ವಿಶಿಷ್ಟ ಸ್ಯೆಕಲ್ಲಿನ ಬೆಲ್ಜಿಯಂ ಜೋಡಿ
-ಗೋವಿಂದ ನೆಲ್ಯಾರು
ನಡುರಾತ್ರೆ ಎಪಿ ಸುಬ್ರಮಣ್ಯಂ ಅವರಿಂದ ಸತತ ನನ್ನ ಸಂಪರ್ಕ ಪ್ರಯತ್ನ. ನಾನು ರಾತ್ರಿ ಬೇಗ ಮಲಗುವ ವ್ಯಕ್ತಿ. ಅದುದರಿಂದ ನಿದ್ದೆಯ ಮದ್ಯೆ ಕಿವಿಗೊಟ್ಟು ಎಲ್ಲಕ್ಕೂ ಹೂಂಗುಟ್ಟಿದೆ. ಎರಡು ಜನ ಎರಡು ಪೆಡಲ್ ಎರಡು ಚಕ್ರದ ಗಾಡಿ ಯಾವುದೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಕಿವಿ ಸಮಸ್ಯೆಯೂ ನನಗುಂಟು. ಮರುದಿನ ಮಾಮೂಲಿ ಒಂಬತ್ತು ಕಿಮಿ ದೂರದ ತ್ರಿಚಕ್ರ ತಿರುಗಾಟದಿಂದ ಹಿಂತಿರುಗಿದ ನಂತರ ನಮ್ಮ ಸುಬ್ಬಣ್ಣ ಮೊದಲು ಮಾತನಾಡಿದ ಅನಿಲ ಪರದೇಶಿ ಸೈಕಲಿಗರ ಬೇಟಿಯಾದೆಯಾ ? ಎನ್ನುವಾಗಲೇ ನನಗೆ ಎಚ್ಚರವಾದುದು, ಒಂದು ಅವಕಾಶ ತಪ್ಪಿಸಿಕೊಂಡೆನಾ ? ಕೂಡಲೇ ಸುಬ್ರಮಣ್ಯಂ ಅವರ ಪುನಹ ಸಂಪರ್ಕಿಸಿದೆ. ಅವರು ಸೈಕಲ್ ಸವಾರರ ಜಾಲತಾಣದ ವಿಳಾಸವೂ ಚೂರು ಪ್ರವಾಸದ ವಿವರವನ್ನೂ ಕೊಟ್ಟರು. http://eurasia.cyclic.eu/
ನೋಡಿದರೆ ಅವರಿರುವುದು ಜರ್ಮನಿಯ ಪ್ರಖ್ಯಾತ ಹೇಸ್ ಕಂಪೇನಿಯ ಪಿನೊ ಎನ್ನುವ ಇಬ್ಬರು ಪ್ರಯಾಣಿಸಬಹುದಾದ ಸೈಕಲು. ಪ್ರಾಯುಶ: ಈ ಸೈಕಲು ಇನ್ನೊಮ್ಮೆ ನೋಡುವ ಅವಕಾಶ ಸಿಗುವುದು ದುರ್ಲಬ. ಕೂಡಲೆ ಪೆಡಲಿಸಿದೆ ರಸ್ತೆ ಬದಿಗೆ. ಕಾಲು ಗಂಟೆಯೊಳಗೆ ಅವರು ಆಗಮಿಸಿದರು. ಒಬ್ಬ ಸೈಕಲ್ ಆಸಕ್ತ ನಿಮಗೆ ದಾರಿಯಲ್ಲಿ ಸಿಗಬಹುದೆಂಬ ಸೂಚನೆ ಮೊದಲೇ ಸುಬ್ಬಣ್ಣ ಅವರಿಗಿತ್ತಿದ್ದರು ಅನಿಸುತ್ತದೆ.
ಮತ್ತಷ್ಟು ಓದು
ಒನ್ ಟು ತ್ರೀ ವಿಷ್ಣುವರ್ಧನ
– ಫಿಲ್ಮಿ ಪವನ್
ಏನ್ರಿ ಗ್ರಹಚಾರ, ಏನೇ ಹೇಳಿ ಮೊದಲ ಸರಿ ಬರದಾಗ ಬಾರೋ ಮಜಾ ಎರಡನೇ ಸರಿ ಬರಲ್ಲ. ಇ ಬರಹಾನ ಮೊದಲೇ ಬರೆದಿದ್ದೆ, ನನ್ನ ಗ್ರಹಚಾರ ಸರಿ ಇಲ್ದೆ ಬರೆದಿದ್ದ ಬರಹವೆಲ್ಲ ಹೇಗೋ ಮಿಸ್ ಆಗೋಗಿತ್ತು.ಎರಡು ದಿನ ಅಷ್ಟು ಕಷ್ಟ ಪಟ್ಟು ಬರೆದು ವೇಸ್ಟ್ ಆಯ್ತಲ್ಲ ಅಂತ ಫೀಲಿಂಗ್ ಅಲ್ಲಿದ್ದೆ. ಈಗ ಮತ್ತೆ ಬರಿತ ಇದ್ದೀನಿ. ಹೇಗಿದ್ಯೋ ನೀವೇ ಹೇಳ್ಬೇಕು. ಮೊದಲ ಬರಹದಲ್ಲಿದ್ದೆ ಬಹಳಷ್ಟು ಪಾಯಿಂಟ್ ಗಳು ಇಲ್ಲಿ ಖಂಡಿತ ಮಿಸ್ ಆಗಿರುತ್ತೆ.
ನಮ್ಮೂರಿನ ಡಬ್ಬ ಥಿಯೇಟರಲ್ಲಿ ಒಂದಾದ ವೆಂಕಟೇಶ್ವರದಲ್ಲಿ, ವಿಷ್ಣುವರ್ಧನ ಫಿಲಂ ಬಂದೈತೆ ಅಂತ ಸರ್ಕಲ್ ನಲ್ಲಿ ಹಾಕಿರೋ ದೊಡ್ಡ ಪೋಸ್ಟರ್ಗಳು ನೋಡಿದಾಗ ತಿಳೀತು, ಹಾಗೇ ಗೆಳೆಯ ಯಾದವ್ ಗೆ ಫೋನ್ ಮಡಿ ಮಗ bioscope ಅಂದೇ. ಲೇ ಅಪ್ಪಿ ನ ಈಗ ನ ಶಿವಾಜಿನಗರದಲ್ಲಿದ್ದಿನಿ, ಬರಕ್ಕೆ ಇನ್ನ ಬಹಳ ಹೊತ್ತಾಗುತ್ತೆ ಇವಿನಿಂಗ್ ಶೋ ಹೋಗಣ ಅಂದ. ನಾನು ಮಗ ಸಿನಿಮ ಚೆನ್ನಾಗಿದ್ರೆ ಇನ್ನೊಂದು ಸಲಿ ನೋಡನ, ಕಾಯಕ್ಕಂತು ಸಾಧ್ಯ ಇಲ್ಲ ಅಂತ ಹೇಳಿ ನಮ್ ಮುರುಗನ್ ಚಿಪ್ಸ್ ಅಂಗಡಿಲಿ 100gm ಸೈಕಲ್ ಚಿಪ್ಸ್ ತಗೊಂಡು ಟಾಕಿಸ್ ಅಲ್ಲಿ 50 ರು ಟಿಕೆಟ್ ತೊಗೊಂಡು ಸಿನಿಮ ಹಾಲ್ ಅಲ್ಲಿ ಕೂತೆ.
7up ಆಡ್ ಅಲ್ಲಿ ಕೂದಲು ಮೇಲಕ್ಕೆ ಮಾಡಿಕೊಂಡಿರೋ ಬೊಂಬೆ ತಾರಾ ಇದ್ದ ಒಂದು ಕಾರ್ಟೂನ್ ಬಂದು, ನಾನೆ ದಿರೆಕ್ಟೊರ್ ಕಣ್ರೀ ಅಂತು. ನ ನಂಬಲಿಲ್ಲ ಅದ್ರು ಸಿನಿಮದ ಯಾವ ಪ್ರಚಾರ ಕಾರ್ಯಕ್ರಮದಲ್ಲೂ ನಿರ್ದೇಶಕರನ್ನು ನೋಡೇ ಇಲ್ಲ ಎಲ್ಲಿ ನೋಡಿದರು ಖಿಲಾಡಿ ಕುಳ್ಳ ಮತ್ತು ನಾಯಕ ನಾಯಕಿಯರು. ಹಾಗಾಗಿ ಇ 7up ಬೊಂಬೆನೆ director ಅಂದ್ಕೊಂಡು ಕೂತೆ. ಬಂದ ನಿರ್ದೇಶಕ ಜೇಬಲ್ಲಿ ಮೊಬೈಲ್ ಇದ್ದೀಯ ನೋಡ್ಕೊಲ್ರಿ ಅಂದಾಗ ಸಿನಿಮಾ ಹಾಲ್ ಅಲ್ಲಿ ಇದ್ದ 50 ಭಾಗದಷ್ಟು ಜನ ಒಮ್ಮೆ ಮೊಬೈಲ್ ಮುಟ್ಟಿ ನೋಡ್ಕೊಂಡಿದ್ದು ನಿಜ. ನಾ ಕೂಡ ನೋಡಿ, ಮೊಬೈಲ್ ನ ಸೈಲೆಂಟ್ ಮೋಡ್ ಗೆ ಹಾಕಿದೆ. ಒಪೆನಿಂಗ್ ರೀಲ್ ಅಲ್ಲೇ ಇದು ಸಾಹಸ ಸಿಂಹನಿಗೆ ಅವನ ಆಪ್ತಮಿತ್ರನ ಅರ್ಪಣೆ ಎಂಬ ಮಾತು ದ್ವಾರಕೀಶ್ ಅವರ ಧ್ವನಿಯಲ್ಲಿ ಕೇಳಿ ಬಂತು. ಸುದೀಪ್ introduction ಡಿಟ್ಟೋ ಆಪ್ತಮಿತ್ರ ಮೊದಲನೇ ಸಾಹಸ ದೃಶ್ಯದಂತೆ ಮಾಡಿದ್ದರು. ಡೈಲಾಗು ಫೈಟು ಎಲ್ಲ same t same. ಎಲ್ಲೋ ಒಂದು ಮುಲೆಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮೊಡನೆ ಇಲ್ಲ ಎಂಬ ನೋವನ್ನು ಸಾಹಸ ದೃಶ್ಯದ ಮೂಲಕ ನಿರ್ದೇಶಕರು ಬಹಳ ಜಾಣ್ಮೆಯಿಂದ ತೆರೆಯ ಮೇಲೆ ಮುಡಿಸಿದ್ದರು.