ವಿಷಯದ ವಿವರಗಳಿಗೆ ದಾಟಿರಿ

Archive for

13
ಡಿಸೆ

ಈ ‘ದಿನಾಚರಣೆ’ಗಳು ಲೇಖನ, ರಾಲಿಗಳಿಗೆ ಮಾತ್ರ ಸೀಮಿತ ಯಾಕೆ?

-ರಶ್ಮಿ. ಕಾಸರಗೋಡು

2011 ಕ್ಯಾಲೆಂಡರ್ ವರ್ಷ ಮುಗಿಯುತ್ತಾ ಬಂದಿದೆ. ಹಳೆಯ ಕ್ಯಾಲೆಂಡರ್್ನ್ನು ಬದಲಿಸಿ ಹೊಸ ಕ್ಯಾಲೆಂಡರ್್ಗೆ ಜಾಗ ಕಲ್ಪಿಸುವ ಹೊಸ ವರ್ಷಕ್ಕೆ ದಿನ ಎಣಿಕೆ ಆರಂಭವಾಗಿದೆ. ಹೌದು, ಮನೆಯಲ್ಲಿ ಹೊಸ ಕ್ಯಾಲೆಂಡರ್ ನೇತು ಹಾಕುವಾಗ “ವರ್ಷ ಎಷ್ಟು ಬೇಗ ಕಳೆದು ಹೋಯಿತಲ್ವಾ..ಗೊತ್ತೇ ಆಗಿಲ್ಲ” ಎಂಬ ಉದ್ಗಾರ ಸರ್ವೇ ಸಾಮಾನ್ಯ. ನಾವು ಚಿಕ್ಕವರಿರುವಾಗ ಅಂದ್ರೆ ಶಾಲೆಗೆ ಹೋಗುವ ಸಮಯದಲ್ಲಿ ಮನೆಗೆ ಹೊಸ ಕ್ಯಾಲೆಂಡರ್ ತಂದ ಕೂಡಲೇ ಅದರಲ್ಲಿನ ಕೆಂಪು ಬಣ್ಣದ ದಿನಾಂಕ ಎಷ್ಟು ಇದೆ ಅಂತಾ ಲೆಕ್ಕ ಹಾಕುತ್ತಿದ್ದೆವು. ಶಾಲೆಗೆ ಎಷ್ಟು ದಿನ ರಜೆ ಸಿಗುತ್ತೆ? ಎಂಹ ಕುತೂಹಲ ನಮ್ಮಲ್ಲಿ. ಕೆಲವೊಮ್ಮೆ ಸಾರ್ವಜನಿಕ ರಜಾದಿನಗಳು ಶನಿವಾರ, ಭಾನುವಾರ ಬಂದರೆ ಒಂದು ರಜೆ ನಷ್ಟವಾಯಿತಲ್ಲಾ ಅಂತಾ ಬೇಸರವೂ ಆಗುತ್ತಿತ್ತು. ಹಾಗಂತ ಕ್ಯಾಲೆಂಡರ್್ನಲ್ಲಿ ರಜೆ ಇರುವ ದಿನಗಳು ಸೇರಿ ಇನ್ನೂ ಹೆಚ್ಚಿನ ರಜೆಗಳು (ಕೇರಳದಲ್ಲಿ ಬಂದ್ ಸರ್ವೇ ಸಾಮಾನ್ಯ ಇಂತಿರುವಾಗ ಅಲ್ಲೂ ಒಂದೆರಡು ರಜೆ, ಅದರೆಡೆಯಲ್ಲಿ ಭಾರೀ ಮಳೆ, ಯಾವುದಾದರೂ ಮಹಾನ್ ವ್ಯಕ್ತಿಗಳು ಸಾವನ್ನಪ್ಪಿದರೆ ಸಿಗುವ ಶೋಕ ರಜೆ, ಓಣಂ, ಕ್ರಿಸ್್ಮಸ್ ಮೊದಲಾದ ಹಬ್ಬಗಳಿಗೆ ಸಿಗುವ 10 ದಿನಗಳ ರಜೆ) ಸಿಕ್ಕಿದರೂ ಶಾಲಾ ದಿನಗಳಲ್ಲಿ ಅದೂ ಕಮ್ಮಿಯೇ.

ಮತ್ತಷ್ಟು ಓದು »

13
ಡಿಸೆ

ದೇವರು, ಧರ್ಮ ಮತ್ತು ಮತ

–  ಗೋವಿಂದ ರಾವ್ ವಿ ಅಡಮನೆ

ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ? ಎಂಬ ಬ್ಲಾಗಿನಲ್ಲಿ ನನ್ನ ದೃಷ್ಟಿಯಲ್ಲಿ ದೇವರು ಎಂದರೇನು ಎಂಬುದನ್ನು ವಿವರಿಸುತ್ತಾ – ನಾನು ನಂಬಿರುವ ‘ವಿಚಿತ್ರತೆ’ ದೇವರು ಬೇಕಾಬಿಟ್ಟಿಯಾಗಿ ಕಾರ್ಯಮಾಡುವಂತಿಲ್ಲ. ಅರ್ಥಾತ್, ಅದು ‘ಸರ್ವಶಕ್ತ’ವಲ್ಲ. ಎಂದೇ, ಅದನ್ನು ಓಲೈಸಲೂ ಸಾಧ್ಯವಿಲ್ಲ. ಅದು ಕರುಣಾಮಯಿಯೂ ಅಲ್ಲ, ನಿರ್ದಯಿಯೂ ಅಲ್ಲ. ಅರ್ಥಾತ್, ಜೀವಿಸಹಜವಾದ ಸಂವೇದನೆಗಳೇ ಆಗಲಿ, ಭಾವೋದ್ವೇಗಳೇ ಆಗಲಿ, ಜನನ-ಮರಣಗಳೇ ಆಗಲಿ ಇಲ್ಲದಿರುವ ಸ್ಥಿತಿ ಈ ‘ವಿಚಿತ್ರತೆ’. ಎಂದೇ, ಅದು ನಿರ್ವಿಕಾರ. ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಮತ್ತು ಅದರ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ ಎಂದು ಈಗಾಗಲೇ ಘೋಷಿಸಿದ್ದೇನೆ. ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’ ಎಂಬುದು ನನ್ನ ನಿಲುವು – ಎಂದು ಹೇಳಿದ್ದೆ. ಈ ಬ್ಲಾಗಿನಲ್ಲಿ ಅದೇ ವಿಚಾರಧಾರೆಯನ್ನು ಮುಂದುವರಿಸುತ್ತಾ ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತೇನೆ. ಮೇಲ್ನೋಟಕ್ಕೆ ಸರಳವಾಗಿ ಗೋಚರಿಸುವ – ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’- ಎಂಬ ವ್ಯಾಖ್ಯಾನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೂಲ ಮತ್ತು ಅನುನಿಯಮಗಳೇನು ಎಂಬುದನ್ನು ತಿಳಿಸುವುದಿಲ್ಲ. ಬಹುಶಃ ಎಲ್ಲರೂ ಒಪ್ಪುವ ರೀತಿಯಲ್ಲಿ ಇವನ್ನು ತಿಳಿಸುವ ಸಾಮರ್ಥ್ಯ ಯಾರಿಗೂ ಇಲ್ಲವೋ ಏನೋ. ಎಂದೇ, ಈ ದಿಶೆಯಲ್ಲಿ ಪ್ರಯತ್ನಿಸಿದವರ ಪೈಕಿ ಯಾರಿಗೂ ಸರ್ವಮಾನ್ಯತೆ ದೊರೆತಿಲ್ಲ. ದೊರೆತಿದ್ದಿದ್ದರೆ ಇಂದು ನಮಗೆ ಗೋಚರಿಸುತ್ತಿರುವ ‘ಧರ್ಮಯುದ್ಧ’ಗಳು ನಡೆಯುತ್ತಲೇ ಇರಲಿಲ್ಲ, ‘ಮತಾಂತರ’ದ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ.

ಮತ್ತಷ್ಟು ಓದು »