ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ


ಸಂಸ್ಕೃತಿ ಸಂಕಥನ 15 -ಭಾರತೀಯ ಪ್ರಭುತ್ವದ ಸೆಕ್ಯುಲರ್ ಗೊಂದಲಗಳು
ರಮಾನಂದ ಐನಕೈ
ಬಹುಸಂಸ್ಕೃತಿ ಹಾಗೂ ರಿಲಿಜನ್ ಎರಡೂ ಒಟ್ಟಿಗೇ ಬಾಳಬೇಕಾದ ಭಾರತದಂತಹ ದೇಶದಲ್ಲಿ ಪ್ರಭುತ್ವ ತಟಸ್ಥವಾಗಿರಲು ಸಾಧ್ಯವೇ? ಏಕೆಂದರೆ ಇಲ್ಲಿ ನಂಬಿಕೆಯಲ್ಲಿ ಭಿನ್ನತೆ ಇದೆ. ಇಂಥಲ್ಲಿ ಸೆಕ್ಯುಲರ್ ಪ್ರಭುತ್ವ ಯಾರಿಗೆ ನ್ಯಾಯ ನೀಡುತ್ತದೆ? ಒಂದಕ್ಕೆ ನೀಡಿದ ನ್ಯಾಯ ಇನ್ನೊಂದಕ್ಕೆ ಅನ್ಯಾಯವಾಗಲು ಸಾಧ್ಯ. ಏಕೆಂದರೆ ರಿಲಿಜನ್ನವರು ಲೋಕಜ್ಞಾನದಲ್ಲಿ ಬದುಕುತ್ತಾರೆ. ಸಂಸ್ಕೃತಿಯಲ್ಲಿ ಕ್ರಿಯಾಜ್ಞಾನ ಇರುತ್ತದೆ. ಸೆಕ್ಯುಲರ್ ನೀತಿ ಲೋಕಜ್ಞಾನದಲ್ಲಿ ಉದಯಿಸಿದ್ದು. ಹಾಗಾಗಿ ಕ್ರಿಯಾಜ್ಞಾನದ ಸೂಕ್ಷ್ಮತೆಗೆ ಸ್ಪಂದಿಸುವಲ್ಲಿ ಸೋಲುವ ಸಾಧ್ಯತೆ ಇದೆ. ಹಾಗಾಗಿ ಸೆಕ್ಯುಲರ್ ನೀತಿಯನ್ನು ಭಾರತೀಯ ಸಂದರ್ಭದಲ್ಲಿ ಪುನರ್ಪರಿಶೀಲನೆ ಮಾಡುವ ಅಗತ್ಯ ಇದೆ.
ಭಾರತ ಸರಕಾರದ ಸೆಕ್ಯುಲರ್ ನೀತಿಯ ಸುತ್ತ ಹಲವು ಸಂದಿಗ್ಧಗಳಿವೆ. ನಮ್ಮ ಪ್ರಭುತ್ವಕ್ಕೆ ಈ ಪರಿಸ್ಥಿತಿ ಎದುರಾಗಲು ಕಾರಣವೇನು? ಸೆಕ್ಯುಲರ್ ಎಂಬ ಸಮಾನತೆಯ ಮಂತ್ರ ನಮ್ಮಲ್ಲಿ ಯಾವ ಫಲಿತಾಂಶ ನೀಡುತ್ತಿದೆ?