ವಿಷಯದ ವಿವರಗಳಿಗೆ ದಾಟಿರಿ

Archive for

5
ಜೂನ್

ಒಮ್ಮೆ ಜನಮತಸಾಂದ್ರತೆ (Demography) ಬದಲಾದರೆ…

– ಎಂ.ಡಿ ಸುಬ್ರಮಣ್ಯ ಮಾಚಿಕೊಪ್ಪ

ಪ್ರದೇಶವೊಂದನ್ನು (ಅದು ರಾಜ್ಯವಾಗಿರಲಿ ಅಥವಾ ರಾಜ್ಯವೊಂದರ ಭಾಗವಾಗಿರಲಿ) ದೇಶದಲ್ಲಿ ಇರುವಂತೆ ಮಾಡುವ ಅನೇಕ ಸಮಾನ ಅಂಶಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾಗಿದ್ದು ಆ ಪ್ರದೇಶದ ಜನಮತಸಾಂದ್ರತೆ (demography) ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಒಮ್ಮೆ ಆ ಪ್ರದೇಶದ ಜನಮತಸಾಂದ್ರತೆ ಬದಲಾದರೆ ಎಲ್ಲವೂ ಬದಲಾಗುತ್ತದೆ. ಇಲ್ಲಿ ಎಲ್ಲವೂ ಅಂದರೆ ಆ ಪ್ರದೇಶದ ಭಾಷೆ, ಆಚಾರ-ವಿಚಾರ, ರಾಷ್ಟ್ರನಿಷ್ಠೆ, ನಾಯಕರುಗಳು-ಎಲ್ಲವೂ ಬದಲಾಗುತ್ತದೆ!!! ಇದಕ್ಕೆ ಕಶ್ಮೀರಕಣಿವೆಯ ಉದಾಹರಣೆಯೇ ನಮ್ಮ ಕಣ್ಣುಮುಂದೆ (ಕಣ್ಣಿದ್ದವರಿಗೆ) ಕಾಣುತ್ತಿದೆ. ಕಲ್ಹಣ ಸಾಹಿತ್ಯ ರಚಿಸಿದ ಆ ಕಾಶ್ಮೀರಿ ಭಾಷೆ ಕಣಿವೆಯಲ್ಲಿ ಎಲ್ಲಿದೆ? ಬೋರ್ಡ್ ಗಳಲ್ಲೆಲ್ಲಾ ಅರಬಿ ಲಿಪಿ. ‘India’ ಎಂದು ಕಾಣುವ ಬೋರ್ಡ್ ಗಳ ಮೇಲೆ ಕಲ್ಲು, ಆಗಸ್ಟ್ ೧೫ ಬಂದ್!! ವಿಜೃಂಭಣೆಯ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ!!! ನಾಗಲ್ಯಾಂಡ್, ಮಿಜೊರಾಂ ಪರಿಸ್ಥಿತಿಯೂ (ಸದ್ಯಕ್ಕೆ ತಣ್ಣಕ್ಕಿದ್ದಂತೆ ಕಂಡರೂ) ತುಂಬವೇನು ಭಿನ್ನವಾಗಿಲ್ಲ. ಒಟ್ಟು ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು ಕಶ್ಮೀರ, ನಾಗಲ್ಯಾಂಡ್ ಮತ್ತು ಮಿಜೋರಾಂಗಳಲ್ಲಿ ಅವರು ತುಂಬಾ ಅಲ್ಪಸಂಖ್ಯಾತರಾಗಿದ್ದು ಮುಸ್ಲಿಂ ಹಾಗೂ ಕ್ರೈಸ್ತರು ಅಲ್ಲಿ ಬಹುಸಂಖ್ಯಾತರಾಗಿರುವುದೇ ಇದಕ್ಕೆ ಕಾರಣ. (ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಆದರೆ ಬೌದ್ದರೇ ಸಾಕಷ್ಟು ಸಂಖ್ಯೆಯಲ್ಲಿರುವ ಲಡಕ್ ಪ್ರದೇಶದಲ್ಲಿ ಈ ಸಮಸ್ಯೆ ಅಷ್ಟಿಲ್ಲ!!) ಒಮ್ಮೆ ಜನಮತಸಾಂದ್ರತೆ ಬದಲಾದರೆ ರಾಷ್ಟ್ರನಿಷ್ಟೆಯೂ ಬದಲಾಗುತ್ತದೆಂಬುದು (ಪ್ರಪಂಚ ಮಟ್ಟದಲ್ಲಿ) ಅಪ್ರಿಯ ಸತ್ಯ.

4
ಜೂನ್

((((((?)))))))

 -ಪ್ರಕಾಶ್ ಶ್ರೀನಿವಾಸ್

ನಾಳೆ ಬೆಳಗ್ಗೆ 6ಕ್ಕೆ ನನ್ನ ಗೆಳೆಯನ ಮದುವೆ..

ಹೇಗಾದರೂ ಮಾಡಿ  ಬೇಗ ಹೊರಡ ಬೇಕು ಅಂತ ಅಂದು ಕೊಂಡು
ಎಲ್ಲ ಕೆಲಸಗಳನ್ನೂ ಮಾಡಿ ಹೊರಡಲು ನಿರ್ಧರಿಸಿದೆ …
ದಿಡೀರ್ ಅಂತ ಒಂದು ಕೆಲಸ ಬಂತು ಸರಿ ಮಾಡಿ ಮುಗಿಸಿ ಹೋಗೋಣ ಬೇಗ ಅಂತ ..
ಕೆಲಸ ಶುರು ಮಾಡಿದೆ ಕೆಲಸ ಮುಗಿಸಿ ಟೈಮ್ ನೋಡಿದರೆ ರಾತ್ರಿ 9 ಆಗಿದೆ ..
ಅಯ್ಯೋ ಈಗಲೇ ಬಿಟ್ಟರೆನೆ ಬೇಗ ಅಲ್ಲಿಗೆ ತಲುಪಲು ಆಗೋದು ಅಂತ
ಮನೆಗೆ ಬಂದು ರೆಡಿ ಆಗಿ ಹೊರಟೆ,
ಹೋಗುವ ಮೊದಲು ಅಮ್ಮನಿಗೆ ಒಂದು ಮಾತು ಹೇಳಿ ಹೋಗೋಣ ಅಂತ.
ಅಮ್ಮನ ರೂಮಿಗೆ ಹೋದೆ ಅಮ್ಮ ಬೆಳಗ್ಗೆ ರಮೇಶ್ ಮದುವೆ ಇದೆ ನಾನು ಹೋಗ್ತೀನಿ
ಅಮ್ಮ ಲೋ ಹೋಗಿ ಬರ್ತೀನಿ ಅನ್ನೋ ಅಂತ ಹೇಳಿದ್ರು ..
ಸರಿ ಅಮ್ಮ ಹೋಗಿ ಬರ್ತೀನಿ ….
ಸಮಯ ಆಗಲೇ 9:30 ಆಗಿತ್ತು ….
ಬಸ್ ಸ್ಟಾಪ್ ಗೆ ಬಂದೆ ಅಲ್ಲಿ ನೋಡಿದರೆ ನಾನು ಹೊರಡಬೇಕಾದ ಊರಿನ ಎಲ್ಲ ಬಸ್ಗಳು
ಆಗಲೇ ಹೊರಟಾಗಿತ್ತು…

ಸರಿ ಒಂದೊಂದು ಬಸ್ ನ ಬದಲಾಯಿಸಿಯಾದರೂ

ನಾನು ಹೋಗಲೇ ಬೇಕು ಅಂತ ಯೋಚಿಸುತ್ತ  ಇದ್ದಾಗ ………

ಹೇಗೋ ಒಂದು ಬಸ್ ಸಿಕ್ಕಿತು
ಸರಿ ಇದರಲ್ಲಿ ಅರ್ಧ ದಾರಿ ಹೋಗಬಹುದು ನಂತರ ಬೇರೆ ಬಸ್ ಹಿಡಿದು ಮುಂದೆ ಹೋಗೋಣ ಅಂತ ನಿರ್ಧರಿಸಿ ಬಸ್ ಹತ್ತಿದೆ ..
ಮನೆಯಲ್ಲಿ ಹೊರಡುವ ಅವಸರದಲ್ಲಿ ಊಟ ಮಾಡಿರಲಿಲ್ಲ
ಹಾಗಾಗಿ ಹೊಟ್ಟೆ ಹಸಿವು ಬೇರೆ …
ಸರಿ ಬಸ್ ಮುಂದೆ ಒಂದು ಡಾಬದಲ್ಲಿ ನಿಲ್ಲಿಸುತ್ತಾರೆ ಅಂತ conductor ಹೇಳಿದರು
ಡಾಬ ಬರೋದನ್ನೇ ಕಾಯುತ್ತ ಕೂತ್ತಿದ್ದೆ…..
ಕೊನೆಗೂ ಡಾಬ ಬಂದೆ ಬಿಟ್ಟಿತು.
ಹಸಿವು ಬೇರೆ, ಓಡಿ ಹೋಗಿ ಮೊದಲು ಹೊಟ್ಟೆ ತುಂಬಾ ಊಟ  ..
ಸರ್ ಕೈ ಹೊರಗೆ ತೊಳೆದುಕೊಳ್ಳಿ ಅಂತ ಸರ್ವರ್ ಹೇಳಿದ
ಹೊರಗೆ ಕೈ ತೊಳೆಯಲು ಹೋದೆ …
ಅಲ್ಲಿಂದ ಸ್ವಲ್ಪ ದೂರದಲ್ಲಿ ಬಾತ್ ರೂಂ ಇದೆ ಅಂತ ಬೋರ್ಡ್ ಇತ್ತು   ಮತ್ತಷ್ಟು ಓದು »