ಇಂತಹ ಘಟನೆ ಇನ್ಯಾವ ನಾಡಿನಲ್ಲಿ ನಡೆದೀತು.
– ಸಂತೋಷ್ ಪೂಜಾರಿ
ಸಾರ್ವಜನಿಕ ಕಾರ್ಯಕ್ರಮಲ್ಲಿ ಭಾಗವಹಿಸುವ ಆಸಕ್ತಿ ಅಷ್ಟಕಷ್ಟೆ.ತನಗೆ ಯಾರಾದರೂ ಸನ್ಮಾನ ಮಾಡಿದರೇ ಆ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿದ್ದ ಭಾರತದ ಪ್ರಪ್ರಥಮ ಮಹಾ ದಂಡನಾಯಕನಾದ ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರ ಪ್ರತಿಮೆಗೆ ದಿನಾಂಕ ೧೪/೧೧/೨೦೧೧ ರಂದು ಒದಗಿದ ಸ್ಥಿತಿಯಿಂದಾಗಿ ಭಾರತದ ಸೇನಾ ಜಿಲ್ಲೆಯ ವೀರ ಪರಂಪರೆಯ ಜನರು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ.
ಕೊಡಂದೇರ ಮಾದಪ್ಪ ಕಾರ್ಯಪ್ಪ ೨೮ ಜನರು ೧೮೯೯ ರಂದು ಕೊಡಗಿನ ಶನಿವಾರ ಸಂತೆಯಲ್ಲಿ ಜನ್ಮತಾಳಿದ ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಡ ವಿಧ್ಯಾಭ್ಯಾಸವು ಮಡಿಕೇರಿಯಲ್ಲಿ ಮುಗಿಸಿ ಕಾಲೇಜು ವಿಧ್ಯಾಭ್ಯಾಸವನ್ನು ಚೆನೈನಲ್ಲಿ ಮುಗಿಸಿತ್ತಾರೆ. ತಮ್ಮ ಕಾಲೇಜು ದಿನಗಳಲ್ಲಿ ಉತ್ತಮ ಕ್ರಿಢಾಪಟುವಾಗಿದ್ದ ಇವರು ಉತ್ತಮ ಹಾಕಿ ಮತ್ತು ಟೆನ್ನಿಸ್ ಆಟಗಾರರಾಗಿದ್ದರು. ನಂತರದಲ್ಲಿ ಸೈನಿಕ ಸೇರಿದ ಈ ವೀರ ಸೇನಾನಿ ನಂತರ ತಮ್ಮ ಪ್ರಾಮಾಣಿಕತೆ ಶಿಸ್ತು ಹಾಗೂ ತನ್ನ ಕೆಲಸದಿಂದ ಭಾರತ ಮೊದಲ ಮಹಾ ದಂಡನಾಯಕರಾಗಿ ಕಾರ್ಯ ನಿರ್ವಯಿಸಿದ್ದಾರೆ.
ಎರಡನೆ ಪ್ರಪಂಚ ಯುದ್ದದಲ್ಲಿ ಪಾಲ್ಗೊಂಡಿದ್ದ ಎವರು ನಂತರ ೧೯೪೭ ರ ಭಾರತ ಮತ್ತು ಪಾಕಿಸ್ತಾನದ ಯುದ್ಧದಲ್ಲಿ ಭಾರತೀಯ ಸೈನ್ಯವನ್ನು ಮುಂದುವರೆಸಿದರು ಭಾರತದ ಸ್ವತಂತ್ರ ಬಂದ ನಂತರ ಅದರ ಬೆನ್ನ ಹಿಂದೆ ಇಡಿ ಭಾರತಕ್ಕೆ ಆಪತ್ತು ತಂದುಕೊಡುವ ನಮ್ಮ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ದ ಯುದ್ದ ಮಾಡಬೇಕಾಯಿತು.ಸ್ವತಂತ್ರ ಭಾರತದ ಮಹಾ ಸೇನಾನಿಯಾದ ಕಾರ್ಯಪ್ಪನವರಿಗೆ ಸ್ವತಂತ್ರ ಬಂದ ತಕ್ಷಣ ಅದರ ಬೆನ್ನಲ್ಲೇ ಮತ್ತೊಂದು ಯುದ್ದವನ್ನು ಎದುರಿಸುವುದು ಮಹಾನ್ ಕಠಿಣ ಸವಾಲಾಗಿತ್ತು ಭಾರತದ ಸ್ವತಂತ್ರ ಆಗ ತಾನೆ ಸಿಕ್ಕ ಕಾರಣ ಸೈನಿಕರಲ್ಲಿ ಶಿಸ್ತು, ಯುದ್ದ ಸಲಕರಣೆಗಳ ಅಲಭ್ಯತೆ ಸೈನಿಕರ ದಕ್ಷತೆ ಇವೆಲ್ಲದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಯಿತು. ಆದರೆ ಈಗಾಗಲೆ ಎರಡನೇ ಪ್ರಪಂಚ ಯುದ್ದದಲ್ಲಿ ಪಾಲ್ಗೊಂಡ ಅನುಭವವಿದ್ದ ಕಾರ್ಯಪ್ಪನವರಿಗೆ ಸೈನ್ಯವನ್ನು ಮುನ್ನೆಡೆಸುವುದು ಕಠಿಣವಾಗಲಿಲ್ಲ ಅವರು ಅದನ್ನು ಯಶಸ್ವಿಯಾಗಿ ನಿರ್ವಯಿಸಿದರು ಕೊಡ ಯಾವ ದೇಶ ನಮ್ಮ ಜೊತೆಗೆ ಯುದ್ದವನ್ನು ಮಾಡಿ ನಮ್ಮ ಸರ್ವನಾಶ ಮಾಡುವುದರ ಪಣ ತೊಟ್ಟಿತೊ, ಅದೇ ದೇಶ ಮತ್ತೆ ತನ್ನ ಪ್ರಾಣ ಭಿಕ್ಷೆಯನ್ನು ಬೇಡುವ ತರ ಕಾರ್ಯಪ್ಪನವರು ನಮ್ಮ ಹೋರಾಟಾವನ್ನು ಸಂಘಟಿಸಿದರು ಅದು ಅತ್ಯಂತ ಸಣ್ಣದಿನದ ಅಂತರದಲ್ಲಿ ಸುಲಭ ಜಯ ಸಾಧಿಸಿದರು ಭಾರತೀಯರಿಗೆ ಆ ವಿಜಯ ತಂದು ಕೊಟ್ಟಾ ಆತ್ಮ ವಿಶ್ವಾಸ ಇದೆಯಲ್ಲ ಅದು ವರ್ಣಿಸಲು ಸಾದ್ಯವಿಲ್ಲ ಆಲ್ಲಿಂದ ಮುಂದೆ ಭಾರತೀಯರು ಯಾವುದೇ ಯುದ್ದಕ್ಕೆ ಎದರಲಿಲ್ಲ. ಅದೇ ಭಾರಿ ಬೇರೆ ಬೇರೆ ದೇಶಗಳು ನಮ್ಮ ಮೇಲೆ ಯುದಕ್ಕೆ ಬಂದರೂ ಮೊದಲ ಜಯದ ನೆನಪಿನೊಂದಿಗೆ ಇಂದು ನಮ್ಮ ಸೈನಿಕರು ಯುದ್ದಕ್ಕೆ ತೆರಳುತ್ತಾರೆ.ಅದಕ್ಕೆ ಕಾರಣಿಭೊತರಾಗಿದ್ದ ನಮ್ಮ ಕೊಡಗಿನ ಹೆಮ್ಮೆಯ ಕುಲಪುತ್ರ ಫೀಲ್ಡ್ ಮಾರ್ಶಲ್ ಕಾರ್ಯಪ್ಪ ಅವರು ಭಾರತೀಯ ಸೇನೆಗೆ ಮಾಡಿದ ಸೇವೆಯನ್ನು ಮನ್ಗಂಡು ೧೯೯೬ ರಲ್ಲಿ ಮಡಿಕೇರಿಯಲ್ಲಿ ಸುದರ್ಶನ ವೃತ್ತದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಯಿತು.
ಈ ದೌರ್ಜನ್ಯಗಳಿಗೆ ಕೊನೆ ಎಂದು?
-ವಿಜಯೇಂದ್ರ
ದನಗಳನ್ನು ಕ್ಯಾಂಟರ್ನಲ್ಲಿ ಸಾಗಿಸುತ್ತಿದ್ದಲೆನ್ನಲಾದ ಕೃಷ್ಣಪ್ಪ ಎಂಬ ದಲಿತನನ್ನು ಪ್ರಾಣಿ ದಯಾ ಸಂಘಕ್ಕೆ ಸೇರಿದವರು ಎನ್ನಲಾದ ಹಲವರು ತಡೆದು ಹೊಡೆದು ಸಾವಿಗೀಡು ಮಾಡಿದರು ಎಂದು ಸುದ್ದಿ ಇತ್ತೀಚೆಗಷ್ಟೇ ಗ್ರಾಮೀಣ ಬೆಂಗಳೂರು ವಿಭಾಗದಿಂದ ವರದಿಯಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಸ್ವ್ವಾತಂತ್ರ್ಯ ಬಂದ ಆರು ದಶಕಗಳ ಅನಂತರವೂ ಭಾರತದಲ್ಲಿ ಒಂದು ವರ್ಗದ ಜನತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗಾಗಿ ಅವರ ಮೇಲೆ ಅತ್ಯಾಚಾರ, ಹಲ್ಲೆ, ಮಾನಭಂಗಗಳಂತಹ ಗಂಭೀರ ಅಫರಾದಗಳನ್ನು ಎಸಗಲಾಗುತ್ತಿದೆ.
೫೦೦೦ ವರ್ಷಗಳ ಕಾಲ ವರ್ಣಾಶ್ರಮ ಪದ್ದತಿಯನ್ನು ಭಾರತ ಅನುಸರಿಸಿಕೊಂಡು ಬಂದ ಫಲವಾಗಿ ಹುಟ್ಟಿಕೊಂಡ ಅಸ್ಪೃಶ್ಯ ಜಾತಿ ಮತ್ತು ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಿನ್ನೀಸ್ ಧಾಖಲೆಯನ್ನು ಮೀರಿಸುತ್ತದೆ ಎಂದರೆ ತಪ್ಪ್ಪಾಗಲಾರದು.
ಯಾವುದೇ ಧರ್ಮ ಜಾತಿ ಆಧರಿತ ತಾರತಮ್ಯ ಕಾನೂನು ಬಾಹಿರ ಎಂದು ಸಂವಿಧಾನದ ಕಲಂಗಳಲ್ಲಿ ಸಾರಿ ಹೇಳಿದರೂ ಸಮಾಜದ ಒಂದು ಪ್ರಮುಖ ಭಾಗದ ಜನರನ್ನು ನಾವು ನಿರ್ಲಕ್ಷಿಸಿದ್ದೇವೆ. ಅನುಚ್ಚೇದ ೧೭ ರಲ್ಲಿ ಅಸ್ಪೃಶ್ಯ ಆಚರಣೆ ನಿಷೇದವೆಂದು ಸ್ಪಷ್ಟಪಡಿಸಿದ್ದರೂ, ರಾಷ್ಟ್ರದ ಎಲ್ಲಾ ಕಡೆ ದಲಿತರ ಮೇಲೆ ಕೊಲೆ, ಅತ್ಯಾಚಾರ. ದೌರ್ಜನ್ಯ, ಬಹಿಷ್ಕಾರಗಳಂತಹ ಅನಿಷ್ಟ ಕ್ರೂರ ಪದ್ದತಿಗಳು ಮುಂದುವರಿದೇ ಇದೆ. ಮತ್ತಷ್ಟು ಓದು
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 14- ಮೈಸೂರಿನವರ ಮನಸೆಳೆದ ಕಲೆ
ನಮ್ಮವನೇ ಆದ ನಾರಾಯಣನ ಮನೆಯಲ್ಲಿ ನಾನು, ಶ್ರೀ ಗೋಪಾಲಕೃಷ್ಣ ಭೇಟಿಯಾದೆವು. ವಿಷಯ ವಿವರ ಚರ್ಚಿಸಿಯಾಯಿತು. ಆದರೂ ಯಕ್ಷಗಾನದ ಪರಿಚಯವಿಲ್ಲದ ಮೈಸೂರು ನಗರಕ್ಕೆ ಮೇಳದ ಜನರನ್ನು ಕಟ್ಟಿಕೊಂಡು ಹೋಗುವುದೆಂದರೆ? ಎಂಬ ಸ್ವರವೆತ್ತಿದೆ. ಕೊನೆಗೆ ಹೇಸಿಗೆ ಕೆಲಸವೆಂದು ಆಗಬಾರದಲ್ಲ ಎಂದೆ.
“ಮೈಸೂರಿನವರು ಎಂದರೆ ಯುರೋಪಿನವರಲ್ಲ. ಅವರೂ ಕನ್ನಡಿಗರೇ. ನಿಮ್ಮ ಕಲೆಯ ಬಗ್ಗೆ ನಿಮಗೇ ಅಳುಕು ಇದೆ ಎಂದಾದರೆ ಪ್ರದರ್ಶನ ವಿಫಲವಾದೀತು. ವಿಶ್ವಾಸವಿದ್ದರೆ ಸಫಲಗೊಂಡೀತು. ಹೊರಡಿ” ಎಂದ. ನಮ್ಮ ಧರ್ಮಸ್ಥಳ ಮೇಳದಲ್ಲೇ ಮೊದಲು ಹಾಸ್ಯಗಾರನಾಗಿ ನನ್ನಿಂದಲೇ ತರಬೇತಿ ಪಡೆದು, ಆಗಲಷ್ಟೇ ಮೂಲ್ಕಿ ಮೇಳವನ್ನು ಆಡಳಿತಕ್ಕಾಗಿ ವಹಿಸಿಕೊಂಡಿದ್ದ ನಾರಾಯಣನೂ “ನಿಮ್ಮ ಜವಾಬ್ದಾರಿಯಲ್ಲಾದರೆ ಹೋಗೋಣ ಮಾವ. ವೇಷಭೂಷಣ ಸಾಮಗ್ರಿಗಳನ್ನು ಮೂಲ್ಕಿಯಿಂದ ಕೇಳಿ ತರಬಹುದು” ಎಂದು ತಿಳಿಸಿದ.
“ಸಂಭಾವನೆ ಎಷ್ಟು ಸಿಗುತ್ತದೆ?” ಎಂದು ಸಹಜವಾಗಿ ಪ್ರಶ್ನಿಸಿದೆ.
“ಬರಿಯ ನೂರು (ಒಂದು ನೂರು) ರೂಪಾಯಿಗಳು ಮಾತ್ರ. ನಿಮ್ಮ ವ್ಯಾನಿನ ಪೆಟ್ರೋಲ್ ಮತ್ತು ಎರಡು ದಿನದ ಕಾಫಿಯ ವೆಚ್ಚಕ್ಕೆ ಸಾಲಬಹುದಷ್ಟೆ. ಅಲ್ಲಿನ ಊಟ-ವಸತಿಗಳ ವೆಚ್ಚಕ್ಕಾಗಿ ಅಲ್ಲಿನ ಪರಿಚಿತರು ಕೆಲವರಿಂದ ವಂತಿಗೆ ಎತ್ತಿದ್ದೇನೆ” ಎಂದು ಹೇಳಿದ ಗೋಪಾಲಕೃಷ್ಣನನ್ನು ಏನೆಂದು ಕರೆಯಲೂ ಶಬ್ದ ಸಾಲದು ಎನ್ನಿಸಿತು.
ಮತ್ತಷ್ಟು ಓದು