ವಿಷಯದ ವಿವರಗಳಿಗೆ ದಾಟಿರಿ

Archive for

31
ಜನ

ನಿಲುಮೆ ಮಂಥನ

-ತ್ರಿವೇಣಿ, ಮ್ಯೆಸೂರು

ನಿಲುಮೆಯ ಆತ್ಮೀಯ ಬೆಂಬಲಿಗರೇ,

ನಿಲುಮೆಯು ಸತತ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಕನ್ನಡ ಸಾರಸತ್ವ ಲೋಕದಲ್ಲಿ  ಸತತವಾಗಿ ಲೇಖನ, ಕವನ, ಚರ್ಚೆ, ಪ್ರಚಲಿತ ವಿದ್ಯಮಾನ, ಸಂಸ್ಕೃತಿ, ಕನ್ನಡ, ಕರ್ನಾಟಕ, ಭಾರತ, ವಿಜ್ಣಾನ, ಕನ್ನಡಿಗರಿಗೆ ಉದ್ಯೋಗ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತ ಬರುತ್ತಲಿದೆ. ಇದಕ್ಕೆ ಬೆನ್ನುತಟ್ಟಲು ನಿಮ್ಮೆಲ್ಲರ ಬೆಂಬಲವಿಲ್ಲದೆ ಅದು ಸಾಧ್ಯವಾಗಿಯೂ ಇಲ್ಲ, ಅನ್ನೋದು ಮರೆತಿಲ್ಲ. ಅದೆಷ್ಟೊ ಲಕ್ಷ ಓದುಗರು ನಿಲುಮೆಯೊಂದಿಗೆ ಅವಿನಾನುಭಾವ ಸಂಬಂಧ ಬೆಸೆದುಕೊಂಡಿರುವರು. ಈ ಹಂತಕ್ಕೆ ನಿಲುಮೆ ಬೆಳೆದು ಬರಲು ಹಾದಿಯೇನು ಅಷ್ಟು ಸುಲಭವಾಗೇನು ಇರಲಿಲ್ಲ. ಮೊದಲಿಗೆ ಸ್ನೇಹಿತರ ಸಣ್ಣ ಗುಂಪೊಂದು ವರ್ಡ್ ಪ್ರೆಸ್ಸಿನಲ್ಲಿ ತನ್ನ ಖಾತೆಯನ್ನು ತೆರೆದಾಗ ಅರವಿಂದ್ ಎಂಬುವವರ ಮೊದಲ ಲೇಖನ ರಂಗೋಲಿ.. ಚಿತ್ತ ಚಿತ್ತಾರಗಳ ನಡುವೆ ಎಂಬ ಶೀರ್ಷಿಕೆಯೊಂದಿಗೆ ೫ನೇ ಅಕ್ಟೋಬರ್ ೨೦೧೦ ಪ್ರಕಟವಾಯ್ತು. ಅಸಲಿಗೆ ನಿಲುಮೆ ನಾನು ನೋಡಿದ್ದು, ರಂಗೋಲಿಗಳು ಎಂದು ಗೂಗಲಿನಲ್ಲಿ ಹುಡುಕಲು ಹೋದಾಗ ನಾನು ಹುಡುಕ ಹೊದದ್ದೇ ಒಂದು, ಸಿಕ್ಕಿದ್ದು ಮಾತ್ರ ಭರಪೂರ ರೋಮಾಂಚನ, ನಿಲುಮೆ ಹೆಸರು ಯಾಕೋ ಅಂದು ಬಹಳ ಇಷ್ಟವಾಗಿತ್ತು. ನಂತರ ದಿನಕ್ಕೊಂದರಂತೆ ಅತ್ಯುತ್ತಮ ಲೇಖನಗಳು ಬರತೊಡಗಿದಾಗ ಆ ಬ್ಲಾಗ್ ದಿನಕ್ಕೆ ಒಂದೆರಡು ಸಾರಿಯಾದರೂ ತೆರೆಯದೆ ಇರುವ ಮನಸ್ಸಾಗದೇ ಇರಲಿಲ್ಲ. ಆ ಲೇಖನಗಳ ಸ್ಪೂರ್ತಿಯಿಂದ ನನ್ನಲ್ಲು ಬರೆಯುವ ಅಮಿತ ಉತ್ಸಾಹವಿದ್ದರೂ ಬರೆದದ್ದೂ ಮಾತ್ರ ಈಗಲೇ, ನನ್ನಂತವಳಲ್ಲಿ ಲೇಖಕಿಯನ್ನು ಬೆಳೆಸಿದ ನಿಲುಮೆಗೆ ಅನಂತ ಧನ್ಯವಾದಗಳು. ನನ್ನ ನೆನಪಂತೆ ದಿನಕ್ಕೆ ಕೆಲವೇ ಕೆಲವು ಬೆಂಬಲಿಗರು ಬಂದು ನಿಲುಮೆಯ ಕದ ತಟ್ಟಿ ಹೋಗುತ್ತಿದ್ದರು. ಅಂದಿಗೆ ದಿನದ ಭೇಟಿಗಳು ಹೆಚ್ಚೆಂದರೆ ನೂರರ ಆಸುಪಾಸಿನಲ್ಲಿ ಓಡಾಡುತ್ತಿತ್ತು.

ಮತ್ತಷ್ಟು ಓದು »

30
ಜನ

ಉದ್ಯೋಗಾವಕಾಶ ಅಲ್ಲಲ್ಲಿ…

ಕೆನರಾ ಬ್ಯಾಂಕ್ ಕೆನರಾ ಬ್ಯಾಂಕ್‌ನಲ್ಲಿ 2000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-02-2012. ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್ಸ್‌ ಒಟ್ಟು ಹುದ್ದೆ: 2000

ವೇತನ ಶ್ರೇಣಿ: ರೂ.14500-25700/-

ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ ಹಾಗೂ ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು.

ಅರ್ಜಿ ಶುಲ್ಕ: ರೂ. 100/-

ಆಯ್ಕೆ ವಿಧಾನ: ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆ ಅಂಕಗಳ ಆಧಾರದ ಮೇಲೆ, ಗುಂಪು ಸಂದರ್ಶನ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ http://www.canarabank.com ವೆಬ್‌ಸೈಟ್ ಸಂಪರ್ಕಿಸಿ.

ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್

ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ನಲ್ಲಿ 618 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-02-2012.

ಹುದ್ದೆ ಹೆಸರು: 1) ಹೆಡ್-ಕಾನ್‌ಸ್ಟೇಬಲ್ (ಮೋಟಾರ್ ಮೆಕಾನಿಕ್)

ಒಟ್ಟು ಹುದ್ದೆ: 58 ವೇತನ ಶ್ರೇಣಿ: ರೂ.5200-20200/-

ವಯೋಮಿತಿ: ಕನಿಷ್ಠ 19 ವರ್ಷ.ಗರಿಷ್ಠ 25 ವರ್ಷ.

ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ. ಮೋಟಾರ್ ಮೆಕಾನಿಕಲ್‌ನಲ್ಲಿ ಸರ್ಟಿಫಿಕೇಟ್.

ಹುದ್ದೆ ಹೆಸರು: 2) ಕಾನ್‌ಸ್ಟೇಬಲ್ (ಮೋಟಾರ್ ಮೆಕಾನಿಕ್)

ಒಟ್ಟು ಹುದ್ದೆ: 135

ವೇತನ ಶ್ರೇಣಿ: ರೂ.5200-20200/-

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ.

ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ. ಆಟೊ ಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಸರ್ಟಿಫಿಕೇಟ್.

ಹುದ್ದೆ ಹೆಸರು: 3) ಕಾನ್‌ಸ್ಟೇಬಲ್ (ಡ್ರೈವರ್)

ಒಟ್ಟು ಹುದ್ದೆ: 425

ವೇತನ ಶ್ರೇಣಿ: ರೂ.5200-20200/-

ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ. ಅರ್ಜಿ ಶುಲ್ಕ: ರೂ. 50/- ವಿಳಾಸ: ಇನ್‌ಸ್ಪೆಕ್ಟರ್ ಜನರಲ್ (ನಾರ್ಥ್) ಫ್ರಾಂಟಿಯರ್, ಐಟಿಬಿಪಿ, ಪೋಸ್ಟ್-ಸೀಮದ್ವಾರ್ (ಇಂದಿರಾ ನಗರ), ಡಿಸ್ಟ್ರಿಕ್ಟ್ ಡೆಹಡ್ರೂನ್-248156 (ಉತ್ತರಾಖಂಡ) ಹೆಚ್ಚಿನ ವಿವರ ಹಾಗೂ ಮಾಹಿತಿಗೆ http://itbp.gov.in/ ವೆಬ್‌ಸೈಟ್ ಸಂಪರ್ಕಿಸಿ.

ಪಂಜಾಬ್ ನ್ಯಾಷನಲ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನಲ್ಲಿ 775 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-02-2012.

ಹುದ್ದೆ ಹೆಸರು: ಮ್ಯಾನೇಜ್‌ವೆುಂಟ್ ಟ್ರೈನೀಸ್

ಒಟ್ಟು ಹುದ್ದೆ: 775

ವೇತನ ಶ್ರೇಣಿ: ರೂ.14500-25700/-

ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ ಹಾಗೂ ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು.

ಅರ್ಜಿ ಶುಲ್ಕ: ರೂ. 200/-

ಆಯ್ಕೆ ವಿಧಾನ: ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆ ಅಂಕಗಳ ಆಧಾರ ಮೇಲೆ ಹಾಗೂ ಸಂದರ್ಶನ * ಏಪ್ರಿಲ್-ಮೇನಲ್ಲಿ (2012) ನಡೆಯಲಿದೆ. ಹೆಚ್ಚಿನ ಮಾಹಿತಿಗೆ http://www.pnbindia.in ವೆಬ್‌ಸೈಟ್ ಸಂಪರ್ಕಿಸಿ. ದಿ ಓರಿಯಂಟಲ್ ಇನ್ಸುರೆನ್ಸ್ ದಿ ಓರಿಯಂಟಲ್ ಇನ್ಸುರೆನ್ಸ್ ಕಂಪೆನಿ ಲಿಮಿಟೆಡ್‌ನಲ್ಲಿ 477 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-02-2012. ಲಿಖಿತ ಪರೀಕ್ಷೆ: 08-04-2012

ಹುದ್ದೆ ಹೆಸರು: ಅಡ್ಮಿನಿಸ್ಟ್ರೇಟೀವ್ ಆಫೀಸರ್ (ಎಒ)

ಒಟ್ಟು ಹುದ್ದೆ: 477

ವೇತನ ಶ್ರೇಣಿ: ರೂ.17240-32640/-

ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಅರ್ಜಿ ಶುಲ್ಕ: ರೂ. 500/- * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿದ್ಯಾರ್ಹತೆ ಹಾಗೂ ಹೆಚ್ಚಿನ ಮಾಹಿತಿಗೆ http://www.orientalinsurance.org.in ವೆಬ್‌ಸೈಟ್ ಸಂಪರ್ಕಿಸಿ.

ರಿಸರ್ವ್ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-02-2012. ಲಿಖಿತ ಪರೀಕ್ಷೆ ದಿನಾಂಕ: 22-04-2012.

ಹುದ್ದೆ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್ (ರಾಜಭಾಷಾ) ಗ್ರೇಡ್-ಎ

ಒಟ್ಟು ಹುದ್ದೆ: 07

ವೇತನ ಶ್ರೇಣಿ: ರೂ.17100-33200/-

ವಯೋಮಿತಿ: 30 ವರ್ಷ ದಾಟಿರಬಾರದು.

ಅರ್ಜಿ ಶುಲ್ಕ: ರೂ. 100/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಬೆಂಗಳೂರಿನಲ್ಲೂ ಪರೀಕ್ಷೆ ಇದೆ. * ಪೋಸ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2012

ವಿಳಾಸ: ಜನರಲ್ ಮ್ಯಾನೇಜರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ವೀಸ್ ಬೋರ್ಡ್, ಪೋಸ್ಟ್ ಬಾಕ್ಸ್ ನ. 4618, ಮುಂಬೈ ಸೆಂಟ್ರಲ್ ಪೋಸ್ಟ್ ಆಫೀಸ್, ಮುಂಬೈ-400008

ಹೆಚ್ಚಿನ ಮಾಹಿತಿಗೆ http://www.rbi.org.in ವೆಬ್‌ಸೈಟ್ ಸಂಪರ್ಕಿಸಿ. http://www.canarabank.com/ http://www.canarabank.com

30
ಜನ

ಪ್ರೀತಿಯ ಮಟ್ಟು ಸರ್, ನಿಮಗೊಂದು ಪ್ರೀತಿಯ ಬಹಿರಂಗ ಪತ್ರ.

– ಪೂರ್ಣಚಂದ್ರ

(ಇತ್ತೀಚಿಗೆ ದಿನೇಶ್ ಅಮಿನ್  ಮಟ್ಟು ಅವರು ಬರೆದ ಬಹುಚರ್ಚಿತ ಲೇಖನಕ್ಕೆ ಪೂರ್ಣಚಂದ್ರ ಅವರು ಪ್ರತಿಕ್ರಿಯಯನ್ನು ಕಳುಹಿಸಿದ್ದಾರೆ. ಓದಿ..)

ಪ್ರೀತಿಯ ಮಟ್ಟು ಸರ್,

ನಿಮಗೊಂದು ಪ್ರೀತಿಯ ಬಹಿರಂಗ ಪತ್ರ.
ನಮಸ್ಕಾರಗಳು. ನನ್ನ ಪರಿಚಯ ನಿಮಗೆ ಇಲ್ಲ ಎಂದು ಕಾಣುತ್ತೆ. ಆದರೆ, ನಿಮ್ಮ ಪರಿಚಯ ನನಗೆ ೧೦ ವರ್ಷದ್ದು. ನಿಮ್ಮ ಅಂಕಣಗಳನ್ನು ಓದುತ್ತಾ ಬೆಳೆದವನು ನಾನು.

ವಿವೇಕಾನಂದರ ಬಗ್ಗೆ ನೀವು ಬರೆದ ಲೇಖನ ಓದಿದ ಬಳಿಕ, ನನಗನಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಅಷ್ಟರಲ್ಲಿಯೇ ವಿವೇಕಾನಂದರ ಪರ ಎಂದು ಭ್ರಮಿಸಿರುವ, ಭಾವಿಸಿಕೊಂಡಿರುವ ಬಲಪಂಥೀಯ ಮೂಲಭೂತವಾದಿಗಳು ನಿಮ್ಮ ವಿರುದ್ಧ ಕತ್ತಿ ಬೀಸಲಾರಂಭಿಸಿದರು.
ಇದಕ್ಕೆ ಪ್ರತಿಯಾಗಿ, ತಾವು ಮಟ್ಟು ಪರ(ವಿವೇಕನಂದ ಪರ ಅಲ್ಲ) ಎಂದು ಭ್ರಮಿಸಿರುವ ಎಡಪಂಥೀಯ ಹಾಗೂ ಪ್ರಗತಿಪರ ಮೂಲಭೂತವಾದಿಗಳು ಕೂಡ ತಮ್ಮ ಕತ್ತಿಗೆ ಸಾಣೆ ಹಿಡಿಯಲಾರಂಭಿಸಿದರು.

ಈ ಎರಡೂ ವರ್ಗದ ಮೂಲಭೂತವಾದಿಗಳು ಶಿವಮೊಗ್ಗ ಮತ್ತು ಬೆಂಗಳೂರಿನ ಬೀದಿಗಳಲ್ಲಿ, ನಿಮ್ಮ ಕಚೇರಿ ಎದುರು, ಬ್ಲಾಗ್‌ಗಳಲ್ಲಿ ಕತ್ತಿ ಬೀಸಾಡುವಾಗ ಮಧ್ಯೆ ಪ್ರವೇಶಿಸಲು ಭಯವಾಯಿತು. ಯಾರದ್ದಾದರೂ ಕತ್ತಿ ನನ್ನನ್ನೇ ತಿವಿದುಬಿಡಬಹುದು ಎಂದು ಸುಮ್ಮನಾದೆ. ಈಟಿ, ಭರ್ಜಿ, ಕತ್ತಿ ಗುರಾಣಿಗಳ ಅಬ್ಬರ ಕಡಿಮೆಯಾಗಿದೆ. ಹಾಗಾಗಿ ಇದು ಸೂಕ್ತ ಸಮಯ ಎಂದು ನನಗನಿಸಿದ್ದ ಕೆಲ ಸಂಗತಿಗಳನ್ನು ಹೇಳಲು ಪ್ರಯತ್ನಿಸುವೆ. ಮತ್ತಷ್ಟು ಓದು »

30
ಜನ

ಸಂಸ್ಕೃತಿ ಸಂಕಥನ – 20 – ಬುದ್ಧನನ್ನು ಹೈಜಾಕ್ ಮಾಡಿದ ಪ್ರೊಟೆಸ್ಟಾಂಟರು

-ರಮಾನಂದ ಐನಕೈ

ಎಲ್ಲರಿಗೂ ಅಚ್ಚರಿಯಾಗಬಹುದು. ಪ್ರೊಟೆಸ್ಟಾಂಟರು ಹೇಗೆ ಮತ್ತು ಏಕೆ ಬುದ್ಧಿಸಂನ್ನು ಹೈಜಾಕ್ ಮಾಡಿದರು ಎಂಬುದು. ಇಲ್ಲಿ ಹೈಜಾಕ್ ಅಂದರೆ ಅಪಹರಣ ಎಂಬ ಅರ್ಥವಲ್ಲ. ಪ್ರೊಟೆ ಸ್ಟಾಂಟರು ಬುದ್ಧಿಸಂನ್ನು ಹೇಗೆ ತಮ್ಮ ಸಮರ್ಥನೆ ಗಾಗಿ ಬಳಸಿಕೊಂಡರು ಎಂಬುದು. ಇದರ ಹಿಂದೆ ಸ್ವತಃ ಭಾರತೀಯರಿಗೆ ಅರ್ಥವಾಗದ ಹಲವು ರಹಸ್ಯಗಳಿವೆ. ಈ ರಹಸ್ಯಗಳನ್ನು ಬಾಲಗಂಗಾಧರರು ಸ್ವಾರಸ್ಯವಾಗಿ ಭೇದಿಸುತ್ತಾರೆ.

ಸಮಕಾಲೀನ ಭಾರತೀಯ ಚಿಂತಕರಿಗೆ ಬುದ್ಧಿಸಂ ಕುರಿತಾಗಿ ಒಂದು ಪೂರ್ವಗ್ರಹಿತ ಅಭಿ ಪ್ರಾಯಗಳಿವೆ. ಬುದ್ಧಿಸಂ ಮಾನವೀಯತೆಗಾಗಿ ಹೋರಾಡುತ್ತಿದೆ. ಇದು ಸಮಾಜದಲ್ಲಿನ ಅನಿಷ್ಟ ವನ್ನು ವಿರೋಧಿಸಿದೆ. ಯಜ್ಞಯಾಗಾದಿಗಳನ್ನು ಧಿಕ್ಕರಿಸಿದೆ. ಪ್ರಾಣಿ ಬಲಿ ವಿರೋಧಿಸಿ ಅಹಿಂಸಾ ತತ್ವ ಮೆರೆದಿದೆ. ಈ ಮೂಲಕ ಹಿಂದೂ ಯಿಸಂನ್ನು ವಿರೋಧಿಸಿದೆ. ಭಾರತದ ಜಾತಿ ವ್ಯವಸ್ಥೆಯನ್ನು ವಿಮರ್ಶಿಸಿದೆ. ಇಲ್ಲಿನ ವರ್ಣಾ ಶ್ರಮವನ್ನು ವಿರೋಧಿಸಿದೆ. ಇಲ್ಲಿನ ಪುರೋಹಿತ ಶಾಹಿಯನ್ನು ಹಾಗೂ ಬ್ರಾಹ್ಮಣರನ್ನು ವಿರೋಧಿಸಿದೆ. ಹಾಗಾಗಿ ಇದೊಂದು ವಿಶ್ವಮಾನ್ಯವಾದ ರಿಲಿಜನ್. ಬುದ್ಧಿಸಂ ಸಮಾಜದಲ್ಲಿನ ತರತಮ ವನ್ನು ಸಹಿಸುವುದಿಲ್ಲ. ಮನುಷ್ಯರ ಏಳ್ಗೆಗಾಗಿ ಹಂಬಲಿಸುತ್ತದೆ ಇತ್ಯಾದಿ. ಈ ಕಾರಣಕ್ಕಾಗೆ ನಮ್ಮ ದೇಶದ ದಲಿತ ಚಿಂತಕರೆಲ್ಲ ಬುದ್ಧಿಸಂ ಕಡೆಗೆ ಆಕರ್ಷಿತರಾದರು. ಅಂಬೇಡ್ಕರರು ಕೂಡ ಬುದ್ಧಿಸಂಗೆ ಮತಾಂತರ ಹೊಂದಿದ್ದು ಈ ಆಕರ್ಷಣೆಯಿಂದ. ನಿಜವಾಗಿಯೂ ಇದು ನಿಜವೆ? ಭಾರತೀಯ ಸಂಸ್ಕೃತಿಯೊಂದಿಗೆ ಬುದ್ಧಿಸಂ ವಿರೋಧವಾಗಿಯೇ ನಡೆದುಕೊಂಡು ಬಂದಿ ದೆಯೇ? ನಿಜವಾಗಿಯೂ ಬುದ್ಧ ವರ್ಣಾಶ್ರಮ ದಿಂದ ಹೊರಗುಳಿದು ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿದನೇ? ಈಗ ನಾವು ವಿಸ್ಮೃತಿಯಿಂದ ಸ್ಮೃತಿಗೆ ಬರಬೇಕಾಗಿದೆ.

ಮತ್ತಷ್ಟು ಓದು »

29
ಜನ

ಈ ಪ್ರೀತಿ…!!

– ಸುಷ್ಮಾ ಮೂಡಬಿದ್ರಿ

ಇಬ್ಬರ ಮದ್ಯದಲ್ಲೂ ನೀರವ ಮೌನ…ಆಗತಾನೆ ಹೊರಗೆ ಮಳೆ ತಣ್ಣಗೆ ಆರಂಭವಾಗಿ, ಭೋರ್ಗರೆಯುತ್ತಾ ಸುರಿಯಲಾರಂಭಿಸಿತು. ಬೀಸಿ ಬಂದ ಗಾಳಿಗೆ ಕಿಟಕಿ ಪರದೆಗಳೆಲ್ಲಾ ನೃತ್ಯವಾಡುತ್ತಿತ್ತು…ಕಿಟಕಿಯಿಂದ ಹೊರಗೆ ದೂರದ ಅದ್ಯಾವ ಬಿಂದುಗೋ ದೃಷ್ಟಿ ಹಾಯಿಸುತ್ತಾ ನಿಂತಿದ್ದ..ಮೆಲ್ಲಗೆ “ಸುಂಜೂ….”ಎಂದೆ..ರಭಸದ ಮಳೆ ಸದ್ದಿಗೋ ಏನೋ ಕೇಳಿಸಿಲ್ಲವೆಂಬಂತೆ ನಿಂತೇ ಇದ್ದ ಅಂವ..ಮೌನ ಮುರಿಯಲಾಗಲಿಲ್ಲ ನನ್ನಿಂದ..ಶೂನ್ಯದೆಡೆಗಿನ ಅವನ ನೋಟ ಕದಲಿಸಲಾಗಲಿಲ್ಲ..ಹತ್ತಿರ ಬಂದು ನಿಂತೆ..ಈಗ ನೋಡಿದ..ಕಂಗಳು ಕಾಂತಿಹೀನ ಅನಿಸಿತು.

“ಮಾತಡೋಲ್ಲವಾ….”ಎಂದೆ..

ಮತ್ತೇ ದೃಷ್ಟಿ ಬದಲಿಸಿದ…ಈ ಬಗೆಯ ಮೌನ ಸಹಿಸಲಾಗಲಿಲ್ಲ…

“ಪ್ಲೀಸ್..”ಎಂದ ನನ್ನ ಕಣ್ಣಲ್ಲಿ ನೀರಾಡಿತ್ತು…

ಅದೇನನಿಸಿತೋ..”ಸುಶೀ..”ಕರೆದ…ಹ್ಞು0 ಗುಟ್ಟಿದೆ…

ಮತ್ತಷ್ಟು ಓದು »

28
ಜನ

ವಾರದ ಉದ್ಯೋಗ ಮಾಹಿತಿ- ಯಾವುದೇ ಪದವಿ ಇತ್ಯಾದಿ ವಿದ್ಯಾರ್ಹತೆಗಳಿಗೆ

ಈ ವಾರದ ಉದ್ಯೋಗ ಮಾಹಿತಿ ವಿವರ ಹೀಗಿದೆ

೧) ಹುದ್ದೆಯ ಹೆಸರು: ಡೆಸ್ಕ್ ಟಾಪ್ ಸಫೊರ್ಟ್ ಪರಿಣಿತರು
ಅನುಭವ: ೧ ವರ್ಷದ ಮೇಲ್ಪಟಿರಬೇಕು
ವಿದ್ಯಾರ್ಹತೆ: ಯಾವುದೆ ಪದವಿ
೨) ಹುದ್ದೆಯ ಹೆಸರು: ವಾಯ್ಸ್ ಸಫೊರ್ಟ್ ಇ೦ಜಿನೀಯರ್ಸ್ (ಸಿಸ್ಕೊ – ವಾಯ್ಪ್ ನೆಟ್ವರ್ಕ್ ಅನುಭವ ಇರಬೇಕು )
ಅನುಭವ: ೨ ವರ್ಷಕ್ಕಿ೦ತ ಹೆಚ್ಚಿರಬೇಕು
ವಿದ್ಯಾರ್ಹತೆ: ಯಾವುದೆ ಪದವಿ

೩) ಹುದ್ದೆಯ ಹೆಸರು: ಟೆಕ್ನಿಕಲ್ ಸಫೊರ್ಟ್ ಇ೦ಜಿನೀಯರ್ಸ್
ಅನುಭವ : ವಿ೦ಡೋಸ್ ಮತ್ತು ಲಿನಕ್ಸ್ ನಲ್ಲಿ ಪರಿಣಿತರಾಗಿರಬೇಕು ೧ ವರ್ಷಕ್ಕಿ೦ತ ಹೆಚ್ಚಿರಬೇಕು
ವಿದ್ಯಾರ್ಹತೆ: ಯಾವುದೆ ಪದವಿ

ಇ ಮೇಲಿನ ಎಲ್ಲ ಹುದ್ದೆಗಳಿಗಾಗಿ ನಿಮ್ಮ ರೆಸ್ಯುಮ್ ಅನ್ನು ಈ ಕೆಳಕ೦ಡ ವಿಳಾಸಕ್ಕೆ ತಕ್ಷಣ ಕಳುಹಿಸಿ
abhi082941@gmail.com

28
ಜನ

ಮಾಧ್ಯಮಗಳೇಕೆ ಹೀಗೆ ?

-ರೂಪ ರಾವ್
ನಟನೆಗೆ ಚೌಕಟ್ಟು ಇದೆಯೇ……..?
ಇಂತಾಹದೊಂದು ಪ್ರಶ್ನೆ ಕಾಡಿದ್ದು ನೆನ್ನೆ ವಿಜಯ ಕರ್ನಾಟಕದಲ್ಲಿ ಶರಣು ಹುಲ್ಲೂರುರವರ ಸುಮ್ನೇನಾ ಸುಮನ್ ಅನ್ನುವ ಲೇಖನ ಓದಿ.
ಸುಮನ್ ಹಾಗಿದ್ದರು, ಹೀಗಾದರು, ವಿವಾಹ ವಿಚ್ಗೇದನಕ್ಕೆ ಒಳಗಾದರು. “ಇಂತಹ” ಪಾತ್ರಕ್ಕೆ ಬ್ರಾಂಡ್ ಆದರು. ಬರೀ ಇಂತಹದೇ ಪದಗಳು.
ಸುಮನ್ ಅನ್ನು ಒಬ್ಬ ನಟಿಯಾಗಿ ನೋಡದೇ ಒಬ್ಬ  ಹೆಣ್ಣಾಗಿ  ನೋಡಿದಾಗ ಈ ರೀತಿಯ ಯೋಚನೆಗಳು ಬರುತ್ತವೆ.
ಅಷ್ಟಕ್ಕೂ ಪಾತ್ರ ಯಾವುದಾದರೇನು ಅದಕ್ಕೆ ನ್ಯಾಯ ಒದಗಿಸಬೇಕಾದ್ದು ನಟಿಯ ಧರ್ಮ, ಅವರು ಇಂತಹದ್ದೇ ಪಾತ್ರ ಮಾಡಬೇಕೆಂದು ನಿರ್ಧೇಶಿಸುವುದು ನಟಿಯ ಸ್ವಾತಂತ್ರಹರಣ ಎನ್ನುವುದು ನನ್ನ ಅಭಿಪ್ರಾಯ.
ಇಂತಹದೇ ಎನ್ನಲು ಅವರು ಮಾಡಿರುವ ಪಾತ್ರವಾದರೂ ಎಂತಹದ್ದು……
ಅವರ ಲುಕ್, ಅವರ ಗ್ಲಾಮರ್ ಅವರನ್ನು ಇಂತಹ ಪಾತ್ರಕ್ಕೆ ಒಗ್ಗಿಸಿದಲ್ಲಿ ಅದು ಅವರ ಹೆಚ್ಚುಗಾರಿಕೆ, ಅದರಿಂದ ನೋಡುಗರಿಗೆ  ತೊಂದರೆ ಏನು?
ಚಮೇಲಿಯಲ್ಲಿ ಕರೀನಾ , ಡರ್ಟಿ ಪಿಕ್ಚರ‍್ನಲ್ಲಿ  ವಿದ್ಯಾ ಬಾಲನ್,  ಅಷ್ಟೇ ಏಕೆ? ನಮ್ಮ ಚತುರ್ಭಾಷಾ ನಟಿ ಚತುರೆ ಲಕ್ಷ್ಮಿ ಮೇಡಮ್ ಹೂವು ಹಣ್ಮಿನಲ್ಲಿ ನಟಿಸಿದ ಪಾತ್ರಗಳಿಂದ ಅವರ ಅಭಿನಯಕ್ಕಾಗಿ ಹೊಗಳಿಸಿಕೊಂಡಿದ್ದಾರೆಯೇ ಹೊರತು ಇಂತಹ ಪಾತ್ರ ಬೇಕಿತ್ತೇ ಎಂದನಿಸಿಕೊಂಡಿಲ್ಲ. ಪತ್ರಿಕಾ ಮಾಧ್ಯಮದಲ್ಲಿ ತಮಗೆ ಸರಿ ಎನಿಸದ ನಟಿಯರ ಬಗ್ಗೆ ಈ ರೀತಿಯ ಕಾಮೆಂಟ್ಸ್ ಸಹಜವಾಗಿದೆ. ಒಮ್ಮೆಪ್ರಿಯಾ ಮಣಿಯ ಬಗ್ಗೆ ಬರೆಯುತ್ತಾ ರಾವಣ್ ಚಿತ್ರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಂತಹ ಪಾತ್ರಗಳನ್ನು ಮಾಡಿ ಎಂಬ ತೆಗಳಿಗೆ ಮಾಡಿದ್ದರು. ಹಾಗೆ ಸೌಂದರ್ಯರವರು  ಯಾವುದೋ ವೇಳೆಯಲ್ಲಿ ಮಾಧ್ಯಮದವರ ಕೈಗೆ ಸಿಗಲಿಲ್ಲ  ಎಂಬ  ಕಾರಣಕ್ಕೆ ಅವರನ್ನು ಅತೀ ಪುರಾತನ ನಟಿ ಎಂಬ “ನಾಮಕರಣ” ಮಾಡಿದ್ದರು.
ಮತ್ತೊಮ್ಮೆ ಪವಿತ್ರ ಲೋಕೇಶ್‌ರವರು ಯಾವುದೋ ಚಿತ್ರದ ಪಾತ್ರವೊಂದಕ್ಕೆ ಒಪ್ಪಲಿಲ್ಲ ಎಂದು ಅವರು ಇಂತಹ ಚಿತ್ರದಲ್ಲಿ “ಅಂತಹ” ಪಾತ್ರ ಮಾಡಿದ್ದರು . ಇಲ್ಲಿ ಏಕೆ ಮಡಿವಂತಿಕೆ ಎಂಬ ಕಾಮೆಂಟ್. ಇಂತಹದೇ ಕಾಮೆಂಟ್ಸ್ ಗಳು ಅತಿಯಾಗಿ ನಟಿಯರ ಮೇಲೆ ಪತ್ರಿಕೆಗಳಲ್ಲಿ ಹಾಕಲ್ಪಟ್ಟಿವೆ, ಹಾಕಲಾಗುತ್ತಿವೆ. ಮತ್ತಷ್ಟು ಓದು »
27
ಜನ

ಪ್ರೇಮ, ಯುದ್ಧ ಮತ್ತು ಚುನಾವಣೆಯಲ್ಲಿ ಎಲ್ಲವೂ ನ್ಯಾಯವೇ

-ಚಾಮರಾಜ ಸವಡಿ

ಕೆಲವೊಬ್ಬರು ಏನು ಮಾಡಿದರೂ ವಿವಾದವಾಗುತ್ತದೆ. ಅವರು ಸೃಜನಶೀಲ ಕ್ಷೇತ್ರದಲ್ಲಿದ್ದರಂತೂ ವಿವಾದ ಇನ್ನಷ್ಟು ತೀವ್ರ. ಕನ್ನಡದ ಮಟ್ಟಿಗೆ ಆ ಕೀರ್ತಿ ಎಸ್.ಎಲ್. ಭೈರಪ್ಪ ಅವರದಾದರೆ, ಭಾರತೀಯ ಇಂಗ್ಲಿಷ್ ಬರಹಗಾರರ ಪೈಕಿ ಆ ಪಟ್ಟ ಸಲ್ಮಾನ್ ರಶ್ದಿಗೆ.
ಬಹುಶಃ, ದಿ ಸೆಟನಿಕ್ ವರ್ಸಸ್ ಕೃತಿಯನ್ನು ರಶ್ದಿ ಬರೆಯದೇ ಹೋಗಿದ್ದರೆ, ಅವರ ಪಾಲಿಗೆ ವಿವಾದಗಳಾಗಲಿ, ವಿವಾಹಗಳಾಗಲಿ ಈ ಪರಿ ಇರುತ್ತಿರಲಿಲ್ಲವೇನೋ. ಮುಸ್ಲಿಂ ಮನಃಸ್ಥಿತಿಯನ್ನು ಮಾತ್ರ ಕೆರಳಿಸುವಂಥ ಈ ಪುಸ್ತಕವನ್ನು ಮುಗಿಬಿದ್ದು ಮುಟ್ಟುಗೋಲು ಹಾಕಿಕೊಂಡ ಭಾರತ ಸರ್ಕಾರ, ರಶ್ದಿಗೆ ಜೀವಂತ ಇರುವಾಗಲೇ ಹುತಾತ್ಮನ ಪಟ್ಟ ಕಟ್ಟಿಬಿಟ್ಟಿತು.
ಅದರ ಮುಂದುವರಿದ ಅಧ್ಯಾಯವೇ ಜೈಪುರದ ಸಾಹಿತ್ಯ ಉತ್ಸವದಲ್ಲಿ ನಡೆದಿರುವ ಪ್ರಹಸನ. ಅಲ್ಲಿ ನಡೆಯಬೇಕಾಗಿದ್ದುದು ಸಾಹಿತ್ಯದ ಚರ್ಚೆ. ಆದರೆ, ನಡೆದಿದ್ದು ಮತ್ತು ನಡೆಯುತ್ತಿರುವುದು ಲೇಖಕ ಸಲ್ಮಾನ್ ರಶ್ದಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆ ಬೇಡವೆ ಎಂಬುದರ ಬಗ್ಗೆ. ಅಂತರ್‌ರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಯಾವ ರೀತಿ ದುರ್ಬಳಕೆ ಮಾಡಬಹುದು ಮತ್ತು ಅದರ ಉದ್ದೇಶವನ್ನು ಹಾಳು ಮಾಡಬಹುದು ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ.
26
ಜನ

ನಿಲುಮೆ ನೆಟ್ಟಾಗಿದೆ!

 – ಆತ್ರಾಡಿ ಸುರೇಶ್ ಹೆಗ್ಡೆ

ಹೌದು ನಿಲುಮೆ ನೆಟ್ಟಾಗಿದೆ

ಹಾಗಾಗಿ ನಮ್ಮೆಲ್ಲರ ನಿಲುಮೆಗಳೂ ನೆಟ್ಟಗಾಗಿವೆ

ತತ್ವಗಳಿಗೆ ಬದ್ಧರಾದವರೇ

ಆದರೂ ನಾವು ಎಲ್ಲಾ ತತ್ವಗಳ ಎಲ್ಲೆ ಮೀರಿದವರೇ

ಎಡ-ಬಲ-ನಡುವೆಂಬುದಿಲ್ಲ ಇಲ್ಲಿ

ನಮ್ಮ ನಿಲುಮೆಗೆ ಸೀಮಾರೇಖೆಯೆಂಬುದೇ ಇಲ್ಲ ಇಲ್ಲಿ

ತಮ್ಮ ತಮ್ಮ ಅಂಗಳದಲ್ಲಿದ್ದವರು

ಮೈದಾನ ಸಿಕ್ಕಾಗಲೂ ಮೈಮರೆಯದೇ  ಉಳಿದವರು

ಇಲ್ಲಿ ಪ್ರಕಟವಾಗದ ವಿಷಯಗಳಿಲ್ಲ

ಇಲ್ಲಿ ಬರೆಯದ ಬ್ಲಾಗಿಗರೂ ಬಹುಷಃ ಹೆಚ್ಚು ಉಳಿದಿಲ್ಲ

ಬಾಡಿಗೆ ಮನೆಯ ತೊರೆದಂತೆ

ಸ್ವಂತ ಮನೆಯಲ್ಲೀಗ ಕೈಕಾಲು ನೀಡಿ ವಿರಮಿಸುವಂತೆ

ಈ ಆರಾಮ ಅಲ್ಪವೇ ಆಗಿರಲಂತೆ

ಇಲ್ಲಿನ ಬರಹಗಳ ಸಂತೆಗೆ ಎಂದೂ ರಜೆ ಇಲ್ಲದಿರಲಂತೆ

ನಿಲುಮೆ ಇರಲಿ ಎಲ್ಲ ತತ್ವಗಳ ಮೀರುತ್ತಾ

ಸದಾ ಇರಲಿ ತನ್ನದೇ ಆದ ತತ್ವವನು ಜಗಕೆ ತೋರುತ್ತಾ!

26
ಜನ

ಪ್ರಜಾಪ್ರಭುತ್ವದ ಶಿಕ್ಷಣ

-ರಾವ್ ಎವಿಜಿ

ಪ್ರಜಾಪ್ರಭುತ್ವ ಒಂದು ಸುಂದರ ಪರಿಕಲ್ಪನೆ ಎಂಬುದರ ಕುರಿತಾಗಲಿ, ನಮಗೆ ತಿಳಿದಿರುವ ಪ್ರಭುತ್ವದ ನಮೂನೆಗಳ ಪೈಕಿ ಅತ್ಯಂತ ಶ್ರೇಷ್ಠವಾದದ್ದು ಎಂಬುದರ ಕುರಿತಾಗಲಿ ಯಾವ ಸಂಶಯವೂ ನನಗಿಲ್ಲವಾದರೂ ನಮಗೆ, ಅರ್ಥಾತ್ ಈ ಕರ್ಮಭೂಮಿಯ ಪ್ರಜೆಗಳಿಗೆ ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಅರ್ಹತೆ ಇದೆಯೇ ಎಂಬುದರ ಕುರಿತು ಸಂಶಯ ಇದೆ. ನನಗೆ ತಿಳಿದ ಮಟ್ಟಿಗೆ ಪ್ರಜಾಪ್ರಭುತ್ವದ ಯಶಸ್ಸು ಪ್ರಜೆಗಳ, ಅರ್ಥಾತ್  ಮತದಾರನ ವಿವೇಕವನ್ನು ಆಧರಿಸಿರುತ್ತದೆ.

  • ಹಣ, ಹೆಂಡ. ಸೀರೆ ಮೊದಲಾದವನ್ನು ಧಾರಾಳವಾಗಿ ಕೊಡುವವರನ್ನೇ ಆಗಲಿ ಚುನಾವಾಣೆಯಲ್ಲಿ ಗೆದ್ದು ಬಂದರೆ ಉಚಿತವಾಗಿ ‘ಕಲರ್’ಟಿವಿ,’ಮಿಕ್ಸಿ’ ನಗಣ್ಯ ಅನ್ನಬಹುದಾದಷ್ಟು ಕಡಿಮೆ ಬಡ್ಡಿಯ ಸಾಲ ಮುಂತಾದವನ್ನು ಕೊಡುವುದಾಗಿ ಭರವಸೆ ನೀಡುವ ಮಂದಿಯನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ನಮ್ಮ ಮತದವ, ನಮ್ಮ ಜಾತಿಯವ, ನಮ್ಮ ಊರಿನವ ಎಂಬ ಕಾರಣಕ್ಕಾಗಿ ನಾಯಕನನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ ? ಮತ್ತಷ್ಟು ಓದು »