ದಾರಿ
-ಪ್ರೇಮಶೇಖರ
ಆ ದಾರಿ ತನ್ನನ್ನು ಊರೊಂದರೊಳಕ್ಕೆ ಕರೆದೊಯ್ಯುತ್ತದೆ ಎಂದವಳು ಊಹಿಸಿರಲೇ ಇಲ್ಲ. ಇದೂ ಒಂದು ದಾರಿ, ಒಂದಲ್ಲಾ ಒಂದು ದಾರಿ ಹಿಡಿದು ನಡೆಯಲೇಬೇಕಲ್ಲಾ ಅಂದುಕೊಂಡು ಈ ದಾರಿ ಹಿಡಿದು ಬಂದಿದ್ದಳು.
ಕೆಂಪುಮಣ್ಣಿನ ಹಾದಿ. ಇಕ್ಕೆಲಗಳಲ್ಲಿ ಹಚ್ಚಹಸಿರ ತಂಪಿನ ನಡುವೆ ಹಳ್ಳದಲ್ಲಿಳಿದು ದಿಣ್ಣೆಯೇರಿ ಬಳುಕಿ ಬಳುಕಿ ಸಾಗಿತ್ತು. ಕಾಲಿಟ್ಟಾಗ ಆಕರ್ಷಕ ಅನಿಸಿದ್ದೇನೋ ನಿಜ. ಆದರೆ ಎಷ್ಟು ಹೊತ್ತು ನಡೆದರೂ ಅದು ಮುಗಿಯುವುದೇ ಇಲ್ಲವೇನೋ ಅನ್ನುವಂತೆ ಕಂಡಾಗ ಆತಂಕಗೊಂಡಳು. ಅದರೊಟ್ಟಿಗೆ, ಒಂದು ನರಪಿಳ್ಳೆಯೂ ಎದುರಾಗದಾಗ ಎದೆಯಲ್ಲಿ ಭಯ ಬುಗ್ಗೆಯಾಗಿ ಉಕ್ಕತೊಡಗಿತು. ಇದು ನನಗೊಬ್ಬಳಿಗೇ ಮೀಸಲಾದ ದಾರಿಯೇನೋ ಎಂದವಳಿಗೆ ಅನುಮಾನ ಬರುವಷ್ಟರಲ್ಲಿ ದಾರಿ ಫಕ್ಕನೆ ಎಡಕ್ಕೆ ಹೊರಳಿತ್ತು. ಆಗ ಕಂಡಿತು ಆ ಊರು. ಅದನ್ನು ಕಾಣುತ್ತಿದ್ದಂತೇ ಅವಳು ಗಕ್ಕನೆ ನಿಂತುಬಿಟ್ಟಳು.
ಊರಿಗೆ ಹರದಾರಿ ದೂರವಿರುವಾಗಲೇ ಹೊಸಬರೆದುರು ಅಟ್ಟಹಾಸದಿಂದ ಎಗರಾಡುವ ನಾಯಿಗಳೊಂದೂ ಈ ಊರಲ್ಲಿಲ್ಲವಲ್ಲ! ಗ್ರಾಮಸಿಂಹಗಳಿಲ್ಲದ ಊರೂ ಉಂಟೇ? ಅವಳಿಗೆ ಅಚ್ಚರಿ. ಮೂಗಿನ ಮೇಲೆ ಬೆರಳಿಟ್ಟುಕೊಂಡು ನಾಲ್ಕು ಹೆಜ್ಜೆ ಸರಿಸಿದವಳು ಮತ್ತಷ್ಟು ಅಚ್ಚರಿಗೊಳಗಾದಳು. ಬೀದಿಯಲ್ಲಿ ಜನರೇ ಇಲ್ಲ! ಹೊತ್ತು ಮಾರುದ್ದ ಏರಿ ಬಿಸಿಲು ಚುರುಗುಟ್ಟುತ್ತಿದ್ದರೂ ಈ ಊರ ಜನರ ನಿದ್ದೆ ಇನ್ನೂ ಕಳೆದಿಲ್ಲವೇ? ಎಂಥಾ ಜನರಪ್ಪ! ಎಂಥಾ ಊರಪ್ಪ!
ಕುತೂಹಲದಿಂದ ಎದುರಾದ ಮೊದಲ ಮನೆಯತ್ತ ನೋಡಿದರೆ ಅದರ ಬಾಗಿಲು ತೆರೆದಿದೆ! ಹಾಗೇ ಮುಂದೆ ನೋಟ ಹೊರಳಿಸಿದರೆ ಎಲ್ಲ ಮನೆಗಳ ಬಾಗಿಲುಗಳೂ ತೆರೆದಿವೆ! ಇದೇನು ಸೋಜಿಗ ಎಂದುಕೊಳ್ಳುತ್ತಾ ಮೊದಲ ಮನೆಯ ಬಾಗಿಲು ಸಮೀಪಿಸಿದಳು. ಮೂರು ಮೆಟ್ಟಲುಗಳನ್ನು ಅನುಮಾನದಿಂದಲೇ ಏರಿದಳು. ಹೊಸ್ತಿಲಲ್ಲಿ ನಿಂತು ಒಳಗಿಣುಕಿದಳು.
ಕೋಲ್ಕತ್ತಾದಲ್ಲಿ ಕುವೆಂಪು
-ಪ್ರೊ. ಬಿ ಎ ವಿವೇಕ ರೈ
ಕನ್ನಡದ ಯುಗದ ಕವಿ ಕುವೆಂಪು (೨೯ ದಶಂಬರ ೧೯೦೪-೧೦ ನವಂಬರ ೧೯೯೪ ) ಅವರು ತಮ್ಮ ಜೀವಮಾನದಲ್ಲಿ ಕರ್ನಾಟಕದಿಂದ ಹೊರಗೆ ಪ್ರಯಾಣ ಮಾಡಿದ್ದು ಎರಡೇ ಬಾರಿ. ಮೊದಲನೆಯದು ೧೯೨೯ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ.ಅಲ್ಲಿ ಬೇಲೂರು ರಾಮಕೃಷ್ಣ ಮಠದಲ್ಲಿ ಸ್ವಾಮಿ ಶ್ರದ್ಧಾನಂದರಿಂದ ಮಂತ್ರ ದೀಕ್ಷೆ ಪಡೆದದ್ದು. ಎರಡನೆಯದು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಲು ಎಲ್ಲ ಆಪ್ತರ ಒತ್ತಾಯದ ಮೇಲೆ ದೆಹಲಿಗೆ ಹೋದದ್ದು ೧೯೬೮.ಅವರ ಕಲ್ಕತ್ತಾದ ಭೇಟಿಯ ವೇಳೆಗೆ ಅವರಿಗೆ ಸುಮಾರು ಇಪ್ಪತ್ತೈದು ವರ್ಷ ಪ್ರಾಯ.ಅದೇ ವರ್ಷ ಅವರು ಎಂ ಎ ಮುಗಿಸಿದ್ದು.ಕಲ್ಕತ್ತಾ ಸಂದರ್ಶನ ಮತ್ತು ರಾಮಕೃಷ್ಣ ಆಶ್ರಮದ ದರ್ಶನ ಕುವೆಂಪು ಬದುಕಿನ ಮೇಲೆ ಅಪಾರ ಪ್ರಭಾವವನ್ನು ಬೀರಿತು.ಅವರ ಸಾಹಿತ್ಯದ ದ್ರವ್ಯಗಳನ್ನು ರೂಪಿಸಿತು.
ಅಂತಹ ಕಲ್ಕತ್ತಾದಲ್ಲಿ ,ಅಂದರೆ ಈಗಿನ ಕೊಲ್ಕೊತ್ತಾದಲ್ಲಿ ‘ಕುವೆಂಪು’ ಬಗ್ಗೆ ಎರಡು ದಿನಗಳ ರಾಷ್ಟೀಯ ವಿಚಾರಸಂಕಿರಣ ಮೊನ್ನೆ ಮತ್ತು ನಿನ್ನೆ (ಸಪ್ಟಂಬರ ೧೦ ಮತ್ತು ೧೧ ) ನಡೆಯಿತು.ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ಜಂಟಿಯಾಗಿ ನಡೆಸಿದ ಈ ಮಹತ್ವದ ಸಂಕಿರಣಕ್ಕೆ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಸಂಸ್ಥೆ ಮತ್ತು ಕನ್ನಡ ವಿಶ್ವವಿದ್ಯಾಲಯ ಸಹಯೋಗ ಕೊಟ್ಟಿದ್ದವು.ವಿಚಾರಸಂಕಿರಣ ನಡೆದದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಲ್ಕತ್ತಾದ ಪ್ರಾದೇಶಿಕ ಕಚೇರಿಯಲ್ಲಿ .
“ಯೂನಿವರ್ಸಲ್ ಬ್ರದರ್ಹುಡ್” ಬರೀ ಬೂಟಾಟಿಕೆಯೇ ?
-ಸಾಗರ್ ಮೈಸೂರು
ಸ್ವಾಮೀ,
ಯಾಕೆ ಮುಗ್ಧ ಜನರ ತಲೆಯಲ್ಲಿ ವಿಷದ ಬೀಜ ಬಿತ್ತುತ್ತಿದ್ದೀರಿ? ನೀಮಗೂ ಭಯೋತ್ಪಾದಕರನ್ನು ಹುಟ್ಟು ಹಾಕುವ ಮುಲ್ಲಾ ಗಳಿಗೂ ಅಥವಾ ಭಾಷಾ ದುರಭಿಮಾನಿಗಳಿಗೂ ಏನು ವ್ಯತ್ಯಾಸ? ಸಾಮರಸ್ಯದಿಂದ ಬದುಕುವ ಬಗೆ ಹೇಗೆಂದು ತಿಳಿದಿದ್ದರೆ ಬರೆಯಿರಿ. ಇಲ್ಲಾಂದ್ರೆ ಸುಮ್ಮನಿರಿ. ನಿಮ್ಮನ್ತವರನ್ತು ಬರೆದು , ಬೆಂಕಿ ಹಚ್ಚಿ ತಣ್ಣಗೆ ಕುಳಿತು ಚಂದ ನೋಡುತ್ತಿರಿ. ಅಮಾಯಕರು ನಿಮ್ಮಿಂದ ಪ್ರೇರಿತರಾಗಿ ಯಾರದೋ ಮೈಮೇಲೆ ಬಿದ್ದು ಸಮಾಜದ ಶಾಂತಿ ಕದದುತ್ತಾರೆ ಅಥವಾ ಜೀವ ಬಿಡುತ್ತಾರೆ. ದುರಭಿಮಾನ, ಭಯೋತ್ಪಾದನೆ ಹುಟ್ಟುವುದು ಮೊದಲು ಮನಸ್ಸಿನಲ್ಲಿ. ಪ್ರೇರಿತರದವರು ಕೆಲವರು ಚಾಕು ಬಳಸುತ್ತಾರೆ, ಕೆಲವರು ಬಾಂಬು ಹಾಕುತ್ತಾರೆ, ಅವರವರ ಯೋಗ್ಯತೆಗೆ ತಕ್ಕಂತೆ. ನಿಮ್ಮಂಥವರು ಚಂದ ನೋಡುತ್ತೀರಿ.
“ಬೆಂಗಳೂರಿನ ಜುಟ್ಟು ಈಗಾಗಲೇ ರೆಡ್ಡಿಗಳ ಕೈಯ್ಯಿಗೆ ಕೊಟ್ಟಾಗಿದೆ” ಎಂದು ಮಹಾನ್ ಮೇಧಾವಿಯೊಬ್ಬರು (ಹಾಗೆಂದು ತಿಳಿದ) ಹೇಳಿದಾಗ ಅದ್ಯಾವನೋ ‘ವಿಷ್ಣು’ ಎಂಬುವವ ನೀಡಿದ್ದ ‘ಪ್ರತಿಕ್ರಿಯೆ’ ಅದು! ಹೌದಾ?! ಅದು ನಿಜಾನಾ? ನಮ್ಮ ಬೆಂಗಳೂರನ್ನ ನಿಜವಾಗಿಯೂ ‘ಅನ್ಯರು’, ‘ಕನ್ನಡೇತರರು’ ಆಳುತ್ತಿದ್ದಾರಾ ಎಂಬ ಪ್ರಶ್ನೆಯನ್ನ ನಮಗೆ ನಾವೇ ಹಾಕಿಕೊಂಡು serious ಆಗಿ ‘ಪರೀಕ್ಷಿಸಲು’ ಹೊರಟರೆ ಆ ‘ವಿಷ್ಣು’ ಎಂಬುವವನ ‘ಅಡ್ರಸ್ಸ್ ಹುಡುಕು’ವ ಮನಸ್ಸಾಗುತ್ತದೆ! ಅವನಿಗೊಂದು ವಿಶೇಷವಾದ ‘ದೊಣ್ಣೆ’ ರೆಡಿಮಾಡಿಸುವ ಕನಸು ಮೂಡುತ್ತದೆ!! ಆ ಮೇಧಾವಿ ಎಂಬ ಪತ್ರಕರ್ತ ಯಾವಾಗ ನೋಡಿದರೂ ‘ಭಾರತ’, ‘ಭಾರತೀಯತೆ’ ಎಂದು ಕಿರುಚಾಡುವವ. ಅಂಥವನೇ “ಪರಭಾಷಿಕರನ್ನ ಮಟ್ಟ ಹಾಕದಿದ್ದರೆ ಅಪಾಯ ತಪ್ಪಿದ್ದಲ್ಲ” ಎಂಬ ಸತ್ಯವನ್ನ ಕಂಡುಕೊಂಡಿದ್ದಾನೆ ಎಂದರೆ, ಅದರ ಮಹತ್ವವನ್ನ ನೀವೇ ಅರ್ಥಮಾಡಿಕೊಳ್ಳಿ.
ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉತ್ತಮ ಭವಿಷ್ಯ ಇಲ್ಲವೇ?
-ರಾವ್ ಎವಿಜಿ
ಇಲ್ಲ ಎಂದು ಬಹುಮಂದಿ ನಂಬಿರುವುದರಿಂದ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಹಿಂಜರಿಯುವ ಜನ್ಮದಾತೃಗಳ ಸಂಖ್ಯೆ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳು, ವಿಶೇಷತಃ ಸರ್ಕಾರೀ ಶಾಲೆಗಳು ದುಸ್ಥಿತಿಯಲ್ಲಿವೆ. ಈ ಪರಿಸ್ಥಿತಿಗೆ ಕಾರಣ?
ನಾನು ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಯಲ್ಲಿ ಓದಿದವನು. ಪಿ ಯು ಸಿ ಮತ್ತು ಆನಂತರದ ಶಿಕ್ಷಣ ಪಡೆದದ್ದು ಇಂಗ್ಲಿಷ್ ಮಾಧ್ಯಮದಲ್ಲಿ. ಆಗ ಕೊಡಗಿನಲ್ಲಿ ಎಲ್ಲರೂ ಶಿಕ್ಷಣ ಪಡೆಯುತ್ತಿದ್ದದ್ದೇ ಹೀಗೆ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಹಂಬಲವೇ ಆಗಲಿ, ಖಾಸಗಿ ಶಾಲೆಗಳು ಸರ್ಕಾರೀ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತವೆ ಎಂಬ ನಂಬಿಕೆಯೇ ಆಗಲಿ ಅಂದಿನ ಜನ್ಮದಾತೃಗಳಿಗೆ ಇರಲಿಲ್ಲ. ವಾಸ್ತವವಾಗಿ, ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮ, ಪಿ ಯು ಸಿ ಮತ್ತು ಆನಂತರದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಆಗ ಅಲ್ಲಿ ಇರಲೇ ಇಲ್ಲ. (ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಮೈಸೂರು, ಮಂಗಳೂರು, ಬೆಂಗಳೂರುಗಳಂಥ ದೊಡ್ಡ ನಗರಗಳಲ್ಲಿ ಲಭ್ಯವಿತ್ತಂತೆ) ನನಗೆ ತಿಳಿದ ಮಟ್ಟಿಗೆ ಕೊಡಗಿನಲ್ಲಿ ಆಗ ಇದ್ದದ್ದು ಎರಡೋ ಮೂರೋ ಕ್ರಿಶ್ಚಿಯನ್ ಆಡಳಿತದ ಖಾಸಗಿ ಪ್ರೌಢಶಲೆಗಳು. ಖಾಸಗಿ ಕಾಲೇಜುಗಳು ಇರಲೇ ಇಲ್ಲ. ಈ ಪದ್ಧತಿಯಲ್ಲಿ ಶಿಕ್ಷಣ ಪಡೆದ ನಾನು ಏನಾಗ ಬಯಸಿದ್ದೆನೋ ಅದೇ ಆದೆ. ಈ ಪದ್ಧತಿಯಲ್ಲಿ ಶಿಕ್ಷಣ ಪಡೆದವರು ಎಂಜಿನಿಯರುಗಳೂ ಡಾಕ್ಟರುಗಳೂ ಆಗುತ್ತಿದ್ದರು. ಎಂದೇ, ೧ ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಆವಶ್ಯಕತೆ ಇದೆ ಎಂದು ಯಾರೂ ತಿಳಿದಿರಲಿಲ್ಲ. ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರಿಂದ ಯಾರ ಭವಿಷ್ಯವೂ ಅಂದು ಹಾಳಾದದ್ದು ನನಗೆ ತಿಳಿದಿಲ್ಲ. ಆಗ ಏಕೆ ಹಾಗಿತ್ತು?
ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ


ಸಂಸ್ಕೃತಿ ಸಂಕಥನ 15 -ಭಾರತೀಯ ಪ್ರಭುತ್ವದ ಸೆಕ್ಯುಲರ್ ಗೊಂದಲಗಳು
ರಮಾನಂದ ಐನಕೈ
ಬಹುಸಂಸ್ಕೃತಿ ಹಾಗೂ ರಿಲಿಜನ್ ಎರಡೂ ಒಟ್ಟಿಗೇ ಬಾಳಬೇಕಾದ ಭಾರತದಂತಹ ದೇಶದಲ್ಲಿ ಪ್ರಭುತ್ವ ತಟಸ್ಥವಾಗಿರಲು ಸಾಧ್ಯವೇ? ಏಕೆಂದರೆ ಇಲ್ಲಿ ನಂಬಿಕೆಯಲ್ಲಿ ಭಿನ್ನತೆ ಇದೆ. ಇಂಥಲ್ಲಿ ಸೆಕ್ಯುಲರ್ ಪ್ರಭುತ್ವ ಯಾರಿಗೆ ನ್ಯಾಯ ನೀಡುತ್ತದೆ? ಒಂದಕ್ಕೆ ನೀಡಿದ ನ್ಯಾಯ ಇನ್ನೊಂದಕ್ಕೆ ಅನ್ಯಾಯವಾಗಲು ಸಾಧ್ಯ. ಏಕೆಂದರೆ ರಿಲಿಜನ್ನವರು ಲೋಕಜ್ಞಾನದಲ್ಲಿ ಬದುಕುತ್ತಾರೆ. ಸಂಸ್ಕೃತಿಯಲ್ಲಿ ಕ್ರಿಯಾಜ್ಞಾನ ಇರುತ್ತದೆ. ಸೆಕ್ಯುಲರ್ ನೀತಿ ಲೋಕಜ್ಞಾನದಲ್ಲಿ ಉದಯಿಸಿದ್ದು. ಹಾಗಾಗಿ ಕ್ರಿಯಾಜ್ಞಾನದ ಸೂಕ್ಷ್ಮತೆಗೆ ಸ್ಪಂದಿಸುವಲ್ಲಿ ಸೋಲುವ ಸಾಧ್ಯತೆ ಇದೆ. ಹಾಗಾಗಿ ಸೆಕ್ಯುಲರ್ ನೀತಿಯನ್ನು ಭಾರತೀಯ ಸಂದರ್ಭದಲ್ಲಿ ಪುನರ್ಪರಿಶೀಲನೆ ಮಾಡುವ ಅಗತ್ಯ ಇದೆ.
ಭಾರತ ಸರಕಾರದ ಸೆಕ್ಯುಲರ್ ನೀತಿಯ ಸುತ್ತ ಹಲವು ಸಂದಿಗ್ಧಗಳಿವೆ. ನಮ್ಮ ಪ್ರಭುತ್ವಕ್ಕೆ ಈ ಪರಿಸ್ಥಿತಿ ಎದುರಾಗಲು ಕಾರಣವೇನು? ಸೆಕ್ಯುಲರ್ ಎಂಬ ಸಮಾನತೆಯ ಮಂತ್ರ ನಮ್ಮಲ್ಲಿ ಯಾವ ಫಲಿತಾಂಶ ನೀಡುತ್ತಿದೆ?
ಫೇಸ್ ಬುಕ್ಕಿನ ಫಂಡಾಸ್
-ಮಾಲತಿ ಎಸ್
