ವಿಷಯದ ವಿವರಗಳಿಗೆ ದಾಟಿರಿ

Archive for

19
ಡಿಸೆ

ಅಗತ್ಯವಿರುವವರಿಗೆ ವಿಮೆ ಕವಚ ಇಲ್ವಾ ?

-ಗೊವಿಂದ ನೆಲ್ಯಾರು
ಮೊನ್ನೆ ಮಂಗಳೂರಿನಿಂದ ಸರಕು ಹೊತ್ತು ಹೊರಟ ಹಡಗೊಂದು ಲಕ್ಷದ್ವೀಪದ ತೀರದಲ್ಲಿ ಮುಳುಗಿದ ವಿಚಾರ ಪತ್ರಿಕೆಯಲ್ಲಿ ಓದಿದೆ. ನಲುವತ್ತು ಲಕ್ಷ ರೂಪಾಯಿ ಹಡಗಿನ ಮೌಲ್ಯ. ಸಮುದ್ರದಲ್ಲಿ ಸಾಗುವ ಈ ಪುಟ್ಟ ಹಡಗುಗಳಿಗೆ ವೀಮೆ ಇಲ್ಲವೆನ್ನುವಾಗ ನನಗೆ ಕಳೆದ ವರ್ಷ ವೀಮಾ ಕಂಪೇನಿ ಸುತ್ತಿದ ವಿಚಾರ ನೆನಪಾಯಿತು.
ಕಳೆದ ವರ್ಷ ನಾನು ತ್ರಿಚಕ್ರ ತರಿಸಿ ನನ್ನ ದೂರ ಪ್ರಯಾಣದ ತಯಾರಿ ನಡೆಸುತ್ತಿದ್ದ ಕಾಲ. ಹಿರಿಯರಾದ ಶ್ರಿಪಡ್ರೆಯವರು ಹಲವು ಸಲಹೆ ಸೂಚನೆಗಳ ಕೊಟ್ಟಿದ್ದರು. ಅದರಲ್ಲಿ ಈ ವಿಮಾ ಯೋಜನೆಯೂ ಒಂದು. ಲಕ್ಷಾಂತರ ರೂಪಾಯಿ ವಿನಿಯೋಗಿಸಿದ ತ್ರಿಚಕ್ರದಲ್ಲಿ ಹಿಂದೆ ನೋಡದ ಪರಿಚಿತರಿಲ್ಲದ ಊರುಗಳಿಗೆ ಏಕಾಂಗಿಯಾಗಿ ಹೊರಟಿದ್ದೆ. ಅದುದರಿಂದ ವಿಮಾ ಪಡಕೊಳ್ಳುವುದು ಉತ್ತಮವೆನ್ನುವುದು ಸರಳ ವಿಚಾರ.

ಸೂಚನೆ ಕೊಟ್ಟುದಲ್ಲದೆ ಒಬ್ಬ ವಿಮಾ ಅಧಿಕಾರಿಯ ಸಂಪರ್ಕವನ್ನೂ ಶ್ರಿಪಡ್ರೆಯವರೇ ಕಲ್ಪಿಸಿಕೊಟ್ಟರು. ಹಾಗೆ ತಯಾರಿಯ ಗಡಿಬಿಡಿಯಲ್ಲಿಯೇ ಹಲವು ಬಾರಿ ಪುತ್ತೂರಿನ ವಿಮಾ ಕಛೇರಿಗೆ ಓಡಿದೆ. ಇದಕ್ಕೆ ಚಾಸಿ ನಂಬರ್ ಉಂಟಾ, ಆರ್ ಟಿ ಒ ಪರವಾನಿಗೆ ಉಂಟಾ ಇತ್ಯಾದಿ ಪ್ರಶ್ನೆಗಳ ಸರಮಾಲೆ ಮೇಲಿನವರು ರವಾನಿಸಿದರು. ಇಂತಹ ಗಾಡಿಗೆ ಹಿಂದೆ ಯಾವುದೇ ಬಾರತೀಯ ಕಂಪೇನಿ ವೀಮೆ ಕೊಟ್ಟಿರುವ ಸಾದ್ಯತೆ ಇಲ್ಲ. ಹಾಗಾಗಿ ನೀವೆ ಮೊದಲಿಗರಾಗಿರುತ್ತೀರಿ ಎಂದೂ ಹೇಳಿದೆ. ಪ್ರಯೋಜನವಾಗಲಿಲ್ಲ. ಅದರ ನೈಜ ಬೆಲೆ, ಖಚಿತ ಗುರುತು ಮೇಲಿನವರಿಗೆ ಸ್ಪಷ್ಟ ಪಡಿಸಲು ತಿಂಗಳುಗಳೇ ಬೇಕು ಅನಿಸಿತು. ಹಾಗಾಗಿ ಪ್ರವಾಸದ ಅವದಿಗೆ ವೀಮಾ ಕವಚದ ಆಸೆ ಬಿಟ್ಟೆ.

ನನ್ನ ಪ್ರವಾಸದುದ್ದಕ್ಕೂ ಯಾರಲ್ಲೂ ನನ್ನ ತ್ರಿಚಕ್ರದ ನೈಜ ಬೆಲೆ ಹೇಳುತ್ತಿರಲಿಲ್ಲ. ಹತ್ತು ಸಾವಿರವೋ ಅಂದಾಗ ಹೂಂ ಅನ್ನುತ್ತಿದ್ದೆ. ಹದಿನೈದೋ ಅಂದಾಗ ಹೌದು ಅನ್ನುತ್ತಿದ್ದೆ. ಅಂತೂ ಏನೂ ತೊಂದರೆಯಾಗದೆ ಸುಮಾರು ಒಂದೂವರೆ ವರ್ಷಗಳಿಂದ ಸುದಾರಿಸುತ್ತಿದ್ದೇನೆ. ನಮ್ಮೂರಲ್ಲಿ ಇಂತಹ ಬೇರೆ ತ್ರಿಚಕ್ರ ಇಲ್ಲದಿರುವದರಿಂದ ಕಳವು ಸಾದ್ಯತೆ ಕಡಿಮೆ. ಕದ್ದರೂ ಉಪಯೋಗಿಸುವುದು ಕಷ್ಟ. ಆಯಾ ಊರಲ್ಲಿ ನೆಲೆ ಇಲ್ಲದ ಪ್ರವಾಸಿಗಳು ಯಾವಾಗಲೂ ಪುಡಿಕಳ್ಳರ ಬಲಿಪಶು.

* * * * * * * * *

ಚಿತ್ರಕೃಪೆ: 1.bp.blogspot.com

 

19
ಡಿಸೆ

ಸಂಸ್ಕೃತಿ ಸಂಕಥನ -14 -ಏನಿದು ಸೆಕ್ಯುಲರಿಸಂ

ರಮಾನಂದ ಐನಕೈ

ರಿಲಿಜನ್ ಅನ್ನುವುದು ಮನುಷ್ಯ ಚಿಂತನೆಯಿಂದ ಹುಟ್ಟಿದ್ದಲ್ಲ. ಅದು ಗಾಡ್ನ  ಕೊಡುಗೆ. ಹಾಗಾಗಿ ರಿಲಿಜನ್ನಿನ ನಂಬಿಕೆ ಹಾಗೂ ಆಚರಣೆ ಎಂಬುದು ಮನುಷ್ಯನಿಗೆ ಗಾಡ್ ಹಾಕಿಕೊಟ್ಟ ಪಾಠ. ರಿಲಿಜನ್ ಅನುಭವಿಸುವುದು ಪ್ರತಿಯೊಬ್ಬ ಕ್ರಿಶ್ಚಿಯನ್ನನ ಹಕ್ಕು. ರಿಲಿಜನ್ ಅನ್ನುವುದು ಮನುಷ್ಯ  ನಿರ್ಮಿತ ಪ್ರಭುತ್ವವನ್ನೂ ಮೀರಿದ ಒಂದು ದೈವಿವ್ಯವಸ್ಥೆ ಎಂಬ ಗಾಢವಾದ ನಂಬಿಕೆಯಿದ್ದ  ಸಂದರ್ಭದಲ್ಲಿ ಕೆಥೋಲಿಕ್ ಹಾಗೂ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿ ಪಂಥ ರಿಲಿಜನ್ನಿನ ನಂಬಿಕೆಯ ಕುರಿತು ಒಳಜಗಳವನ್ನು ಪಂಚಾಯತಿಗೆ ತಂದಾಗ ಪ್ರಭುತ್ವ ಏನು ಮಾಡಬೇಕು? ಯಾರಿಗೆ ನ್ಯಾಯ ಕೊಟ್ಟರೂ ರಿಲಿಜನ್ನಿಗೆ ಅನ್ಯಾಯವಾಗುತ್ತದೆ. ಇದು ಪ್ರಭುತ್ವದ ಸಂದಿಗ್ಧ ಅಲ್ಲೇ ಹುಟ್ಟಿತು ಈ ಸೆಕ್ಯುಲರಿಸಂ ಎಂಬ ಹೊಸ ವಾಸ್ತವ……………

ದಿನನಿತ್ಯ ಒಂದಲ್ಲಾ ಒಂದು ಕಾರಣಕ್ಕಾಗಿ ನಾವು ‘ಸೆಕ್ಯುಲರಿಸಂ’ ಅನ್ನುವ ಪದವನ್ನು ಉಪ ಯೋಗಿಸುತ್ತೇವೆ. ಸೆಕ್ಯುಲರಿಸಂ ಆಧುನಿಕ ಚಿಂತನೆಯ ಪ್ರಮುಖ ಅಂಗವೇ ಆಗಿದೆ. ಹಾಗಾ ದರೆ ಸೆಕ್ಯುಲರಿಸಂ ಅನ್ನುವುದರ ಅರ್ಥ ಏನು? ನಮ್ಮ ಪರಿಸ್ಥಿತಿ ಏನಾಗಿದೆ ಎಂದರೆ ಸೆಕ್ಯುಲರಿಸಂ ಅಂದರೆ ಮನಸ್ಸಿನಲ್ಲಿ ಅರ್ಥವಾದಂತಾಗುತ್ತದೆ. ಆದರೆ ಅದನ್ನು ಬಾಯಲ್ಲಿ ಹೇಳಲಿಕ್ಕೆ ಬರುವುದಿಲ್ಲ. ಅದಕ್ಕೆ ಕಾರಣ ನಮ್ಮಲ್ಲಿ ಸೆಕ್ಯುಲರಿಸಂನ ಅನುಷ್ಠಾನ ಅಷ್ಟು ಗೋಜಲಾಗಿದೆ. ಹೀಗೆ ಹೇಳಲಿಕ್ಕೆ ಬಾರದ ಸೆಕ್ಯುಲರಿಸಮ್ಮೆ ದೇಶದ ಅನೇಕ ತೊಂದರೆಗಳಿಗೆ ಕಾರಣವಾಗಿದೆಯೋ ಎಂಬುದನ್ನು ಅರಿತುಕೊಳ್ಳ ಬೇಕಾಗಿದೆ. ಸಮಾಜಶಾಸ್ತ್ರದ ಹಕೀಮರಾದ ಬಾಲಗಂಗಾಧರರು ಕರ್ನಾಟಕದ ತುಂಬ ಸಂಚರಿ ಸುತ್ತ ಹೀಗೆ ಹೇಳಲುಬಾರದ ಅನೇಕಾನೇಕ ಸಂಗತಿಗಳನ್ನು ಸುಸಂಬದ್ಧವಾಗಿ ಹೇಳುವ ತಿಳುವಳಿಕೆ ನೀಡುತ್ತಿದ್ದಾರೆ.

ಮತ್ತಷ್ಟು ಓದು »