ವಿಷಯದ ವಿವರಗಳಿಗೆ ದಾಟಿರಿ

Archive for

4
ಆಕ್ಟೋ

ಜೀವಪರರದ್ದು ಮಾತ್ರ ಜೀವವೇ ಸಾರ್?

– ಡ್ಯಾನಿ ಪಿರೇರಾ,ಹಳ್ಳಿಮೈಸೂರು

ಈ ‘ಬುದ್ಧಿಜೀವಿ’ ಎಂಬ ಪದದ ಉಗಮ ಹೇಗಾಯಿತು? ಯಾರನ್ನು ಬುದ್ಧಿಜೀವಿ ಎನ್ನುತ್ತಾರೆ? ಬುದ್ಧಿಜೀವಿ ಎನ್ನಲು ಇರಬೇಕಾದ ಮಾನದಂಡಗಳೇನು? ಬುದ್ಧಿಜೀವಿ ಎನ್ನುವವ ನಿಜಕ್ಕೂ ಬುದ್ಧಿವಂತನೇ? ಅಥವಾ ಹಾಗೆ ಭಾವಿಸಲು ಪೂರ್ವ ಷರತ್ತುಗಳಿವೆಯೇ? ಒಂದೊಮ್ಮೆ ಆತ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಮಾತಾಡಬಲ್ಲ ಸ್ಥಿತಪ್ರಜ್ಞನೇ? ಸತ್ಯವನ್ನು ನಿರ್ಭೀತಿಯಿಂದ ಹೇಳುವ ಸತ್ಯಸಂದನೇ?  ಯಾವುದೇ ಒಂದು ನಿರ್ಧಿಷ್ಟ ಸಿದ್ಧಾಂತಕ್ಕೆ ಅಂಟಿಕೊಳ್ಳದೇ ಸತ್ಯವನ್ನು ಮಾತ್ರ ಅಂಜಿಕೆ ಇಲ್ಲದೇ ಹೇಳುವ ನಿಷ್ಠೂರವಾದಿಯೇ?  ಎಂಬ ಪ್ರಶ್ನೆಗಳು ‘ಬುದ್ಧಿಜೀವಿ’ ಎಂದು  ಪದ ಕೇಳಿದಾಗಲೆಲ್ಲ ಮನಸ್ಸಲ್ಲಿ ಮೂಡುತ್ತದೆ. ಅದಕ್ಕೆ ಕಾರಣವಿದೆ.

ಇತ್ತೀಚಿನ ದಿನಗಳಲ್ಲಿ ಇಂಥ ಯಾವುದೇ ಮಾನದಂಡಗಳನ್ನಿಟ್ಟುಕೊಳ್ಳದೇ ಬುದ್ಧಿಜೀವಿಗಳಾಗುವ ಪ್ರಯತ್ನ ನಡೆಯುತ್ತಿರುವುದು ಹೆಚ್ಚಾಗುತ್ತಿದೆ.  ಅಂಥವರು ತಮ್ಮನ್ನು ತಾವು ಬುದ್ಧಿಜೀವಿ ಎಂದು ಹೇಳಿಕೊಳ್ಳದೆಯೂ ‘ಬುದ್ಧಿಜೀವಿ’ ಆಗಬಹುದೆಂದು ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ನಡೆದ ದಿನಗಳಿಂದ  ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ನಟ ಪ್ರಕಾಶ್ ರೈ ಯವರು ಅವರ ಮಾತುಗಳಿಂದ ನಿರೂಪಿಸುತ್ತಿದ್ದಾರೆಂದು ಭಾಸವಾಗುತ್ತಿದೆ.

ಭಾರತೀಯ ಸಮಾಜ ಬುದ್ಧಿಜೀವಿಯಾದವರು, ಪ್ರಗತಿಪರ ಎಂದೆನಿಸಿಕೊಳ್ಳುವವರು ಸಮಾಜದಲ್ಲಿ ವಿಚಾರಶೀಲನೂ, ನ್ಯಾಯಪರನೂ ಅಳೆದು ತೂಗಿ ಸತ್ಯವನ್ನಷ್ಟೇ ಹೇಳಬಲ್ಲ ನಿಷ್ಠೂರ ಭಾವದವನಾಗಿರಬೇಕೆಂದು ಅಪೇಕ್ಷೆ ಪಡುತ್ತದೆ. ಆದರೆ ಪ್ರಕಾಶ ರೈ ಯಂಥ ನಟರು ಮಾಡುತ್ತಿರುವುದೇನು? ಅವರು ಮಾತಾಡುತ್ತಿರುವುದೇನು? ಇವರು ಒಬ್ಬ ಪ್ರಸಿದ್ಧ ನಟನಾಗಿ ಯಾವುದೋ ಕಾಲಬಾಹ್ಯ ಸಿದ್ಧಾಂತಕ್ಕೆ  ಮನಸೋತು  ಎಲ್ಲಾ ವರ್ಗಗಳಲ್ಲೂ ಅವರ ಅಭಿಮಾನಿಗಳಿದ್ದಾರೆ ಎಂಬುದನ್ನು ಮರೆತು. ಎಡಪಂಥೀಯ ಪೂರ್ವಗ್ರಹ ವಿಚಾರ ವಿಮರ್ಶೆಗೆ ಜೋತು ಬಿದ್ದು ಅವರ ಅಭಿನಯವನ್ನು ಮೆಚ್ಚುವವರಿಗೆ ಅವರು ಆಪಥ್ಯರಾಗುತ್ತಿದ್ದಾರೆ ಎನಿಸುತ್ತಿದೆ.

ಈ ಪ್ರಶ್ನೆ ಯಾಕೆ ಮೂಡುತ್ತಿದೆ ಎಂದರೆ ಕೆಲವು ದಿನಗಳ ಹಿಂದೆ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆನಡೆಯಿತು. ಅದನ್ನು ಎಲ್ಲ ಪಕ್ಷಭೇದ ಮರೆತು ಖಂಡಿಸಿದ್ದೂ ಆಯಿತು. ಹತ್ಯೆಗೊಳಗಾದ ವ್ಯಕ್ತಿಯ ಬರವಣಿಗೆ ನಡೆ-ನುಡಿಯಿಂದ ಬೇಸತ್ತಿರುವ ಕೆಲವರು ಸ್ವಲ್ಪ ಅತಿ ಎನಿಸುವಷ್ಟು ಪ್ರತಿಕ್ರಿಯೆ ನೀಡಿದರೆ, ಅವರ ವಿರುದ್ಧದ ದನಿಯಾಗಿ ಆಕೆಯ ಧೈರ್ಯ-ಶೌರ್ಯವನ್ನು ಕೊಂಡಾಡುವ ಸಂಖ್ಯೆಯೂ ಸಾಕಷ್ಟಿತ್ತು. ಈ ನಡುವೆ ವಿಚಾರವಾದಿಗಳಿಂದ ತನಿಖೆ ನಡೆಯದೇ ತೀರ್ಪು ಹೊರಬಿತ್ತು.  ಕೊಂದವರು- ಸಂಘಪರಿವಾರದವರು. ಇರಲಿ, ಬುದ್ಧಿಜೀವಿಗಳ ಈ ನಡವಳಿಕೆ ಸೋಜಿಗವೇನಲ್ಲ. ಈ ಆಪಾದನೆಯ ಹಿಂದೆ ವಿಚಾರವಾದಿಗಳ, ಬುದ್ಧಿಜೀವಿಗಳ, ಜೀವಪರರ ಅಸ್ಥಿತ್ವದ ಪ್ರಶ್ನೆಯಿದೆ ಎಂಬುದು. ಆದರೆ ಇಲ್ಲಿ ಚಿತ್ರ ನಟ ಪ್ರಕಾಶ್ ರೈ ಯವರ ಸ್ಥಿತಿ ಹಾಗಲ್ಲ. ಅವರಿಗೆ ಎಲ್ಲಾ ವರ್ಗಗಳಲ್ಲೂ ಅವರ ಅಭಿನಯವನ್ನು ಆಸ್ವಾಧಿಸುವ ಅಭಿಮಾನಿಗಳಿದ್ದಾರೆ. ಹಾಗಾಗಿ ಅವರು ಬುದ್ಧಿಜೀವಿಯಾಗಬೇಕಿಲ್ಲ. ಆದರೂ ಹತ್ಯೆ ಖಂಡಿಸುವ ಬರದಲ್ಲಿ ಅವರು ಕರ್ನಾಟಕದಲ್ಲಿ ಏನಾಗುತ್ತಿದೆ? ಇದು ಸೈದ್ಧಾಂತಿಕ ದ್ವೇಷದಿಂದ ಬಲಪಂಥೀಯರು ಈ ಹತ್ಯೆಯ ಹಿಂದಿದ್ದಾರೆ ಎಂಬ ಷರಾ ಬರೆದೇಬಿಟ್ಟರು. ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆ ಸಹಜವಾಗಿತ್ತು. ಅವರು ಪ್ರಶ್ನೆಯನ್ನು ಕಾನೂನಾತ್ಮಕವಾಗಿ ಹೊಣೆ ಇರದ ದೇಶದ ಪ್ರಧಾನಿಯನ್ನು ಕೇಳಿದ್ದು ಪ್ರಶ್ನೆಯಲ್ಲಿ ಪ್ರಧಾನಿ ಇದಕ್ಕೆ ಉತ್ತರಿಸಬೇಕೆಂಬ ದಾರ್ಷ್ಟ್ಯವಿತ್ತು. ಹಾಗಾದರೆ ಸೈದ್ಧಾಂತಿಕ ಭಿನ್ನತೆ ಏನೇ ಇರಲಿ, ಹತ್ಯೆ ಮಾಡಿದವರು ಯಾರೆಂದು ಪತ್ತೆಮಾಡುವುದು ತನಿಖಾ ಸಂಸ್ಥೆಯೇ ಹೊರತು ಪರಸ್ಪರ ವಿರುದ್ಧವಾದ ಸಿದ್ಧಾಂತವಿರುವ ವ್ಯಕ್ತಿಗಳಲ್ಲ ಎನ್ನುವುದು ಈ ನಟನಿಗೆ ಗೊತ್ತಿಲ್ಲವೇ? ರೈ ಅವರನ್ನು ಜನರು ಒಪ್ಪಿರುವುದು ಅವರ ನಟನಾ ಪ್ರೌಢಿಮೆಯೇ ಅಥವಾ ಅವರ ಪೂರ್ವಗ್ರಹದಿಂದ ಕೂಡಿದ ಹಿಂದೂ ವಿರೋಧಿ ನೀತಿಯೇ?

ಮತ್ತಷ್ಟು ಓದು »