ್ಯಾಜ್ಯವನ್ನೋ ಬೀದಿಯಲ್ಲಿ ಚೆಲ್ಲಿದರೆ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದರೆ, ಅದು ಅನಾಗರೀಕತೆಯ ಪರಮಾವಧಿಯಲ್ಲದೆ ಮತ್ತೇನು?
ಒಮ್ಮಿಂದೊಮ್ಮೆಲೇ ಸಮಾಜದಲ್ಲಿ ಇಂತಹ ಆಚರಣೆಗಳು ಕಾಲಿಡುವುದಿಲ್ಲ. ಇದಕ್ಕೆ, ಮಾಧ್ಯಮಗಳ ಕೊಡುಗೆ ಅಪಾರವಾಗಿದೆ. ಮನೋರಂಜನೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ಟಿ.ಆರ್.ಪಿ. ಹೆಚ್ಚಿಸಲು ವಿಧ-ವಿಧದ ಕಾರ್ಯಕ್ರಮಗಳನ್ನು ನೀಡುತ್ತವೆ. ಹಲವು ಮೂಲಭೂತ ಸಮಸ್ಯೆಗಳು ನಮ್ಮ ಸುತ್ತಲೂ ತಲೆ ಎತ್ತಿ ನರ್ತಿಸುತ್ತಿದ್ದರೂ, ಅದನ್ನು ಮೂಲೆಗುಂಪಾಗಿಸಿ,ಮಹಿಳಾ ಸ್ವಾತಂತ್ರದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದವನ್ನು ,ಜಾತಿ,ಧರ್ಮಗಳನ್ನ ನಿಂದಿಸಿದವರನ್ನು ಪುಕ್ಕಟೆ ಪ್ರಚಾರ ಕೊಟ್ಟು, ಬುದ್ದಿಜೀವಿಗಳೆಂದು ನಾಮಕರಣ ಮಾಡಿ ಜನಪ್ರಿಯ ವ್ಯಕ್ತಿಯನ್ನಾಗಿ ಮಾಡುತ್ತವೆ.ಕಟ್ಟಡದ ಆಧಾರವೇ ಕುಸಿಯುತಿರುವಾಗ, ಬಣ್ಣ ಬಳಿದು ಚಂದವಾಗಿಸುವುದು ಸರಿಯೇ?”
ಮತ್ತಷ್ಟು ಓದು