ಮೋದಿ vs. ಕೇಜ್ರಿವಾಲ್ ; ನಾನೇಕೆ ಮೋದಿಯನ್ನು ಬೆಂಬಲಿಸುತ್ತೇನೆ?
– ರಾಕೇಶ್ ಶೆಟ್ಟಿ
“Politics is the last resort for the scoundrels” ಅಂದವನು George Bernard Shaw.ಆತನ ಮಾತಿಗೆ ಪೂರಕವಾಗಿಯೇ ನಮ್ಮ ದೇಶದ ಕೆಲವು ರಾಜಕಾರಣಿಗಳೂ ಮಾಡಿ ತೋರಿಸಿದ ಮೇಲೆ,ಚುನಾವಣೆ ಬಂತೆಂದರೆ ಮತ್ತೊಬ್ಬ ನವಪುಢಾರಿಯ ಜನನ ಅಂದುಕೊಳ್ಳುತ್ತ ನಮ್ಮ ಜನರು, ಅದರಲ್ಲೂ ಮುಖ್ಯವಾಗಿ ನಗರ ಕೇಂದ್ರಿಕೃತ ಮತದಾರರು ಈ ಚುನಾವಣೆ,ರಾಜಕೀಯಗಳಿಂದಲೇ ದೂರವುಳಿಯುತಿದ್ದರು.ರಾಜಕೀಯ ಅಂದರೆ ಗಲೀಜು ಅಂತೆಲ್ಲ ರೇಜಿಗೆ ಪಟ್ಟುಕೊಳ್ಳುವವರೇ ಹೆಚ್ಚಿದ್ದರು.
ಎಲ್ಲ ಕೆಟ್ಟದಕ್ಕೂ ಒಂದು ಅಂತ್ಯವಿದ್ದಂತೆ,ಒಳ್ಳೆಯದಕ್ಕೂ ಆರಂಭವಿರಬೇಕಲ್ಲವೇ? ಇತ್ತೀಚೆಗೆ ಮುಗಿದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯಕರ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ.ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ಎಲ್ಲರನ್ನು ಚಕಿತಗೊಳಿಸಿದ ಮತ್ತೊಂದು ಪ್ರಧಾನ ಅಂಶ, ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ‘ಆಪ್’ ಪಕ್ಷ ೨೮ ಸೀಟುಗಳನ್ನು ಗೆದ್ದು,ಕಡೆಗೆ ಕಾಂಗ್ರೆಸ್ಸ್ ಪಕ್ಷದ ಬಾಹ್ಯಬೆಂಬಲದಿಂದ ಸರ್ಕಾರವನ್ನು ರಚಿಸಿ ಮುಖ್ಯಮಂತ್ರಿ ಗದ್ದುಗೆಯೇರಿದ್ದು. ಎಲ್ಲಾ ರಾಜಕೀಯ ಪಕ್ಷಗಳು ಕಾಂಗ್ರೆಸ್ಸ್ ಹಾಕಿಕೊಟ್ಟ ಹಾದಿಯಲ್ಲೇ ಸಾಗಿ ರಾಜಕಾರಣ ಮಾಡುವಾಗ ಭಿನ್ನ ಹಾದಿಯಿಡಿದು ‘ಆಪ್’ ಪಕ್ಷ ೨೮ ಸೀಟು ಗೆದ್ದಿದ್ದು ಸಾಮಾನ್ಯ ಸಂಗತಿಯೇನಲ್ಲ.
ಸಹಜವಾಗಿಯೇ ಮೀಡಿಯಾಗಳ ಹೊಸ ಡಾರ್ಲಿಂಗ್ ಆಗಿ ಕೇಜ್ರಿವಾಲ್ ಹೊರಹೊಮ್ಮಿದರು.ಅಲ್ಲಿಯವರೆಗೂ ಮೋದಿಯ ಎದುರಿಗೆ ಯಾರು,ಯಾರು ಅಂದುಕೊಳ್ಳುತಿದ್ದವರಿಗೆ ಎದುರಿಗೆ ನಿಲ್ಲಿಸಲು ಒಬ್ಬ ಸಿಕ್ಕಂತಾಗಿತ್ತು.ಆಗ ‘ಮೋದಿ vs ಕೇಜ್ರಿವಾಲ್’ ಅನ್ನುವ ಹೊಸ ರಾಗ ಶುರುವಿಟ್ಟುಕೊಂಡರು.
ಸತತ ೧೩ ವರ್ಷಗಳ ಕಾಲದಿಂದ ಮುಖ್ಯಮಂತ್ರಿಯಾಗಿದ್ದುಕೊಂಡು,೪ ನೇ ಬಾರಿಗೆ ಗೆದ್ದು,ಗದ್ದುಗೆ ಹಿಡಿದು ತನ್ನ ಅಭಿವೃದ್ಧಿ ಮಂತ್ರದಿಂದಲೇ ದೇಶದ ಗಮನ ಸೆಳೆದು ಇಂದು ‘ಪ್ರಧಾನಿ ಅಭ್ಯರ್ಥಿ’ಯಾಗಿ ನಿಂತ ನಾಯಕನೊಬ್ಬನ ಎದುರಿಗೆ ಒಂದು ವರ್ಷದ ಹಿಂದಷ್ಟೇ ‘ಅಣ್ಣಾ ಹಜಾರೆ’ಯವರ ಹೋರಾಟದ ಗರ್ಭ ಸೀಳಿ, ನಂಬಿದವರಿಗೆ ಮೋಸ ಮಾಡಿಕೊಂಡು ಜನಿಸಿದ ಆಪ್ ಪಕ್ಷದ ಕೇಜ್ರಿವಾಲ್ ಅವರನ್ನು ನಿಲ್ಲಿಸಿ ನೋಡುವುದೇ ಮೊದಲಿಗೆ ಹಾಸ್ಯಾಸ್ಪದವಾದದ್ದು ಎನಿಸುತ್ತದೆ.
ಈ ರೀತಿಯ ಹೋಲಿಕೆಯನ್ನೂ ಒಂದು ಕಂಪೆನಿಯ ಮಟ್ಟಕ್ಕೆ ಇಳಿಸಿ ನೋಡಿದರೆ ; ಒಂದು ವ್ಯಕ್ತಿಯನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕಾದರೇ ಆತನಿಗೆ ಆ ಸ್ಥಾನಕ್ಕೆ ಬೇಕಾದ ವಿದ್ಯಾರ್ಹತೆಯಿದ್ದರೂ,ಆ ಕೆಲಸದಲ್ಲಿ ಅವನಿಗಿರುವ ‘ಅನುಭವ’ವೇ ಬಹುಮುಖ್ಯ ಪಾತ್ರವಹಿಸುತ್ತದೆ.ಅದು ಸಹಜ ಕೂಡ.ಒಮ್ಮೆ ಊಹಿಸಿ ನೋಡಿ,ಕಂಪೆನಿಯ CEO ಸ್ಥಾನಕ್ಕೆ ಒಬ್ಬ Fresher ಅನ್ನು ಪ್ರತಿಷ್ಟಾಪಿಸುವ ಐಡಿಯಾ ಎಷ್ಟು ಬಾಲಿಶವೆನಿಸುತ್ತದೆ! ಯಕಶ್ಚಿತ್ ಒಂದು ಕಂಪೆನಿಯೊಳಗಿನ ಹುದ್ದೆಗೆ ಇಷ್ಟು ಮಹತ್ವಕೊಡುವಾಗ,ದೇಶವನ್ನು ಮುನ್ನಡೆಸಲು ‘Fresher’ ಅಥವಾ ಆಡಳಿತದ ಅನುಭವ ಇಲ್ಲದವರನ್ನು ತಂದು ಕೂರಿಸಬಹುದೇ? ಒಬ್ಬ CEO ವಿಫಲನಾದರೇ,ಹೆಚ್ಚೆಂದರೆ ಒಂದು ಕಂಪೆನಿ ಮತ್ತು ಅದರಲ್ಲಿ ಕೆಲಸ ಮಾಡುವ ಸಾವಿರಾರು ಜನರು ಮುಳುಗಬಹುದು ಮತ್ತದು ಆ ಕಂಪೆನಿಯೊಳಗೆ ಹರಾಜಕತೆಗೆ ಕಾರಣವಾಗಲೂಬಹುದು.ಇನ್ನು ೧೦೦+ ಕೋಟಿಯ ಜನರ ದೇಶವನ್ನು ಇಂತವರ ಕೈಗೆ ಕೊಟ್ಟರೆ …!?
ಕೇಜ್ರಿವಾಲ್ ಅವರಿಗೆ ಆಡಳಿತದ ಅನುಭವ ಇಲ್ಲವೆನ್ನುವಾಗ ಕೆಲವರು ರಾಜೀವ್ ಗಾಂಧಿಯ ಉದಾಹರಣೆ ಕೊಡುತಿದ್ದಾರೆ.ಪಾಪ ಅವರಿಗೆ ಅಷ್ಟು ಇತಿಹಾಸದ ಅರಿವಿರಲಿಕ್ಕಿಲ್ಲ. ರಾಜೀವ್ ಗಾಂಧಿ ಈ ದೇಶದಲ್ಲಿ ಸಂಪರ್ಕ ಕ್ರಾಂತಿಯನ್ನು ತಂದಿದ್ದು ನಿಜವೇ.ಮೊದಲಿಗೆ ಕ್ಲೀನ್ ಇಮೇಜ್ ಇಟ್ಟುಕೊಂಡಿದ್ದ ರಾಜೀವ್ ಕಡೆಗೆ ಬೋಫೋರ್ಸ್ ಮಸಿ ಅಂಟಿಸಿಕೊಂಡರು.ಅದೆಲ್ಲವನ್ನೂ ಬಿಡಿ.ಅನನುಭವ ಎಂತ ಅನಾಹುತಗಳಿಗೆ ಕಾರಣವಾಗಬಹುದು ಎನ್ನಲಿಕ್ಕೆ ರಾಜೀವ್ ಗಾಂಧಿಯವರೇ ಸರಿಯಾದ ಉದಾಹರಣೆ.ಶ್ರೀಲಂಕಾ,ಎಲ್.ಟಿ.ಟಿ.ಇ ಮತ್ತು ಶಸ್ತ್ರಾಸ್ತ್ರಗಳ ಮಾಫಿಯಾಗಳು ಸೇರಿ ಹೆಣಿದಿದ್ದ ಖೆಡ್ಡಾದೊಳಗೆ ಮುಗ್ಧವಾಗಿಯೇ ಸಾಗಿದ ರಾಜೀವ್, ಭಾರತೀಯ ಶಾಂತಿ ಪಾಲನ ಪಡೆಯನ್ನು ದ್ವೀಪ ರಾಷ್ಟ್ರಕ್ಕೆ ಕಳಿಸಿ ನಮ್ಮ ಸೈನಿಕರ ಸಾವಿಗೆ ಕಾರಣವಾಗುವುದಲ್ಲದೇ,ಕಡೆಗೆ ಅವರೂ ಬಲಿಯಾದರು. ಶಾ ಬಾನು ಪ್ರಕರಣದಲ್ಲಿ ಮುಸ್ಲಿಂರ ಓಲೈಕೆಗಾಗಿ,ಮಹಿಳಾ ಹಿತಾಸಕ್ತಿಯನ್ನೂ ಬಲಿಕೊಟ್ಟು,ಸಂವಿಧಾನಕ್ಕೆ ತಿದ್ದುಪಡಿ ತಂದು ದೇಶದ ಕೋಮು ಸಾಮರಸ್ಯಕ್ಕೆ ಮೊದಲ ಕೊಳ್ಳಿಯಿಟ್ಟರು.ಅವತ್ತಿನಿಂದ ಇವತ್ತಿನವರೆಗೂ ಈ ದೇಶ ಕಂಡ ಕೋಮು ದಳ್ಳುರಿ ಮತ್ತು ತುಷ್ಟೀಕರಣದ ರಾಜಕೀಯಕ್ಕೆ ಶ್ರೀಕಾರ ಹಾಕಿದ್ದು ಇದೇ ಅನನುಭವಿ ರಾಜೀವ್ ಗಾಂಧಿ…! ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದ ಜಗಮೋಹನ್ ಅವರು ಪದೇ ಪದೇ ಕಾಶ್ಮೀರದ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ತಿಳಿಸಿದಾಗಳು ಬೇಜವಬ್ದಾರಿಯಿಂದ ವರ್ತಿಸಿ ಲಕ್ಷಾಂತರ ಕಶ್ಮೀರಿ ಪಂಡಿತರ ಹತ್ಯೆಗೆ,ದುರಂತಕ್ಕೆ ಕಾರಣರಾಗಿದ್ದು ಇದೇ ಅನನುಭವಿ ರಾಜೀವ್ ಗಾಂಧಿಯಲ್ಲವೇ? ಈಗ ಹೇಳಿ ಇನ್ನೊಬ್ಬ ರಾಜೀವ್ ಗಾಂಧಿ ನಮಗೆ ‘ಕೇಜ್ರಿವಾಲ್’ ರೂಪದಲ್ಲಿ ಬೇಕಾ?
೧೩ ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಆಡಳಿತ ನಡೆಸಿದ ಅನುಭವ ಮತ್ತು ಅದಕ್ಕೂ ಮುಂಚಿನ ಸಂಘಟನಾ ಕಾರ್ಯದ ಅನುಭವ ಪಡೆದ ಪ್ರತಿಭೆಯ ಜೊತೆಗೆ ಭ್ರಷ್ಟಚಾರ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದವರನ್ನು ಇಟ್ಟುಕೊಂಡು ತುಲನೆ ಮಾಡುವುದೇ ಅಪ್ರಾಯೋಗಿಕವಲ್ಲವೇ? ಈ ಟಿ.ಆರ್.ಪಿ ಮೀಡಿಯಾಗಳು ಸೃಷ್ಟಿಸುತ್ತಿರುವ ಸಾಮೂಹಿಕ ಸನ್ನಿಗೆ ಬಲಿಯಾಗಿ ನಾನಂತು ಆಪ್ ಪಕ್ಷವನ್ನು ಬೆಂಬಲಿಸಲಾರೆ.ನನ್ನ ಬೆಂಬಲ ಮೋದಿಗೆ. ನಾನೇಕೆ ಮೋದಿಯನ್ನು ಬೆಂಬಲಿಸುತ್ತೇನೆ ಮತ್ತು ಕೇಜ್ರಿವಾಲ್ ಅವರನ್ನು ಬೆಂಬಲಿಸುವುದಿಲ್ಲವೆಂದರೆ ;
ಕೇಜ್ರಿವಾಲ್ ಮತ್ತವರ ಪಕ್ಷದ ನೈತಿಕ ಭ್ರಷ್ಟಚಾರ :
ಕೇಜ್ರಿವಾಲ್ ಅವರು ಸರ್ಕಾರಿ ನೌಕರಿಗೆ ಸೇರಿದ್ದು ೧೯೯೫ ರಲ್ಲಿ. ೨೦೦೦ನೇ ಇಸವಿಯಲ್ಲಿ, ಉನ್ನತ ಶಿಕ್ಷಣದ ಕಾರಣ ಹೇಳಿ ೨ ವರ್ಷಗಳ ಸಂಬಳ ಸಹಿತ ರಜೆ (ವಾಪಸ್ಸು ಬಂದ ಮೇಲೆ ೩ ವರ್ಷಗಳ ಕಾಲ ಕೆಲಸದಲ್ಲಿ ಮುಂದುವರೆಯಬೇಕು ತಪ್ಪಿದರೆ ೨ ವರ್ಷಗಳ ಸಂಬಳವನ್ನು ದಂಡದ ರೂಪದಲ್ಲಿ ಕಟ್ಟಬೇಕು ಅನ್ನುವ ಶರತ್ತಿನ ಮೇಲೆ) ಪಡೆದು ಹೋದ ಕೇಜ್ರಿವಾಲ್ ಮತ್ತೆ ಕೆಲಸಕ್ಕೆ ಹಿಂದಿರುಗಿದ್ದು ೨೦೦೩ ರಲ್ಲಿ.ಹಾಗೆ ಬಂದವರು ಕೆಲಸ ಮಾಡಿದ್ದು ೧೮ ತಿಂಗಳು ಅದಾದ ಮೇಲೆ ಮತ್ತೆ ೧೮ ತಿಂಗಳ ‘ಸಂಬಳರಹಿತ ರಜೆ’…!(ಅಂದರೆ ೧೦ ವರ್ಷಗಳ ಸರ್ಕಾರಿ ಕೆಲಸದಲ್ಲಿದ್ದ ಅವಧಿಯಲ್ಲಿ ಕೆಲಸ ಮಾಡಿದ ಅವಧಿ ೬ ವರ್ಷ ೮ ತಿಂಗಳು). ೩ ವರ್ಷಗಳ ಕೆಲಸ ಮಾಡಬೇಕೆಂಬ ಶರತ್ತನ್ನು ಉಲ್ಲಂಘಿಸಿದ್ದನ್ನು ಸರ್ಕಾರ ಪ್ರಶ್ನಿಸಿದಾಗ ಉಳಿದ ೧೮ ತಿಂಗಳ ಅವಧಿಯ ವೇತನವನ್ನು ದಂಡದ ರೂಪದಲ್ಲಿಯೂ ಕಟ್ಟಿದರು.
ಫೆಬ್ರವರಿ ೨೦೦೬ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿ ಹೊರಬಂದು ಪರಿವರ್ತನ ಹೆಸರಿನ NGO ಸ್ಥಾಪಿಸಿದರು.ಪರಮ ಪ್ರಾಮಾಣಿಕ ಅಧಿಕಾರಿಗಳಿಗೆ ಎತ್ತಂಗಡಿಯ ಶಿಕ್ಷೆ ಮಾಮುಲಲ್ಲವೇ? ಉದಾಹರಣೆಗೆ; ಸೋನಿಯಾ ಅಳಿಯ ರಾಬರ್ಟ್ ವಾಧ್ರಾನ ಅಕ್ರಮವನ್ನೇ ಪ್ರಶ್ನಿಸಿ ದಿಟ್ಟ ಅಧಿಕಾರಿ ‘ಅಶೋಕ್ ಖೇಮ್ಕಾ’ ತಮ್ಮ ‘೨೦’ ವರ್ಷಗಳ ಸರ್ವೀಸಿನಲ್ಲಿ ‘೪೩‘ ಬಾರಿ ವರ್ಗಾವಣೆಗೊಳಗಾಗಿದ್ದಾರೆ…! ಆದರೆ, ಸೋಜಿಗವೆಂದರೆ ಕೇಜ್ರಿವಾಲ್ ಸರ್ಕಾರಿ ಹುದ್ದೆಯ ಕಾಲಾವಧಿಯ ಉದ್ದಕ್ಕೂ ದೆಹಲಿ ಬಿಟ್ಟು ಇನ್ನೆಲ್ಲಿಗೂ ವರ್ಗಾವಣೆಯಾಗಿಲ್ಲ ಎನ್ನುವುದು…! ಅದು ಹೇಗೆ ಸಾಧ್ಯವಾಗಿರಬಹುದು?
ಕೇಜ್ರಿವಾಲ್ ಹೇಳಿಕೆಗಳು ಮತ್ತು ಯು-ಟರ್ನ್ ಗಳು ಎಷ್ಟು ಸ್ಪೀಡ್ ಆಗಿವೆ ಎಂದರೆ,ಸದ್ಯದಲ್ಲೇ ಇರುವ ’ಯು-ಟರ್ನ್’ ಬೋರ್ಡುಗಳನ್ನು ತೆಗೆದು ’ಕೇಜ್ರಿವಾಲ್ ಟರ್ನ್’ ಎಂದು ಮಾಡಬೇಕಾಗಬಹುದು ಎಂದೆಲ್ಲ ಜೋಕುಗಳು ಹುಟ್ಟಿಕೊಳ್ಳುತ್ತಿವೆ. ನಾನಿದನ್ನು , ಯು-ಟರ್ನ್ ಎಂದು ಲೈಟ್ ಆಗಿ ಹೇಳುವ ಬದಲು “ನೈತಿಕ ಭ್ರಷ್ಟಚಾರ”ವೆಂದು ಕರೆಯುತ್ತೇನೆ.ಭ್ರಷ್ಟಚಾರವೆಂಬುದು ಕೇವಲ ಹಣದ ಜೊತೆಗೆ ಮಾತ್ರ ಆಗಬೇಕೆಂದೆನಿಲ್ಲ.ಎರಡು ನಾಲಿಗೆಯ ಮನುಷ್ಯರು ಸಹ ಭ್ರಷ್ಟರೇ.ಕೇಜ್ರಿವಾಲ್ ಮತ್ತವರ ಪಕ್ಷದ ನೈತಿಕ ಭ್ರಷ್ಟತನದ ಕೆಲವು ಸ್ಯಾಂಪಲ್ ವಿಡಿಯೋ ತುಣುಕುಗಳು ಮತ್ತು ಬರಹಗಳು ಇಲ್ಲಿವೆ ನೋಡಿ.
- ಕೇಜ್ರಿವಾಲ್ ನೈತಿಕತೆಯಿಲ್ಲದ ಎಡಬಿಡಂಗಿ ನಡೆ-ನುಡಿಗಳು1
- ಕೇಜ್ರಿವಾಲ್ ನೈತಿಕತೆಯಿಲ್ಲದ ಎಡಬಿಡಂಗಿ ನಡೆ-ನುಡಿಗಳು2
- ಶೀಲಾದೀಕ್ಷಿತ್ ಭ್ರಷ್ಟಚಾರದ ಬಗ್ಗೆ ಚುನಾವಣೆಗೆ ಮೊದಲು ಮತ್ತು ನಂತರದ ಮಾತು
- ಕಾಮನ್ ವೆಲ್ತ್ ಭ್ರಷ್ಟಚಾರದ ಬಗ್ಗೆ ೩೭೦ ಪುಟಗಳ ವರದಿ ನೀಡಿದ್ದು ಈಗ ಮರೆತು ಹೋಗಿದೆಯೇ?
- ಕಾಶ್ಮೀರದ ಬಗೆಗಿನ ಮಾತು ’ಆಪ್’ ಪಕ್ಷದ ಪ್ರಶಾಂತ್ ಭೂಷಣ್ ಅವರ ದೇಶವಿರೋಧಿ ಧೋರಣೆ
- ಆಪ್ ಪಕ್ಷದ ’ದಿಗ್ವಿಜಯ್ ಸಿಂಗ್’ ಕುಮಾರ್ ವಿಶ್ವಾಸ್ ಮಾತು
- “ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್” ಬಗ್ಗೆ ಕಮಲ್ ಫಾರೂಖಿ ಹೇಳಿದ್ದು
- ಕಮಲ್ ಫಾರೂಖಿ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದು
- ದೆಹಲಿಯ ಕಾನೂನು ಸಚಿವ ಸೋಮನಾಥ್ ಬಾರ್ತಿ ವಿರುದ್ಧದ ಆರೋಪ
- ಸೋಮನಾಥ್ ಬಾರ್ತಿಯನ್ನು ಬೆಂಬಲಿಸಿದ ಕೇಜ್ರಿವಾಲ್
- ಆಪ್ ಪಕ್ಷದ ’ದಿಗ್ವಿಜಯ್ ಸಿಂಗ್’ ಕುಮಾರ್ ವಿಶ್ವಾಸ್ ದೃಷ್ಟಿಯಲ್ಲಿ ದಕ್ಷಿಣ ಭಾರತೀಯ ಹೆಣ್ಣು ಮಕ್ಕಳು!
ಉಳಿದವರ ಭ್ರಷ್ಟಚಾರದ ಬಗ್ಗೆ ಮಾತನಾಡುವಾಗ ಅವರ ಮೇಲೆ ಮುರಿದುಕೊಂಡು ಬೀಳುವ ಕೇಜ್ರಿವಾಲ್,ತಮ್ಮ ಪಕ್ಷದ ವಿರುದ್ಧ ಇದೇ ಆರೋಪ ಬಂದಾಗ ವರ್ತಿಸುವ ರೀತಿ ವಿಚಿತ್ರವಾಗಿರುತ್ತದೆ.
ಇಂಡಿಯಾ ಟೀವಿಯಲ್ಲಿ ರಜತ್ ಶರ್ಮಾ ನಡೆಸಿಕೊಡುವ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ, ದೆಹಲಿಯಲ್ಲಿ ಆಪ್ ಪಕ್ಷ ಟಿಕೆಟ್ ನೀಡಿದವರ ಮೇಲೆ ಇರುವ ಆರೋಪಗಳ ಬಗ್ಗೆ ಗಮನ ಸೆಳೆದಾಗ ,ಕೇಜ್ರಿವಾಲ್ ಅವರನ್ನು ಸಮರ್ಥಿಸಿಕೊಳ್ಳುತ್ತಾರೆ. ಸಮರ್ಥಿಸಿಕೊಳ್ಳುವ ಭರದಲ್ಲಿ ಆಕ್ರಮಣಕಾರಿಯಾಗುತ್ತಾರೆ.
ಪ್ರಸ್ತುತ ದೆಹಲಿಯ ಸರ್ಕಾರದಲ್ಲಿ ಪ್ರವಾಸೋದ್ಯಮ,ಆಡಳಿತ ಸುಧಾರಣೆ,ಕಲೆ ಮತ್ತು ಸಂಸ್ಕೃತಿ ಹಾಗೂ ಕಾನೂನು ಸಚಿವಾರಾಗಿರುವ ಸೋಮನಾಥ ಭಾರ್ತಿಯವರ ಮೇಲೆ ವಕೀಲ ವೃತ್ತಿ ಸಂಹಿತೆಯನ್ನು ಉಲ್ಲಂಘಿಸಿ ಪ್ರಕರಣ ನಡೆಯುವಾಗ ಸಾಕ್ಷ್ಯವನ್ನು ತಿರುಚುವ ಆರೋಪ ಕೇಳಿಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ನಡೆದಿತ್ತು ಎನ್ನಲಾದ ಸಾಲ ಪ್ರಕರಣದಲ್ಲಿ ಆರೋಪಿಯ ಪರ ವಾದಿಸಿದ್ದ ಸೋಮನಾಥ್, ಕೇಸಿನ ಸಾಕ್ಷಿದಾರರ ಜೊತೆ ಮಾತನಾಡಿ ಅದರ ಧ್ವನಿ ಮುದ್ರಿಕೆ ಮಾಡಿಕೊಂಡಿದ್ದರು.ಇವರ ಈ ನಡೆ ನ್ಯಾಯಪೀಠಕ್ಕೆ ಅಚ್ಚರಿ ಮೂಡಿಸಿತ್ತು ಮತ್ತು ನ್ಯಾಯಾಧೀಶೆ ಪೂನಂ ಅವರು “ಪ್ರತಿವಾದಿ ಮತ್ತು ವಕೀಲ ಸೋಮನಾಥ ಭಾರ್ತಿ ನಡೆಸಿರುವ ಕೃತ್ಯ ಸಾಕ್ಷ್ವನ್ನು ತಿರುಚುವಂತಾದ್ದಾಗಿತ್ತು.ಒಬ್ಬ ವಕೀಲರಾಗಿ ಭಾರ್ತಿ ತಮ್ಮ ವೃತ್ತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.ಪ್ರಕರಣ ವಿಚಾರಣೆ ಕೋರ್ಟಿನಲ್ಲಿ ನಡೆಯುತ್ತಿರಬೇಕಾದರೆ,ಸಾಕ್ಷಿಯನ್ನು ಮಾತನಾಡಿಸಿ ಪ್ರಕರಣದ ವಿವರವನ್ನು ಪಡೆದುಕೊಳ್ಳುವ ಕ್ರಿಯೆ ವಕೀಲಿ ವೃತ್ತಿ ಸಂಹಿತೆಗೆ ವಿರುದ್ಧವಾದದ್ದು ಮತ್ತು ಖಂಡನೀಯ” ಎಂದಿದ್ದರು.
ಇಂಡಿಯಾ ಟೀವಿಯ ರಜತ್ ಶರ್ಮ ಹೇಳಿದಂತೆ, ಆಪ್ ಪಕ್ಷ ‘ಗಂಗೋತ್ರಿ’ ಅಲ್ಲವೇ.ಹಾಗಾಗಿ ಅಲ್ಲಿ ಬಂದವರೆಲ್ಲ ಪರಮ ಪಾವನರಾಗುತ್ತಾರೆ.ಅದೇ ದರ್ಪದಲ್ಲಿ ಕೇಜ್ರಿವಾಲ್ ಸೋಮನಾಥ್ ಭಾರ್ತಿಯವರನ್ನು ಸಮರ್ಥಿಸಿಕೊಳ್ಳುತ್ತ, ನ್ಯಾಯಾಧೀಶರು ಮಾಡಿದ ಅಬ್ಸರ್ವೇಷನ್ನೇ ಸರಿಯಿಲ್ಲವೆನ್ನುತ್ತಾರೆ.ಹೇಗಿದೆ ನೋಡಿ ವಾದ.ಇವರು ಹೇಳಿದ್ದೆಲ್ಲ ಅಂತಿಮ ಸತ್ಯ…! (ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇದೇ ಸಚಿವರ ಮೇಲೆ FIR ದಾಖಲಿಸಲಾಗಿದೆ)
ಈಗ ಹೇಳಿ, ಉಳಿದ ಎರಡು ನಾಲಿಗೆಯ ಬೇರೆ ಪಕ್ಷಗಳಿಗೂ,ರಾಜಕಾರಣಿಗಳಿಗೂ ಮತ್ತು ಪರಮ ಪವಿತ್ರನೆಂದು ಕರೆಸಿಕೊಳ್ಳುವ ಆಮ್ ಆದ್ಮಿ ಪಕ್ಷ ಮತ್ತು ಕೇಜ್ರಿವಾಲ್ ಅವರಿಗೂ ಏನು ವ್ಯತ್ಯಾಸವಿದೆ? ಯಾವ ಶೀಲಾ ದಿಕ್ಷೀತ್ ಅವರನ್ನು ಚುನಾವಣೆಯ ಮೊದಲು “ದೆಹಲಿಯ ಭ್ರಷ್ಟಚಾರದ ಸಿಂಬಲ್” ಎಂದು ಕರೆದು ೩೭೦ ಪುಟಗಳ ಕಾಮನ್ವೆಲ್ತ್ ಹಗರಣದ ವರದಿ ತಯಾರಿಸಲಾಗಿತ್ತೋ ಇಂದು ಅದೇ ಶೀಲಾ ದಿಕ್ಷೀತ್ ಅವರ ಭ್ರಷ್ಟಚಾರಕ್ಕೆ ’ಸಾಕ್ಷ್ಯ ಕೊಡಿ’ ಎಂದು ಬಿಜೆಪಿಯ ನಾಯಕರನ್ನು ಕೇಳುವವರೆಗೂ ಬಂದು ನಿಂತಿದ್ದಾರೆ ಕೇಜ್ರಿವಾಲ್ ಇದು ನೈತಿಕ ಭ್ರಷ್ಟಚಾರವಲ್ಲದೇ ಮತ್ತಿನ್ನೇನು?
ಇನ್ನು ಆಪ್ ಪಕ್ಷದೊಳಗಿರುವ ಮತ್ತು ಈಗ ಪಕ್ಷ ಸೇರಲು ಬಯಸುತ್ತಿರುವ ಕೆಲವರ ಹೇಳಿಕೆಗಳು ಮತ್ತೆ ನಡವಳಿಕೆಗಳನ್ನು ಗಮನಿಸಿ.
- ಇಂಡಿಯನ್ ಮುಜಾಹಿದ್ದೀನ್ ನ ಪ್ರಮುಖ ಮತ್ತು ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್ ಅನ್ನು ಬಿಹಾರ ಪೋಲಿಸರು ಬಂಧಿಸಿದಾಗ ಅವನನ್ನು ಮುಸ್ಲಿಂ ಅನ್ನುವ ಕಾರಣಕ್ಕಾಗಿ ಬಂಧಿಸಲಾಗಿದೆ ಅನ್ನುವಂತೆ ಮಾತನಾಡಿ ಸಮಾಜವಾದಿ ಪಕ್ಷದಿಂದ ಹೊರದಬ್ಬಿಸಿಕೊಂಡು ಬಂದು ‘ಕಮಲ್ ಫಾರೂಖಿ’ಯಂತವರು ಇಂದು ತಟ್ಟುತ್ತಿರುವುದು ’ಆಪ್’ ಬಾಗಿಲನ್ನು.
- “ಒಸಾಮ ಮತ್ತವನ ಕುಟುಂಬ ನಿಶ್ಯಸ್ತ್ರವಾಗಿದ್ದಾಗ ಅವರನ್ನು ಕೊಲ್ಲಲಾಯಿತು,ಇದರಿಂದ ಉಗ್ರಗಾಮಿತನ ಹೆಚ್ಚುತ್ತದೆ”. “ಹುರಿಯತ್ ಕಾನ್ಫರೆನ್ಸ್ ಅನ್ನು ಟೀಕಿಸುವ ಮೂಲಕ ಯಾಸಿನ್ ಮಲಿಕ್ ಕಾಶ್ಮೀರಿಗಳ ಹೋರಾಟವನ್ನು ಸಡಿಲಗೊಳಿಸುತಿದ್ದಾರೆ.ಇವರೆಲ್ಲ ಭಾರತದ ವಿರುದ್ಧ ಒಗ್ಗಟ್ಟಾಗಿ, ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು” ಅಂತೆಲ್ಲ ಟ್ವಿಟರ್ ನಲ್ಲಿ ಅಣಿಮುತ್ತು ಉದುರಿಸುತಿದ್ದ ‘ಕಮಲ್ ಮಿತ್ರ ಚೆನಾಯ್’ ಆಪ್ ಪಕ್ಷವನ್ನು ಸೇರಿದ್ದಾರೆ.
- ಇನ್ನೊಂದೆಡೆ, ಆಪ್ ಪಕ್ಷದ ಪ್ರಮುಖ ನಾಯಕ ಪ್ರಶಾಂತ್ ಭೂಷಣ್ ಕಾಶ್ಮೀರದ ವಿವಾದವನ್ನು ಕೆಣಕುತ್ತ, ಕಶ್ಮೀರಿಗಳು ಬಯಸಿದರೆ ಅವರನ್ನು ಸ್ವತಂತ್ರರಾಗಲು ಬಿಡಬೇಕು, ಅಲ್ಲಿಂದ ಸೇನೆಯನ್ನು ವಾಪಾಸು ಕರೆಸಿಕೊಳ್ಳಬೇಕು ಅಂತೆಲ್ಲ ದೇಶದ್ರೋಹಿಯಂತೆ ಬಡಬಡಿಸುತಿದ್ದಾರೆ. ನೆನಪಿರಲಿ ಪ್ರಶಾಂತ್ ಭೂಷಣ್ ಆಪ್ ಪಕ್ಷದ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿಯಲ್ಲಿರುವವರು.
ದೆಹಲಿ ಫಲಿತಾಂಶ ಬಂದ ಮೊದ ಮೊದಲು, “ಹಿಂಬಾಗಿಲಲ್ಲಿ ಕೈ ಜೋಡಿಸಿರುವ ಕಾಂಗ್ರೆಸ್ಸ್ ಮತ್ತು ಬಿಜೆಪಿಗಳೇಕೆ ಒಟ್ಟಾಗಿ ಸರ್ಕಾರ ರಚಿಸಬಾರದು?’ ಅನ್ನುವಂತ ಕೇಜ್ರಿವಾಲ್ ಹೇಳಿಕೆಯಲ್ಲಿ ನಮಗೆ ರಾಹುಲ್ ಗಾಂಧಿಯ ಜೋಕುಗಳು ನೆನಪಾಗುತ್ತದಾದರೂ,ಕೇಜ್ರಿವಾಲ್ ಅನ್ನುವ ಮನುಷ್ಯ ರಾಹುಲ್ ಗಾಂಧಿಯಂತೆ ‘ಮುಗ್ಧ’ನಲ್ಲ…! (ಮುಗ್ಧ ಅನ್ನುವುದು ಅವಕಾಶ ಮೂರ್ತಿಗಳ ಡೆಫಿನೇಷನ್ನು.ನನ್ನದಲ್ಲ) ಅನ್ನುವುದು ಅವರು ಅಣ್ಣಾ ಹಜ಼ಾರೆಯವರ ಹೋರಾಟದ ಗರ್ಭ ಸೀಳಿಕೊಂಡು ಬಂದು ನಿಂತಾಗಲೇ ಗೊತ್ತಾಗಿದೆ.
ಚುನಾವಣೆಯ ಮೊದಲು, ನಾಳೆಯ ದಿನ ಅತಂತ್ರ ಫಲಿತಾಂಶ ಬಂದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ಸ್, ಬಿಜೆಪಿ ಎರಡೂ ಪಕ್ಷಗಳ ಜೊತೆಗೆ ಕೈ ಜೋಡಿಸಲಾರೆ,ನನ್ನ ಮಕ್ಕಳ ಮೇಲೆ ಆಣೆ ಅಂತೆಲ್ಲ ಬಡಬಡಿಸಿದ್ದ ಕೇಜ್ರಿವಾಲ್,ಮಾತು ತಪ್ಪಿದ್ದೇಕೆ?
ಅದು ಬಿಡಿ. ಆಪ್ ಪಕ್ಷ ಲೋಕಸಭಾಚುನಾವಣೆಗೆ ಸ್ಪರ್ಧಿಸುವ ಘೋಷಣೆ ಮಾಡಿದಾಗ ಕೇಜ್ರಿವಾಲ್, ನಾನು ಲೋಕಸಭೆ ಸ್ಪರ್ಧಿಸುವುದಿಲ್ಲವೆಂದಿದ್ದರು.ಈಗ ವರಸೆ ಬದಲಾಯಿಸಿದ್ದಾರೆ.ಪಕ್ಷ ಬಯಸಿದರೆ ಸ್ಪರ್ಧಿಸುತ್ತಾರಂತೆ…! ಒಂದೆಡೆ, ಬಂಡಾಯವೆದ್ದಿರುವ ಬಿನ್ನಿಯವರ ಬಗ್ಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿಲ್ಲವೆಂದು ಅವರು ಹೀಗೆ ಮಾಡುತಿದ್ದಾರೆ,ನಾವು ಈಗ ಶಾಸಕರಾಗಿರುವವರಿಗೆ ಟಿಕೆಟ್ ನೀಡುವುದಿಲ್ಲವೆನ್ನುತ್ತಾರೆ?ಹಾಗಿದ್ದರೆ ಈ ನಿಯಮಗಳು ಕೇಜ್ರಿವಾಲ್ ಅವರಿಗೆ ಅನ್ವಯವಾಗುವುದಿಲ್ಲವೇ? ಅಥವಾ ಅವರು ಅವರ ಪಕ್ಷದ ನಿಯಮಗಳಿಗಿಂತ ದೊಡ್ಡವರೇ?
ಇಂತ ಎಡಬಿಡಂಗಿ ನಡೆಗಳು,ತಾನು ಏನು ಮಾಡ ಹೊರಟಿದ್ದೇನೆ ಅನ್ನುವುದು ಕೇಜ್ರಿವಾಲ್ ಅವರಿಗಾಗಲಿ ಅವರ ಆಮ್ ಆದ್ಮಿ ಪಕ್ಷಕ್ಕಾಗಲಿ ಸ್ಪಷ್ಟತೆ ಇಲ್ಲವೆನಿಸುವುದಕ್ಕೆ ಸಾಕ್ಷಿಗಳಲ್ಲವೇ? ಅಥವಾ ಹೀಗೆ ತಮ್ಮ ಹೇಳಿಕೆಯನ್ನೇ ಪದೇ ಪದೇ ಬದಲಿಸುವಾಗ ಅವರ ನೈತಿಕತೆ ಸತ್ತು ಬಿದ್ದಿತ್ತೆ?
ಆಪ್ ಪಕ್ಷದ ಮತ್ತು ಕೇಜ್ರಿವಾಲ್ ಅವರ ಮಾತುಗಳ ಎಡಬಿಡಂಗಿತನ ಒಂದು ಕಡೆಯಾದರೆ, ಇನ್ನು ಅಧಿಕಾರವಹಿಸಿಕೊಳ್ಳುವ ದಿನ ಯಾವುದೇ ಸರ್ಕಾರಿ ಬಂಗಲೆ ಬಳಸುವುದಿಲ್ಲ,ಭದ್ರತೆ ಬೇಡ ಇತ್ಯಾದಿ ಇತ್ಯಾದಿ ಘೋಷಣೆಗಳು.(ಆ ನಂತರ ಅವರ ಒಂದೊಂದೆ ಹೇಳಿಕೆಯಿಂದ ಹಿಂದೆ ಸರಿದದ್ದು ,ಯು-ಟರ್ನ್ ಹೊಡೆದಿದ್ದು ಗೊತ್ತಿರುವಂತದ್ದೆ). ಅಧಿಕಾರವಹಿಸಿಕೊಂಡ ಮೇಲೆ, ಜನತಾ ದರ್ಬಾರ್ ಮಾಡುತ್ತೇನೆ ಎಂದು ಸುದ್ದಿಯಾದರು. ಆಯೋಜಿಸಿದ ಜನತಾ ದರ್ಬಾರಿಗೊಂದು ಸೂಕ್ತ ವ್ಯವಸ್ಥೆಯನ್ನೂ ಮಾಡಿಕೊಳ್ಳದೇ,ಕನಿಷ್ಟ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳದೇ ಅದನ್ನು ಅರ್ಧಕ್ಕೆ ನಿಲ್ಲಿಸಿ ಎದ್ದು ಬಂದರು.ಈಗ ಹೇಳುತ್ತಿರುವುದು ಇನ್ನು ಮುಂದೆ ಈ ಜನತಾ ದರ್ಬಾರನ್ನು ಕೇವಲ ಆನ್ಲೈನ್ ಮೂಲಕ ಮಾಡುತ್ತೆವೆಂದು.
ಹಾಗೆ ನೋಡ ಹೋದರೆ ಜನತಾ ದರ್ಬಾರ್ ಅನ್ನುವುದು ಕೇಜ್ರಿವಾಲ್ ತಂದಿರುವ ಹೊಸ ವ್ಯವಸ್ಥೆಯೇನಲ್ಲ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಕುಮಾರಸ್ವಾಮಿ ಕೇಜ್ರಿವಾಲ್ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಮ ವಾಸ್ತವ್ಯವನ್ನೂ ಮಾಡುತಿದ್ದರು.ಗುಜರಾತಿನಲ್ಲಿ ೨೦೦೩ರಿಂದ ಅಸ್ತಿತ್ವದಲ್ಲಿರುವ ’ಸ್ವಾಗತ್’ ಅನ್ನುವ ಜನಸಂಪರ್ಕ ವ್ಯವಸ್ಥೆ ೧೧ ವರ್ಷಗಳಿಂದ ಸುಗಮವಾಗಿ ನಡೆದುಕೊಂಡು ಬರುತ್ತಿದೆ.ಅದರಲ್ಲೂ ಖುದ್ದು ಸಿಎಂ ಮೋದಿ ಹಾಜರಿರುತ್ತಾರೆ.(SWAGAT – State Wide Attention on Grievances by Application of Technology ).ಎಷ್ಟಾದರೂ ಅದು ’ಮೋದಿ’ ಅವರಲ್ಲವೇ ಹಾಗಾಗಿ ನಮ್ಮ ’ಮೀಡಿಯಾ’ಗಳ ಕಣ್ಣಿಗದು ಬೀಳುವ ಸಂಭವವೇ ಇಲ್ಲ ಬಿಡಿ.
ಕೇಜ್ರಿವಾಲ್ ತಂಡ ಇಂತ ಎಡಬಿಡಂಗಿ ಆಡಳಿತ ನೀಡುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ಏನೆಂದರೆ, ಆಪ್ ಪಕ್ಷ ಹಣ,ತೋಳ್ಬಲವಿಲ್ಲದೆ ಚುನಾವಣೆ ಎದುರಿಸಿ ಬಂದಿದ್ದು ಈ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಶುದ್ಧ ರಾಜಕೀಯದ ಶುಭಾರಂಭ ಕ್ಕೆ ಮುನ್ನುಡಿ ಬರೆದಿದೆ ಎನ್ನುವುದು.ದೆಹಲಿಯ ಜನ ಆಪ್ ಪಕ್ಷದ ಮೇಲೆ ಭರವಸೆಯಿಟ್ಟಿದ್ದಾರೆ.ಮೊದಲು ದೆಹಲಿಯಲ್ಲಿ ಮೈಕ್ ಪಕ್ಕಕ್ಕಿಟ್ಟು,ಮೀಡಿಯಾಗಳಿಂದ ದೂರವುಳಿದು ಜನ ಮೆಚ್ಚುವಂತ ಆಡಳಿತ ನೀಡಿ ಸೈ ಅನ್ನಿಸಿಕೊಂಡು, ಆ ನಂತರ ದೇಶದ ರಾಜಕಾರಣದೆಡೆಗೆ ಹೊರಳುವುದು ಬಿಟ್ಟು, ಆಪ್ ಪಕ್ಷ ಅವಸರದಲ್ಲಿ ದೆಹಲಿ ಜನರ ನಂಬಿಕೆಯ ಜೊತೆಗೆ, ನವ ರಾಜಕಾರಣದ ಆಶಯಕ್ಕೂ ಎಳ್ಳು-ನೀರು ಬಿಡಲು ಹೊರಟಿದ್ದಾರ ಅನ್ನಿಸುತ್ತಿದೆ.
ಬರುವ ಲೋಕಸಭಾ ಚುನಾವಣೆಗಾಗಿ ’Mass Membership Drive’ ಮಾಡಲು ಹೊರಟಿದೆ.ನಮ್ಮ ಐಟಿ ಕಂಪೆನಿಗಳು ಮಾಡುವ ‘Mass Recruitment Drive’ ನಂತೆ…! ಒಮ್ಮೆ ಯೋಚಿಸಿ.ಶುದ್ಧ ರಾಜಕಾರಣದ ಬಗ್ಗೆ ಮಾತನಾಡುವ ಆಪ್ ಪಕ್ಷದ ಈ ರೀತಿಯ ಸಾಮೂಹಿಕ ನೊಂದಾವಣಿಯಲ್ಲಿ ಎಂತೆಂತವರೆಲ್ಲ ಬಂದು ಪಕ್ಷದೊಳಗೆ ತೂರಿಕೊಳ್ಳಬಹುದು ಎಂದು…!
ಲೋಕಸಭಾ ಚುನಾವಣೆಗೆ ಹೊರಟಿದ್ದೀರಿ ಭ್ರಷ್ಟಚಾರವೊಂದನ್ನು ಬಿಟ್ಟು ನಿಮ್ಮ ಪಕ್ಷದ ರೀತಿ-ನೀತಿ ಸಿದ್ದಾಂತಗಳೇನು ಅಂತ ಕೇಳಿದರೆ,ಇನ್ನು ೧೫ ದಿನ ಕಾಯಿರಿ ನಮ್ಮ ವಿದೇಶಾಂಗ ನೀತಿ,ಆರ್ಥಿಕ ನೀತಿ ಇತ್ಯಾದಿಗಳ ಬಗ್ಗೆ ವಿವರಿಸುತ್ತೇವೆ ಅನ್ನುತ್ತಾರೆ ಮಹಾಶಯರು…! ಆಪ್ ಪಕ್ಷವನ್ನು ಸ್ಥಾಪಿಸಿ ವರ್ಷಗಳು ಕಳೆದಿವೆ. ಪಕ್ಷಕ್ಕೊಂದು ನೀತಿ-ಸಿದ್ಧಾಂತವನ್ನು ವರ್ಷವಾದರೂ ರೂಪಿಸಿಕೊಳ್ಳದವರ ಕೈಗೆ ದೇಶವನ್ನು ಕೊಡಬೇಕೆ?
ಇನ್ನೂ ಚುನಾವಣೆಯಲ್ಲಿ ಮತಗಳಿಕೆಯ ವಿಚಾರಕ್ಕೆ ಬಂದರೆ ಕೇಜ್ರಿವಾಲ್, ಆಂಧ್ರದಲ್ಲಿ ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ‘ಚಿರಂಜೀವಿ’ ನಿರ್ವಹಿಸಿದ ಮತ ವಿಭಜನೆಯ ಕೆಲಸವೊಂದನ್ನು ಬಿಟ್ಟು ಇನ್ನೇನು ಸಾಧಿಸಲಾರರು. ಚಿರಂಜೀವಿ ತೆಲುಗು ಸಿನೆಮಾ ಶೈಲಿಯಲ್ಲಿ ’ಪ್ರಜಾರಾಜ್ಯಂ’ ಹೆಸರಿನ ಪಕ್ಷ ಸ್ಥಾಪಿಸಿ, ಭೀಷಣ ಭಾಷಣ ಮಾಡುತ್ತಾ ಕಡೆಗೆ ಹೋಗಿ ಸೇರಿಕೊಂಡಿದ್ದು ಕಾಂಗ್ರೆಸ್ಸ್ ಪಕ್ಷವನ್ನು.ಆ ಮೂಲಕ ಪರಮ ಭ್ರಷ್ಟ ರಾಜಶೇಖರ ರೆಡ್ಡಿಯನ್ನು ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ ಪಾಲು ಚಿರಂಜೀವಿಗೂ ಸಲ್ಲುತ್ತದೆ.ಈಗ ಯುಪಿಎ ಸರ್ಕಾರದ ಭ್ರಷ್ಟಚಾರ,ದುರಾಡಳಿತ,ಬೆಲೆಯೇರಿಕೆ ಮತ್ತದಕ್ಕೆ ಮಂತ್ರಿವರ್ಯರು ಕೊಡುವ ದರ್ಪದ ಹೇಳಿಕೆಗಳು ಇವೆಲ್ಲವನ್ನೂ ನೋಡಿ ಜನರು ಮೋದಿಯೆಡೆಗೆ ಹೊರಟಿರುವಾಗ ಎದುರಿಗೆ ಬಂದು ನಿಂತಿರುವ ಹೊಸ ಚಿರಂಜೀವಿ ಈ ’ಕೇಜ್ರಿವಾಲ್’
ಇತ್ತೀಚೆಗೆ ತಾನೇ ಸಿ.ಎನ್.ಎನ್ ಮತ್ತು ಎನ್.ಡಿ.ಟಿ.ವಿಯಲ್ಲಿ ಕೇಜ್ರಿವಾಲ್ ರಾಜ್ದೀಪ್ ಸರ್ದೇಸಾಯಿ ಮತ್ತು ಬರ್ಖಾ ದತ್ ಅವರಿಗೆ ನೀಡಿದ ಸಂದರ್ಶನವನ್ನೂ ನೋಡಿದೆ.ಇಡೀ ಸಂದರ್ಶನದುದ್ದಕ್ಕೂ ಕೇಜ್ರಿವಾಲ್ ಬರಿ “ಕೆಡವುವುದರ” ಬಗ್ಗೆ ಹೇಳಿದರೆ ಹೊರತು “ಕಟ್ಟುವುದರ” (Constructive) ಬಗ್ಗೆ ಮಾತನಾಡಲೇ ಇಲ್ಲ ಈ ಮನುಷ್ಯ. ವ್ಯವಸ್ಥಿತವಾಗಿ ಕೆಡವಲೂ ಸಹ ಸಮಯಬೇಕಾಗುತ್ತದೆ. ಹಾಗೆಯೇ ಕೆಡವಿದ ಮೇಲೆ ಮತ್ತೆ ಕಟ್ಟುವುದು ಹೇಗೆ ಅನ್ನುವುದು ತಿಳಿಯದೇ ಕೆಡುವುದೂ ಅರಜಾಕತೆಯೆಡಿಗಿನ ಮೊದಲ ಹೆಜ್ಜೆ.ವ್ಯವಸ್ಥೆಯ ಮೇಲೆ ಸಾತ್ವಿಕ ಸಿಟ್ಟು,ಆಕ್ರೋಶ ಮಾನ್ಯ ಕೇಜ್ರಿವಾಲ್ ಅವರಿಗಿದ್ದಂತೆಯೇ, ಅವರನ್ನು ಜನಲೋಕಪಾಲದಲ್ಲಿ ಬೆಂಬಲಿಸಿದ ನಮ್ಮಂತ ಯುವಕರಿಗೂ ಇದೆ.ಆದರೆ ಈ ರೀತಿ ಗೊತ್ತು ಗುರಿಯಿಟ್ಟುಕೊಳ್ಳದೇ,ಅವಸರಕ್ಕೆ ಬಿದ್ದೂ ಎಲ್ಲವನ್ನೂ ಕೆಡವುತ್ತ, ಕೆಡವಿದ್ದನ್ನು ಕಟ್ಟುವ ಬಗ್ಗೆಯೇ ಚಿಂತನೆ ಇಲ್ಲದೇ ಹೋದರೆ “ಅರಜಾಕತೆ”ಯೇ ಉಂಟಾಗುವುದು.
ದೆಹಲಿ ರಾಜ್ಯದ ಸುಪರ್ದಿಗೆ ಪೋಲಿಸ್ ವ್ಯವಸ್ಥೆ ಬರಬೇಕು ಅನ್ನುವುದು ನ್ಯಾಯವಾದ ಬೇಡಿಕೆಯೇ ಸರಿ.ಆದರೆ,ಹಾಗಂತ ಮುಖ್ಯಮಂತ್ರಿಯೊಬ್ಬ ತನ್ನ ಸಚಿವರನ್ನು,ಶಾಸಕರನ್ನು ಕರೆದುಕೊಂಡು ಬಂದು ಧರಣಿ ಕೂರುವುದು ಸಂವಿಧಾನಕ್ಕೆಸಗುವ ಅಪಮಾನವಲ್ಲವೇ? ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವಾಗ ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ಮತ್ತು ಅದನ್ನು ರಕ್ಷಿಸುವ ಶಪಥ ತೆಗೆದುಕೊಂಡಿರುವುದಿಲ್ಲವೇ? ಈ ದೇಶಕ್ಕೊಂದು ಸಂವಿಧಾನವಿದೆ,ಒಂದು ವ್ಯವಸ್ಥೆಯಿದೆ,ವಿಧಾನವಿದೆ ಅದರಂತೆ ನಡೆಯಲೂ ಕೇಜ್ರಿವಾಲ್ ತಂಡ ತಯಾರಿಲ್ಲ ಅಥವಾ ಅವರ ಬೇಡಿಕೆಗೆ ಕ್ಯಾರೇ ಎನ್ನದ ಕಾಂಗ್ರೆಸ್ಸ್ ಸಂಗವನ್ನು ತೊರೆಯುವ ಉಮ್ಮೇದಿಯೂ ಇಲ್ಲ.ಇದೆಂತ ದ್ವಂದ್ವ ನಿಲುವು? “ಕ್ರಾಂತಿ”ಗೂ, “ದೊಂಬರಾಟ”ಕ್ಕೂ (ದೊಂಬರಾಟದ ಕಲಾವಿದರ ಕ್ಷಮೆ ಕೋರುತ್ತ) ವ್ಯತ್ಯಾಸವಿದೆ.ಆಪ್ ಕ್ರಾಂತಿಯ ಭ್ರಮೆಯಲ್ಲಿರುವವರಿಗೆ ಇದು ಅರ್ಥವಾದರೊಳಿತು.
ಕೇಜ್ರಿವಾಲ್ ಅವರನ್ನು ಕುರುಡಾಗಿ ಮತ್ತು ಸಿನಿಕರಾಗಿ ಬೆಂಬಲಿಸಲು ಹೊರಟವರು ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು; ಮುಂದೆ ಬರುತ್ತಿರುವುದು ಲೋಕಸಭಾ ಚುನಾವಣೆಯೇ ಹೊರತು ವಿಧಾನಸಭೆಯದ್ದಲ್ಲ.ಒಂದು ದೇಶದ ಚುಕ್ಕಾಣಿ ಯಾರ ಕೈಗೆ ಹೋಗಬೇಕು ಅನ್ನುವುದನ್ನು ನಿರ್ಧರಿಸುವಂತಹ ಅತ್ಯಂತ ಮಹತ್ವದ ಜವಬ್ದಾರಿಯದು.ದೇಶ ಪ್ರಗತಿಯ ಪಥದಲ್ಲಿ ಸಾಗಬೇಕಾದರೆ,ಕೇಂದ್ರದಲ್ಲಿ ಸದೃಢ ಮತ್ತು ಸ್ಥಿರ ಸರ್ಕಾರ ಬರಲೇಬೇಕು.ಭಾರತದ ಇತಿಹಾಸವನ್ನು ಗಮನಿಸಿದರೆ ಆ ರೀತಿಯ ಆಡಳಿತ ನೀಡಿರುವುದು ಕಾಂಗ್ರೆಸ್ಸ್ ಮತ್ತು ಬಿಜೆಪಿ ಪಕ್ಷಗಳು ಮಾತ್ರ. ತೃತೀಯ ರಂಗ ಇದುವರೆಗೂ ಈ ದೇಶಕ್ಕೆ ಅಧಿಕಾರ ನಡೆಸಿದ ೭ ವರ್ಷಗಳಲ್ಲಿ ೬ ಪ್ರಧಾನಿಗಳನ್ನು ನೀಡಿದೆ…! ಚಂದ್ರಶೇಖರ್ ನಂತರ ಪಿ.ವಿ ನರಸಿಂಹ ರಾವ್ ಬಂದಾಗ ದೇಶದ ಆರ್ಥಿಕ ಸ್ಥಿತಿ ಹೇಗಿತ್ತು ಅನ್ನುವುದನ್ನೊಮ್ಮೆ ನೆನಪಿಸಿಕೊಳ್ಳಿ.ಆ ನಂತರ ಅದು ತಹಬದಿಗೆ ಬಂದಿದ್ದು ಕೇಂದ್ರದಲ್ಲೊಂದು ಸ್ಥಿರ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬಂದ ಕಾರಣದಿಂದಲೇ ಅಲ್ಲವೇ? ಹೆಚ್.ಡಿ ದೇವೆಗೌಡ,ಐ.ಕೆ ಗುಜ್ರಾಲ್ ನಂತರ ಬಂದ ವಾಜಪೇಯಿಯವರ ಸರ್ಕಾರ ನರಸಿಂಹ ರಾವ್ ಅವರ ಹಾದಿಯ ಮುಂದಿನ ಹಂತಕ್ಕೆ ಭಾರತವನ್ನು ತಲುಪಿಸಿದ್ದೇ ಹೊರತು ತೃತೀಯ ರಂಗದ ಸರ್ಕಾರಗಳಲ್ಲ.
ಆ ಕಾಲಕ್ಕೇನೋ ಭಾರತದ ಉಗ್ರರ ಉಪಟಳ ಇಷ್ಟು ಮಟ್ಟದಲ್ಲಿ ಏರಿಕೆ ಕಂಡಿರಲಿಲ್ಲ.ಭ್ರಷ್ಟಚಾರವೂ ಬ್ರಹ್ಮಾಂಡ ರೂಪ ತಾಳಿರಲಿಲ್ಲ.ದಿನನಿತ್ಯದ ವಸ್ತುಗಳ ಬೆಲೆ ಈ ಪರಿ ಏರಿಕೆ ಕಂಡಿರಲಿಲ್ಲ ಮತ್ತು ಅವೆಲ್ಲಕ್ಕಿಂತ ಮುಖ್ಯವಾಗಿ ದೇಶದ ಆರ್ಥಿಕ ಸ್ಥಿತಿ ಈ ಪರಿ ಹಳ್ಳಹಿಡಿದಿರಲಿಲ್ಲ.ಈಗ ಹೇಳಿ ಇಂತ ವಿಷಮ ಪರಿಸ್ಥಿತಿಯಲ್ಲಿ ಕೇಂದ್ರದಲ್ಲೊಂದು ಸದೃಢ ಮತ್ತು ಅನುಭವವು ಳ್ಳವರ ಸರ್ಕಾರವನ್ನು ಬಯಸುತ್ತಿರೋ ಅಥವಾ ಸಿನಕತನಕ್ಕೆ ಮತ್ತು ಕ್ರಾಂತಿಯ ಭ್ರಾಂತಿಗೆ ಸಿಲುಕಿ ಅತಂತ್ರ ಸರ್ಕಾರವೊಂದು ಬರುವಂತೆ ನಿರ್ಣಯ ತೆಗೆದುಕೊಳ್ಳುತ್ತಿರೋ?
ನರೇಂದ್ರ ಮೋದಿಯನ್ನು ನಾನೇಕೆ ಪ್ರಬಲವಾಗಿ ಬೆಂಬಲಿಸುತ್ತೇನೆ :
೨೦೦೧ ರಿಂದ ೨೦೧೪ರವರೆಗೆ ಸತತವಾಗಿ ಮುಖ್ಯಮಂತ್ರಿಯಾಗಿದ್ದುಕೊಂಡು ಅಭಿವೃದ್ಧಿ ಪಥದಲ್ಲಿ ರಾಜ್ಯವೊಂದನ್ನು ಮುನ್ನಡೆಸಿದ ಆಡಳಿತಾತ್ಮಕ ಅನುಭವ,ಜನಪರ ಆಡಳಿತ,ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಕೈಯೊಡ್ಡುವ ಯೋಜನೆಗಳಿಗಿಂತ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ಮಾತನಾಡುವ ಮೋದಿ ನನಗೆ ನನ್ನ ದೇಶವನ್ನು ಮುನ್ನಡೆಸಲು ಸೂಕ್ತವ್ಯಕ್ತಿಯಂತೆ ಕಾಣುತ್ತಾರೆ. ದೇಶದ ಇತಿಹಾಸದಲ್ಲಿ ಅತಿಹೆಚ್ಚು ದೂಷಣೆಗೊಳಗಾದ ಮತ್ತು ಟಾರ್ಗೆಟ್ ಮಾಡಲ್ಪಟ್ಟ ಮುಖ್ಯಮಂತ್ರಿಯೆಂದರೆ ಮೋದಿ.ಇಡೀ ಸೆಕ್ಯುಲರ್ ಮೀಡಿಯಾಗಳು,ಸೆತಲ್ವಾಡ್ ರಂತಹ ಸೋ-ಕಾಲ್ಡ್ ಹೋರಾಟಗಾರರು,ಕಾಂಗ್ರೆಸ್ಸಿಗರು,ಕೇಂದ್ರ ಸರ್ಕಾರ,ಕಮ್ಯುನಿಸ್ಟರು,ಕಾಲೆಳೆಯುತಿದ್ದ ಸ್ವ-ಪಕ್ಷೀಯರು ಹೀಗೆ ಯಾರ ಕೈಗೂ ಸಿಗದೇ ಇಂದು ಪ್ರಧಾನಿ ಅಭ್ಯರ್ಥಿಯಾಗುವ ಮಟ್ಟಕ್ಕೆ ಬಂದು ನಿಂತವನ Caliber ಎಂತದ್ದಿರಬಹುದು? ಸತತವಾಗಿ ನೆಗೆಟಿವ್ ಸುದ್ದಿಗಳೇ ಹರಡುವಾಗಲೂ ತನ್ನ ಕೆಲಸದಿಂದಲೇ ಉತ್ತರಕೊಡುತ್ತ ಬಂದ ಮೋದಿ ಇಷ್ಟವಾಗುವುದು ಅವರ ಕೆಲಸಗಳಿಂದಲೇ.
ನಿನ್ನೆ ರಾಮಲೀಲಾದಲ್ಲಿ ಮೋದಿ ಮಾಡಿದ ಭಾಷಣವನ್ನು ಕೇಳಿದ ಮೇಲೆ ಅವರಿಗೇ ಏಕೆ ನಾನು ಮತ ನೀಡಬೇಕು ಅನ್ನುವುದಕ್ಕೆ ಇನ್ನೊಂದು ಕಾರಣವೂ ಸಿಕ್ಕಂತಾಯಿತು.ನನಗೆ ಎಲ್ಲಕ್ಕಿಂತ ಗಮನ ಸೆಳೆದಿದ್ದು ’ಒಕ್ಕೂಟ ವ್ಯವಸ್ಥೆ’ಯ ಬಗ್ಗೆ ಮೋದಿ ಹೇಳಿದ ಮಾತುಗಳು.ನಿಜವಾಗಿಯೂ ಭಾರತಕ್ಕೆ ಎಲ್ಲರನ್ನೂ ಸರಿಸಮಾನವಾಗಿ ಕಾಣುವ ಮತ್ತು ಕೇಂದ್ರವೆಂದರೆ ಕೊಡುವವ,ರಾಜ್ಯವೆಂದರೆ ಕೈಯೊಡ್ಡುವವ ಅನ್ನುವ ಮನಸ್ಥಿತಿ ತೊಲಗಬೇಕು.ಗುಜರಾತಿ ಅಸ್ಮಿತಾ ಅನ್ನುವ ಮೋದಿಯವರಿಗೆ ಪ್ರಾದೇಶಿಕತೆಗೆ ನೀಡಬೇಕಾದ ಗೌರವ ಮತ್ತು ಸ್ವಾತಂತ್ರ್ಯದ ಅರಿವಿದೆ ಅನ್ನುವುದು ಅವರ ಮಾತಿನಿಂದ ತಿಳಿಯುಅದೆ.
ಮೋದಿಯವರ ೭ ಅಂಶದ ಕಾರ್ಯಕ್ರಮಗಳು :
ಭಾರತೀಯ ಕೌಟುಂಬಿಕ ಮೌಲ್ಯಗಳ ಮತ್ತು ವ್ಯವಸ್ಥೆಯ ರಕ್ಷಣೆ,ಕೃಷಿಯ ಬೆಳವಣಿಗೆ,ಮಹಿಳಾ ಸಬಲೀಕರಣ,ಅರಣ್ಯ ಮತ್ತು ಭೂಮಿಯ ರಕ್ಷಣೆ,ಯುವ ಸಮಬಲೀಕರಣ,ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆ ಮತ್ತು ಜ್ಞಾನಾರ್ಜನೆಗಾಗಿ ಹೊಸ ಸಂಸ್ಥೆಗಳ ನಿರ್ಮಾಣ
ಮಹಿಳಾ ಸಬಲೀಕರಣದ ಬಗ್ಗೆ :
ಮಹಿಳೆಯರನ್ನು ಕುಟುಂಬ ನಿರ್ಮಾಣದಿಂದ ದೇಶ ನಿರ್ಮಾಣದೆಡೆಗೆ ಸಾಗುವಂತೆ ಮಾಡಬೇಕು.ಈ ದೇಶದಲ್ಲಿ ನಮ್ಮ ತಾಯಂದಿರು ಮತ್ತು ಅಕ್ಕ-ತಂಗಿಯರ ಜೊತೆ ನಡೆಯುತ್ತಿರುವುದು ತಲೆ ತಗ್ಗಿಸುವಂತದ್ದು.ಮಹಿಳಾ ಶಿಕ್ಷಣದ ಬಗ್ಗೆ ಮಾತನಾಡುತ್ತ ’ಮಗಳನ್ನು ಉಳಿಸಿ,ಮಗಳನ್ನು ಓದಿಸಿ’ ಅನ್ನುವ ಆದೋಂಲನ ಆಗಬೇಕಿದೆ.ಮಹಿಳಾ ಭ್ರೂಣ ಹತ್ಯೆಗಿಂತ ದೊಡ್ಡ ದುರಂತ ಇನ್ನೊಂದಿಲ್ಲ.
ಮೋದಿಯವರ 5T plan : ಟಾಲೆಂಟ್,ಟೂರಿಸಂ,ಟೆಕ್ನಾಲಜಿ,ಟ್ರೆಡಿಶನ್ ಮತ್ತು ಟ್ರೇಡ್.
ಪಿ.ಎಂ ಪಟ್ಟಕ್ಕೆ ಮೋದಿ Time Tested ಕ್ಯಾಂಡಿಟೇಟ್ ಆಗಿದ್ದಾರೆ. ಅದಕ್ಕೆ ಬೇಕಾದ Proven Track Record ಕೂಡ ಅವರ ಬಳಿಯಿದೆ. ಆದ್ದರಿಂದಲೇ ಇವತ್ತು ರತನ್ ಟಾಟಾ,ಇನ್ಫೋಸಿಸ್ ನಾರಾಯಣ ಮೂರ್ತಿಯಂತವರು ಅವರ ಪರ ಮಾತನಾಡುತಿದ್ದಾರೆ. ಇನ್ನು ಆಪ್ ಪಕ್ಷಕ್ಕೆ ಮತ ನೀಡುವುದು ಪರೋಕ್ಷವಾಗಿ ಕಾಂಗ್ರೆಸ್ಸಿಗೆ ಮತ ನೀಡಿದಂತೆ ಎನ್ನುತ್ತ ಕಿರಣ್ ಬೇಡಿಯವರು ಟ್ವೀಟ್ ಮಾಡಿದ ಇನ್ನೊಂದು ಮಾತು ಅತಿ ಮುಖ್ಯವಾಗುತ್ತದೆ.“For me it’s India First! Stable, Well Governed, Administered, Accountable and Inclusive. As an independent voter, my vote is for NaMo”. ಹೆಸರಾಂತ ಲೇಖಕ ಚೇತನ್ ಭಗತ್ ಆಪ್ ಬಗ್ಗೆ ಬರೆಯುತ್ತಾ, “Get the priorities right: India first, AAP second” ಅನ್ನುತ್ತಾರೆ.
ವೈಯುಕಿಕ್ತವಾಗಿ ನನಗೆ ಭಾರತವೇ ಮೊದಲು.ಸದೃಢ,ಸ್ಥಿರ ಸರ್ಕಾರ ನೀಡುವ ಭರವಸೆ ತೋರುವ ಅಭ್ಯರ್ಥಿಗೆ ನನ್ನ ಮತ.ಹಾಗಾಗಿಯೇ ನಾನು ಮೋದಿಯನ್ನು ಪ್ರಬಲವಾಗಿ ಬೆಂಬಲಿಸುತ್ತೇನೆ. ಅಂದ ಹಾಗೆ ನಿಮಗೂ ಭಾರತ ಮೊದಲಾ?
ಕೇಜ್ರಿವಾಲ್ ಮತ್ತು ಸಂಗಡಿಗರಿಗೆ ಅನುಭವವಿಲ್ಲ ಎನ್ನುವುದು ಒಂದು ಅಂಶವಾದರೆ, ಮತ್ತೊಂದು ಮುಖ್ಯ ಅಂಶ ಅವರ ಹಿಂದೆ ಯಾವುದಾದರೂ ವಿದೇಶಿ ಶಕ್ತಿ ಕೆಲಸ ಮಾಡುತ್ತಿರಬಹುದೇ ಎನ್ನುವ ಗುಮಾನಿ!
ಆಪ್ ಪಕ್ಷಕ್ಕೆ ಮತ್ತು ಕೇಜ್ರಿವಾಲ್ ಅವರು ಹಿಂದೆ ನಡೆಸುತ್ತಿದ ಸಂಘಟನೆಗಳಿಗೆ ಅಮೆರಿಕದ ಫೋರ್ಡ್ ಫಂಡೇಶನ್ ಇಂದ ಕೋಟ್ಯಂತರ ರೂಪಾಯಿ ಹರಿದು ಬಂದಿದೆ. ಈ ಕುರಿತಾಗಿ ಪ್ರಶ್ನಿಸಿದಾಗ, ಕೇಜ್ರಿವಾಲ್ ಉತ್ತರಿಸುತ್ತಿಲ್ಲ. ಫೋರ್ಡ್ ಫೌಂಡೇಶನ್ ಸಂಸ್ಥೆಯು ಜಗತ್ತಿನ ವಿವಿಧ ದೇಶಗಳಲ್ಲಿ ಹಣವನ್ನು ಹರಿಸಿದೆ. ಈ ರೀತಿ ಅದು ಹಣ ಹರಿಸಿರುವ ದೇಶಗಳಲ್ಲೆಲ್ಲಾ ಅರಾಜಕತೆ ಹರಡಿದೆ. ಅಮೆರಿಕದ CIA ಸಂಸ್ಥೆಯು ಫೋರ್ಡ್ ಫೌಂಡೇಶನ್ ಮೂಲಕ ಹಣವನ್ನು ಕಳುಹಿಸಿ ಅರಾಜಕತೆ ಹರಡುವುದು ಹಲವು ದಶಕಗಳಿಂದ ನಡೆದುಕೊಂಡು ಬಂದಿರುವ ವಿಚಾರ. ನೆನ್ನೆ ತಾನೇ ಕೇಜ್ರಿವಾಲ್ ಅವರು ಸತ್ಯಾಗ್ರಹಕ್ಕೆ ಕುಳಿತಾಗ, “ನಾನೊಬ್ಬ ಅರಾಜಕ; ಅರಾಜಕತೆ ಉಂಟು ಮಾಡುವುದೇ ನನ್ನ ಉದ್ದೇಶ” ಎಂದೆಲ್ಲಾ ಬಡಬಡಿಸಿದ್ದಾರೆ. ಅವರಿದನ್ನು ಗಂಭೀರವಾಗಿ ಹೇಳಿಲ್ಲದಿರಬಹುದು. ಒಬ್ಬ ಮುಖ್ಯಮಂತ್ರಿಯ ಬಾಯಿಂದ ಈ ರೀತಿಯ ಹೇಳಿಕೆಗಳು ಬರಬಾರದು ಅಲ್ಲವೇ!
ಆದರೆ, ಫೋರ್ಡ್ ಫೌಂಡೇಶನ್ ಕಳುಹಿಸಿರುವ ಹಣಕ್ಕೂ, ಕೇಜ್ರಿವಾಲ್ ಹೇಳುತ್ತಿರುವ “ಅರಾಜಕತೆ”ಗೂ ಸಂಬಂಧವಿದ್ದರೆ ಅದು ಬಹಳ ದೊಡ್ಡ ಅಪಾಯವಲ್ಲವೇ?
ಈ ಕುರಿತಾಗಿ RAWನ ನಿವೃತ್ತ ಅಧಿಕಾರಿಯೊಬ್ಬರು ಬರೆದಿರುವ ಲೇಖನವನ್ನು ಈ ಕೊಂಡಿಯಲ್ಲಿ ಓದಿ:
http://ssnarendrakumar.blogspot.com/2014/01/is-aap-planted-to-destabilize-democracy.html
http://ssnarendrakumar.blogspot.com/2014/01/disturbing-patterns-of-links-of-ford.html
ಹಿಟ್ಲರನ ಮೊಟ್ಟೆಗಳು
http://ladaiprakashanabasu.blogspot.in/2014/01/blog-post_4027.html
“ಯದ್ ಭಾವಂ ತದ್ ಭವತಿ”
ಕೆಲವರಿಗೆ ಸದಾ ಹಿಟ್ಲರ್^ನದೇ ಜಪ!
2002ರ ನಂತರ ಗುಜರಾತಿನಲ್ಲಿ ಯಾವುದೇ ಕೋಮುಗಲಭೆಗಳಾಗಿಲ್ಲ ಎನ್ನುವುದು ಅವರ ಅರಿವಿಗೇ ಬರುವುದಿಲ್ಲ.
ಏಕೆಂದರೆ, ಅವರು ಹಾಕಿಕೊಂಡಿರುವ ವಿಡಿಯೋ ಟೇಪ್ ಹಿಂದಿನದ್ದನ್ನೇ ಮತ್ತೆ ಮತ್ತೆ ತೋರಿಸುತ್ತಿರುತ್ತದೆ; ಅವರಿಗೆ ಮುಂದೆ ಆಗುವುದು ತಿಳಿಯುವುದೇ ಇಲ್ಲ, ಅವರಿಗೆ ಹಿಂದುಳಿದಿರುವುದೇ ಇಷ್ಟ!
ಉತ್ತರಪ್ರದೇಶದಲ್ಲಿ ವರ್ಷಕ್ಕೆ ಹತ್ತು ಕೋಮುಗಲಭೆಗಳಾಗುತ್ತದೆ; ಬಿಹಾರ, ಪಶ್ಚಿಮ ಬಂಗಾಳಗಳೇನೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಅಲ್ಲಿ ಆಳುತ್ತಿರುವವರು “ಜಾತ್ಯಾತೀತವಾದಿ”ಗಳು. ಹೀಗಾಗಿ, ಕೋಮುಗಲಭೆ ಮಾಡುವುದು ಅವರ ಆಜನ್ಮಸಿದ್ಧ ಹಕ್ಕು.
ಗುಜರಾತಿನ ಮುಸಲ್ಮಾನರೇ 2002ರ ಘಟನೆಗಳನ್ನು ಮರೆತು ಮುಂದೆ ಹೆಜ್ಜೆ ಇಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಗುಜರಾತಿನ ಮುಸಲ್ಮಾನರು ಮೋದಿಯವರಿಗೇ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿದ್ದರೆನ್ನುವುದು ಸಮೀಕ್ಷೆಗಳಿಂದ ತಿಳಿದು ಬಂದಿದೆ.
ಗುಜರಾತು ಅಭಿವೃದ್ಧಿಪಥದಲ್ಲಿ ಉಳಿದ ರಾಜ್ಯಗಳಿಗಿಂತ ಹಲವು ಮೈಲು ಮುಂದೆ ಸಾಗಿದೆ. ಇಡೀ ಉತ್ತರ ಭಾರತ “Grid Failure”ನಿಂದಾಗಿ ಕತ್ತಲಲ್ಲಿ ಹಲವು ದಿನಗಳನ್ನು ಕಳೆಯಬೇಕಾಗಿ ಬಂದಾಗ, ಗುಜರಾತು ವಿದ್ಯುತ್ ನೀಡಲು ಮುಂದಾಗಿತ್ತು. ಬರಪೀಡಿತ ಪ್ರದೇಶವಾದ ಗುಜರಾತಿನಲ್ಲಿ ಇಂದು ನೀರಿನ ಸಮಸ್ಯೆ ಒಂದಿನಿತೂ ಇಲ್ಲ. ಪರಿಸರಕ್ಕೆ ಯಾವುದೇ ಹಾನಿ ಮಾಡದೆ ವಿದ್ಯುತ್ ತಯಾರಿ ಮಾಡುವುದರಲ್ಲಿ ಗುಜರಾತು ರಾಜ್ಯ ಜಗತ್ತಿಗೇ ಮಾದರಿಯಾಗಿದೆ.
ಆದರೆ “ಹಿಂದಿನ ವಿಡಿಯೋಗಳನ್ನೇ ಪುನರಾವರ್ತನೆ” ಮಾಡುತ್ತಿರುವವರಿಗೆ ಅದೆಲ್ಲ ಕಾಣುವುದಿಲ್ಲ. ಏಕೆಂದರೆ, ಅವರಿಗೆ ಅಭಿವೃದ್ದಿ ಬೇಕಾಗಿಯೇ ಇಲ್ಲ. ಅವರು ಸದಾ ಹಿಂದುಳಿಯಲೇ ಇಷ್ಟಪಡುತ್ತಾರೆ ಪಾಪ!!!!
“ರಾಜಬೀದಿಯಲ್ಲಿ ನಾಯಿಕುನ್ನಿಗಳ ಸಾವು
ಸಹಜ ರಾಜಧರ್ಮ
ನರಕದ ಆಕ್ರಂದನ ರಸಭಂಗವೆನ್ನುವುದು
ಸುರಮಾನವರ ಮನೋಧರ್ಮ”
ನಾಯಿ ನರಿಗಳಂತೆ ಮೈ ಪರಚಿಕೊಳ್ಳುತ್ತಾರೆ ವೈದಿಕರು. ವಾರ್ತಾಭಾರತಿ ಪತ್ರಿಕೆಯ ಒಂದು ಸುದ್ದಿಯಲ್ಲಿ ಶ್ರೀ ಎ.ಕೆ. ಸುಬ್ಬಯ್ಯ ಎನ್ನುವವರು ‘ಮೌಢ್ಯ ಮುಕ್ತ ಕರ್ನಾಟಕ’ ಎಂಬ ಸಂವಾದದಲ್ಲಿ ” ಮೌಢ್ಯಾಚರಣೆ ಪ್ರತಿಬಂಧಕ ಮಸೂದೆಯಲ್ಲಿ ಯಾವುದೆ ಧರ್ಮದ ಸ್ವಾತಂತ್ರ್ಯ ಕಸಿದುಕೊಳ್ಳುವ ಯಾವುದೇ ಅಂಶಗಳಿಲ್ಲ. ಹೀಗಿದ್ದರೂ ವೈದಿಕರು ನಾಯಿ-ನರಿಗಳಂತೆ ಮೈಪರಚಿಕೊಂಡು ಗುಲ್ಲೆಬ್ಬಿಸುತ್ತಿದ್ದಾರೆ”. ಎಂದು ಹೇಳಿದ್ದಾರೆ. ಇರಲಿ, ಇದೇ ಪತ್ರಿಕೆಯಲ್ಲಿ ಮೋದಿಯವರು ಮುಸ್ಲಿಂ ಜನತೆಯನ್ನು ನಾಯಿ ಕುನ್ನಿಗೆ ಹೋಲಿಸಿದ್ದಾರೆ ಎಂದು ಸಿಕ್ಕಾಪಟ್ಟೆ ಜರಿದಿದ್ದರು. ಆದರೆ ವೈದಿಕರನ್ನು ನಾಯಿ-ನರಿಗೆ ಹೊಲಿಸಿದ ಸುಬ್ಬಯ್ಯನವರ ಬಗ್ಗೆ ಒಬ್ಬರೂ ಟೀಕೆ ಮಾಡಿಲ್ಲ! ಈ ಅಂಶಗಳಿರುವ ಲೇಖನವನ್ನು ಇದೇ ಬ್ಲಾಗಿನಲ್ಲಿ ಡಿಸೆಂಬರ್ ತಿಂಗಳಲ್ಲಿ ವಿದ್ಯಾ ಅವರು ಬರೆದಿದ್ದರು. ನೀವು ಇದನ್ನು ಓದಿರಬಹುದು. ಆಗೆಲ್ಲ ತಮ್ಮ ಅಮೂಲ್ಯ ಹೇಳಿಕೆ ಕಮೆಂಟು ಬರಲೇ ಇಲ್ಲ. ಯಾಕೆ?? ಯಾಕೆಂದರೆ ಬೈದಿದ್ದು ಬ್ರಾಹ್ಮಣರಿಗಲ್ಲವೆ?? ನಿಮ್ಮ ಪ್ರಕಾರ ಬ್ರಾಹ್ಮಣರು ಮನುಷ್ಯರೇ ಅಲ್ಲವಲ್ಲ!!. ಕೇವಲ ಮುಸಲ್ಮಾನರು ಮಾತ್ರ ಮನುಷ್ಯರು !!. ಅವರಿಗೆ ನೋವಾದರೆ ನಿಮ್ಮಂಥವರಿಗೂ, ಲಡಾಯಿ ಬ್ಲಾಗ್ ನಲ್ಲಿ ಲೇಖನ ಬರೆಯುವ ಸೋಕಾಲ್ಡ ಪ್ರಗತಿಪರರಿಗೂ ಗೌರಮ್ಮನಂಥ ಬುದ್ದುಜೀವಿಗಳಿಗೂ ಬಹಳ ನೊವಾಗುತ್ತದೆ. ಬ್ರಾಹ್ಮಣರನ್ನು ಕೇಳುವವರಾರು?? ನ್ಯಾಯ ಹೇಗಿದೆ ನೋಡಿ. ಮುಸುಲ್ಮಾನರನ್ನು ಹೊಗಳಿದರೆ ಬುದ್ದೂಜೀವಿಯ ಪಟ್ಟ ಸಿಗುತ್ತದೆ. ಅವರಿಗಾಗಿ ಮಿಡಿದರೆ ಕಾಂಗ್ರೆಸ್ ಸರ್ಕಾರದಿಂದ ಸಿಗಬೆಕಾದ ಸೌಲಭ್ಯಗಳೆಲ್ಲ ಸಿಗುತ್ತವೆ. ಬ್ರಾಹ್ಮಣ ಜೀವಕ್ಕೆ ಮಿಡಿದರೆ ಇವೆಲ್ಲ ಸಿಗುತ್ತವಾ?? ಶೆಟ್ಕರ್ ಸಾಬರೇ ಉತ್ತರಿಸುವದಿಲ್ಲವಾ??
ಎ ಕೆ ಸುಬ್ಬಯ್ಯನವರ ಬಗ್ಗೆ ಹೇಳಲಾರೆ, ನಾನು ಎಂದೂ ಬ್ರಾಹ್ಮಣ ನಿಂದನೆ ಮಾಡಿಲ್ಲ. ಬ್ರಾಹ್ಮಣರಲ್ಲೂ ಒಳ್ಳೆಯವರಿದ್ದಾರೆ ಅಂತ ಮೊದಲಿಂದಲೂ ಹೇಳುತ್ತಲೇ ಬಂದಿದ್ದೇನೆ. ಬ್ರಾಹ್ಮಣ್ಯ ಬಿಟ್ಟ ಬ್ರಾಹ್ಮಣರ ಬಗ್ಗೆ ನನಗೆ ಅಭಿಮಾನ ಹಾಗೂ ವಿಶ್ವಾಸವಿದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿ ಬ್ರಾಹ್ಮಣ್ಯ ತ್ಯಜಿಸಿದ ಬಸವಣ್ಣನವರೇ ನಮ್ಮ ಆದ್ಯ ಗುರುಗಳು.
ಬ್ರಾಹ್ಮಣ ನಿಂದನೆ ಬಗ್ಗೆ ತಗಾದೆ ಎತ್ತುವ ನಿಲುಮೆಯ ಮಿತ್ರರು ನಿಲುಮೆಯ ವೇದಿಕೆಯಲ್ಲೇ ಲಂಗುಲಗಾಮಿಲ್ಲದೆ ನಡೆಯುತ್ತಲೇ ಬಂದಿರುವ ಮುಸ್ಲಿಂ ನಿಂದನೆ ಬಗ್ಗೆ ಏಕೆ ತಕರಾರು ಎತ್ತುತ್ತಿಲ್ಲ?
[[ನಿಲುಮೆಯ ಮಿತ್ರರು ನಿಲುಮೆಯ ವೇದಿಕೆಯಲ್ಲೇ ]]
“ನಿಲುಮೆ”ಯಲ್ಲಿ ನಿಲುಮೆಗೆ ಸೇರಿದವರು ಮತ್ತು ಹೊರಗಿನವರು ಎಂಬ ಎರಡು ರೀತಿಯ ಜನರಿದ್ದಾರೆ ಎಂಬ ನಿಮ್ಮ ಅಭಿಪ್ರಾಯವನ್ನು ಮೊದಲು ಸರಿಪಡಿಸಿಕೊಳ್ಳಿ. ನೀವೆಷ್ಟು ನಿಲುಮೆಗೆ ಸೇರಿದವರೋ ಇಲ್ಲಿ ಪ್ರತಿಕ್ರಿಯಿಸುವ ಮತ್ತು ಲೇಖನ ಬರೆಯುವ ಉಳಿದವರೂ ಅಷ್ಟೇ ನಿಲುಮೆಗೆ ಸೇರಿದವರು ಅಥವಾ ನಿಮ್ಮಷ್ಟೇ ಹೊರಗಿನವರು.
[[ಬ್ರಾಹ್ಮಣ ನಿಂದನೆ ಬಗ್ಗೆ ತಗಾದೆ ಎತ್ತುವ ನಿಲುಮೆಯ ಮಿತ್ರರು ನಿಲುಮೆಯ ವೇದಿಕೆಯಲ್ಲೇ ಲಂಗುಲಗಾಮಿಲ್ಲದೆ ನಡೆಯುತ್ತಲೇ ಬಂದಿರುವ ಮುಸ್ಲಿಂ ನಿಂದನೆ ಬಗ್ಗೆ ಏಕೆ ತಕರಾರು ಎತ್ತುತ್ತಿಲ್ಲ?]]
ಇಲ್ಲಿ ಪ್ರತಿಕ್ರಿಯಿಸುವ ಪ್ರತಿಯೊಬ್ಬರೂ ವ್ಯಕ್ತಿಗತ ನೆಲೆಯಲ್ಲಿ ನಿಂತು ಪ್ರತಿಕ್ರಿಯಿಸಿರುತ್ತಾರೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಿ.
ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯ ನೀಡುವುದಕ್ಕೆ ಸ್ವಾತಂತ್ರ್ಯವಿದೆ.
ಯಾರಾದರೂ ಒಂದು ಕೋಮಿನ/ಪಂಗಡದ ವಿರುದ್ಧ ಟೀಕೆ ಮಾಡಿದ್ದರೆ, ಅಂತಹ ವ್ಯಕ್ತಿಯನ್ನೇ ಅದರ ಕುರಿತಾಗಿ ಕೇಳಬೇಕಷ್ಟೇ.
ಮತ್ತು ಅಂತಹವರು ಆ ರೀತಿ ಮಾಡಿದ ಟೀಕೆಗೆ, ನೀವು ಮತ್ತಂದು ಕೋಮು/ಪಂಗಡವನ್ನು ಟೀಕಿಸುವುದು ಕೀಳು ಅಭಿರುಚಿಯನ್ನು ಹಾಗೂ ಅವೈಚಾರಿಕತೆಯನ್ನು ತೋರಿಸುತ್ತದೆ ಎಂಬುದೂ ನೆನಪಿರಲಿ.
ಬಸವಣ್ಣನವರ ಹೆಸರನ್ನು ಹೇಳಿಕೊಂಡು, ಅವರ ಅನುಯಾಯಿಗಳೆಂದು ತಿರುಗಾಡುವ ನೀವು, ಮೊದಲು ಕಲಿಯಬೇಕಾದದ್ದು “ಸಹನೆ” ಎನ್ನುವುದೂ ತಿಳಿದಿರಲಿ.
ನಾನು ಯಾವ ಜಾತಿಯನ್ನೂ ಕೋಮು ಅನ್ನು ನಿಂದಿಸಿಲ್ಲ. ನಾನು ಟೀಕಿಸುರುವುದು ಕೋಮುವಾದಿಗಳನ್ನು ಜಾತಿವಾದಿಗಳನ್ನು ಮಾತ್ರ. ನನ್ನ ಟೀಕೆ ನಿಮಲ್ಲಿ ಹುಟ್ಟಿಸಿರುವ ಅಸಹನೆ ನೋಡಿದರೆ ಬಹುಶ ನೀವೂ ಜಾತಿವಾದಿ/ಕೋಮುವಾದಿಗಳ ಪಟ್ಟಿಗೆ ಸೇರಿದವರು ಅಂತ ಅನುಮಾನ ಹುಟ್ಟುತ್ತದೆ.
[[ನೀವೂ ಜಾತಿವಾದಿ/ಕೋಮುವಾದಿಗಳ ಪಟ್ಟಿಗೆ ಸೇರಿದವರು ಅಂತ ಅನುಮಾನ ಹುಟ್ಟುತ್ತದೆ.]]
ನೀವು ಯಾವ ಅನುಮಾನವನ್ನೋ ಅಥವಾ ಮತ್ತೇನನ್ನೋ ಹುಟ್ಟಿಸಿಕೊಳ್ಳಬಹುದು, ಅದು ನಿಮ್ಮಿಷ್ಟ! 😉
[[ನಾನು ಟೀಕಿಸುರುವುದು ಕೋಮುವಾದಿಗಳನ್ನು ಜಾತಿವಾದಿಗಳನ್ನು ಮಾತ್ರ]]
ನೀವು ಪದೇ ಪದೇ ಉಪಯೋಗಿಸುವ “ಬ್ರಾಹ್ಮಣ್ಯ” ಎನ್ನುವುದು ಒಂದು ಜಾತಿಯನ್ನೇ ಸೂಚಿಸುತ್ತದೆ ಎನ್ನುವುದು ಎಲ್ಲರಿಗೂ ಸುಲಭವಾಗಿ ತಿಳಿಯುವ ವಿಷಯ. ನೀವು ನಿಮ್ಮ ಮಾತಿಗೆ ಏನು ಬೇಕಾದರೂ ಅರ್ಥ ಕೊಡಬಹುದು. ಆದರೆ, ಹೆಚ್ಚಿನ ಜನ ಅದನ್ನು ಏನೆಂದು ಅರ್ಥ ಮಾಡಿಕೊಳ್ಳುತ್ತಾರೋ ಅದೇ ಮುಖ್ಯ.
ಹೀಗಾಗಿ, ಒಂದು ಜಾತಿಯ ಹೆಸರನ್ನು ನಿಂದಿಸುವುದು “ಜಾತಿವಾದ”ದ ಸೂಚಕ. ನೀವು ಮಾಡುತ್ತಿರುವುದು ಜಾತಿನಿಂದನೆ. ನಿಮ್ಮ ಈ ಬರಹಗಳನ್ನೇ ತೆಗೆದುಕೊಂಡು ಹೋಗಿ ನಾನು ನ್ಯಾಯಾಲಯದಲ್ಲಿ “ಜಾತಿನಿಂದನೆ ಮಾಡುತ್ತಿದ್ದಾರೆ ಮತ್ತು ಇದರಿಂದ ಕೋಮುಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ” ಎಂದು ರಿಟ್ ಅರ್ಜಿ ಹಾಕಿದರೆ, ನಿಮಗೆ ಸಜೆ ಬೀಳುವುದು ಖಚಿತ ಎನ್ನುವುದು ನೆನಪಿರಲಿ.
ಮತ್ತು ನೀವಾರೆಂದು ಹುಡುಕುವುದೂ ಕಠಿಣವಲ್ಲ. ನೀವು ಬರೆದಿರುವ “Communal Harmony And Lingayat Religion” ಸಂಶೋಧನಾ ಗ್ರಂಥ, ನೀವು ಬರೆದಿರುವ ““Lingayathism” a scientific and native religion of India” ಲೇಖನ, ಇತ್ಯಾದಿಗಳೇ ನಿಮ್ಮ ಕುರಿತಾದ ವಿವರ ತಿಳಿಸುತ್ತವೆ.
ನ್ಯಾಯಾಲಯದ ಎದುರು, “ಬ್ರಾಹ್ಮಣ್ಯವೇ ಬೇರೆ ಬ್ರಾಹ್ಮಣ ಜಾತಿಯೇ ಬೇರೆ” ಎನ್ನುವ ನಿಮ್ಮ ವಾದ ನಿಲ್ಲುವುದಿಲ್ಲ.
ನಿಮ್ಮ ಬೆದರಿಕೆಗೆ ಬಗ್ಗುವವನು ನಾನಲ್ಲ.ಏಕೆಂದರೆ ಬ್ರಾಹ್ಮಣ್ಯ = ಬ್ರಾಹ್ಮಣ ಜಾತಿ ಎಂಬ ಸಮೀಕರಣ ನನ್ನದಲ್ಲ ನಿಮ್ಮದು. ನಿಮ್ಮ ತರ್ಕ ಬಳಸಿದರೆ ಬ್ರಹ್ಮ = ಬ್ರಾಹ್ಮಣ ಎಂದೂ ಸಾಧಿಸಬಹುದು! ನಾನು ಬ್ರಾಹ್ಮಣ ನಿಂದನೆ ಮಾಡಿಲ್ಲ, ಬ್ರಾಹ್ಮಣ್ಯದ ವಿರುದ್ಧ ಸೈದ್ಧಾಂತಿಕ ಟೀಕೆಯನ್ನು ಮಾನವತಾವಾದದ ನೆಲೆಯಲ್ಲಿ ಮಾಡಿದ್ದೇನೆ. ನಿಮಗೆ ಬ್ರಾಹ್ಮಣ್ಯದ ಟೀಕೆ ಬ್ರಾಹ್ಮಣರ ಟೀಕೆ ಅಂತ ಅನ್ನಿಸಿದ್ದರೆ ಅದಕ್ಕೆ ಕಾರಣ ನಿಮ್ಮೊಳಗೆ ಇದೆ.
ನಿಮ್ಮ ಅಭಿಮಾನ ವಿಶ್ವಾಸ ಗಳಿಸಿಕೊಳ್ಳಬೇಕಾದರೆ ಎಲ್ಲಕ್ಕಿಂತ ಮೊದಲು ಬ್ರಾಹ್ಮಣ ಜಾತಿಯನ್ನು ಬಿಡಬೇಕು. ಅಥವಾ ಬಿಟ್ಟವರಂತೆ ವರ್ತಿಸಬೇಕು. ಸರಿ ಸಾಬರೆ ನಾವು ಬ್ರಾಹ್ಮಣ ಜಾತಿ ಬಿಡುತ್ತೇವೆ. ನೀವು ನಿಮ್ಮ ಜಾತಿ ಬಿಡುವಿರಾ?? ಅಥವಾ ಬಿಟ್ಟಿದ್ದೇವೆಂದು ಕನಿಷ್ಟ ಪಕ್ಷ ತೋರಿಸಿಕೊಳ್ಳುತ್ತೀರಾ??
” ನೀವು ನಿಮ್ಮ ಜಾತಿ ಬಿಡುವಿರಾ?? ” ನಾವು ಶರಣರು, ನಮಗೆ ಜಾತಿ ಇಲ್ಲ. ಬಸವಣ್ಣನವರ ನೇತೃತ್ವದಲ್ಲಿ ಶತಮಾನಗಳ ಹಿಂದೆಯೇ ಜಾತಿಯನ್ನು ಧಿಕ್ಕರಿಸಿದ್ದೇವೆ.
ಶ್ವಾನ ಸಿಂಹಾಸನದ ಮೇಲೆ ಕುಳಿತರೂ ಕಡಿಯುವುದು ಮೂಳೆಯನ್ನೇ..ಸುಖ ಎಂದಕೂಡಲೇ ನೆನೆಸಿಕೊಳ್ಳುವುದು ತಿಪ್ಪೆಯನ್ನೇ! 🙂
“ಶ್ವಾನ ಸಿಂಹಾಸನದ ಮೇಲೆ ಕುಳಿತರೂ ಕಡಿಯುವುದು ಮೂಳೆಯನ್ನೇ..” exactly! This is what every voter needs to keep in mind about NaMo.
+1
“ಬ್ರಾಹ್ಮಣರನ್ನು ಕೇಳುವವರಾರು??” oh! Who’s targeting them? Are they facing even 1/10 of hardship violence and discrimination that dalits are facing even today??
+1
ನನಗೊಂದು ಕುತೂಹಲ!
ನೀವು ಆಗಾಗ ನಿಮ್ಮದೇ ಪ್ರತಿಕ್ರಿಯೆಗಳಿಗೆ “+1” ಒತ್ತಿಕೊಳ್ಳುವುದು ಏಕೆ!?
ಅಥವಾ, ನೀವು wordpress a/c ಇಂದ logout ಮಾಡಿ, ನಿಮ್ಮ ಇನ್ನೊಂದು ಹೆಸರಿನಿಂದ (2nd a/c) login ಮಾಡುವುದಕ್ಕೆ ಮರೆತು, “Nagshetty Shetkar” ಹೆಸರಿನಿಂದಲೇ “+1” ಒತ್ತಿಬಿಟ್ಟಿರುವಂತೆ ಕಾಣುತ್ತಿದೆ! 😉
2191 ಅಮಾಯಕ ಮುಸ್ಲಿಮರು ಹತ್ಯೆಯಾದ ನೆಲ್ಲಿ ಹತ್ಯಾಕಾಂಡದ ಆರೋಪಿಗಳಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗದಂತೆ ಸರಕಾರವೇ ಎಲ್ಲಾ ಕೇಸ್ ಗಳನ್ನೂ ವಾಪಸ್ ತೆಗೆದುಕೊಂಡಿತು. ಇದರ ಬಗ್ಗೆ ಯಾಕೆ ಯಾರೊಬ್ಬರೂ ಹೋರಾಟ ಮಾಡುವದಿಲ್ಲ ಎಂಬುದು ಯಕ್ಷಪ್ರಶ್ನೆ
“ಹಿಟ್ಲರನ ಮೊಟ್ಟೆಗಳು” ಇತ್ಯಾದಿ ಬರಹಗಳನ್ನು ಬರೆಯುವ ಲಡಾಯಿ ಬ್ಲಾಗು, ಅದನ್ನು ಟೀಕಿಸುವಂತಹ ಪ್ರತಿಕ್ರಿಯೆಗಳನ್ನು ಪ್ರಕಟಿಸುವುದೇ ಇಲ್ಲ. ವಿರೋಧವನ್ನು ಮೆಟ್ಟಿಹಾಕುವ ಇಂತಹ ಮನೋಭಾವ ಹೊಂದಿರುವವರೇ ಹಿಟ್ಲರ್, ಸ್ಟಾಲಿನ್, ಲೆನಿನ್, ಮಾವೋಗಳ ಮೊಟ್ಟೆಗಳನ್ನಿಡುವವರು.
ಇಂತಹ ಹಿಟ್ಲರ್, ಲೆನಿನ್, ಸ್ಟಾಲಿನ್, ಮಾವೋಗಳ ಹಿಂಬಾಲಕರು ಇಲ್ಲಿ ಬಂದು “ನಿಲುಮೆ”ಯಲ್ಲಿ ಎಗರಾಡುತ್ತಾರೆ, ಬಾಯಿಗೆ ಬಂದಂತೆ ಹರಡುತ್ತಾರೆ.
ಲಡಾಯಿ ಬ್ಲಾಗಿನ ಕೊಂಡಿಯನ್ನು ಇಲ್ಲಿ ಹಾಕುವವರು, ಮೊದಲು ತಾವು ಮೆಚ್ಚುವ ಆ ಬ್ಲಾಗಿನಲ್ಲಿ, ಎಲ್ಲ ರೀತಿಯ ಪ್ರತಿಕ್ರಿಯೆಗಳು ಬರುವಂತೆ ಹೋರಾಟ ನಡೆಸಲಿ; “ಹಿಟ್ಲರನ ಮೊಟ್ಟೆಗಳು” ಬರೆದವರ ಹಿಟ್ಲರ್ ಮನೋಭಾವವನ್ನು ಸರಿಪಡಿಸಲಿ; ಅವರ ಮನೋಭಾವ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬುದನ್ನು ಮನಗಾಣಿಸಲಿ.
ನಮೊಸುರನ ಆಡಳಿತಾವಧಿಯಲ್ಲಿ ಗುಜರಾತಿನ ಅಭಿವೃದ್ಧಿ ಆಗಿದೆ ಎಂಬುದು ನಮೋಸೇನೆ ಕಟ್ಟಿರುವ ಯಕ್ಷಕತೆ. ನೊಬೆಲ್ ವಿಜೇತ ಎಕಾನಮಿಸ್ಟ್ ಸರ್ ಅಮರ್ತ್ಯ ಸೇನ್ ಅವರೇ ಗುಜಾರಾತ್ ಅಭಿವೃದ್ಧಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಅಷ್ಟು ಸುಲಭಕ್ಕೆ ಕಥೆ ಕಟ್ಟಿ ಎಲ್ಲರನ್ನೂ ನಂಬಿಸುವುದು ಸಾಧ್ಯವಾಗಿದ್ದರೆ, ಎಲ್ಲಾ ರಾಜಕಾರಣಿಗಳೂ ಅದನ್ನೇ ಮಾಡುತ್ತಿದ್ದರು.
ಜನರನ್ನು ಅಷ್ಟೊಂದು ಮುಠ್ಠಾಳರೆಂದು ತಿಳಿಯಬೇಡಿ.
ತಮ್ಮ ಊರನ್ನೆಂದೂ ಬಿಟ್ಟು ಹೊರಹೋಗದ, ಕೇವಲ ಪತ್ರಿಕೆಯಲ್ಲಿ ಬರುವ ಪೂರ್ವಾಗ್ರಹಪೀಡಿತ ಸುದ್ಧಿಗಳನ್ನಷ್ಟೇ ಓದಿಕೊಂಡಿರುವ ಮತ್ತು ಕೇವಲ ಅಂಕಿ-ಅಂಶಗಳ ಮೇಲೇ ತಮ್ಮ ಗಾಳಿಗೋಪುರಗಳನ್ನು ಕಟ್ಟುವ ಅಮಾರ್ತ್ಯಸೇನ್ ಅವರ ಮಾತುಗಳಿಗೆ ನೀವು ಅಷ್ಟೊಂದು ಬೆಲೆ ಕೊಡುತ್ತೀರೆಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಅಮಾರ್ತ್ಯಸೇನ್ ಅವರ ಪ್ರಕಾರ ಉತ್ತರಪ್ರದೇಶ, ಬಿಹಾರ, ಪಶ್ಚಿಮಬಂಗಾಳ ರಾಜ್ಯಗಳು ಬಹಳ ಉತ್ತಮವಾಗಿವೆ ಎಂದೇ!?
ಗುಜರಾತಿನಲ್ಲಿ ಅಷ್ಟೊಂದು ಸಮಸ್ಯೆ ಇದ್ದಿದ್ದರೆ, ನರೇಂದ್ರ ಮೋದಿ ಅಂತಹ ಕಳಪೆ ಆಡಳಿತ ನೀಡಿದ್ದಿದ್ದರೆ, ದೆಹಲಿಯಲ್ಲಾದಂತೆ ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಧೂಳೀಪಟವಾಗಬೇಕಿತ್ತಲ್ಲವೇ!?
ಆದರೆ, ಗುಜರಾತಿನಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ!!
ನಿಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದ್ದಿದ್ದರೆ, ಅಮಾರ್ತ್ಯಸೇನ್ ಅವರ ಹೇಳಿಕೆಗಿಂತ ಗುಜರಾತಿನ ಜನರ ಭಾವನೆಗೆ/ಮತಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಿರಿ.
ನಾನೂ ಸಹ ಎಲ್ಲರಂತೆ ಮೊದಲು ಕೇಜ್ರಿವಾಲರನ್ನು ಬೆಂಬಲಿಸುತ್ತಿದ್ದೆ. ಆದರೆ ಯಾವಾಗ ಅವರು ಅತೀ ಬ್ರಷ್ಟರಾದ ಕಾಂಗ್ರೆಸ್ ಜೊತೆ ಸರ್ಕಾರ ರಚಿಸಿದರೋ ಆಗ ಗೊತ್ತಾಯಿತು. ಈ ಎಪ್ಪನಿಗೆ ಸಿದ್ದಾಂತಗಳಿಗಿಂತ ಅಧಿಕಾರವೇ ಮುಖ್ಯ ಅಂತ. ಅಧಿಕಾರಕ್ಕಾಗಿ ಈ ಎಪ್ಪ ಎಲ್ಲವನ್ನೂ ಮಾಡಲು ಉಳಿದ ರಾಜಕಾರಣಿಗಳಂತೆ ತಯಾರು ಎಂದು. ಎಲ್ಲರೂ ಅಧಿಕಾರಕ್ಕಾಗಿ ಒಂದೇ ರೀತಿ ಆಗುತ್ತಾರಾದ್ದರಿಂದ ನಾನು ಈಗ ಮೊದಲು ದೇಶಕ್ಕಾಗಿ ದೇಶದ ಹಿತಕ್ಕಾಗಿ ಮೊದಿಯನ್ನು ಬೆಂಬಲಿಸುತ್ತೇನೆ.
LoL
ಕೇಜ್ರಿವಾಲ್ ಮತ್ತು ಸಂಗಡಿಗರಿಗೆ ಅನುಭವವಿಲ್ಲ ಎನ್ನುವುದು ಒಂದು ಅಂಶವಾದರೆ, ಮತ್ತೊಂದು ಮುಖ್ಯ ಅಂಶ ಅವರ ಹಿಂದೆ ಯಾವುದಾದರೂ ವಿದೇಶಿ ಶಕ್ತಿ ಕೆಲಸ ಮಾಡುತ್ತಿರಬಹುದೇ ಎನ್ನುವ ಗುಮಾನಿ!
ಆಪ್ ಪಕ್ಷಕ್ಕೆ ಮತ್ತು ಕೇಜ್ರಿವಾಲ್ ಅವರು ಹಿಂದೆ ನಡೆಸುತ್ತಿದ ಸಂಘಟನೆಗಳಿಗೆ ಅಮೆರಿಕದ ಫೋರ್ಡ್ ಫಂಡೇಶನ್ ಇಂದ ಕೋಟ್ಯಂತರ ರೂಪಾಯಿ ಹರಿದು ಬಂದಿದೆ. ಈ ಕುರಿತಾಗಿ ಪ್ರಶ್ನಿಸಿದಾಗ, ಕೇಜ್ರಿವಾಲ್ ಉತ್ತರಿಸುತ್ತಿಲ್ಲ. ಫೋರ್ಡ್ ಫೌಂಡೇಶನ್ ಸಂಸ್ಥೆಯು ಜಗತ್ತಿನ ವಿವಿಧ ದೇಶಗಳಲ್ಲಿ ಹಣವನ್ನು ಹರಿಸಿದೆ. ಈ ರೀತಿ ಅದು ಹಣ ಹರಿಸಿರುವ ದೇಶಗಳಲ್ಲೆಲ್ಲಾ ಅರಾಜಕತೆ ಹರಡಿದೆ. ಅಮೆರಿಕದ CIA ಸಂಸ್ಥೆಯು ಫೋರ್ಡ್ ಫೌಂಡೇಶನ್ ಮೂಲಕ ಹಣವನ್ನು ಕಳುಹಿಸಿ ಅರಾಜಕತೆ ಹರಡುವುದು ಹಲವು ದಶಕಗಳಿಂದ ನಡೆದುಕೊಂಡು ಬಂದಿರುವ ವಿಚಾರ. ನೆನ್ನೆ ತಾನೇ ಕೇಜ್ರಿವಾಲ್ ಅವರು ಸತ್ಯಾಗ್ರಹಕ್ಕೆ ಕುಳಿತಾಗ, “ನಾನೊಬ್ಬ ಅರಾಜಕ; ಅರಾಜಕತೆ ಉಂಟು ಮಾಡುವುದೇ ನನ್ನ ಉದ್ದೇಶ” ಎಂದೆಲ್ಲಾ ಬಡಬಡಿಸಿದ್ದಾರೆ. ಅವರಿದನ್ನು ಗಂಭೀರವಾಗಿ ಹೇಳಿಲ್ಲದಿರಬಹುದು. ಒಬ್ಬ ಮುಖ್ಯಮಂತ್ರಿಯ ಬಾಯಿಂದ ಈ ರೀತಿಯ ಹೇಳಿಕೆಗಳು ಬರಬಾರದು ಅಲ್ಲವೇ!
ಆದರೆ, ಫೋರ್ಡ್ ಫೌಂಡೇಶನ್ ಕಳುಹಿಸಿರುವ ಹಣಕ್ಕೂ, ಕೇಜ್ರಿವಾಲ್ ಹೇಳುತ್ತಿರುವ “ಅರಾಜಕತೆ”ಗೂ ಸಂಬಂಧವಿದ್ದರೆ ಅದು ಬಹಳ ದೊಡ್ಡ ಅಪಾಯವಲ್ಲವೇ?
ಈ ಕುರಿತಾಗಿ RAWನ ನಿವೃತ್ತ ಅಧಿಕಾರಿಯೊಬ್ಬರು ಬರೆದಿರುವ ಲೇಖನವನ್ನು ಈ ಕೊಂಡಿಯಲ್ಲಿ ಓದಿ:
http://ssnarendrakumar.blogspot.com/2014/01/is-aap-planted-to-destabilize-democracy.html
http://ssnarendrakumar.blogspot.com/2014/01/disturbing-patterns-of-links-of-ford.html
ಜೀವನ ಒಂದು ನಾಟಕ ಎಂದು ಹೇಳುತ್ತಾರೆಯೇ ಹೊರತೂ ಜೀವನವಿಡೀ ನಾಟಕವಾಡಿಕೊಂಡೇ ಇರಬೇಕು ಎಂದು ಇದರ ಅರ್ಥವಲ್ಲ. ಈ ಎರಡು ದಿನಗಳಲ್ಲಿ ಕೇಜ್ರೀವಾಲರು ಮತ್ತವವರ ಸಂಗಡಿಗರು ಕ್ರೇಜಿ ಬಾಯ್ಸ್ ಆಫ್ ಡೆಲ್ಲಿ ಆಗಿಹೋದರು. ನಿನ್ನೆ ಟಿವಿ ಸುದ್ದಿವಾಹಿನಿಯೊಂದರಲ್ಲಿ ಕಾಂಗ್ರೆಸ್ಸ್ ವಕ್ತಾರರೊಬ್ಬರು ಹೇಳಿದ್ದನ್ನು ಕೇಳಿದ ಮೇಲೆ ಜನವರಿ ೨೬ರ ನಂತರ ಬಹುಶಃ ಕಾಂಗ್ರೆಸ್ಸ್ ತನ್ನ ಬಾಹ್ಯ ಬೆಂಬಲವನ್ನು ಯಾವಾಗ ಬೇಕಾದಾರೂ ವಾಪಸ್ಸು ಪಡೆಯಬಹುದು ಎಂದು ಅನಿಸಿತು. ಇಷ್ಟಕ್ಕೂ ಕಾಂಗೈ ಕೊಟ್ಟಿರುವುದು “ಷರತ್ತು ಬದ್ಧ ಬೆಂಬಲ”.
[[ನಿಮ್ಮ ತರ್ಕ ಬಳಸಿದರೆ ಬ್ರಹ್ಮ = ಬ್ರಾಹ್ಮಣ ಎಂದೂ ಸಾಧಿಸಬಹುದು]]
ಬ್ರಹ್ಮ ಪದದಿಂದಲೇ ಬ್ರಾಹ್ಮಣ ಪದ ಉತ್ಪನ್ನವಾಗಿದೆ. ಬ್ರಹ್ಮಕ್ಕೂ ಬ್ರಾಹ್ಮಣನಿಗೂ ಸಂಬಂಧವಿದೆ.
ಬ್ರಹ್ಮನ್ (ಅರ್ಥಾತ್ ಬೃಹತ್ತಾದದ್ದು, ಸನಾತನವಾದದ್ದು, ಶಾಶ್ವತವಾದದ್ದು, ಇತ್ಯಾದಿ) ಕುರಿತಾಗಿ ಯೋಚಿಸುವವನೇ ಬ್ರಾಹ್ಮಣ.
ಯಾವ ರೀತಿ ‘ಬಾಲಿಶ’ ಎನ್ನುವುದು ಬಾಲಕನಿಗೆ ಅಥವಾ ಬಾಲಕಿಗೆ ಅನ್ವಯಿಸುತ್ತದೆಯೋ, ಅದೇ ರೀತಿ ಬ್ರಾಹ್ಮಣ್ಯ ಎನ್ನುವುದು ಬ್ರಾಹ್ಮಣನಿಗೆ ಅನ್ವಯಿಸುತ್ತದೆ.
ನಿಮಗಿಷ್ಟ ಬಂದಂತೆ ಪದಗಳ ಅರ್ಥವನ್ನು ವ್ಯತ್ಯಾಸ ಮಾಡಲು ಬರುವುದಿಲ್ಲ.
ಮತ್ತೊಂದು ವಿಷಯ ನೆನಪಿಡಿ. ಇಂದು ನಾವು ಹೇಳುವ ಬ್ರಾಹ್ಮಣ ಜಾತಿಗೂ ವೈದಿಕ ಗ್ರಂಥಗಳಲ್ಲಿ ಬರುವ ಬ್ರಾಹ್ಮಣ ವರ್ಣಕ್ಕೂ ಸಂಬಂಧವಿಲ್ಲ.
ನಿಮಗೆ ಒಂದು ಜಾತಿಯ/ಪಂಥದ/ರೀತಿಯ ಜನರ ಕುರಿತು ಅಸಹನೆ ಬೆಳೆದಿದೆ. ಅವರನ್ನು ಹೀಗಳೆಯುವುದಕ್ಕಾಗಿ, ಬ್ರಾಹ್ಮಣ್ಯ ಎನ್ನುವ ಪದವನ್ನು ಉಪಯೋಗಿಸುತ್ತಿದ್ದೀರಿ.
ಆದರೆ, ಬ್ರಾಹ್ಮಣ್ಯ ಎನ್ನುವ ಪದಕ್ಕೆ ಅತ್ಯುತ್ತಮ ಅರ್ಥವಿದೆ. ಜೀವನದಲ್ಲಿ ಉತ್ತಮನಾಗುವುದು, ಆದರ್ಶ ರೀತಿಯಲ್ಲಿ ಬದುಕುವುದು ಎನ್ನುವುದು ಅದರ ಅರ್ಥ.
ಅನೇಕ ಶ್ಲೋಕ/ಮಂತ್ರಗಳಲ್ಲೂ ಈ ಪದವನ್ನು ಬಳಸಲಾಗಿದೆ.
ಉದಾಹರಣೆಗೆ ಈ ಶ್ಲೋಕವನ್ನು ನೋಡಿ:
ರುದ್ರಸ್ಯ ಸೂನಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ
ಮಹಾಭಾರತದಲ್ಲಿ ವಿದುರನ ಕುರಿತಾಗಿ ತಿಳಿಸುವಾಗ, ಈ ರೀತಿ ಹೇಳುತ್ತಾರೆ:
“ಹುಟ್ಟಿನಲ್ಲಿ ದಾಸಿಪುತ್ರನಾದರೂ, ಜಾತಿಯಿಂದ ಶೂದ್ರನಾದರೂ, ಗುಣಸಂಪಾದಿತ ಬ್ರಾಹ್ಮಣ್ಯ ವಿದುರನಲ್ಲಿ ಪರಿಪೂರ್ಣನಾಗಿತ್ತು. ”
ಹೀಗೆ ನೀವು ತೆಗಳಲು ಉಪಯೋಗಿಸುತ್ತಿರುವ ‘ಬ್ರಾಹ್ಮಣ್ಯ’ ಪದಕ್ಕೆ ಅತ್ಯುತ್ತಮ ಅರ್ಥವನ್ನು ನಮ್ಮ ಪೂರ್ವಜರು ಕೊಟ್ಟಿದ್ದಾರೆ.
ನೀವು ನಿಮಗಿಷ್ಟ ಬಂದಂತೆ ಅದರ ಅರ್ಥವನ್ನು ವ್ಯತ್ಯಾಸಗೊಳಿಸಲು ಸಾಧ್ಯವಿಲ್ಲ.
ಬಸವಣ್ಣ ಮತ್ತು ಲಿಂಗಾಯತ ಮತಕ್ಕೆ ಸಂಬಂಧಿಸಿದಂತೆ ಸಂಶೋಧನಾ ವಿದ್ಯಾರ್ಥಿಯಾದ ನಿಮಗೆ ಇದೆಲ್ಲ ತಿಳಿಯದ್ದೇನಲ್ಲ.
ನಿಮ್ಮ ಮನಸ್ಸಿನಲ್ಲಿ ಒಂದು ಜಾತಿಯ ಕುರಿತಾಗಿ ಇರುವ ಧ್ವೇಷದ (ಅಸೂಯೆಯೂ ಇರಬಹುದು) ಕಾರಣಕ್ಕಾಗಿ, ಬ್ರಾಹ್ಮಣ್ಯ ಪದಕ್ಕೆ ಅಸಹ್ಯ ಹುಟ್ಟಿಸುವ ಪ್ರಯತ್ನವನ್ನು ನಡೆಸುತ್ತಿರುವಿರಿ ಮತ್ತು ಆ ಮೂಲಕ ಒಂದು ಜಾತಿಯ ಕುರಿತಾಗಿಯೇ ಅಸಹ್ಯ ಹುಟ್ಟಲೆಂದು ಉದ್ದೇಶ ಇರುವಂತಿದೆ.
ಆದರೆ, ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ. ಈ ದೇಶದ ಅಂತಃಸತ್ವ ಬಲವಾಗಿದೆ. 800 ವರ್ಷಗಳ ಕಾಲ ಈ ದೇಶದ ಮೂಲನಿವಾಸಿಗಳನ್ನು ಇಸ್ಲಾಮಿಗೆ ಮತಾಂತರಿಸುವ ಪ್ರಯತ್ನ ನಡೆಯಿತು; 200 ವರ್ಷಗಳ ಕಾಲ ಈಸಾಯಿಗಳು ಪ್ರಯತ್ನಿಸಿದರು. ಇವರೆಲ್ಲರೂ ವಿಫಲರಾಗಿರುವುದು ಇತಿಹಾಸ. ಇದಕ್ಕೆ ಕಾರಣ, ಈ ನೆಲದ ಅಂತಃಸತ್ವ.
ಈ ನೆಲದಲ್ಲಿ ಅತ್ಯುತ್ತಮ ವಿಚಾರಗಳು ಹುಟ್ಟಿವೆ, ಮಹಾಪುರುಷರು ಹುಟ್ಟಿದ್ದಾರೆ.
ಕೇವಲ ಕೆಟ್ಟದ್ದನ್ನೇ ಕುರಿತು ಮಾತನಾಡುವ, ಹರಡುವ ಬದಲು, ಈ ನೆಲಕ್ಕೆ ಸಂಬಂಧಿಸಿದಂತೆ ಒಳ್ಳೆಯ ವಿಚಾರವನ್ನು ಹರಡಲು ನಿಮ್ಮ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳಿ. ಅದರಿಂದ ನಿಮಗೂ ಒಳ್ಳೆಯದಾಗುತ್ತದೆ.
“ಸರ್ವೇ ಜನಾಃ ಸುಖಿನೋ ಭವಂತು” ಎಂದು ಜಗತ್ತಿಗೇ ಕಲಿಸಿದ ನಾಡಿದು.
“ನಮ್ಮ ದೇವರನ್ನು ಪೂಜಿಸುವವರಿಗೆ ಮಾತ್ರ ಅಥವಾ ನಮ್ಮ ವಿಚಾರವನ್ನು ಒಪ್ಪಿದವರಿಗೆ ಮಾತ್ರ ಒಳ್ಳೆಯದಾಗಲಿ; ಅಂತಹವರು ಮಾತ್ರ ಸ್ವರ್ಗಕ್ಕೆ ಹೋಗುತ್ತಾರೆ” ಎಂದು ನಾವೆಂದೂ ಹೇಳಲಿಲ್ಲ, ಹೇಳುವುದಿಲ್ಲ. ಅಂತಹ ವಿಚಾರವೇ ನಮಗೆ ಪರಕೀಯ. ನೀವು ಅಷ್ಟೊಂದು ಹೊಗಳುತ್ತಿರುವ ಇಸ್ಲಾಮಿಗೆ ಸೇರಿದ ವಿಚಾರವದು. “ಕೃಷ್ಣನೂ ಒಂದೇ ಅಲ್ಲಾಹುವೂ ಒಂದೇ” ಎಂದು ಒಬ್ಬ ಮುಸಲ್ಮಾನನ ಕೈಯ್ಯಲ್ಲೋ ಅಥವಾ ಅವರ ಮೌಲ್ವಿಯ ಕೈಯ್ಯಲ್ಲೋ ಹೇಳಿಸಿಬಿಡಿ ನೋಡೋಣ. ಆಗ ತಿಳಿಯುತ್ತದೆ ನಿಮಗೆ ಸತ್ಯ.
“ನಿಮ್ಮ ಮನಸ್ಸಿನಲ್ಲಿ ಒಂದು ಜಾತಿಯ ಕುರಿತಾಗಿ ಇರುವ ಧ್ವೇಷದ (ಅಸೂಯೆಯೂ ಇರಬಹುದು) ಕಾರಣಕ್ಕಾಗಿ, ಬ್ರಾಹ್ಮಣ್ಯ ಪದಕ್ಕೆ ಅಸಹ್ಯ ಹುಟ್ಟಿಸುವ ಪ್ರಯತ್ನವನ್ನು ನಡೆಸುತ್ತಿರುವಿರಿ ಮತ್ತು ಆ ಮೂಲಕ ಒಂದು ಜಾತಿಯ ಕುರಿತಾಗಿಯೇ ಅಸಹ್ಯ ಹುಟ್ಟಲೆಂದು ಉದ್ದೇಶ ಇರುವಂತಿದೆ.”
ಬ್ರಾಹ್ಮಣ್ಯದ ಬಗ್ಗೆ ಬ್ರಾಹ್ಮಣರಿಗೆ ಅಭಿಮಾನವಿರಬಹುದು ಆದರೆ ಈ ನಾಡಿನ ಅಬ್ರಾಹ್ಮನರಿಗೆ ಬ್ರಾಹ್ಮಣ್ಯವು ಶೋಷಣೆಯ ಹಾಗೂ ಕತ್ತಲೆಯ ಮತ್ತೊಂದು ಹೆಸರು. ಕೊರಗ ಸಮುದಾಯದ ಜನರು ಬ್ರಾಹ್ಮಣ್ಯದ ಬಗ್ಗೆ ಯಾವ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಅಂತ ಇಲ್ಲಿ ಓದಿ: “ಕೊಂದರು, ಮಾಯವೆಂದರು, ಭೂತವಾಗಿಸಿದರು” http://ladaiprakashanabasu.blogspot.in/2014/01/blog-post_517.html
[[ಆದರೆ ಈ ನಾಡಿನ ಅಬ್ರಾಹ್ಮನರಿಗೆ ಬ್ರಾಹ್ಮಣ್ಯವು ಶೋಷಣೆಯ ಹಾಗೂ ಕತ್ತಲೆಯ ಮತ್ತೊಂದು ಹೆಸರು.]]
ನಿಮ್ಮ ಧ್ವೇಷ ಒಂದು ಜಾತಿಯ ಕುರಿತಾಗಿಯೇ ಮತ್ತು ಆ ಜಾತಿಯನ್ನೇ ‘ಬ್ರಾಹ್ಮಣ್ಯ’ ಎನ್ನುವ ಪದದ ಮೂಲಕ ಗುರುತಿಸುತ್ತಿರುವಿರಿ ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೇ?
‘ಅಬ್ರಾಹ್ಮಣ’ ಎನ್ನುವ ಪದವೇ ನಿಮ್ಮ ಮನಸ್ಸಿನಲ್ಲಿ “ಬ್ರಾಹ್ಮಣ ಧ್ವೇಷ ಕುದಿಯುತ್ತಿದೆ” ಎನ್ನುವುದನ್ನು ಸೂಚಿಸುತ್ತದೆ.
ಆದರೆ, ಅದನ್ನು ನೇರವಾಗಿ ಹೇಳುವ ಧೈರ್ಯವಿಲ್ಲ. ಅದಕ್ಕಾಗಿ ‘ಬ್ರಾಹ್ಮಣ್ಯ’ ಎನ್ನುವ ಪದದ ಪರದೆಯ ಹಿಂದೆ ಅಡಗಿ ಬಾಣ ಬಿಡುತ್ತಿರುವಿರಿ! 😉
[[ಕೊರಗ ಸಮುದಾಯದ ಜನರು ಬ್ರಾಹ್ಮಣ್ಯದ ಬಗ್ಗೆ ಯಾವ ಅಭಿಪ್ರಾಯ ಇಟ್ಟುಕೊಂಡಿದ್ದಾರೆ]]
ಒಂದು ಜಾತಿಗೆ ಮತ್ತೊಂದು ಜಾತಿಯ ಕುರಿತಾಗಿ ಧ್ವೇಷವೋ ಮತ್ತೊಂದೋ ಭಾವನೆಯಿರಬಹುದು ಮತ್ತು ಅದಕ್ಕೆ ನೂರೆಂಟು ಕಾರಣಗಳಿರಬಹುದು. ನಿಮಗೆ ಕೊರಗ ಸಮಾಜದ ಕೊರಗು ಮನಸ್ಸು ಕರಗಿಸುತ್ತದೆ.
ಅದೇ, ಹಿಂದೂ ಸಮಾಜವನ್ನು 1000 ವರ್ಷಗಳ ಕಾಲ ತುಳಿದು, ಮತಾಂತರಿಸಿ, ಕಡೆಗೆ ದೇಶವನ್ನೇ ಕತ್ತರಿಸಿದ ಕಥೆ ಹೇಳಿದರೆ, ಅದು ಕೋಮುವಾದ ಎನ್ನಿಸುತ್ತದೆ! ಟಿಪ್ಪುವು ಹತ್ತಾರು ಸಹಸ್ರ ಹಿಂದುಗಳನ್ನು ಮತಾಂತರಿಸಿದ, ಕೊಚ್ಚಿ ಹಾಕಿದ, ಮಾನಿನಿಯರ ಮಾನ ಹರಣ ಮಾಡಿದ. ಇದಾವುದೂ ನಿಮಗೆ ಕರುಣೆ ತರಿಸದು!
ಕಾಶ್ಮೀರದಲ್ಲಿ ಲಕ್ಷಾಂತರ ಹಿಂದೂ ಪಂಡಿತರನ್ನು ಮುಸಲ್ಮಾನರು ಓಡಿಸಿದರು, ಅವರ ಹೆಣ್ಣು ಮಕ್ಕಳನ್ನು ಅಪಹರಿಸಿ ಮಾನಹರಣ ಮಾಡಿದರು, ಇಂದಿಗೂ ಹಿಂದುಗಳು ಅಲ್ಲಿ ಕಷ್ಟದ ಬದುಕು ಬದುಕುತ್ತಾರೆ ಎನ್ನುವುದು ನಿಮಗೆ ಕಣ್ಣೀರು ತರಿಸುವುದಿಲ್ಲ
ಎಲ್ಲಾ ಜಾತಿಗಳನ್ನು ಸೇರಿಸಿ ಹೇಳುವ “ಹಿಂದೂ” ಎನ್ನುವ ಪದ ಹೇಳುವವರು ನಿಮಗೆ ‘ಕೋಮುವಾದಿಗಳು’, ‘ಜಾತಿವಾದಿಗಳು’. ಆದರೆ, ಕೊರಗ, ಲಿಂಗಾಯತ, ಇತ್ಯಾದಿ ಒಂದೊಂದೇ ಜಾತಿಗಳ ಕುರಿತಾಗಿ ಮಾತನಾಡಿದರೆ ಅದು “ಜಾತ್ಯಾತೀತವಾದ”!!
ನಿಮ್ಮ “ಜಾತಿವಾದದ ಪುಂಗಿ” ತೂತಾಗಿದೆ.
ಛಲೂತ್ನೆಗೆ ಝಾಡಿಸಿ ಬಿಟ್ಟಿರಿ ಬಿಡ್ರಿ ಈ ಎಪ್ಪನ್ನ.
“ಟಿಪ್ಪುವು ಹತ್ತಾರು ಸಹಸ್ರ ಹಿಂದುಗಳನ್ನು ಮತಾಂತರಿಸಿದ, ಕೊಚ್ಚಿ ಹಾಕಿದ, ಮಾನಿನಿಯರ ಮಾನ ಹರಣ ಮಾಡಿದ. ” ಹೌದಾ?!! ನಿಮ್ಮ ಬಳಿ ಸಾಕ್ಷಿ ಆಧಾರಗಳಿವೆಯಾ? ಅಥವಾ ಭೈರಪ್ಪನವರ ಕಾದಂಬರಿಗಳೇ ಆಧಾರವಾ?
[[ಹೌದಾ?!! ನಿಮ್ಮ ಬಳಿ ಸಾಕ್ಷಿ ಆಧಾರಗಳಿವೆಯಾ? ಅಥವಾ ಭೈರಪ್ಪನವರ ಕಾದಂಬರಿಗಳೇ ಆಧಾರವಾ]]
ನೀವು ವಾದ ಮಾಡುತ್ತಿರುವ ಪರಿ ನೋಡಿದರೆ, ಇನ್ನು ಸ್ವಲ್ಪ ಹೊತ್ತಿಗೆ “ಹೌದಾ?!! ಬಸವಣ್ಣನವರು ಇದ್ದರಾ? ನಿಮ್ಮ ಬಳಿ ಅವರ ಜನನ ಪ್ರಮಾಣಪತ್ರ ಇದ್ಯಾ!? ಆ ಪ್ರಮಾಣ ಪತ್ರ ನಕಲಿ ಅಲ್ಲ ಅಂತ ಸಂಬಂಧಿತ ಇಲಾಖೆಯಿಂದ ಪರೀಕ್ಷೆ ಮಾಡಿಸಿದ್ದೀರಾ?? ಅವರೇ ವಚನಗಳನ್ನು ಬರೆದರು ಎಂಬುದಕ್ಕೆ ಪುರಾವೆ ಇದ್ಯಾ? ಅವರ ಕೈಬರಹ ಟೆಸ್ಟ್ ಮಾಡ್ಸಿದೀರಾ? ಅವರು ಬೇರೆಯವರ ವಚನ ಕದೀಲಿಲ್ಲ ಅಂತ ಹೇಗೆ ಹೇಳ್ತೀರಾ!? ಅದರ ಬಗ್ಗೆ ಎಡ್ಯೂರಪ್ಪ ಏನ್ ಹೇಳ್ತಾರೆ????…..” ಅಂತೆಲ್ಲಾ ಕೇಳೋದಿಕ್ಕೆ ಪ್ರಾರಂಭ ಮಾಡಿಬಿಡ್ತೀರಾ ಅನ್ಸುತ್ತೆ!!
ನಿಮ್ಮ ಬಗ್ಗೆ ಬೀದರ್^ನಲ್ಲೂ ಇದೇ ಹೇಳಿದ್ರು. ಇವ್ರು ಹೀಗೇ ಅಂತ.
ನೋಡೋಣ ನಿಮ್ಮ ವಿಶ್ವವಿದ್ಯಾಲಯದವರು ಏನು ಹೇಳ್ತಾರೆ ಅಂತ. ಇನ್ನೊಂದೆರಡು ವಾರದಲ್ಲಿ ಅದೂ ತಿಳ್ಯುತ್ತೆ ಬಿಡಿ! 🙂
“ನಿಮ್ಮ ಬಗ್ಗೆ ಬೀದರ್^ನಲ್ಲೂ ಇದೇ ಹೇಳಿದ್ರು. ಇವ್ರು ಹೀಗೇ ಅಂತ.” ನಿಮಗೆ ಧೀಮಂತಿಕೆ ಇದ್ದಾರೆ ಯಾರು ಏನು ಹೇಳಿದರು ಅಂತ ಸವಿವರವಾಗಿ ಹೇಳಿ. ಅದು ಬಿಟ್ಟು ಈ ತರಹ ಗಾಸಿಪ್ಪು ತರಹದ ಮಾತುಗಳನ್ನಾಡುವುದು ತೀರ ಕೆಲ ದರ್ಜೆಯ ವ್ಯವಹಾರ. ಹೇಸಿಗೆ ಹುಟ್ಟಿಸುತ್ತದೆ.
“ಕಾಶ್ಮೀರದಲ್ಲಿ ಲಕ್ಷಾಂತರ ಹಿಂದೂ ಪಂಡಿತರನ್ನು ಮುಸಲ್ಮಾನರು ಓಡಿಸಿದರು, ಅವರ ಹೆಣ್ಣು ಮಕ್ಕಳನ್ನು ಅಪಹರಿಸಿ ಮಾನಹರಣ ಮಾಡಿದರು,” ಹೌದಾ? ಹಾಗಿದ್ದರೆ ಪಂಡಿತರೂ ಅವರ ಹೆಣ್ಣುಮಕ್ಕಳು ಪೋಲೀಸ್ ಕಂಪ್ಲೇಂಟ್ ಏಕೆ ಇನ್ನೂ ಕೊಟ್ಟಿಲ್ಲ? ನೀವು ಏನ್ ಎಚ್ ಆರ್ ಸಿ ಯ ಗಮನಕ್ಕೆ ಮಾನಹರಣಗಳನ್ನು ತಂದಿದ್ದೀರಾ?
ಮಾನವತೆ ಭೋದಿಸುವ ಮರ್ಯಾದೆ ಮಾನ ಇಲ್ಲದ ಮಾನಗೇಡಿ ಸಾಹೇಬರೆ ಅಥವಾ ಸಾಬರೆ, ನಿಮ್ಮ ಮಾನವೀಯತೆ ಯಾವ ಮಟ್ಟದ್ದು ಎಂದು ಈ ವಾಕ್ಯವೇ ತೋರಿಸುತ್ತದೆ. ಶರಣ, ಬಸವಣ್ಣ ಏನೇ ಹೇಳಿಕೊಂಡರೂ ನಿಮ್ಮ ನಿಜಬಣ್ಣ ಗೊತ್ತಾಗದ್ದೇನಲ್ಲ. ಮೋದಿ ಮುಸ್ಲಿಂರನ್ನು ನಾಯಿಗೆ ಹೋಲಿಸಿದರು ಎಂದು ಕಲ್ಪಿಸಿಕೊಂಡು ಇನ್ನಿಲ್ಲದ ಸೂಕ್ಷ್ಮತೆ ಮೆರೆದು, ಅದನ್ನೇ ಬಂಡವಾಳ ಮಾಡಿಕೊಳ್ಳುವ ದರಿದ್ರ ಭೌದಿಕತೆ ಇರುವ ನಿಮಗೆ ಈ ವಿಷಯ ಕಣ್ಣಿಗೆ ಕಾಣಲಾರದಂತೆ ಕಣ್ಣಿಗೇನು ಮಣ್ಣು ಬಿದ್ದಿದೆಯೆ?. ಆಯಿತು ನಿಮ್ಮಂ ಪ್ರಕಾರವೇ ಹೋಗೋಣ. ಗುಜರಾತ ದಂಗೆಗಲ್ಲಿ ಸತ್ತವರ, ಹಾನಿಗೊಳಗಾದವರ ಸಂಬಂಧಿಗಳು ಕಂಪ್ಲೆಂಟ್ ಕೊಡುತ್ತಾರೆ. ಕೋರ್ಟ ವಿಚಾರಣೆ ಮಾಡುತ್ತದೆ, ತೀರ್ಪು ಕೊಡುತ್ತದೆ.ಅದಕ್ಕೆ ಸಂಬಂಧವಿಲ್ಲದ ನೀವಿಲ್ಲಿ ಸುಮ್ಮನಿರದೇ ನಿಮ್ಮ ಅಂಡು ಸುಟ್ಟಿದೆ ಎಂಬಂತೆ ವರ್ತಿಸುತ್ತಿದ್ದೀರಲ್ಲ. ಏಕೆ ಎಂದು ಕೇಳಬಹುದೆ??
“‘ಅಬ್ರಾಹ್ಮಣ’ ಎನ್ನುವ ಪದವೇ ನಿಮ್ಮ ಮನಸ್ಸಿನಲ್ಲಿ “ಬ್ರಾಹ್ಮಣ ಧ್ವೇಷ ಕುದಿಯುತ್ತಿದೆ” ಎನ್ನುವುದನ್ನು ಸೂಚಿಸುತ್ತದೆ.” ಹೌದಾ? ಅವೈದಿಕ ಎನ್ನುವ ಪದ ವೈದಿಕ ದ್ವೇಷವನ್ನು ಸೂಚಿಸುತ್ತಾದಾ? ಅಂತ್ಯಜ ಅನ್ನುವ ಪದ ಏನನ್ನು ಸೂಚಿಸುತ್ತದೆ?
ಅಲ್ಲಿ ಮತ್ತೊಂದು ಲೇಖನದಲ್ಲಿ ರಾಡಿ ಮಾಡಿ ಮುಗಿಯಿತು. ವಾದದಲ್ಲಿ ಸಿಕ್ಕಿ ಬಿಳುವ ಹಂತ ಮುಟ್ಟುತ್ತಲೇ ಇನ್ನೊಂದು ಲೇಖನಕ್ಕೆ ಜಂಪ್. ಮತ್ತೆ ಹೊಸದಾಗಿ ರಾಡಿ ಮಾಡುವ ಎಂದಿನ ಕಾಯಕ ಸುರು!. ನಾಯಿ ಬಾಲ ಡೊಂಕ, ಆದರೂ ಕಾಯಕ ಜೀವಿ.
ಈ ಮಹಾಮಹಿಮ ಮನುಷ್ಯ(?)ನಿಗೆ ಕೊಡಬೇಕಾದ, ಕೊಡಬಹುದಾದ, ಅರ್ಥವಾಗಬಹುದಾದ ಒಂದೇ ಆಧಾರವೆಂದರೆ ಬಡಾಯಿ ಪ್ರಕಾಶನದ್ದು. ಅಲ್ಲಿ ಹಾಕಿದ ಲದ್ದಿಯೇ ಇದಕ್ಕೆ ಪರಮಶ್ರೇಷ್ಠ. ಅದನ್ನು ಬಿಟ್ಟು ಬೇರೆನನ್ನೇ ಹೇಳಿದರೂ ಕೋಣನ ಮುಂದೆ ಕಿನ್ನರಿ ನುಡಿಸಿದಂತೆ! 🙂
ತಮಾಶೆ ಇರುವುದು ಗುರು-ಶಿಷ್ಯ ಇಬ್ಬರೂ ಒಂದೇ ಹೆಸರಿನಲ್ಲಿ ಬರೆಯುವದಕ್ಕೆ. ಶಿಷ್ಯನಿಗೆ ಡೈರೆಕ್ಟ್ ಉಗಿತ, ಗುರುವಿಗೆ ಪರೋಕ್ಷ ಉಗಿತ!
“ತಮಾಶೆ ಇರುವುದು ಗುರು-ಶಿಷ್ಯ ಇಬ್ಬರೂ ಒಂದೇ ಹೆಸರಿನಲ್ಲಿ ಬರೆಯುವದಕ್ಕೆ. ಶಿಷ್ಯನಿಗೆ ಡೈರೆಕ್ಟ್ ಉಗಿತ, ಗುರುವಿಗೆ ಪರೋಕ್ಷ ಉಗಿತ!”
ನಿಮ್ಮ ಸಂಸ್ಕೃತಿ ಎಷ್ಟು ಚೀಪ್ ಅಂತ ನಿಮ್ಮ ಈ ಕಾಮೆಂಟ್ ಜಾಗಕ್ಕೆ ಸಾರಿ ಹೇಳಿದೆ. ದರ್ಗಾ ಸರ್ ಅವರ ಮೇಲೆ ಕೆಲ ಮಟ್ಟದ ಅಟಾಕ್ ಮಾಡಿದ್ದಲ್ಲದೆ ನನ್ನ ಮೇಲೂ ಸುಳ್ಳನ್ನೇ ಹೇಳುತ್ತಾ ಬಂದಿದ್ದೀರಿ. ನಿಮ್ಮ ಭಂಡತನಕ್ಕೆ ತಕ್ಕ ಶಿಕ್ಷೆ ಸಧ್ಯದಲ್ಲೇ ಆಗಲಿದೆ. ಈ ಸೈಟಿನಲ್ಲಿ ಅಲ್ಪಸಂಖ್ಯಾತರ ಬಗ್ಗೆ ನೀವುಗಳು ಮಾಡಿರುವ ಚೀಪ್ ಕಮೆಂಟುಗಳು ಸಂಬಂಧಪಟ್ಟವರ ದೃಷ್ಟಿಗೆ ಬಿದ್ದಿದೆ.
ಜಾತಿ-ಧರ್ಮದಿಂದ ದೂರವಿದ್ದು ಮಾನವೀಯತೆ ಬೋಧಿಸುವವರಿಗೆ ಜಾತಿ-ಧರ್ಮದ ಹಿಂದೆ ಅಡಗಿ ಕೂತು ಕಲ್ಲು ಬೀಸುವುದು ಏಕೆ ಬೇಕೊ? ಅನ್ನುವುದನ್ನೆಲ್ಲ ಅಂದು ಈಗ ಅಲ್ಪಸಂಖ್ಯಾತ ಬೋರ್ಡ ಹಿಡಿಯುವುದು ಏಕೊ? ನೀವು ಮಾಡಿರುವ ಎಲ್ಲ ‘ನೈತಿಕತೆ’ ತುಂಬಿರುವ ಕಮೆಂಟುಗಳು ಇನ್ನೂ ಇಲ್ಲೇ ಇವೆ ಎಂಬುದು ನಿಮ್ಮ ಗಮನದಲ್ಲಿಯೂ ಇರಲಿ. ಇಲ್ಲಿ ಪ್ರತಿಯೊಂದು ಲೇಖನದಲ್ಲಿಯೂ ಅಸಹ್ಯವಾಗಿ ಕಮೆಂಟು ಮಾಡಿ ಕಾಲು ಕೆದರುವವರು ನೀವೇ ಎಂಬುದನ್ನು ಕೂಡ ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ಬ್ರಾಹ್ಮಣದ್ವೇಷ ತೋರಿಸುವ, ಅವರನ್ನು ತುಚ್ಛಿಕರಿಸುವ, ಮಾತನಾಡಿದ್ದು ಮೈಮೇಲೆ ಬಂದಾಗ ನಾನು ಹೇಳಿದ್ದು ಬ್ರಾಹ್ಮಣ್ಯದ ಬಗ್ಗೆ ಎಂದು ನುಣುಚಿಕೊಳ್ಳುವ ಕಮೆಂಟುಗಳು ಕೂಡ ಇಲ್ಲಿವೆ. ರಾಜಕೀಯವಾಗಿ ನರೇಂದ್ರ ಮೋದಿಯ ಬಗ್ಗೆ ಆಧಾರವಿಲ್ಲದ ಅಪಪ್ರಚಾರ ಮಾಡಿದ್ದೀರಿ, ಅದನ್ನು ಮರೆಯಬೇಡಿ. ಉಳಿದವರು ಗಾಸಿಪ್ ಮಾಡಿದರು ಎನ್ನುವಾಗ ರವಿ ಬೆಳೆಗೆರೆ ಲಾಬಿ ಮಾಡಿ ರಾಜ್ಯೋತ್ಸವ ಪ್ರಶಸ್ತಿ ತೆಗೆದುಕೊಂಡರು ಎಂಬ ನಿಮ್ಮ ಕಮೆಂಟ ಕೂಡ ನಿಮ್ಮ ನೆನಪಿನಲ್ಲಿರಲಿ. ಗಾಜಿನ ಮನೆಯಲ್ಲಿ ಇರುವವರು ಕಲ್ಲು ತೂರಬಾರದು.
[[ನೀವೇನು ನಾಟ್ಜಿ ಜರ್ಮನಿಯಲ್ಲಿ ಹಿಟ್ಲರನ ಅನುಯಾಯಿಗಳಿಗೆ ಹುಟ್ಟಿದವರಾ?]] ಹೀಗೆ ವೈಯುಕ್ತಿಕ ತೇಜೋವಧೆ ಮಾಡಿ ಕೀಳು ಕಮೆಂಟ್ ಮಾಡಿದ ತಮ್ಮ ಕಮೆಂಟು ಇಲ್ಲೇ ಇದೆ. ಶೆ ಟ್ಕರ್ ಸಾರ್ ಇಂಥ ಹುಟ್ಟಿನ ಕುರಿತು ಕೀಳು ಕಮೆಂತ್ ಮಾಡಿದ ತಮ್ಮನ್ನೂ ಮಾನಹಾನಿ ಕೇಸ್ ಜಡಿದು ಏಕೆ ಕೋರ್ಟಗೆಳೆಯಬಾರದು????
ಅರೆ! ಆ ಪ್ರಶ್ನೆಯಲ್ಲಿ ಅಸಹ್ಯ ಪಡುವಂಥದ್ದು ಏನಿದೆ?? ಹಿಟ್ಲರನ ನಾಟ್ಜಿ ಅನುಯಾಯಿಗಳು ಹುಟ್ಟಿದ್ದು ಜರ್ಮನಿಯಲ್ಲೇ ಅಲ್ಲವೇ?
ನಿಮ್ಮ ಬರವಣಿಗೆಯ ಅರ್ಥ ಯಾವ ರೀತಿಯಲ್ಲಿ ಆಗುತ್ತದೆ ಎಂದು ನಿಮಗೆ ತಿಳಿಯುತಿಲ್ಲವಾ?? ಅಥವಾ ತಿಳಿದರೂ ತಿಳಿಯದಂತೆ ನಾಟಕವಾಡುತ್ತಿದ್ದೀರೋ ನಿಮ್ಮನ್ನು ಹೀಗೆಯೇ ”ನೀನು ಯಾವೋನಿಗೆ ಹುಟ್ಟಿರುವೆಯಯ್ಯಾ” ಎಂದು ಯಾರಾದರೂ ಕೇಳಿದರೆ ಇದೇ ರೀತಿ [[ಅರೆ! ಆ ಪ್ರಶ್ನೆಯಲ್ಲಿ ಅಸಹ್ಯ ಪಡುವಂಥದ್ದು ಏನಿದೆ??]] ಪ್ರಶ್ನಿಸಿ ಸುಮ್ಮನಾಗುವಿರಾ???
“”ನೀನು ಯಾವೋನಿಗೆ ಹುಟ್ಟಿರುವೆಯಯ್ಯಾ” ಅಂತ ನಾನು ಕೇಳಿಲ್ಲ ಕೇಳುವುದೂ ಇಲ್ಲ! ಶರಣ ಸಂಸ್ಕೃತಿಯಲ್ಲಿ ಯಾವ ಜಾತಿಕುಲಮತದೇಶದಲ್ಲಿ ಹುಟ್ಟಿದ್ದೀರಿ ಎಂಬುದಕ್ಕೆ ಯಾವ ಮಹತ್ವವೂ ಇಲ್ಲ.
[[ನೀವೇನು ನಾಟ್ಜಿ ಜರ್ಮನಿಯಲ್ಲಿ ಹಿಟ್ಲರನ ಅನುಯಾಯಿಗಳಿಗೆ ಹುಟ್ಟಿದವರಾ?] ಇದು ಶರಣರ ಪ್ರಶ್ನೆಯೇ ಅಲ್ಲವೇ ಇದರ ಅರ್ಥವೇನು?? ಅದನ್ನಾದರೂ ವಿವರಿಸಿ. ಕೀಳು ಮಟ್ಟದ ಮಾತು. ಶರಣ ತತ್ವದ ಹೇಳಿಕೆ ಹೇಳಿ ಆ ಶರಣರನ್ನು ಯಾಕೆ ಅವಮಾನಿಸುತ್ತೀರಿ.??
“ನಿಮ್ಮ ಬ್ರಾಹ್ಮಣದ್ವೇಷ ತೋರಿಸುವ, ಅವರನ್ನು ತುಚ್ಛಿಕರಿಸುವ, ” ಇದು ಸುಳ್ಳು. ನಾನೆಂದೂ ಬ್ರಾಹ್ಮಣರನ್ನು ದ್ವೇಷಿಸಿಲ್ಲ. ನನ್ನದು ಬ್ರಾಹ್ಮಣ್ಯದ ವಿರುದ್ಧ ತಾತ್ವಿಕ ವಿರೋಧ. ಬ್ರಾಹ್ಮಣ = ಬ್ರಾಹ್ಮಣ್ಯ ಎಂಬ ಸಮೀಕರಣ ನಿಮ್ಮದು.
( “ನೀವೇನು ನಾಟ್ಜಿ ಜರ್ಮನಿಯಲ್ಲಿ ಹಿಟ್ಲರನ ಅನುಯಾಯಿಗಳಿಗೆ ಹುಟ್ಟಿದವರಾ?”
ಅರೆ! ಆ ಪ್ರಶ್ನೆಯಲ್ಲಿ ಅಸಹ್ಯ ಪಡುವಂಥದ್ದು ಏನಿದೆ?? ಹಿಟ್ಲರನ ನಾಟ್ಜಿ ಅನುಯಾಯಿಗಳು ಹುಟ್ಟಿದ್ದು ಜರ್ಮನಿಯಲ್ಲೇ ಅಲ್ಲವೇ?
“ಈ ಸೈಟಿನಲ್ಲಿ ಅಲ್ಪಸಂಖ್ಯಾತರ ಬಗ್ಗೆ ನೀವುಗಳು ಮಾಡಿರುವ ಚೀಪ್ ಕಮೆಂಟುಗಳು ಸಂಬಂಧಪಟ್ಟವರ ದೃಷ್ಟಿಗೆ ಬಿದ್ದಿದೆ.”
“ಅಲ್ಪಸಂಖ್ಯಾತರ ಬಗ್ಗೆ ಅಗ್ಗದ ಮಾತುಗಳನ್ನಾಡುವುದೇ ನಿಲುಮೆಯ ನಮೋಸೇನೆಯವರ ಹವ್ಯಾಸ. ತಪ್ಪಿಗೆ ತಕ್ಕ ಶಾಸ್ತಿ ಆಗಲಿದೆ ಸದ್ಯದಲ್ಲೇ.”
“ಶರಣ ಸಂಸ್ಕೃತಿಯಲ್ಲಿ ಯಾವ ಜಾತಿಕುಲಮತದೇಶದಲ್ಲಿ ಹುಟ್ಟಿದ್ದೀರಿ ಎಂಬುದಕ್ಕೆ ಯಾವ ಮಹತ್ವವೂ ಇಲ್ಲ.” )
ಗೊಂದಲಗೊಳ್ಳಬೇಡಿ. ಇವೆಲ್ಲವೂ ಒಬ್ಬರೇ ಬರೆದ ವಾಕ್ಯಗಳು. ನಾಗಶೆಟ್ಟಿ ಶೆಟ್ಕರ್ ಎನ್ನುವ ಹೆಸರಿನಲ್ಲಿ ಬರೆದದ್ದು. ಇದರಲ್ಲಿ ಏನಾದರೂ ತರ್ಕ ಕಂಡುಬಂದರೆ ಈ ‘ಶರಣ’ರಿಗೊಂದು ಉದ್ದಂಡ ನಮಸ್ಕಾರ ಹಾಕಿ!.
ಮನೋಹರ್, ಇನ್ನೊಂದು ಕಡೆ ನೀವೇ ಬರೆದಿದ್ದೀರಿ ಗುರು ಶಿಷ್ಯರಿಬ್ಬರೂ ಒಂದೇ ಹೆಸರಿನಲ್ಲಿ ಕಮೆಂಟ ಮಾಡ್ತಾರೆ ಅಂತ. ಈಗ “ಇವೆಲ್ಲವೂ ಒಬ್ಬರೇ ಬರೆದ ವಾಕ್ಯಗಳು” ಅಂತ ಹೇಳಿದಿದ್ದೀರಿ. ಇದರಲ್ಲಿ ಏನಾದರೂ ತರ್ಕ ಕಂಡು ಬಂದಿದೆಯೆ?
ನಾನು ಬರೆದದ್ದನ್ನು ಇನ್ನೊಮ್ಮೆ ಓದಿ.
“ಇವೆಲ್ಲವೂ ಒಬ್ಬರೇ ಬರೆದ ವಾಕ್ಯಗಳು. ನಾಗಶೆಟ್ಟಿ ಶೆಟ್ಕರ್ ಎನ್ನುವ ಹೆಸರಿನಲ್ಲಿ ಬರೆದದ್ದು.”
ಇದನ್ನು ನೀವು ಒಪ್ಪಿಕೊಳ್ಳಲಿಲ್ಲ ಅಂದರೆ, “ಗುರು ಶಿಷ್ಯರಿಬ್ಬರೂ ಒಂದೇ ಹೆಸರಿನಲ್ಲಿ ಕಮೆಂಟ ಮಾಡ್ತಾರೆ ಅಂತ.” ಅನ್ನುವುದು ಸತ್ಯವಾಗುತ್ತದೆ. ಸರಳವಾಗಿದೆ. ಆಯ್ಕೆ ನಿಮ್ಮದು!
ನಾನು ಒಪ್ಪುವುದು ಬಿಡುವುದು ಪ್ರಸ್ತುತವಲ್ಲ. ನಿಮ್ಮ ತರ್ಕಸರಣಿ ಎಷ್ಟು ಅಸಂಬದ್ಧವಾಗಿದೆ ಎಂಬುದು ನನ್ನ ಹಿಂದಿನ ಪ್ರತಿಕ್ರಿಯೆಯಲ್ಲಿ ಸಾಬೀತು ಪಡಿಸಿದ್ದೇನೆ. ಸೋತರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸುತ್ತಿದ್ದೀರಿ. ನಿಮ್ಮ ವರ್ತನೆ ನೋಡಿ ಅಸಹ್ಯವಾಗುತ್ತಿದೆ.
“ನಾನು ಒಪ್ಪುವುದು ಬಿಡುವುದು ಪ್ರಸ್ತುತವಲ್ಲ.”
ಪಾಪ, ನಿಮ್ಮ ಪಾಡು ಗಂಭೀರ. ಒಪ್ಪಿಕೊಂಡರೆ ಮತ್ತೆ ಫಜೀತಿ. ನಿಮ್ಮ ಬಗ್ಗೆ ಅನುಕಂಪವಿದೆ.
“.ಇವೆಲ್ಲವೂ ಒಬ್ಬರೇ ಬರೆದ ವಾಕ್ಯಗಳು.ನಾಗಶೆಟ್ಟಿ ಶೆಟ್ಕರ್ ಎನ್ನುವ ಹೆಸರಿನಲ್ಲಿ ಬರೆದದ್ದು.” ಮತ್ತು ” ಇವೆಲ್ಲವೂ ಒಬ್ಬರೇ ಬರೆದ ವಾಕ್ಯಗಳು.ನಾಗಶೆಟ್ಟಿ ಶೆಟ್ಕರ್ ಎಂಬವರು/ಎಂಬವರೇ ಬರೆದದ್ದು.” ಎನ್ನುವುದರಲ್ಲಿ ಇರುವ ವ್ಯತ್ಯಾಸ ಯಾವ ಮೂರ್ಖನಿಗಾದರೂ ಅರ್ಥವಾಗುತ್ತದೆ ಅಂದುಕೊಳ್ಳುತ್ತೇನೆ. ಇಲ್ಲಿ ಬರೆಯುತ್ತಿರುವುದು “ನಾಗಶೆಟ್ಟಿ ಶೆಟ್ಕರ್ ಎನ್ನುವ ಹೆಸರಿನಲ್ಲಿ” ಎನ್ನುವದನ್ನು ಸ್ಫಷ್ಟವಾಗಿ ಬರೆದಿದ್ದೇನೆ, ನಿಮಗೆ ಅರ್ಥವಾಗಿಲ್ಲವಾದರೆ ಚೆಕ್ ಆಪ್ ಮಾಡಿಸಬೇಕಾಗುತ್ತದೆ. ಮಿದುಳು ಸಾವಕಾಶವಾಗಿ ನಿಷ್ಕ್ರಿಯವಾಗುತ್ತಿದೆಯೊ ಏನು ಅಂತ.
“ನಿಮ್ಮ ಹೆಸರಿನಲ್ಲಿ ಈಗ ಬರೆಯುತ್ತಿರುವವರೂ ಈ ಹಿಂದೆ ಸಹನಾ ಎನ್ನುವ ಹೆಸರಿನಲ್ಲಿ ಬರೆಯುತ್ತಿದ್ದವರೂ ಒಬ್ಬರೇ ಇರಬೇಕೆ ಅಲ್ಲವೆ”
ಸಿ.ಎಸ್.ಎಲ್.ಸಿ ಬಿಟ್ರಿ. ಈಗ ಸಹಾನಾ ಬಂದ್ರಾ? ಮತ್ತೊಂದು ನಾಲ್ಕು ಹೆಸರು ಕೂಡ ಹುಡುಕಿಡಿ.ಹೊಂದಿಸಿ ಬರೆಯಿರಿ ಸ್ಪರ್ಧೆ ಇಡೋಣ.
ಮನೋಹರ್, ನಿಮ್ಮ ಹೆಸರಿನಲ್ಲಿ ಈಗ ಬರೆಯುತ್ತಿರುವವರೂ ಈ ಹಿಂದೆ ಸಹನಾ ಎನ್ನುವ ಹೆಸರಿನಲ್ಲಿ ಬರೆಯುತ್ತಿದ್ದವರೂ ಒಬ್ಬರೇ ಇರಬೇಕೆ ಅಲ್ಲವೆ? 😀
ಶ್ರೀ ನಾಗಶೆಟ್ಟಿ ಶೆಟ್ಕರ್ ಅವರಿಗೆ- ನಿಮಗೆ ಯಾವುದೇ ಜಾತಿ, ಪಕ್ಷ ಮತ್ತು ವ್ಯಕ್ತಿಯ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು;ಅದನ್ನು ಇಟ್ಟುಕೊಳ್ಳುವುದಕ್ಕೆ ತಾವು ಸ್ವತಂತ್ರರು. ಆದರೆ ಅದು ಒಂದು ಮಿತಿಯಲ್ಲಿ ಇರಬೇಕು. ನೀವು ಒಬ್ಬರಿಗೆ ಹೊಡೆದ ಮೇಲೆ ಹೊಡೆಸಿಕೊಂಡವರು ಸುಮ್ಮನಿರಬೇಕು ಎಂದರೆ ಹೇಗೆ? ಗುಜರಾತಿನ ಅಭಿವೃದ್ಧಿ ನಿಜವಲ್ಲ ಸುಳ್ಳು ಎಂದು ಕೇಂದ್ರಸರ್ಕಾರ ಅಧಿಕೃತವಾಗಿ ಹೇಳಿದೆಯೇ? ಕೇಂದ್ರ ಸರ್ಕಾರದ ಬಳಿ ತನಿಖೆ ಮಾಡಲು ಸಾಕಷ್ಟು ಸಂಸ್ಥೆಗಳಿದೆ ಅಲ್ಲವೇ? ಯು ಪಿ ಎ ಆಡಳಿತದಲ್ಲೇ ಕೇಂದ್ರ ಸರ್ಕಾರವೇ ರಾಜೀವ್ ಗಾಂಧೀ ಪ್ರತಿಷ್ಠಾನದ ವತಿಯಿಂದ ಮೋದಿಯವರಿಗೆ ಪ್ರಶಸ್ತಿ ಕೊಟ್ಟಿದೆಯಲ್ಲ? ಟಿಪ್ಪುವಿನ ಬಗ್ಗೆ ಕೊಡಗಿನವರು,ಕೇರಳದ ಮಲಬಾರ್ ಪ್ರದೇಶದವರು ಹೇಳುವುದನ್ನೂ ಕೇಳಬೇಕಲ್ಲವೇ? ಕಾಶ್ಮೀರಿ ಪಂಡಿತರು ದಿಲ್ಲಿಯ ಬೀದಿಗಳಲ್ಲಿ,ಸ್ಲಮ್ಮುಗಳಲ್ಲಿ ಜೀವಿಸುತ್ತಿದ್ದಾರೆ. ಅವರ ಬಗ್ಗೆ ಸಾಕಷ್ಟು ಲೇಖನಗಳು “ಪ್ರಗತಿಪರವಾದ,ಜಾತ್ಯಾತೀತವಾದ “ಪತ್ರಿಕೆಗಳಲ್ಲೇ ಆಗಾಗ ಬರುತ್ತಿರುತ್ತದೆ. ಬಿಡುವಾದಾಗ ಓದಿ.
ಈ ಎಪ್ಪನಿಗೆ ಸದಾ ಟೀಕೆಗಾಗೆ ಟೀಕಿಸಬೇಕು ಎಂದು ಗೊತ್ತೆ ವಿನಃ ವಸ್ತು ನಿಷ್ಟವಾಗಿ ಏನನ್ನು ಹೇಳುವದಿಲ್ಲ. ನಾವು ಕೇಳಿದ ಪ್ರಶ್ನೆಗಳಿಗೆ ತನಗೆ ಉತ್ತರ ಕೊಡಲಾಗದಿದ್ದರೆ ರಾಡಿ ಎರಚುತ್ತಾನೆ. ಇಲ್ಲವೆ ಬೇರೆಯದೇ ವಿಷಯ ತೆಗೆದು ದಾರಿ ತಪ್ಪಿಸುತ್ತಾನೆ. ಇನ್ನು ಲೇಖನಕ್ಕೆ ಸಂಬಂಧಿಸಿದಂತೆ ಇವನ ವಾದಗಳೆಂದೂ ಇರುವದೇ ಇಲ್ಲ. ಸಾಕ್ಷಿ ಆಧಾರ ಸಮೇತ ಮಾತನ್ನು ಇವನು ಎಂದೂ ಆಡುವದಿಲ್ಲ.[[ “ಟಿಪ್ಪುವು ಹತ್ತಾರು ಸಹಸ್ರ ಹಿಂದುಗಳನ್ನು ಮತಾಂತರಿಸಿದ, ಕೊಚ್ಚಿ ಹಾಕಿದ, ಮಾನಿನಿಯರ ಮಾನ ಹರಣ ಮಾಡಿದ. ” ಹೌದಾ?!! ನಿಮ್ಮ ಬಳಿ ಸಾಕ್ಷಿ ಆಧಾರಗಳಿವೆಯಾ? ಅಥವಾ ಭೈರಪ್ಪನವರ ಕಾದಂಬರಿಗಳೇ ಆಧಾರವಾ?]] ಎಂದು ಈ ಮನುಷ್ಯ ಕೇಳುತ್ತಾನೆ. ಭೈರಪ್ಪನವರು ಈ ಎಪ್ಪನ ತರಹ ಬೊಗಳೆ ಬಿಟ್ಟಿಲ್ಲ. ಸಾಕು ಸಾಕು ಸಾಕು ಎನಿಸುವಷ್ಟು ಆಧಾರಗಳನ್ನು ನೀಡಿಯೇ ಅವರು ಏನನ್ನಾದರೂ ಹೇಳುತ್ತಾರೆ ಗೊತ್ತಾ?? ಆಧಾರವಿಲ್ಲದೆ ಏನನ್ನಾದರೂ ಹೇಳಿದ್ದರೆ ನಿಮ್ಮ ಎಡಚರು ಅವರನ್ನು ಹುರಿದು ಮುಕ್ಕುತ್ತಿದ್ದರಲ್ಲದೇ ಕೋರ್ಟಗೂ ಎಳೆಯುತ್ತಿದ್ದರು. ಅವರು ಆಧಾರ ನೀಡಿ ಹೇಳಿದ್ದರಿಂದಲೇ ಎರಡೂ ಮುಚ್ಚಿಕೊಂಡು ಕುಳಿತಿದ್ದಾರೆ. ಇನ್ನೂ ಎಂಥ ಸಾಕ್ಷಿ ಅರೆ ಬೇಕಪ್ಪಾ ನಿಮಗೆ????????????????
“ಭೈರಪ್ಪನವರು ಈ ಎಪ್ಪನ ತರಹ ಬೊಗಳೆ ಬಿಟ್ಟಿಲ್ಲ.” ನಿಮ್ಮವರ ಹೂಸು ನಿಮಗೆ ಗಂಧಕ್ಕಿಂತ ಹೆಚ್ಚು ಪರಿಮಳ!
ಪರಿಮಳದಿಂದ ದೂರ ಬೇಕಾದರೂ ಹೋಗಬಹುದು. ಅದು ಆಯ್ಕೆ. ಆದರೆ ಶತಮಾನಗಳ ಹಿಂದೆ ಮಾರ್ಕ್ಸ ಬಿಟ್ಟ ಹೂಸನ್ನೇ ಇಂದಿಗೂ ಆಮ್ಲಜನಕ ಮಾಡಿಕೊಂಡು ಬದುಕಿರುವವರ ಬಗ್ಗೆ ಏನೆನ್ನುವುದು??
ಇಂದು ಸುಭಾಸರ ಜನ್ಮದಿನ. ನಿಲುಮೆಯ ಎಲ್ಲ ಸ್ನೇಹಿತರಿಗೂ ಸುಭಾಸರ, ಧೈರ್ಯ, ತ್ಯಾಗ, ದೇಶ ಭಕ್ತಿಗಳು ಮೈಗೂಡಲಿ ಎಂದು ಹಾರೈಸುತ್ತೇನೆ.
ಸುಭಾಸ ಚಂದ್ರ ಬೋಸ್ ಅವರೇ ಸ್ವತಃ ಒಬ್ಬ ಸಮಾಜವಾದಿ ಆಗಿದ್ದರು, ಅವರಿಗೆ ಎಡಪಂಥೀಯ ಚಿಂತನೆಯಲ್ಲಿ ಒಲವಿತ್ತು. “he supported empowerment of women, secularism and other liberal ideas”.
ನಾನೇನು ಇಲ್ಲವೆಂದು ಹೇಳಿಲ್ಲವಲ್ಲ್?? ದೇಶಪ್ರೆಮಿಗಳು ಸಮಾಜವಾದಿ ಆಗಿರಬಾರದು. ದೆಶ ಬ್ರಷ್ಟರು ಮಾತ್ರ್ ಸಮಾಜವಾದಿ ಆಗಿರಬೆಕೆ??
ಓ! ಹಾಗಾ? ಮಾರ್ಕ್ಸ್ ವಾದವನ್ನು ಮನೋಹರ್ ಹೂಸಿಗೆ ಹೋಲಿಸಿದಾಗ ಏಕೆ ಸುಮ್ಮನಿದ್ದಿರಿ?
ನೀವು ಇನ್ನೊಬ್ಬರ ಸಾಹಿತ್ಯವನ್ನು ಅಸಹ್ಯ ಪದದಿಂದ ಬಯ್ಯಬಹುದು ಬೇರೆಯವರು ಮಾತ್ರ ಸುಮ್ಮನಿರಬೇಕಾ??
“ನೀವು ಇನ್ನೊಬ್ಬರ ಸಾಹಿತ್ಯವನ್ನು ಅಸಹ್ಯ ಪದದಿಂದ ಬಯ್ಯಬಹುದು” false allegations. When will you learn to speak truth?
[[“ಭೈರಪ್ಪನವರು ಈ ಎಪ್ಪನ ತರಹ ಬೊಗಳೆ ಬಿಟ್ಟಿಲ್ಲ.” ನಿಮ್ಮವರ ಹೂಸು ನಿಮಗೆ ಗಂಧಕ್ಕಿಂತ ಹೆಚ್ಚು ಪರಿಮಳ!]] ನಾನು ನನ್ನ ಕಮೆಂಟಿನಲ್ಲಿ ಏನು ಬರೆದಿದ್ದೇನೆ ಎಂಬ ಎಚ್ಚರ ನಿಮಗಿರುವದಿಲ್ಲಾವಾ?? ಕೇವಲ ಟೀಕಿಸಲೇಬೇಕು ಇಲ್ಲದಿದ್ದರೆ ಮೀಸೆ ಮಣ್ಣಾಗುತ್ತದೆಂದು ಈ ರೀತಿ ವರ್ತಿಸುವಿರೋ ಅಥವಾ ಈಗಲೇ ಅರವತ್ತರ ಅರಳು ಮರಳು ಶುರುವಾಗಿದೆಯೋ?? ಮೇಲಿನ ವಾಕ್ಯ ನನ್ನದಾ?? ನೀವು ಭೈರಪ್ಪನವರನ್ನು ಬಾಯಿಗೆ ಬಂದಂತೆ ಬೈಯಬಹುದು. ಆದರೆ ಮನೋಹರ್ ಅವರು ಮಾರ್ಕ್ಸನನ್ನು ಬೈಯಬಾರದು ಚನ್ನಾಗಿದೆ ನ್ಯಾಯ. ಮತ್ತೆ ನನ್ನನ್ನೆ false allegations. When will you learn to speak truth? ಹೀಗೆ ಕೆಳುತ್ತೀರಲ್ಲಾ?? ಮಿದುಳು ಸರ್ಜರಿ ಬೇಗ ಮಾಡಿಸಿಕೊಳ್ಳಿ.
ಮಾರ್ಕ್ಸ್ ವಾದವನ್ನು ಹೂಸಿಗೆ ಹೋಲಿಸುವವರು ತಮ್ಮ ಮಿದುಳಿಗೆ ಸರ್ಜರಿ ಮಾಡಿಸಿಕೊಂಡು ಕೋಮಾಗೆ ಹೋಗುವುದು ಬೆಟರ್.
ನೀವು ಸರಸ್ವತಿ ಸಮ್ಮಾನಿತ ಓರ್ವ ಅತ್ಯಧಿಕ ಜನಪ್ರಿಯ ಲೇಖಕನ ಬಗ್ಗೆ, ಅವರ ಸಾಹಿತ್ಯದ ಬಗ್ಗೆ ಹೂಸಿಗೆ ಹೋಲಿಸಿ ಮಾತನಾಡಬಹುದು. ಆದರೆ ನಾವು ಮಾತ್ರ ನೀವು ಮೆಚ್ಚುವ ವ್ಯಕ್ತಿಯ ಬರಹಗಳ ನಿಂದನೆ ಮಾಡಬಾರದು. ಮಾಡಿದರೆ [[ಮಾರ್ಕ್ಸ್ ವಾದವನ್ನು ಹೂಸಿಗೆ ಹೋಲಿಸುವವರು ತಮ್ಮ ಮಿದುಳಿಗೆ ಸರ್ಜರಿ ಮಾಡಿಸಿಕೊಂಡು ಕೋಮಾಗೆ ಹೋಗುವುದು ಬೆಟರ್ ]] ಎಂಬ ಅಮೂಲ್ಯ ಸಲಹೆ ವಾ ವಾ ಶೆಟ್ಕರ್ ಸಾಬರೆ ಮಿದುಳು ಅಂದರೆ ನಿಮ್ಮದು ನೋಡ್ರಿ. ನ್ಯಾಯ ತೀರ್ಮಾನಕ್ಕೆ ನಿಮ್ಮನ್ನೇ ಕರೆಯಬೇಕು. ನಿಜವಾದ ನ್ಯಾಯ ಕೊಡುತ್ತೀರಿ.
ಜ್ಞಾನಪೀಠ ಪ್ರಶಸ್ತಿ ಪಡೆದು ಬೂಕರ್ ಪ್ರಶಸ್ತಿಯ ಅಂತಿಮ ಸುತ್ತನ್ನು ಪ್ರವೇಶಿಸಿದ್ದ ನಮ್ಮ ಕಾಲದ ಅತ್ಯಂತ ಶ್ರೇಷ್ಠ ದಾರ್ಶನಿಕ ಸಾಹಿತಿ ಅನಂತಮೂರ್ತಿಯವರೇ ಭೈರಪ್ಪನವರ ಸಾಹಿತ್ಯಕ್ಕೆ ಮೂರು ಕಾಸಿನ ಬೆಲೆ ಕೊಟ್ಟಿಲ್ಲ.
ಯಾರ ಸಾಹಿತ್ಯವನ್ನು ಜನರು ಮುಗಿ ಬಿದ್ದು ಓದುತ್ತಾರೆ?? ಜನಗಳೇನು ಕುರಿಗಳಾ??
ಹೌದು. ನಿಮ್ಮ ‘ಆಮ್ಲಜನಕ’ದ ಅವಮಾನ ಮಾಡಬಾರದಿತ್ತು. ಕ್ಷಮೆ ಇರಲಿ . ಆದರೆ ಮಹಾನುಭಾವರೆ, ನಿಮ್ಮ ಆ ಆಮ್ಲಜನಕದ ಸ್ಟಾಕ್ ಮುಗಿಯುತ್ತ ಬಂದಿದೆ ಅನಿಸುತ್ತಿದೆ. ನಿಮ್ಮ ಗ್ಯಾಂಗಿನ ಅನೇಕರು ಉಸಿರಾಟದ ಸಮಸ್ಯೆಯಿಂದ, ವಿಶ್ರಾಂತಿಧಾಮ ಹುಡುಕಿಕೊಳ್ಳುತ್ತಿದ್ದಾರೆ. ಒರಿಜಿನಲ್ ಆಮ್ಲಜನಕ ಎಂದರೆ ಬೇರೆ ಇರುತ್ತದೆ ಎಂದು ಈಗ ಗೊತ್ತಾಗುತ್ತಿದೆಯಂತೆ ಅವರಿಗೆ. ಯಾವುದಕ್ಕೂ ಶೀಘ್ರ ಗುಣಮುಖರಾಗಿ.
Aap baruttide nimmamnu gudisi kasada gundige eseyalide. innu kelave dinagalu.
http://ibnlive.in.com/news/national-projection-nda-likely-to-get-211231-upa-distant-second-with-107127/447602-37-64.html
ಹೊಸ ಗಂಜಿಕೇಂದ್ರ ಸುರುವಾಗುವಾಗುದನ್ನು ಆಶೆಗಣ್ಣಿನಿಂದ ನೋಡುತ್ತ ಕುಳಿತಿರುವ ಮಾರ್ಕ್ಸ ನ ಪಳೆಯುಳಿಕೆಗಳು.ಪಾಪ.
Have no doubt. Progressive politics will triumph over fascism.
ಹೊಸ ಗಂಜಿಕೇಂದ್ರ ಸುರುವಾಗುವಾಗುದನ್ನು
you can supply tea to people there.
Progressive politics ಅಂತೆ. ನಿಮ್ಮ ಮುಖಕ್ಕೊಂದಿಷ್ಟು! ಬಂಗಾಳ, ಕೇರಳಗಳಲ್ಲಿ ಸೆಗಣಿ ಹಾಕಿದ್ದು ಗೊತ್ತೆ ಇದೆ.
“you can supply tea to people there.”
ಪಾಪ ಬಿಟ್ಟಿ ಟೀ ಕೂಡ ಸಿಗುತ್ತದೆ ಎಂಬ ನಿರೀಕ್ಷೆ. ನಾಚಿಕೆಬಿಟ್ಟ.ಗತಿಗೇಡಿಗಳು.
“ನಿಮ್ಮ ಮುಖಕ್ಕೊಂದಿಷ್ಟು” Moderator Sir, please take note of the derogatory phrase used by Mr. Manohar.
“ನಾಚಿಕೆಬಿಟ್ಟ.ಗತಿಗೇಡಿಗಳು.”
Moderator Sir, please take note of the derogatory phrase used by Mr. Manohar.
ಮಾನ್ಯ ಶ್ರೀರಂಗ ಅವರೇ, “ನೀವು ಒಬ್ಬರಿಗೆ ಹೊಡೆದ ಮೇಲೆ ಹೊಡೆಸಿಕೊಂಡವರು ಸುಮ್ಮನಿರಬೇಕು ಎಂದರೆ ಹೇಗೆ?” ಅಂತ ಮಹತ್ತರವಾದ ಆಪಾದನೆ ಮಾಡಿದ್ದೀರಿ!! ನಾನು ಯಾರಿಗೆ ಎಲ್ಲಿ ಯಾವಾಗ ಹೊಡೆದೆ ಅಂತ ದಯವಿಟ್ಟು ಸಾಕ್ಷಿ ಸಮೇತ ಹೇಳಿ ನೋಡೋಣ. ನೀವು ಒಮ್ಮೆಯೂ ಮುಸಲ್ಮಾನರ ಹೋಟೆಲಿನಲ್ಲಿ ಚಾ ಕಾಪಿ ಸಹ ಕುಡಿದಿಲ್ಲ ಅಂತ ಅಂದದ್ದು ನಿಮಗೆ ಹೊಡೆತ ಅನ್ನಿಸಿದ್ದರೆ ತಪ್ಪು ಯಾರದ್ದು ಸ್ವಾಮಿ?
ಪ್ರಿಯ ಶೆಟ್ಕರ್ ಅವರಿಗೆ— ತಾವು ನನ್ನ ಲೇಖನಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಇನ್ನೊಬ್ಬರ ಲೇಖನದಲ್ಲಿ ನಾನು ಉತ್ತರಿಸಿದ್ದೇನೆ ಎಂದು ಭಾವಿಸಿರುವಂತೆ ಕಾಣುತ್ತದೆ. ತಮ್ಮ ಭಾವನೆ ಅದಾಗಿದ್ದರೆ ಅದು ಸರಿಯಲ್ಲ ಎಂದು ಹೇಳಲು ಆಶಿಸುತ್ತೇನೆ. ಆ ಪ್ರಶ್ನೆಗೆ ಅಲ್ಲೇ ಈ ದಿನ ಉತ್ತರಿಸಿದ್ದೇನೆ ದಯವಿಟ್ಟು ನೋಡಿ. ಇದುವರೆಗೆ ನಾನು ತಮ್ಮ ಆ ಪ್ರಶ್ನೆಗೆ ಉತ್ತರಿಸದೇ ಇದ್ದದ್ದಕ್ಕೆ ಕಾರಣ ಅದು ನನಗೆ ಮುಖ್ಯ ಎಂದು ಅನಿಸದೆ ಇದ್ದದ್ದು ಅಷ್ಟೇ ಹೊರತು ಬೇರಾವ ಕಾರಣವೂ ಇಲ್ಲ. ಈ ದಿನ ತಾವು ಮತ್ತೊಮ್ಮೆ ಪ್ರಸ್ತಾಪಿಸಿರುವುದರಿಂದ ಅನಿವಾರ್ಯವಾಗಿ ಉತ್ತರಿಸಿಸಿದ್ದೇನೆ. ಒಂದು ಲೇಖನಕ್ಕೆ ಸಂಬಂಧಿಸಿದ ಜಮಾ ಖರ್ಚಿನ ಲೆಕ್ಕವನ್ನು ಆ ಲೇಖನದಲ್ಲೇ ಮುಗಿಸುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ ಅಷ್ಟೇ ಹೊರತೂ ಬೇರಾವ ಉದ್ದೇಶವೂ ಇಲ್ಲ.
ಮಾನ್ಯ ಶ್ರೀರಂಗ ಅವರೇ, “ನೀವು ಒಬ್ಬರಿಗೆ ಹೊಡೆದ ಮೇಲೆ ಹೊಡೆಸಿಕೊಂಡವರು ಸುಮ್ಮನಿರಬೇಕು ಎಂದರೆ ಹೇಗೆ?” ಅಂತ ಮಹತ್ತರವಾದ ಆಪಾದನೆ ಮಾಡಿದ್ದೀರಿ!! ನಾನು ಯಾರಿಗೆ ಎಲ್ಲಿ ಯಾವಾಗ ಹೊಡೆದೆ ಅಂತ ದಯವಿಟ್ಟು ಸಾಕ್ಷಿ ಸಮೇತ ಹೇಳಿ ನೋಡೋಣ.
ಮಾನ್ಯ ಶ್ರೀರಂಗ ಅವರೇ, “ನೀವು ಒಬ್ಬರಿಗೆ ಹೊಡೆದ ಮೇಲೆ ಹೊಡೆಸಿಕೊಂಡವರು ಸುಮ್ಮನಿರಬೇಕು ಎಂದರೆ ಹೇಗೆ?” ಅಂತ ಮಹತ್ತರವಾದ ಆಪಾದನೆ ಮಾಡಿದ್ದೀರಿ!! ನಾನು ಯಾರಿಗೆ ಎಲ್ಲಿ ಯಾವಾಗ ಹೊಡೆದೆ ಅಂತ ದಯವಿಟ್ಟು ಸಾಕ್ಷಿ ಸಮೇತ ಹೇಳಿ ನೋಡೋಣ. ನೀವು ಒಮ್ಮೆಯೂ ಮುಸಲ್ಮಾನರ ಹೋಟೆಲಿನಲ್ಲಿ ಚಾ ಕಾಪಿ ಸಹ ಕುಡಿದಿಲ್ಲ ಅಂತ ಅಂದದ್ದು ನಿಮಗೆ ಹೊಡೆತ ಅನ್ನಿಸಿದ್ದರೆ ತಪ್ಪು ಯಾರದ್ದು ಸ್ವಾಮಿ? ಮುಸಲ್ಮಾನರ ಹೊಟೇಲಿನಲ್ಲಿ ಚಾ ಕುಡಿಯುವದಕ್ಕೂ ನೀವು ಕಮೆಂಟ್ ಮಾಡಿ ಇನ್ನೋಬ್ಬರನ್ನು ಹೀಯಾಳಿಸುವದಕ್ಕೂ ಯಾವ ಸಂಬಂಧವಿದೆ ?? ಇಮಾಮಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧ??
“ಮುಸಲ್ಮಾನರ ಹೊಟೇಲಿನಲ್ಲಿ ಚಾ ಕುಡಿಯುವದಕ್ಕೂ ನೀವು ಕಮೆಂಟ್ ಮಾಡಿ ಇನ್ನೋಬ್ಬರನ್ನು ಹೀಯಾಳಿಸುವದಕ್ಕೂ ಯಾವ ಸಂಬಂಧವಿದೆ ?? ”
don’t take rubbish. your comments are not only distasteful but also lack basic logic.
ರೀ ಶೆಟ್ಕರ್ ಸಾಬರೆ ನೀವು ಒಂದಾದರೂ ಲೇಖನ ಮೆಚ್ಚಿ ಲೇಖಕನಿಗೆ ಎಂದಾದರೂ ಪ್ರೋತ್ಸಾಹಿಸಿದ್ದೀರಾ?? ತ್ಯಾಗರಾಜರ ಕುರಿತು ಒಂದೊಳ್ಳೆ ಲೇಖನ ಬಂದಿದೆ ಅದಕ್ಕೆ ಒಂದಾದರೂ ಚಂದದ ಕಮೆಂಟ್ ಮಾಡಿದ್ದೀರಾ?? ಬರೇ ರಾಡಿ ಎರಚಲು ಮಾತ್ರ ತುದಿಗಾಲಲ್ಲಿ ನಿಂತಿರ್ತೀರಲ್ಲಾ???
ನಿಳುಮೆಯಲ್ಲಿ ಒಳ್ಳೆಯ ಲೇಖನಗಳು ಬಂದಾಗ ಖಂಡಿತ ಅದನ್ನು ಮೆಚ್ಚಿ ಪ್ರೋತ್ಸಾಹಿಸುತ್ತೇನೆ. ನಮೋಸುರನ ಪ್ರಾಪಗಾಂಡ ಮಾಡುವ ಲೇಖನಗಳನ್ನು ಹಾಗೂ ಅಲ್ಪಸಂಖ್ಯಾತರು/ಶೋಷಿತರು/ದಲಿತರು/ಅಬ್ರಾಹ್ಮಣರನ್ನು ನಗಣ್ಯವಾಗಿಸುವ ಲೇಖನಗಳನ್ನು ಮೆಚ್ಚಲು ಸಾಧ್ಯವಿಲ್ಲ. ನನ್ನ ಪ್ರತಿಕ್ರಿಯೆಗಳಿಗೆ ಭದ್ರವಾದ ನೈತಿಕೆ ನೆಲೆ ಇದೆ.
[[“ನಿಮ್ಮ ಬಗ್ಗೆ ಬೀದರ್^ನಲ್ಲೂ ಇದೇ ಹೇಳಿದ್ರು. ಇವ್ರು ಹೀಗೇ ಅಂತ.” ನಿಮಗೆ ಧೀಮಂತಿಕೆ ಇದ್ದಾರೆ ಯಾರು ಏನು ಹೇಳಿದರು ಅಂತ ಸವಿವರವಾಗಿ ಹೇಳಿ.]]
ಕರ್ನಾಟಕದಲ್ಲಿ ನಕ್ಸಲೈಟುಗಳು, ಮಾವೋವಾದಿಗಳು ಬೇರೂರುತ್ತಿದ್ದಾರೆ ಮತ್ತು ಅವರಿಗೆ ಕೆಲವು ವಿಶ್ವವಿದ್ಯಾಲಯಗಳಲ್ಲಿ ತಳವೂರಿರುವ ಪಟ್ಟಭದ್ರಹಿತಾಸಕ್ತಿಗಳಿಂದ ಸಹಕಾರ-ಉತ್ತೇಜನ ಸಿಗುತ್ತಿದೆ ಎನ್ನುವುದು ಭಯೋತ್ಪಾದನಾ ನಿಗ್ರಹ ದಳ, IB, ಇತ್ಯಾದಿಗಳ ಗಮನಕ್ಕೆ ಬಂದಿದೆ.
ಈ ರೀತಿ ನಕ್ಸಲರಿಗೆ-ಮಾವೋವಾದಿಗಳಿಗೆ ಉತ್ತೇಜನ ನೀಡುತ್ತಿರುವವರ background, ಅವರ ಒಡನಾಡಿಗಳ background, ಇತ್ಯಾದಿಗಳ ಪತ್ತೆಹಚ್ಚುವಿಕೆ ನಡೆಯುತ್ತಿದೆ. ಇದಕ್ಕಿಂತ ಹೆಚ್ಚಿನದನ್ನು ನಾನು ಈ ಸಂದರ್ಭದಲ್ಲಿ ಹೇಳಲಾರೆ.
ನಿಮ್ಮ ಬರಹಗಳು, ಅದರಲ್ಲಿ ಬರುವ “ಜಾತಿವಿರೋಧಿ ಹೇಳಿಕೆಗಳು”, “ಕಾಶ್ಮೀರದ ಭಯೋತ್ಪಾದಕರ ವಿಷಯದಲ್ಲಿ ನಿಮ್ಮ ಮೆದು ವರ್ತನೆ”,……..
ಹೆ! ಹ್ಹೆ!! ಹ್ಹ್ಹೆ!!! ಮಾವೋ ಗುಮ್ಮ ತೋರಿಸಿ ನನ್ನ ಬಾಯಿ ಮುಚ್ಚಿಸುವ ಯತ್ನ ಹಾಸ್ಯಾಸ್ಪದವಾಗಿದೆ. ಕೋಮುವಾದದ ಪ್ರಚಾರದ ಮುಂಚೂಣಿಯಲ್ಲಿರುವ ನಿಲುಮೆ ಮಾವೋವಾದವನ್ನು ಗುರಾಣಿಯಾಗಿ ಬಳಸುವುದನ್ನು ಬಿಡುವುದು ಉತ್ತಮ.
ಯಾರ್ಯಾರೋ ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಿ ಕೊಟ್ಟ ವೀಡಿಯೋಗಳನ್ನು ನೋಡಿ ತೀರ್ಮಾನಿಸಬೇಡಿ. ದಯವಿಟ್ಟು ಪೂರ್ಣ ಸಂದರ್ಶನ ನೋಡಿ. ರಾಕೇಶ್ ಉಲ್ಲೇಖಿಸಿರುವ ರಜತ್ ಶರ್ಮಾರ “ಆಪ್ ಕಿ ಅದಾಲತ್” ನ ಚಿಕ್ಕ ತುಣುಕಿನ ವಾಸ್ತವದ ಪೂರ್ಣ ಪರಿಪಾಟ ಇಲ್ಲಿದೆ : http://www.youtube.com/watch?v=-y1-w9ZqIpk
ಇವನ್ನೂ ನೋಡಿ :
http://www.youtube.com/watch?v=M5s7SkLCZWQ
http://www.youtube.com/watch?v=dd9AQeD9hxQ
ರಾಕೇಶ, ಕುಮಾರ್ ಮತ್ತಿತರರ ಇಲ್ಲ್ಲಿನ ಆಪಾದನೆಗಳು ಯಾವುದೂ ಏನೂ ಹೊಸತಲ್ಲ; ಹೀಗೆ ಬೆಳೆಯುತ್ತಲೇ ಇರುವ ಆಪಾದನೆಗಳಿಗೆ ‘ಆಪ್’ ಮೇಲಿನ ಕೊಂಡಿಗಳಲ್ಲಿರುವಂತೆ ಯಾವತ್ತಿನಿಂದಲೂ ಸಮರ್ಪಕ ಉತ್ತರಗಳನ್ನು ನೀಡುತ್ತಲೇ ಬಂದಿದೆ. ಅವುಗಳಲ್ಲಿ ಕೆಲವು :
೧) “ಅಣ್ಣಾ ಹಜಾರೆ’ಯವರ ಹೋರಾಟದ ಗರ್ಭ ಸೀಳಿ, ನಂಬಿದವರಿಗೆ ಮೋಸ ಮಾಡಿಕೊಂಡು ಜನಿಸಿದ ಆಪ್ ಪಕ್ಷದ ಕೇಜ್ರಿವಾಲ್ ಅವರನ್ನು….”
ಈಗಾಗಲೇ ಸಾವಿರಸಲ ಇದಕ್ಕೆ ಇದೇ ಉತ್ತರ ನೀಡಿಯಾಗಿದೆ: ಅಣ್ಣಾ ಹೋರಾಟದಲ್ಲಿದ್ದ ಮಾತ್ರಕ್ಕೇ ಅವರೊಂದಿಗೆ ಭಿನ್ನ್ನಾಭಿಪ್ರಾಯತಾಳುವ ಹಕ್ಕು ಹೊರಟುಹೋಯಿತೇ? ಅದು ಹೇಗೆ ‘ನಂಬಿದವರಿಗೆ ಮೋಸ’ವಾಯಿತು? ತಾಯಿ ಏನು ಮಾಡುತ್ತಿತ್ತೋ ಗರ್ಭದಿಂದ ಹೊರಬಂದ ಮಗುವೂ ಅದನ್ನೇ ಮಾಡುತ್ತಿರಬೇಕೆ? ಬೆಳವಣಿಗೆ ಬೇಡವೇ? ಅಣ್ಣಾ ಅವರ ಯಾವ ಆದರ್ಶಗಳಿಗೆ ‘ಆಪ್’ ತಿಲಾಂಜಲಿ ನೀಡಿದೆ? ಮುಖ್ಯವಾಗಿ, ಕೇಜ್ರಿವಾಲ್ ವಿರೋಧಿಸಲು ಅಣ್ಣಾ ಹೆಸರೆತ್ತುವ ನೀವುಗಳು ಅದೇ ಲೋಕಾಯುಕ್ತ ವಿರೋಧಿ ಮೋದಿಯನ್ನು ಬೆಂಬಲಿಸುತ್ತೀರಿ! ಚೆನ್ನಾಗಿದೆ ಈ ಸಿನಿಕತನ!
೨) [ಅನನುಭವಿ] : “…ದುರಂತಕ್ಕೆ ಕಾರಣರಾಗಿದ್ದು ಇದೇ ಅನನುಭವಿ ರಾಜೀವ್ ಗಾಂಧಿಯಲ್ಲವೇ? ಈಗ ಹೇಳಿ ಇನ್ನೊಬ್ಬ ರಾಜೀವ್ ಗಾಂಧಿ ನಮಗೆ ‘ಕೇಜ್ರಿವಾಲ್’ ರೂಪದಲ್ಲಿ ಬೇಕಾ?”
ಹೌದಪ್ಪಾ! ಅನುಭವ ಅನ್ನೋದು ಹುಟ್ಟುತ್ತಲೇ ಬರುತ್ತೆ! ನಾನಂತೂ ಯಡಿಯೂರಪ್ಪ, ಗಡ್ಕರಿ, ವೀರಭದ್ರಸಿಂಗ್, ಕೋಕಿಲಾ ಬೇನ್, ವಾದ್ರಾ, ಮೋದಿ, ರಾಹುಲ್, ಮನಮೋಹನ್, ಲಾಲೂ, ಬಾಬಾ ರಾಮ್ದೇವ್ ಇತ್ಯಾದಿಗಳ ತರಹದ ಹುಟ್ಟಾ “ಅನುಭವಿ” ಗಳಿಗೇ ಮತ ಹಾಕ್ತೀನಿ!! ನಿಜ, ಅನನುಭವಿ ಪ್ರಾಮಾಣಿಕ ವ್ಯಕ್ತಿಗಳಿಗಿಂತ ಅನುಭವಿ ಲೂಟಿಕೋರ ಭ್ರಷ್ಟರೇ ಆಡಳಿತ ನಡೆಸಲು ಯೋಗ್ಯರು!!!
>>”೧೩ ವರ್ಷಗಳ ಕಾಲ….ಅನುಭವ ಪಡೆದ ಪ್ರತಿಭೆಯ ಜೊತೆಗೆ ಭ್ರಷ್ಟಚಾರ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದವರನ್ನು ಇಟ್ಟುಕೊಂಡು ತುಲನೆ ಮಾಡುವುದೇ ಅಪ್ರಾಯೋಗಿಕವಲ್ಲವೇ?”
ಹೌದು ಹೌದು, ರಾಕೇಶರಂತೆ ಬುದ್ದಿವಂತರಿದ್ದವರು “ಭಿನ್ನ ಹಾದಿಯಿಡಿದು ೨೮ ಸೀಟು ಗೆದ್ದ” ‘ಆಪ್’ ಪಕ್ಷದ ಕೇಜ್ರಿವಾಲರಂಥಾ “ಅನನುಭವಿ”ಗಳನ್ನು ಏನಿದ್ದರೂ ಕೇವಲ ಇಂದಿರಾ-ನೆಹರೂ-ಗಾಂಧಿ ಕುಟುಂಬದ ಹೆಸರಲ್ಲಿ ಗೆದ್ದ ರಾಜೀವಗಾಂಧಿಯಂತವರಿಗೆ ಮಾತ್ರಾ ಹೋಲಿಸಬೇಕು! ಅದೇ ಮೋದಿ ಬೆಂಬಲಿಗರ ಮಟ್ಟಿಗೆ ಪ್ರಾಯೋಗಿಕ!!
೩)[ವಿಶನ್ ಇಲ್ಲ] “..ಗೊತ್ತು ಗುರಿಯಿಟ್ಟುಕೊಳ್ಳದೇ,ಅವಸರಕ್ಕೆ ಬಿದ್ದೂ ಎಲ್ಲವನ್ನೂ ಕೆಡವುತ್ತ, ಕೆಡವಿದ್ದನ್ನು ಕಟ್ಟುವ ಬಗ್ಗೆಯೇ ಚಿಂತನೆ ಇಲ್ಲದೇ ಹೋದರೆ “ಅರಜಾಕತೆ”ಯೇ ಉಂಟಾಗುವುದು…”
‘ಆಪ್’ ನ ಧ್ಯೇಯೋದ್ದೇಶಗಳು ಇಲ್ಲಿ (ಮತ್ತು ಇಲ್ಲಿ ಲಗತ್ತಿಸಿರುವ ಕೆಲವು ಇತರ ಲಿಂಕುಗಳಲ್ಲೂ ಸ್ಥೂಲವಾಗಿ) ನೀಡಲ್ಪಟ್ಟಿವೆ :
http://www.aamaadmiparty.org/page/our-vision
೪) “ದಿಟ್ಟ ಅಧಿಕಾರಿ ‘ಅಶೋಕ್ ಖೇಮ್ಕಾ’ ತಮ್ಮ ‘೨೦’ ವರ್ಷಗಳ ಸರ್ವೀಸಿನಲ್ಲಿ ‘೪೩‘ ಬಾರಿ ವರ್ಗಾವಣೆಗೊಳಗಾಗಿದ್ದಾರೆ…! ಆದರೆ, ಸೋಜಿಗವೆಂದರೆ ಕೇಜ್ರಿವಾಲ್ ಸರ್ಕಾರಿ ಹುದ್ದೆಯ ಕಾಲಾವಧಿಯ ಉದ್ದಕ್ಕೂ ದೆಹಲಿ ಬಿಟ್ಟು ಇನ್ನೆಲ್ಲಿಗೂ ವರ್ಗಾವಣೆಯಾಗಿಲ್ಲ ಎನ್ನುವುದು…! ಅದು ಹೇಗೆ ಸಾಧ್ಯವಾಗಿರಬಹುದು?”
ಅದಕ್ಕೆ ಉತ್ತರ ಸರಳ, ವರ್ಗಾವಣೆಯಾಗಲು ಅವರು ಅಧಿಕಾರದಲ್ಲಿದ್ದ ಅವಧಿಯೇ ಕಡಿಮೆ. ಅದನ್ನ ಕೇಜ್ರಿವಾಲರೇ ಕೆಲವು ಸಂದರ್ಶನಗಳಲ್ಲಿ ಅದೇ ಪ್ರಶ್ನೆಗೆ ಉತ್ತರಿಸುತ್ತಾ ಸ್ಪಷ್ಟಪಡಿಸಿದ್ದಾರೆ. ಅದಕ್ಕೂ ಮಿಕ್ಕಿ ಅವರು ಭ್ರಷ್ಟರೇ ಅನ್ನುವುದು ನಿಮಗೆ ನಿಸ್ಸಂಶಯವಿದ್ದರೆ ಅದನ್ನು ಸಾರ್ವಜನಿಕವಾಗಿ ಪುರಾವೆಗಳೊಂದಿಗೆ ಸಾಬೀತುಪಡಿಸಿ, ಆಗ ಅದನ್ನು ಒಪ್ಪಿಕೊಂಡು ಅವರನ್ನು ಸಕಾರಣವಾಗಿ ದ್ವೇಶಿಸೋಣ! ಅದನ್ನು ಬಿಟ್ಟು ಈ ರೀತಿ ಜನರಲ್ಲಿ ಬರೀ ಸಂಶಯದ ಬೀಜಗಳನ್ನು ಬಿತ್ತುವುದು ಮೊಸರಲ್ಲಿ ಕಲ್ಲಿದೆ ಅನ್ನುವುದು ಎಲ್ಲ ಒಂದೇ!
೫) “…ದೆಹಲಿ ರಾಜ್ಯದ ಸುಪರ್ದಿಗೆ ಪೋಲಿಸ್ ವ್ಯವಸ್ಥೆ ಬರಬೇಕು ಅನ್ನುವುದು ನ್ಯಾಯವಾದ ಬೇಡಿಕೆಯೇ ಸರಿ.ಆದರೆ,ಹಾಗಂತ ಮುಖ್ಯಮಂತ್ರಿಯೊಬ್ಬ ತನ್ನ ಸಚಿವರನ್ನು,ಶಾಸಕರನ್ನು ಕರೆದುಕೊಂಡು ಬಂದು ಧರಣಿ ಕೂರುವುದು ಸಂವಿಧಾನಕ್ಕೆಸಗುವ ಅಪಮಾನವಲ್ಲವೇ?…”
ಇದಕ್ಕೆ, ಮತ್ತೆ ನಿಮ್ಮ ಇನ್ನೂ ಹಲವು ಸಮಸ್ತ ಆಪಾದನೆಗಳಿಗೆ ಕೇಜ್ರಿವಾಲ ಲೇಟೆಸ್ಟಾಗಿ ಉತ್ತರಿಸಿದ್ದು ಇಲ್ಲಿದೆ, ದಯವಿಟ್ಟು ಪೂರ್ಣ ಸಂದರ್ಶನ ನೋಡಿ : http://www.youtube.com/watch?v=dd9AQeD9hxQ
>> “…ಕೇಂದ್ರವೆಂದರೆ ಕೊಡುವವ,ರಾಜ್ಯವೆಂದರೆ ಕೈಯೊಡ್ಡುವವ ಅನ್ನುವ ಮನಸ್ಥಿತಿ ತೊಲಗಬೇಕು.ಗುಜರಾತಿ ಅಸ್ಮಿತಾ ಅನ್ನುವ ಮೋದಿಯವರಿಗೆ ಪ್ರಾದೇಶಿಕತೆಗೆ ನೀಡಬೇಕಾದ ಗೌರವ ಮತ್ತು ಸ್ವಾತಂತ್ರ್ಯದ ಅರಿವಿದೆ…”
ಅಂದಹಾಗೆ ಅದೇ ಉದ್ದೇಶದ ಮಾತನ್ನು ಆಪ್ ಕೂಡಾ ಹೇಳುತ್ತೆ, ಮೇಲ್ಕಂಡ ರಾಜ್ದೀಪ್ಸರ್ದೇಸಾಯಿಯವರು ನಡೆಸಿದ ಸಂದರ್ಶನ ನೋಡಿ. ನಾವೂ ನೋಡೋಣ – ದಿಲ್ಲಿ ಪೋಲೀಸರ ಜುಟ್ಟನ್ನು ಭಾಜಪ ದಿಲ್ಲಿ ಸರ್ಕಾರಕ್ಕೇ ಕೊಡಲು ಬಯಸುತ್ತದೆಯೇ ಅಂತ.
೬) “…ಇಂತ ವಿಷಮ ಪರಿಸ್ಥಿತಿಯಲ್ಲಿ ಕೇಂದ್ರದಲ್ಲೊಂದು ಸದೃಢ ಮತ್ತು ಅನುಭವವು ಳ್ಳವರ ಸರ್ಕಾರವನ್ನು ಬಯಸುತ್ತಿರೋ ಅಥವಾ ಸಿನಕತನಕ್ಕೆ ಮತ್ತು ಕ್ರಾಂತಿಯ ಭ್ರಾಂತಿಗೆ ಸಿಲುಕಿ ಅತಂತ್ರ ಸರ್ಕಾರವೊಂದು ಬರುವಂತೆ ನಿರ್ಣಯ ತೆಗೆದುಕೊಳ್ಳುತ್ತಿರೋ?”
ಇದರರ್ಥ “ಜನಸಾಮಾನ್ಯನೀಗ ಅಸಹಾಯಕ, ಭ್ರಷ್ಟತನೇತ್ಯಾದಿಗಳೇನೇ ಇದ್ದರೂ ಆತನಿಗೀಗ ಮೋದಿಯ ತಂಡವೇಗತಿ!” ಅಂತ ತಾನೇ? ಇದೇ ಧಾಟಿಯ ಮಾತುಗಳು ನನಗೆ ಕಾಂಗೈ-ಬಿಜೇಪಿಗಳಿಂದ ಬಂದಾಗ ಬೆದರಿಕೆ-ಬ್ಲಾಕ್ಮೇಲ್ ತಂತ್ರ ಅಂತ ತಳ್ಳಿ ಹಾಕುತ್ತೇನೆ. ಆದರೆ ನಿಮ್ಮಂತ ಜನ ಸಾಮಾನ್ಯರ ಬಾಯಲ್ಲಿ ಈ ಮಾತುಗಳು ಬಂದಾಗ ಹನುಮಂತನಿಗೇ ತನ್ನ ಶೌರ್ಯ ಸಾಮಾರ್ಥ್ಯಗಳು ಮರೆತುಹೋಗಿ, ಅವುಗಳನ್ನು ಆತನಿಗೆ ಜಾಂಬವಂತ ನೆನಪುಮಾಡಿ ಪುಸಲಾಯಿಸಿ ಸಮುದ್ರೋಲ್ಲಂಘನಕ್ಕೆ ಪ್ರೇರೇಪಿಸಬೇಕಾದ ಪರಿಸ್ಥಿತಿಯ ಕಥೆ ನೆನಪಾಗುತ್ತೆ. 🙂
>> “…ನಿಮಗೂ ಭಾರತ ಮೊದಲಾ?”
ಹೌದು, ಅದಕ್ಕೇ ಮೋದಿಯನ್ನು ಕಂಡರೆ ನಮಗೆ ದಿಗಿಲು! ಭಾರತವೇ ಮೊದಲಾಗಿರುವ ಕಾರಣಕ್ಕೇ ನಮ್ಮ ಮತ ‘ಜನಸಾಮಾನ್ಯ ಪಕ್ಷ’ಕ್ಕೆ ಮಾತ್ರ.
ಕೊನೆಯದಾಗಿ, ರಾಕೇಶ್, ಕುಮಾರ್ ಮತ್ತು ಇತರ ಮೋದಿ ಸಮರ್ಥಕರೇ.. ನೀವು ಮೋದಿಯನ್ನು ಎಷ್ಟು ಬೇಕಾದರೂ ಸಮರ್ಥಿಸಿಕೊಳ್ಳಿ, ಆದರೆ ಏಕೆ ಕೇಜ್ರಿವಾಲರ ಮೇಲೆ ಸುಳ್ಳು ಆಪಾದನೆಗಳನ್ನು ಮಾಡುತ್ತ ‘ಆಪ್’ ಮೇಲೆ ಸಿನಿಕತನದಿಂದ ಅಪಪ್ರಚಾರ ಮಾಡಲೆತ್ನಿಸುತ್ತಿದ್ದೀರಿ?
[[ಅಣ್ಣಾ ಅವರ ಯಾವ ಆದರ್ಶಗಳಿಗೆ ‘ಆಪ್’ ತಿಲಾಂಜಲಿ ನೀಡಿದೆ? ]]
ಅಣ್ಣಾ ಹಜಾರೆ ಮತ್ತು ಕೇಜ್ರೀವಾಲ್ ಅವರ ನಡುವೆ ನಡೆದ ಮನಸ್ತಾಪ ಎಲ್ಲರಿಗೂ ತಿಳಿದ ಸಂಗತಿಯೇ.
ಅಣ್ಣಾ ಹಜಾರೆಯವರು ಬಹಿರಂಗವಾಗಿಯೇ, ತನ್ನ ಹೆಸರನ್ನು, ತನ್ನ ಆಂದೋಳನದ ಹೆಸರನ್ನು ಮತ್ತು ತನ್ನ ಆಂದೋಳನಕ್ಕೆ ಸಂಗ್ರಹವಾದ ಹಣವನ್ನು ಬಳಸಕೂಡದೆಂದು ಕೇಜ್ರೀವಾಲರಿಗೆ ತಿಳಿಸಿದ್ದಾರೆ.
ಜೊತೆಗೆ, ಇತ್ತೀಚೆಗೆ ಅಣ್ಣಾ ಹಜಾರೆಯವರು ಉಪವಾಸ ಸತ್ಯಾಗ್ರಹ ಕುಳಿತಾಗ, ಕೇಜ್ರೀವಾಲ್ ತಂಡದ ಗೋಪಾಲ್ ರೈ ಅವರ ಮೇಲೆ ಕೂಗಾಡಿದ್ದು, ಅವರಿಗೆ “Get Out” ಎಂದು ಹೇಳಿದ್ದೂ ಕೂಡಾ ಎಲ್ಲರಿಗೂ ತಿಳಿದದ್ದೇ.
ಅಣ್ಣಾ ಅವರ ಆದರ್ಶಗಳಿಗೆ ‘ಆಪ್’ ತಿಲಾಂಜಲಿ ನೀಡದಿದ್ದಿದ್ದರೆ, ಅಣ್ಣಾ ಹಜಾರೆಯವರಿಗೆ ಏತಕ್ಕಾಗಿ ಕೇಜ್ರೀವಾಲ್ ಮೇಲೆ ಇಷ್ಟೊಂದು ಕೋಪ?
“ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ” ಎನ್ನುವ ನಿಮ್ಮ ನಿಲುವನ್ನು ಈ ಕೆಳಗಿನ ನಿಮ್ಮ ಮಾತುಗಳಲ್ಲೇ ನೋಡಿ:
[[ಕೇಜ್ರಿವಾಲ್ ವಿರೋಧಿಸಲು ಅಣ್ಣಾ ಹೆಸರೆತ್ತುವ ನೀವುಗಳು ಅದೇ ಲೋಕಾಯುಕ್ತ ವಿರೋಧಿ ಮೋದಿಯನ್ನು ಬೆಂಬಲಿಸುತ್ತೀರಿ]]
[[ಅವರು ಭ್ರಷ್ಟರೇ ಅನ್ನುವುದು ನಿಮಗೆ ನಿಸ್ಸಂಶಯವಿದ್ದರೆ ಅದನ್ನು ಸಾರ್ವಜನಿಕವಾಗಿ ಪುರಾವೆಗಳೊಂದಿಗೆ ಸಾಬೀತುಪಡಿಸಿ]]
ಮೋದಿಯವರಿಗೆ ಒಂದು ನೀತಿ, ಕೆಜ್ರೀವಾಲರಿಗೇ ಮತ್ತೊಂದು ನೀತಿ!! ಏಕೆ ಹೀಗೆ!?
[[ಇದರರ್ಥ “ಜನಸಾಮಾನ್ಯನೀಗ ಅಸಹಾಯಕ, ಭ್ರಷ್ಟತನೇತ್ಯಾದಿಗಳೇನೇ ಇದ್ದರೂ ಆತನಿಗೀಗ ಮೋದಿಯ ತಂಡವೇಗತಿ]]
ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೆ, ಸರಕಾರಕ್ಕೆ ಭದ್ರತೆ ಇರುತ್ತದೆ.
ಆ ರೀತಿ ಸರಕಾರದಲ್ಲಿ ಭದ್ರತೆ ಇದ್ದರೆ ಮಾತ್ರ, ಒಂದು ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ.
ಸಮ್ಮಿಶ್ರ ಸರಕಾರಗಳಿಂದ ಉಂಟಾಗುವ ಅಭದ್ರತೆಗೆ ಕಳೆದ 20 ವರ್ಷಗಳಿಂದ ನಾವೇ ಸಾಕ್ಷಿಯಾಗಿದ್ದೇವೆ.
‘ಆಪ್’ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ನಿಲ್ಲುತ್ತಿರುವುದು ಕೇವಲ 100 ಸ್ಥಾನಗಳಲ್ಲಿ.
ಅಂದರೆ, ಅವರು ಬಹುಮತ ಪಡೆಯುವ ಯೋಚನೆಯನ್ನೂ ಮಾಡುತ್ತಿಲ್ಲ. ಹಾಗಿದ್ದರೆ, ಅವರ ಉದ್ದೇಶವೇನು?
ಕಳೆದ 10 ವರ್ಷಗಳಿಂದ ಸರಕಾರ ಮಾಡಿಕೊಂಡು ಭ್ರಷ್ಟಾಚಾರದ ಬ್ರಹ್ಮರಾಕ್ಷಸನಾಗಿರುವ ಯುಪಿಎ ಸರಕಾರವನ್ನು ತೊಲಗಿಸಲು ಎಲ್ಲಾ ವಿರೋಧ ಪಕ್ಷಗಳೂ ಒಂದಾಗಬೇಕು. ಅದನ್ನು ಬಿಟ್ಟು, ತನಗೆ ಸಿಕ್ಕಿರುವ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ‘ಆಪ್’ ಚುನಾವಣೆಗೆ ಹೆಜ್ಜೆಯಿಡುತ್ತಿದೆ. ಆದರೆ, ಇವರ ಈ ಪ್ರಯತ್ನದಿಂದ ಲಾಭವಾಗುವುದು ಯುಪಿಎ ಕೂಟಕ್ಕೆ ತಾನೇ? ಅಂದರೆ, ‘ಆಪ್’ ಸಹಾಯ ಮಾಡುವುದು ಭ್ರಷ್ಟ ಯುಪಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಕ್ಕೆ ಮಾತ್ರ ಎಂದಾಯಿತಲ್ಲವೇ!?
ದೆಹಲಿಯಲ್ಲಿಯೂ ‘ಆಪ್’ ಭ್ರಷ್ಟ ಕಾಂಗ್ರೆಸ್^ನೊಂದಿಗೇ ಕೈಜೋಡಿಸಿತು. ಲೋಕಸಭಾ ಚುನಾವಣೆಯ ನಂತರವೂ, ಅದು ಇದನ್ನೇ ಮಾಡಬಹುದು ಅಲ್ಲವೇ? ಅಂದರೆ, ‘ಆಪ್’ನ ಸಹಕಾರದೊಂದಿಗೆ ಯುಪಿಎ ಮತ್ತೆ ಅಧಿಕಾರಕ್ಕೆ ಬರಲು ಹವಣಿಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಅಲ್ಲವೇ?
’ಸಾಮಾನ್ಯ’ರೆ,
“ಸಾರ್ವಜನಿಕವಾಗಿ ಪುರಾವೆಗಳೊಂದಿಗೆ ಸಾಬೀತುಪಡಿಸಿ, ಆಗ ಅದನ್ನು ಒಪ್ಪಿಕೊಂಡು ಅವರನ್ನು ಸಕಾರಣವಾಗಿ ದ್ವೇಶಿಸೋಣ” ಎನ್ನುವ ನಿಮ್ಮ ಒಂದು ಮಾತಿಗೋಸ್ಕರ ಈ ಪ್ರತಿಕ್ರಿಯೆ ಕೊಡುತ್ತಿದ್ದೇನೆ. ಆದರೆ ನನ್ನ ಉದ್ದೇಶ ಅಂತಿಮವಾಗಿ ನೀವು ಕ್ರೇಜಿವಾಲ್ ಅನ್ನು ದ್ವೇಶಿಸಬೇಕು ಎನ್ನುವುದಲ್ಲ. ಸತ್ಯವನ್ನು ತಿಳಿಯುವುದು, ಪರಿಸ್ಥಿತಿಯನ್ನು ಅರಿಯುವುದು ಹಾಗು ಇರುವ ಮಾಹಿತಿಯನ್ನು ಕೂಲಂಕುಶವಾಗಿ ಅಧ್ಯಯನ ಮಾಡುವುದೆ ನನ್ನ ವಿಚಾರ.
ಈಗ ವಿಷ್ಯಕ್ಕೆ ಬರ್ತೀನಿ
ಸದ್ಯಕ್ಕೆ ಒಂದೇ ವಿಚಾರ ತೊಗೊಂಡು ಅದನ್ನ ತೀರ್ಮಾನಿಸೋಣ ಆನಂತರ ಮತ್ತೊಂದು…
ಎತ್ತಂಗಡಿ ವಿಚಾರದ ಬಗ್ಗೆ.
ನೀವು ಹೇಳೀರುವ ಮಾತು “ಅಧಿಕಾರದಲ್ಲಿದ್ದ ಅವಧಿಯೇ ಕಡಿಮೆ.” ಈ ಮಾತಿನ ಹಿಂದೆ ಮಾಹಿತಿಯ ಕೊರತೆಯಿದೆ.
ಇವರು ತಮ್ಮ ಸರ್ಕಾರಿ ಕೆಲಸ ವಹಿಸಿಕೊಂಡದ್ದು ೧೯೯೫-೨೦೦೬ ಒಟ್ಟು ೧೧ ವರ್ಷಗಳು. “ಸ್ಟಡಿ” ರಜೆ ಹಾಕಿದ್ದು ೩-೪ ವರ್ಷ… ಮಿಕ್ಕ ವರ್ಷದ ಲೆಕ್ಕ ಬೇಡವೆ?
ರಿಸೈನ್ ಮಾಡದೆ ಇದ್ದಿದ್ದರೆ ರಿಟೈರ್ ಆಗುವಾಗ ಅವರಿಗೆ ೨-೩ ವರ್ಷ ಹೆಚ್ಚಿಗೆ ದುಡಿಯಲು ಬಿಡುತ್ತಿದ್ದರೆ ಅಥವ ಅವರ ಅನುಭವ ೨-೩ ಕಮ್ಮಿ ಇದೆ ಎಂದು ಸರ್ಟಿಫಿಕೇಟ್ ಅಲ್ಲಿ ನಮೂದಾಗಿರುತ್ತಿತ್ತೆ?
ಕೆಳಗಿರುವ ಸರ್ಕಾರದ ಕೊಂಡಿ ಓದಿ ಇವರ ಹುದ್ದೆಗೆ ತಕ್ಕಂತೆ ಪ್ರತಿ ೪-೫ ವರ್ಷಕ್ಕೆ ಇವರು ಟ್ರಾನ್ಸ್ಫಾರ್ ಆಗಲೇ ಬೇಕಿತ್ತು. ಲೆಕ್ಕಕ್ಕೆ ಎರಡು ಬಾರಿ ಆಗಬೇಕಿತ್ತು, ಕನಿಷ್ಟ ಒಮ್ಮೆಯಾದರು ಬೇಡವೆ?? ಆದರ ಇವರಿಗೆ ಯಾರ “ಹಸ್ತ”ದ ಕೃಪೆ ಇತ್ತೊ ಯಾರು ಅಲ್ಲಾಡಿಸಲು ಆಗದಂತೆ ಅಲ್ಲೆ ಇದ್ದರು.
ನೀವು ಅವರ “ಸ್ವರಾಜ್” ಪುಸ್ತಕ ಓದಿದರೆ, ಅವರೆ ಬರೆದಂತೆ ಯಾವುದೊ ಕಂಪನಿಯ ವಿರುದ್ಧ ಕ್ರಮ ತೆಗೆದು ಕೊಂಡಿದ್ದಕ್ಕೆ ಅವರ ಸೀನಿಯರ್ ಆಫೀಸರನ್ನು ಕಂಪನಿಯವರು ಎತ್ತಂಗಡಿ ಮಾಡಿಸಿದರು. ಇವರು ಅಷ್ಟು ನಿಷ್ಟಾವಂತರಾಗಿದ್ದರೆ ಒಮ್ಮೆಯಾದರು ಇವರನ್ನು ಎತ್ತಂಗಡಿ ಮಾಡಿಸುತ್ತಿರಲಿಲ್ಲ್ವವೆ?
ಖೇಮ್ಖರನ್ನು ೨೦ ವರ್ಷದಲ್ಲಿ ಬೇಕಾಬಿಟ್ಟಿಯಾಗಿ ೪೩ ಬಾರಿ ಎತ್ತಂಗಡಿ ಮಾಡಿಸಿದರ ಕಾರಣ ಅವರ ಕ್ರಮ ಹಾಗಿರುತ್ತಿತ್ತು ಅಷ್ಟೆ. ಮಾಡಿದ್ದುಣ್ಣೊ ಮಾರಾಯ ಎನ್ನುವ ಹಾಗೆ..
Click to access transfer-policy08.pdf
ನನ್ನ ಪ್ರತಿಕ್ರಿಯೆಗೆ ಬಾರದ ಉತ್ತರ!!! ಕೆಳಗಿನ ಕೊಂಡಿಯಲ್ಲಿ.. ಕೊನೆಯ ಕಾಮೆಂಟು ನನ್ನದೆ
http://think-out-of-the-dabba.blogspot.sg/2013/09/aam-aadmi-party-and-kejriwal-all.html
ಕೊನೆಯ ಒಂದು ಮಾತು ಸತ್ಯ ತಿಳಿಯುವ ಆಸಕ್ತಿಯಿದ್ದರೆ ಇರುವ ಮಾಹಿತಿ ಸಂಗ್ರಹಿಸಿ ನೀವೆ ಪರಾಮರ್ಷಿಸಿ, ತಿಳಿಯುತ್ತದೆ.
ನಾನಿಲ್ಲಿ ಕ್ರೇಜಿವಾಲ್ ಕೆಟ್ಟವನು ಎನ್ನುತ್ತಿಲ್ಲ ಆದರೆ ಎಲ್ಲರು ತಿಳಿದಿರುವಂತೆ ಅವನೇನು ಮೇಲಿಂದ ಉದುರಿಲ್ಲ, ಅಥವಾ ಹಾಲು ಮನಸ್ಸಿನ ಹೃದಯವಂತನು ಅಲ್ಲಾ ಅಥವಾ ಸಾಮಾನ್ಯ ಪ್ರಜೆ ಅಂತ ಮುಖವಾಡ ಇಟ್ಟು ಕೊಂಡು ಗೊತ್ತು ಗುರಿಯಿಲ್ಲದೆ ಎಲ್ಲದರ ವಿರುದ್ಢವೂ, ಎಲ್ಲರ ವಿರುದ್ಢವೂ ಹರಿಹಾಯುವುದು ಯಾವ ಪ್ರಜ್ನಾವಂತ ಪ್ರಜೆ ಮಾಡುವ ಕೆಲಸವಲ್ಲ.. ಹಾಗಾಗಿ ಅವರು ಎಷ್ಟೆ ಒಳ್ಳೆಯವರಾಗಿದ್ದರು ಅವರನ್ನು ಜನರ ಅದರಲ್ಲು ಅರ್ಧ ಬರ್ಧ ತಿಳಿದ “ಓದಿದ್” ಬುದ್ಧಿವಂತರು ಹಾದಿ ತಪ್ಪುತ್ತಿದ್ದಾರೆ ಎನ್ನುವುದು ನನ್ನ ಇಂಗಿತ.
ಅವರ ಸ್ವರಾಜ್ ಪುಸ್ತಕ್ವನ್ನು ಓದುವ ಕಷ್ಟ ತೆಗೆದುಕೊಳ್ಳಿ..ಇಷ್ಟು ತಿಳಿಸಿದರೂ ನಿಮಗೆ ಅರ್ಥವಾಗಲಿಲ್ಲವೆಂದರೆ ಚರ್ಚೆ ಮುಂದುವರೆಸೋಣ.
೧. ೧೮ ತಿಂಗಳ ಓದು ರಜ ತೆಗೆದುಕೊಂಡು ಏನು ಓದಿದರು ಎಂದು ಪ್ರಶ್ನೆ ಮಾಡುತ್ತಿಲ್ಲ,
೨. ಕೆಲಸವೆ ಮಾಡದೆ ೨೪ ತಿಂಗಳು ಸರ್ಕಾರದಿಂದ ಸಂಬಳ ಎಣಿಸಬೇಕಾದಾಗ honesty,integrity ಎಲ್ಲಿ ಹೋಗಿತ್ತು? ಆಗ ಲಜ್ಜೆ ಇಲ್ಲದೆ ಇದ್ದರೆ? ಅದು ಅವರ ಪಾಲಿನದೆ ಆಗಿದ್ದರೆ ರಿಸೈನ್ ಮಾಡಿ ಬಂದ ಮೇಲೆ ನಾನು ಹಾಗೆ ಇರಬಹುದಿತ್ತು , ಹೀಗೆ ಇರಬಹುದಿತ್ತು ಎನ್ನುವ ಭಂಡ ಮಾತುಗಳೇಕೆ?
ವಿಷಯ ಅರಿತರೆ ಸಾಕು ಕ್ರೇಜಿವಾಲ್ ಅನ್ನು ದ್ವೇಶಿಸುವ ಅಗತ್ಯ ಇಲ್ಲ ಹಾಗಂತೆ ಸಾಮಾನ್ಯ ಪ್ರಜೆ ಹೆಸರಿನಲ್ಲಿ ಬೆಂಬಲಿಸುವುದನ್ನು ಬಿಡೋಣ.
ದೇಶದ ಪ್ರಗತಿಯ ಹಾದಿ ಹಿಡಿಯೋಣ..
[[“ಬ್ರಾಹ್ಮಣರನ್ನು ಕೇಳುವವರಾರು??” oh! Who’s targeting them? Are they facing even 1/10 of hardship violence and discrimination that dalits are facing even today??]]
ದಲಿತರಿಗೆ ಇಂದಿಗೂ ಜಾತೀಯತೆಯ ಕಾರಣಗಳಿಂದಾಗಿ ಅನೇಕ ರೀತಿಯ ಕಷ್ಟಗಳಾಗುತ್ತಿದೆ ಎನ್ನುವುದು ನಿಜ. ಸ್ವತಂತ್ರ ಭಾರತದಲ್ಲಿ ಈ ರೀತಿ ಆಗುತ್ತಿರುವುದು ಪ್ರತಿಯೊಬ್ಬ ಭಾರತೀಯನೂ ತಲೆತಗ್ಗಿಸಬೇಕಾದ ಸಂಗತಿ! ಜಾತೀಯತೆ ತೊಲಗಬೇಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಆದರೆ, ದಲಿತರಿಗೆ ಆಗುತ್ತಿರುವ ತೊಂದರೆಗಳಿಗೆಲ್ಲಾ ಇಡೀ ಬ್ರಾಹ್ಮಣ ಸಮಾಜವನ್ನೇ ಧೂಷಿಸುವುದೇತಕ್ಕೆ? ಮತ್ತು ಪ್ರತಿಯೊಂದರಲ್ಲೂ ಜಾತಿಯನ್ನೇ ನೋಡುವುದರಿಂದ (ಉದಾಹರಣೆಗೆ, ನೀವು ಸಂಗೀತಕ್ಕೆ ಸಂಬಂಧಪಟ್ಟ ಚರ್ಚೆಯಲ್ಲೂ ಜಾತಿಯನ್ನು ಹುಡುಕಿದ್ದು) ಈ ಸಮಸ್ಯೆ ಪರಿಹಾರವಾಗುವುದೇ? ಜಾತಿಯ ಕುರಿತಾಗಿ ಚಿಂತಿಸುವುದನ್ನು ಕಡಿಮೆ ಮಾಡಿ, ನಾವೆಲ್ಲರೂ ಭಾರತೀಯರು ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳುವುದರಿಂದಲ್ಲವೇ ಈ ಸಮಸ್ಯೆ ಸಂಪೂರ್ಣವಾಗಿ ತೊಲಗುವುದು?
ನೀವು ತೋರಿಸುತ್ತಿರುವ “ಬ್ರಾಹ್ಮಣ ಧ್ವೇಷ”ವೆಂಬುದು ಒಂದು ಬೆಂಕಿಯಿದ್ದಂತೆ. ಜಾತಿಯನ್ನು ಧ್ವೇಷಿಸುವುದರಿಂದ, ಆ ಬೆಂಕಿಯು ಹೆಚ್ಚುತ್ತದೆ ಎನ್ನುವುದು ಎಲ್ಲರ ಅನುಭವ. ಆಮ್ಲಜನಕದ ಸಿಗದಂತೆ ಮಾಡಿಬಿಟ್ಟರೆ, ಬೆಂಕಿ ತಾನಾಗಿಯೇ ನಂದಿ ಹೋಗುತ್ತದೆ. “ಜಾತೀಯ ಧ್ವೇಷವೆಂಬ ಬೆಂಕಿಗೆ” ಪ್ರತಿಯೊಂದು ವಿಷಯವನ್ನೂ ಜಾತೀಯ ಕನ್ನಡಕ ಹಾಕಿಕೊಂಡು ನೋಡುವುದೇ ಆಮ್ಲಜನಕ. ನೀವು ಜಾತಿಯ ಕುರಿತು ಮಾತನಾಡಿದಷ್ಟೂ, ಮತ್ತೊಂದು ಜಾತಿಯನ್ನು ಧ್ವೇಷಿಸಿದಷ್ಟೂ ಆ ಬೆಂಕಿ ಹೆಚ್ಚುತ್ತಲೇ ಹೋಗುತ್ತದೆ. ನಿಮ್ಮ ಮನಸ್ಸಿನಿಂದ ಜಾತಿ ಮತ್ತು ಜಾತಿಧ್ವೇಷವನ್ನು ತೆಗೆದು ಹಾಕಿ; ಆಗ ಜಾತಿಧ್ವೇಷದ ಬೆಂಕಿ ಆರಿಹೋಗುವುದನ್ನು ನೀವೇ ನೋಡುವಿರಿ.
“ನಿಮ್ಮ ಮನಸ್ಸಿನಿಂದ ಜಾತಿ ಮತ್ತು ಜಾತಿಧ್ವೇಷವನ್ನು ತೆಗೆದು ಹಾಕಿ; ಆಗ ಜಾತಿಧ್ವೇಷದ ಬೆಂಕಿ ಆರಿಹೋಗುವುದನ್ನು ನೀವೇ ನೋಡುವಿರಿ.” ನಾವು ಶರಣರು. ಬಸವಣ್ಣನವರ ಕಾಲದಲ್ಲೇ ಜಾತಿಯನ್ನು ಧಿಕ್ಕರಿಸಿ ಜಾತ್ಯತೀತ ಸಮಾಜವನ್ನು ಕಟ್ಟಲು ಹೊರಟವರು. ಎಲ್ಲರನ್ನೂ ಸಮಾನರೆಂದು ನಂಬಿ ಬದುಕುತ್ತಿರುವವರು. ಜಾತಿವಾದದ ವಿರುದ್ಧ ಇಂದೂ ಹೊರಾಡುತ್ತಿದ್ದೇವೆ. ನಮ್ಮಂತಹ ಶರಣರಿಗೆ ಬಿಟ್ಟಿ ಉಪದೇಶ ಕೊಡುವುದನ್ನು ನಿಲ್ಲಿಸಿ; ನಿಲುಮೆಯಲ್ಲಿ ಬ್ರಾಹ್ಮಣ್ಯದ ವಿರುದ್ಧ ಹೊರಾಟ ನಡೆಸುತ್ತಿರುವ ನಮ್ಮ ಬೆಂಬಲಕ್ಕೆ ನಿಲ್ಲಿ.
ನಿಮ್ಮ “ಬ್ರಾಹ್ಮಣ್ಯದ ವಿರುದ್ಧದ ಹೋರಾಟ” ಎನ್ನುವುದೇ ಜಾತೀಯತೆಯ ವಿಷಬೀಜವನ್ನು ಹೊಂದಿದೆ ಎಂದು ನನಗನ್ನಿಸುತ್ತಿದೆ!
‘ಬ್ರಾಹ್ಮಣ್ಯ’ ಎನ್ನುವ ಪದದ ಆಯ್ಕೆಯೇ ನಿಮ್ಮ ಮನಸ್ಸಿನಲ್ಲಿರುವುದು “ಬ್ರಾಹ್ಮಣ ಎನ್ನುವ ಜಾತಿಯ ಕುರಿತಾಗಿ ಧ್ವೇಷವಿದೆ” ಎನ್ನುವುದರ ಸಂಕೇತ. ಇಲ್ಲದಿದ್ದಿದ್ದರೆ, ಬ್ರಾಹ್ಮಣ ಎನ್ನುವ ಪದದಿಂದಲೇ ಹುಟ್ಟಿರುವ ‘ಬ್ರಾಹ್ಮಣ್ಯ’ ಎನ್ನುವ ಪದವನ್ನು ನೀವು ಬಳಸುತ್ತಿರಲಿಲ್ಲ. ಜೊತೆಗೆ, ‘ಬ್ರಾಹ್ಮಣ್ಯ’ ಎನ್ನುವ ಪದವು ‘ಉದಾತ್ತ’ ಎನ್ನುವ ಅರ್ಥದಲ್ಲೇ ಎಲ್ಲ ಸಾಹಿತ್ಯಗಳಲ್ಲಿ ಬಳಕೆಯಾಗಿರುವುದು. ಹೀಗಿರುವಾಗ, ನೀವು ‘ಬ್ರಾಹ್ಮಣ್ಯ’ ಎನ್ನುವ ಪದವನ್ನು ‘ಕೀಳು’ ಎನ್ನುವ ಅರ್ಥದಲ್ಲಿ ಬಳಸಿರುವ ಉದ್ದೇಶವೇನು?
ನಿಮಗೆ ನಿಜಕ್ಕೂ ಅಸ್ಪೃಷ್ಯತೆಯಂತಹ ಕೆಲವು ಆಚರಣೆಗಳು ಸಮಾಜದಿಂದ ನಿರ್ಮೂಲನೆಗೊಳ್ಳಬೇಕೆಂಬ ಉದ್ದೇಶವಿದ್ದಿದ್ದಲ್ಲಿ, ಆ ರೀತಿಯ ಆಚರಣೆಗಳ ವಿರುದ್ಧವೇ ಹೋರಾಡುತ್ತಿದ್ದಿರಿ. ಆದರೆ, ನೀವು ಯಾವುದೇ ಆಚರಣೆಯ ವಿರುದ್ಧ ಹೋರಾಡುತ್ತಿರುವುದು ನನಗೆಲ್ಲೂ ಕಾಣುತ್ತಿಲ್ಲ. ಬದಲಾಗಿ ‘ಬ್ರಾಹ್ಮಣ್ಯ’ ಎನ್ನುವ ಪದವನ್ನು ಹಿಡಿದು, ಒಂದು ಜಾತಿಯ ವಿರುದ್ಧವೇ ಹೋರಾಡುತ್ತಿರುವುದು ಎಲ್ಲರಿಗೂ ಗೋಚರಿಸುತ್ತಿರುವ ಸಂಗತಿ.
ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದಲ್ಲಿ, ನಿಮ್ಮ ಮನಸ್ಸಿನಲ್ಲಿ ಜಾತೀಯತೆ ಮತ್ತು ಜಾತಿಧ್ವೇಷ ಇಲ್ಲದಿದ್ದಲ್ಲಿ, ದಯವಿಟ್ಟು ‘ಬ್ರಾಹ್ಮಣ್ಯ’ ಪದವನ್ನೇಕೆ ಹಿಡಿದಿರುವಿರಿ, ನೀವು ನೀಡುತ್ತಿರುವಂತಹ ‘ಕೀಳು’ ಅರ್ಥ ಯಾವ ಸಾಹಿತ್ಯದಲ್ಲಿ ಬಳಕೆಯಾಗಿದೆ, ಇತ್ಯಾದಿಗಳನ್ನು ವಿವರಿಸಿ.
ನೋಡಿ: http://kannada.yahoo.com/%E0%B2%A8%E0%B2%B5-%E0%B2%AC-%E0%B2%B0-%E0%B2%B9-%E0%B2%AE%E0%B2%A3-%E0%B2%AF-%E0%B2%AC%E0%B2%B9-%E0%B2%A6-080423066.html
“ಬ್ರಾಹ್ಮಣ್ಯ ಎಂದರೆ ಬ್ರಾಹ್ಮಣರಲ್ಲ. ಸನಾತನ ಪದ್ಧತಿ, ಜೋತಿಷ್ಯ, ಪೌರೋಹಿತ್ಯಕ್ಕೆ ಜೋತುಬೀಳುವುದೇ ಬ್ರಾಹ್ಮಣ್ಯ. ಹೆಚ್ಚು ಶಿಕ್ಷಣವಂತರಾದ ಬ್ರಾಹ್ಮಣರೇತರ ದಲಿತ, ಶೋಷಿತ, ಹಿಂದುಳಿತ ವರ್ಗಗಳ ವ್ಯಕ್ತಿಗಳೂ ಬ್ರಾಹ್ಮಣ್ಯಕ್ಕೆ ಜೋತು ಬಿದ್ದು ನವ ಬ್ರಾಹ್ಮಣರಾಗುತ್ತಿರುವುದು ಬಹುದೊಡ್ಡ ದುರಂತ.”
“ದೇಶದಲ್ಲಿ ಇಂದು ಹೆಜ್ಜೆಗೊಂದು ದೇವಸ್ಥಾನವಿದೆ. ದೇವರು, ಪ್ರಾಣಿ, ಪಕ್ಷಿಗಳಿಗಿರುವ ಗೌರವ ಮನುಷ್ಯರಿಗೆ ಇಲ್ಲವಾಗಿದೆ. ಇಲ್ಲಿರುವ ಸಾಮಾಜಿಕ ವ್ಯವಸ್ಥೆ, ಅತಿಯಾದ ಜಾತಿ ಪದ್ಧತಿಯಿಂದ ದೇಶ ವಿಘಟನೆಯತ್ತ ತೆರಳುವಂತೆ ಮಾಡಿದೆ. ಇಲ್ಲಿನ ಸನಾತನ ವ್ಯವಸ್ಥೆ ಅಪಾಯಕಾರಿಯಾಗಿದ್ದು, ಕೇವಲ ಬ್ರಾಹ್ಮಣ್ಯವನ್ನು ಬಿಂಬಿಸುತ್ತಿದೆ.”
“ಬ್ರಾಹ್ಮಣ್ಯ ಎನ್ನುವ ಪದ ಅಕ್ಟೋಪಸ್ ಇದ್ದಂತೆ. ಇದು ಇಡೀ ಸಮಾಜವನ್ನು ಆಕ್ರಮಿಸಿಕೊಳ್ಳುತ್ತಿದೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ.”
“ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳು ಸಹ ಬಂಡವಾಳಶಾಹಿಗಳ ಹಿಡಿತದಲ್ಲಿದ್ದು, ಅವು ಇಂದು ಬ್ರಾಹ್ಮಣ್ಯದ ಮೂಲಸೆಲೆಯಾದ ಮೂಢನಂಬಿಕೆಯನ್ನು ಜನರಲ್ಲಿ ಬಿತ್ತುತ್ತಿರುವುದು ದೊಡ್ಡ ಅಪಾಯಕಾರಿ. ಬಹುತೇಕ ಮಾಧ್ಯಮಗಳು ಬ್ರಾಹ್ಮಣ್ಯದ ಕೈಯಲ್ಲಿವೆ.”
ನೋಡಿ: http://ladaiprakashanabasu.blogspot.in/2012/11/blog-post_4299.html
“ಬ್ರಾಹ್ಮಣ್ಯ ವೆನ್ನೋದು ಜಾತಿಯಲ್ಲ…ಅದೊಂದು ಚಿಂತನೆ.”
ನೋಡಿ: http://www.istartha.com/ishta/%E0%B2%AA%E0%B2%A6/%E0%B2%AC%E0%B3%8D%E0%B2%B0%E0%B2%BE%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF
“ತಾವು ಮತ್ತು ತಾವು ಹೇಳುತ್ತಿರುವುದನ್ನು ಶ್ರೇಷ್ಠತೆ ಎಂದು ತಿರುಗಿ ಪ್ರಶ್ನಿಸದೇ ಒಪ್ಪಿಕೊಳ್ಳಬೇಕು ಎಂಬುದರ ವ್ಯವಸ್ಥಿತ ಪ್ರತಿಪಾದನೆ.”
ನೋಡಿ: http://communalharmony.wordpress.com/2013/12/23/manku-boomodi-hitlerina-hejjejaadugalu-book-release-on-29th-december-2013-in-bangalore/
“ಪುರಾಣದ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಸುಳ್ಳು ಕಥೆಗಳನ್ನು, ವದಂತಿಗಳನ್ನು, ಭ್ರಮೆಗಳನ್ನು ಸೃಷ್ಟಿ ಮಾಡುವ ಕಪಟವು ಬ್ರಾಹ್ಮಣ್ಯದ ತಂತ್ರ. ಸುಳ್ಳೇ ಅದರ ಸಾಧನ. ವಿಭಜನೆ ಅದರ ತಂತ್ರ. ವಂಚನೆ ಅದರ ಸಾರ. ಮೋದಿ ತರುತ್ತಿರುವ ನಿರಂಕುಶ ಬಂಡವಾಳಶಾಹಿ ಆಡಳಿತವನ್ನು ನಿರ್ದೇಶಿಸುತ್ತಿರುವುದು ಅದೇ ಬ್ರಾಹ್ಮಣ್ಯ. ಆದರೆ ಇಂದಿನ ಬ್ರಾಹ್ಮಣ್ಯದ ರೂಪ ಬೇರೆಯಾಗಿದೆ. ಅಂದಿನ ಬ್ರಾಹ್ಮಣ್ಯ ಊಳಿಗಮಾನ್ಯ ಶಕ್ತಿಗಳ ಹಿತಕಾಯ್ದರೆ ಇಂದಿನ ಬ್ರಾಹ್ಮಣ್ಯ ಬಂಡವಾಳಶಾಹಿಗಳ ಹಿತ ಕಾಯುತ್ತಿದೆ. ಅಂದಿನ ಬ್ರಾಹ್ಮಣ್ಯ ದೇವಲೋಕದಲ್ಲಿರುವ ಸ್ವರ್ಗದ ಭ್ರಮೆಯನ್ನು ಬಿತ್ತಿದರೆ ಇಂದಿನ ಬ್ರಾಹ್ಮಣ್ಯ ಸಾಮ್ರಾಜ್ಯಶಾಹಿ ಲೋಕದಲ್ಲಿರುವ ಅಭಿವೃದ್ಧಿ ಎಂಬ ಮರೀಚಿಕೆಯನ್ನು ಮುಂದೆ ತರುತ್ತಿದೆ. ಅಂದಿನ ಬ್ರಾಹ್ಮಣ್ಯ ಜಾತಿಜಾತಿಗಳನ್ನ ಎತ್ತಿಕಟ್ಟಿದರೆ ಇಂದಿನ ಆರ್ಎಸ್ಎಸ್ ಬ್ರಾಹ್ಮಣ್ಯ ಕೋಮುವಾದವನ್ನು ಎತ್ತಿಕಟ್ಟುತ್ತಿದೆ. ಶೂದ್ರ ಹಿನ್ನೆಲೆಯಿಂದ ಬಂದು ನವಬ್ರಾಹ್ಮಣ್ಯವನ್ನು ಮೈಗೂಡಿಸಿಕೊಂಡು, ಕೋಮುವಾದವನ್ನು ಬೆಳೆಸಿಕೊಂಡು, ನಿರಂಕುಶತ್ವವನ್ನು ಧ್ಯೇಯವಾಗಿಸಿಕೊಂಡ ಮೋದಿ ಬಂಡವಾಳಶಾಹಿ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾನೆ. ನವಉದಾರವಾದ + ಫ್ಯಾಸಿಸ್ಟ್ವಾದ + ಬ್ರಾಹ್ಮಣವಾದ = ಮೋದಿತ್ವವಾದವಾಗಿದೆ.”
ನೋಡಿ: https://www.facebook.com/KukkajeJamahat?filter=1
“ಒಂದು ಕಾಲದಲ್ಲಿ ಒಂದು ವರ್ಣವಾಗಿದ್ದ ಬ್ರಾಹ್ಮಣ್ಯ,ಇಂದು ಎಲ್ಲ ಜಾತಿ ,ಧರ್ಮಕ್ಕೆ ಅಂಟಿಕೊಂಡಿದೆ.ಬ್ರಾಹ್ಮಣ್ಯ ಅನ್ನುವುದು ಅಧಿಕಾರಶಾಹಿತ್ವ ಮತ್ತು ಸಾಮ್ರಾಜ್ಯಶಾಹಿತ್ವದ ಇನ್ನೊಂದು ಮುಖ.ಇದು ತೊಲಗಿದರೆ ಮಾತ್ರ ಸಮಾಜ ,ದೇಶ ಬೆಳಗಲು ಸಾದ್ಯ.”
Please Note: Your comment is awaiting moderation.
“ಬ್ರಾಹ್ಮಣ್ಯ ಎಂದರೆ ಬ್ರಾಹ್ಮಣರಲ್ಲ. ಸನಾತನ ಪದ್ಧತಿ, ಜೋತಿಷ್ಯ, ಪೌರೋಹಿತ್ಯಕ್ಕೆ ಜೋತುಬೀಳುವುದೇ ಬ್ರಾಹ್ಮಣ್ಯ. ಹೆಚ್ಚು ಶಿಕ್ಷಣವಂತರಾದ ಬ್ರಾಹ್ಮಣರೇತರ ದಲಿತ, ಶೋಷಿತ, ಹಿಂದುಳಿತ ವರ್ಗಗಳ ವ್ಯಕ್ತಿಗಳೂ ಬ್ರಾಹ್ಮಣ್ಯಕ್ಕೆ ಜೋತು ಬಿದ್ದು ನವ ಬ್ರಾಹ್ಮಣರಾಗುತ್ತಿರುವುದು ಬಹುದೊಡ್ಡ ದುರಂತ.”
“ದೇಶದಲ್ಲಿ ಇಂದು ಹೆಜ್ಜೆಗೊಂದು ದೇವಸ್ಥಾನವಿದೆ. ದೇವರು, ಪ್ರಾಣಿ, ಪಕ್ಷಿಗಳಿಗಿರುವ ಗೌರವ ಮನುಷ್ಯರಿಗೆ ಇಲ್ಲವಾಗಿದೆ. ಇಲ್ಲಿರುವ ಸಾಮಾಜಿಕ ವ್ಯವಸ್ಥೆ, ಅತಿಯಾದ ಜಾತಿ ಪದ್ಧತಿಯಿಂದ ದೇಶ ವಿಘಟನೆಯತ್ತ ತೆರಳುವಂತೆ ಮಾಡಿದೆ. ಇಲ್ಲಿನ ಸನಾತನ ವ್ಯವಸ್ಥೆ ಅಪಾಯಕಾರಿಯಾಗಿದ್ದು, ಕೇವಲ ಬ್ರಾಹ್ಮಣ್ಯವನ್ನು ಬಿಂಬಿಸುತ್ತಿದೆ.”
“ಬ್ರಾಹ್ಮಣ್ಯ ಎನ್ನುವ ಪದ ಅಕ್ಟೋಪಸ್ ಇದ್ದಂತೆ. ಇದು ಇಡೀ ಸಮಾಜವನ್ನು ಆಕ್ರಮಿಸಿಕೊಳ್ಳುತ್ತಿದೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ.”
“ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳು ಸಹ ಬಂಡವಾಳಶಾಹಿಗಳ ಹಿಡಿತದಲ್ಲಿದ್ದು, ಅವು ಇಂದು ಬ್ರಾಹ್ಮಣ್ಯದ ಮೂಲಸೆಲೆಯಾದ ಮೂಢನಂಬಿಕೆಯನ್ನು ಜನರಲ್ಲಿ ಬಿತ್ತುತ್ತಿರುವುದು ದೊಡ್ಡ ಅಪಾಯಕಾರಿ. ಬಹುತೇಕ ಮಾಧ್ಯಮಗಳು ಬ್ರಾಹ್ಮಣ್ಯದ ಕೈಯಲ್ಲಿವೆ.”
“ಬ್ರಾಹ್ಮಣ್ಯ ವೆನ್ನೋದು ಜಾತಿಯಲ್ಲ…ಅದೊಂದು ಚಿಂತನೆ.”
“ತಾವು ಮತ್ತು ತಾವು ಹೇಳುತ್ತಿರುವುದನ್ನು ಶ್ರೇಷ್ಠತೆ ಎಂದು ತಿರುಗಿ ಪ್ರಶ್ನಿಸದೇ ಒಪ್ಪಿಕೊಳ್ಳಬೇಕು ಎಂಬುದರ ವ್ಯವಸ್ಥಿತ ಪ್ರತಿಪಾದನೆ.”
“ಪುರಾಣದ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಸುಳ್ಳು ಕಥೆಗಳನ್ನು, ವದಂತಿಗಳನ್ನು, ಭ್ರಮೆಗಳನ್ನು ಸೃಷ್ಟಿ ಮಾಡುವ ಕಪಟವು ಬ್ರಾಹ್ಮಣ್ಯದ ತಂತ್ರ. ಸುಳ್ಳೇ ಅದರ ಸಾಧನ. ವಿಭಜನೆ ಅದರ ತಂತ್ರ. ವಂಚನೆ ಅದರ ಸಾರ. ಮೋದಿ ತರುತ್ತಿರುವ ನಿರಂಕುಶ ಬಂಡವಾಳಶಾಹಿ ಆಡಳಿತವನ್ನು ನಿರ್ದೇಶಿಸುತ್ತಿರುವುದು ಅದೇ ಬ್ರಾಹ್ಮಣ್ಯ. ಆದರೆ ಇಂದಿನ ಬ್ರಾಹ್ಮಣ್ಯದ ರೂಪ ಬೇರೆಯಾಗಿದೆ. ಅಂದಿನ ಬ್ರಾಹ್ಮಣ್ಯ ಊಳಿಗಮಾನ್ಯ ಶಕ್ತಿಗಳ ಹಿತಕಾಯ್ದರೆ ಇಂದಿನ ಬ್ರಾಹ್ಮಣ್ಯ ಬಂಡವಾಳಶಾಹಿಗಳ ಹಿತ ಕಾಯುತ್ತಿದೆ. ಅಂದಿನ ಬ್ರಾಹ್ಮಣ್ಯ ದೇವಲೋಕದಲ್ಲಿರುವ ಸ್ವರ್ಗದ ಭ್ರಮೆಯನ್ನು ಬಿತ್ತಿದರೆ ಇಂದಿನ ಬ್ರಾಹ್ಮಣ್ಯ ಸಾಮ್ರಾಜ್ಯಶಾಹಿ ಲೋಕದಲ್ಲಿರುವ ಅಭಿವೃದ್ಧಿ ಎಂಬ ಮರೀಚಿಕೆಯನ್ನು ಮುಂದೆ ತರುತ್ತಿದೆ. ಅಂದಿನ ಬ್ರಾಹ್ಮಣ್ಯ ಜಾತಿಜಾತಿಗಳನ್ನ ಎತ್ತಿಕಟ್ಟಿದರೆ ಇಂದಿನ ಆರ್ಎಸ್ಎಸ್ ಬ್ರಾಹ್ಮಣ್ಯ ಕೋಮುವಾದವನ್ನು ಎತ್ತಿಕಟ್ಟುತ್ತಿದೆ. ಶೂದ್ರ ಹಿನ್ನೆಲೆಯಿಂದ ಬಂದು ನವಬ್ರಾಹ್ಮಣ್ಯವನ್ನು ಮೈಗೂಡಿಸಿಕೊಂಡು, ಕೋಮುವಾದವನ್ನು ಬೆಳೆಸಿಕೊಂಡು, ನಿರಂಕುಶತ್ವವನ್ನು ಧ್ಯೇಯವಾಗಿಸಿಕೊಂಡ ಮೋದಿ ಬಂಡವಾಳಶಾಹಿ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾನೆ. ನವಉದಾರವಾದ + ಫ್ಯಾಸಿಸ್ಟ್ವಾದ + ಬ್ರಾಹ್ಮಣವಾದ = ಮೋದಿತ್ವವಾದವಾಗಿದೆ.”
“ಒಂದು ಕಾಲದಲ್ಲಿ ಒಂದು ವರ್ಣವಾಗಿದ್ದ ಬ್ರಾಹ್ಮಣ್ಯ,ಇಂದು ಎಲ್ಲ ಜಾತಿ ,ಧರ್ಮಕ್ಕೆ ಅಂಟಿಕೊಂಡಿದೆ.ಬ್ರಾಹ್ಮಣ್ಯ ಅನ್ನುವುದು ಅಧಿಕಾರಶಾಹಿತ್ವ ಮತ್ತು ಸಾಮ್ರಾಜ್ಯಶಾಹಿತ್ವದ ಇನ್ನೊಂದು ಮುಖ.ಇದು ತೊಲಗಿದರೆ ಮಾತ್ರ ಸಮಾಜ ,ದೇಶ ಬೆಳಗಲು ಸಾದ್ಯ.”
[[“ಬ್ರಾಹ್ಮಣ್ಯ ಎಂದರೆ ಬ್ರಾಹ್ಮಣರಲ್ಲ. ಸನಾತನ ಪದ್ಧತಿ, ಜೋತಿಷ್ಯ, ಪೌರೋಹಿತ್ಯಕ್ಕೆ ಜೋತುಬೀಳುವುದೇ ಬ್ರಾಹ್ಮಣ್ಯ. ಹೆಚ್ಚು ಶಿಕ್ಷಣವಂತರಾದ ಬ್ರಾಹ್ಮಣರೇತರ ದಲಿತ, ಶೋಷಿತ, ಹಿಂದುಳಿತ ವರ್ಗಗಳ ವ್ಯಕ್ತಿಗಳೂ ಬ್ರಾಹ್ಮಣ್ಯಕ್ಕೆ ಜೋತು ಬಿದ್ದು ನವ ಬ್ರಾಹ್ಮಣರಾಗುತ್ತಿರುವುದು ಬಹುದೊಡ್ಡ ದುರಂತ.”]]
ಇದೆಲ್ಲವೂ ನೀವು ಕೊಡುತ್ತಿರುವ ಅರ್ಥವಷ್ಟೇ!
ಬ್ರಾಹ್ಮಣ್ಯ ಅನ್ನುವ ಇದೇ ಪದವನ್ನು ಬೇರೆಯೇ ಅರ್ಥದಲ್ಲಿ ಸಾಹಿತ್ಯದಲ್ಲಿ, ಇತಿಹಾಸದಲ್ಲಿ ಉಪಯೋಗಿಸಲಾಗಿದೆಯಲ್ಲಾ?
ನೀವೇಕೆ ಅದೇ ಪದಕ್ಕೆ ಬೇರೆಯದ್ದೇ ಅರ್ಥವನ್ನು ಕೊಡಲು ಪ್ರಯತ್ನಿಸುತ್ತಿರುವಿರಿ!?
ನಿಮಗೇಕೆ ಆ ಪದದ ಅರ್ಥ ಕೆಡಿಸಲು ಇಷ್ಟೊಂದು ಹಠ??
ಸ್ವಾಮಿ ಶೇಟ್ಕರ್ ಅವರೇ,
ಕುಂ.ವೀರಭದ್ರಪ್ಪನವರೋ, ಲಂಕೇಶ್ ಅವರೋ, ಬರಗೂರು ರಾಮಚಂದ್ರಪ್ಪನವರೋ ಬರೆದದ್ದು ಅಥವಾ ಹೇಳಿದ್ದು ಇತಿಹಾಸವಾಗಿಬಿಡುವುದಿಲ್ಲ. ಅವರು ಬರೆದದ್ದು ಇತಿಹಾಸವೆನಿಸಿಕೊಂಡುಬಿಡುವುದಿಲ್ಲ. ನಿಮ್ಮದೇ ನಿಘಂಟು ರಚಿಸಿ, ‘ಬ್ರಾಹ್ಮಣ್ಯ’ ಎನ್ನುವ ಪದಕ್ಕೆ ನಿಮಗಿಷ್ಟ ಬಂದ ಅರ್ಥ ಬರೆದ ಮಾತ್ರಕ್ಕೆ ಆ ಪದದ ಅರ್ಥ ಬದಲಾಗಿಬಿಡುವುದಿಲ್ಲ.
ನಿಮ್ಮ ಸಿದ್ಧಾಂತಕ್ಕೆ ಬದ್ಧರಾದವರದ್ದೇ ಗುಂಪು ಕಟ್ಟಿಕೊಂಡು, ಒಬ್ಬರಿಗೊಬ್ಬರು ಬೆನ್ನು ತಟ್ಟಿಕೊಳ್ಳುತ್ತಾ ಹೋದ ಮಾತ್ರಕ್ಕೆ, ನೀವು ಹೇಳಿದ ಸುಳ್ಳೆಲ್ಲಾ ಸತ್ಯವಾಗಿಬಿಡುವುದಿಲ್ಲ.
ನೀವು ನಿಮಗಿಷ್ಟ ಬಂದಂತೆ ಪದಗಳ ಅರ್ಥ ಬದಲಾಯಿಸುವುದಾದರೆ, ನಾನು ನನಗಿಷ್ಟ ಬಂದ ಪದಕ್ಕೆ ನನಗಿಷ್ಟ ಬಂದ ರೀತಿಯಲ್ಲಿ ಬರೆದುಕೊಳ್ಳುತ್ತೇನೆ:
“ಲಿಂಗಾಯತತನ ಎಂದರೆ ತಾವು ಮತ್ತು ತಾವು ಹೇಳುತ್ತಿರುವುದನ್ನು ಶ್ರೇಷ್ಠತೆ ಎಂದು ತಿರುಗಿ ಪ್ರಶ್ನಿಸದೇ ಒಪ್ಪಿಕೊಳ್ಳಬೇಕು ಎಂಬುದರ ವ್ಯವಸ್ಥಿತ ಪ್ರತಿಪಾದನೆ. ಲಿಂಗಾಯತತನ ಎನ್ನುವುದು ಅಕ್ಟೋಪಸ್ ಇದ್ದಂತೆ. ಇದು ಇಡೀ ಸಮಾಜವನ್ನು ಆಕ್ರಮಿಸಿಕೊಳ್ಳುತ್ತಿದೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ. ಪುರಾಣದ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಸುಳ್ಳು ಕಥೆಗಳನ್ನು, ವದಂತಿಗಳನ್ನು, ಭ್ರಮೆಗಳನ್ನು ಸೃಷ್ಟಿ ಮಾಡುವ ಕಪಟವು ಲಿಂಗಾಯತತನದ ತಂತ್ರ. ಸುಳ್ಳೇ ಅದರ ಸಾಧನ. ವಿಭಜನೆ ಅದರ ತಂತ್ರ. ವಂಚನೆ ಅದರ ಸಾರ. ಶೇಟ್ಕರ್/ಕುಂ.ವೀ ಮುಂತಾದವರು ಪ್ರತಿಪಾದಿಸುತ್ತಿರುವ ನಿರಂಕುಶ ಬಂಡವಾಳಶಾಹಿ ಆಡಳಿತವನ್ನು ನಿರ್ದೇಶಿಸುತ್ತಿರುವುದು ಅದೇ ಲಿಂಗಾಯತತನ. ಬಸವಣ್ಣನವರ ಹೆಸರನ್ನು ಹೇಳಿಕೊಂಡು ಇವರು ಪ್ರತಿಪಾದಿಸುತ್ತಿರುವ ಸಿದ್ಧಾಂತದ ಹಿಂದೆ ದೇಶದ್ರೋಹಿ ಚಿಂತನೆಯಿದೆ. ಇವರು ಬಸವಣ್ಣನವರ ಹೆಸರನ್ನು ಕೆಡಿಸುತ್ತಿದ್ದಾರಷ್ಟೇ. ನಿಜವಾದ ಲಿಂಗಾಯತರು ಇವರ ವಿಷಯದಲ್ಲಿ ಬಹಳ ಎಚ್ಚರದಿಂದಿರಬೇಕು ಮತ್ತು ಇವರು ಲಿಂಗಾಯತ ಸಿದ್ಧಾಂತದ ಹೆಸರಿನಲ್ಲಿ ರಾಜಕೀಯ ನಡೆಸುವುದನ್ನು ಪ್ರತಿಭಟಿಸಬೇಕು. ರಷ್ಯಾದಲ್ಲಿ ಮಳೆಯಾದರೆ ಕರ್ನಾಟಕದಲ್ಲಿ ಕೊಡೆ ಹಿಡಿಯುವ ಇವರು, ನಮ್ಮ ದೇಶವನ್ನು ರಷ್ಯಾ ಮತ್ತು ಚೀನಾಕ್ಕೆ ಮಾರಿಬಿಡುವ ಹುನ್ನಾರ ನಡೆಸಿದ್ದಾರೆ. ಇವರ ಲಿಂಗಾಯತತನ ಚಿಂತನೆಯೇ ಮಾವೋಯಿಸಂ, ನಕ್ಸಲಿಸಂ, ಇಸ್ಲಾಂ ಪ್ರೇರಿತ ಭಯೋತ್ಪಾದನೆ, ಮುಂತಾದವುಗಳಿಗೆ ಪ್ರಚೋದನೆ. ಇವರ ಚಿಂತನೆ ಕೇವಲ ಭಾರತಕ್ಕಲ್ಲ, ಜಗತ್ತಿಗೇ ಅಪಾಯಕಾರಿ”.
“ನೀವು ಸಂಗೀತಕ್ಕೆ ಸಂಬಂಧಪಟ್ಟ ಚರ್ಚೆಯಲ್ಲೂ ಜಾತಿಯನ್ನು ಹುಡುಕಿದ್ದು”
ಇದು ಸುಳ್ಳು. ನಾನು ಕರ್ನಾಟಕ ಸಂಗೀತದಲ್ಲಿ ಬ್ರಾಹ್ಮಣ್ಯದ ಪ್ರಭಾವ ತುಂಬ ಇದೆ (ಅವುಗಳ ಕೀರ್ತನೆಗಳು ವೈದಿಕ ದೇವರನ್ನು ಭಜಿಸುತ್ತವೆ, ಸಂಗೀತ ಪದ್ಧತಿಯು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಆಶ್ರಯದಲ್ಲೇ ಬೆಳೆದು ಬಂದಿದೆ, ಇತ್ಯಾದಿ), ಇದು ಪ್ರತಿಗಾಮಿ ಎಂದನೇ ಹೊರತು ಕರ್ನಾಟಕ ಸಂಗೀತದಲ್ಲಿ ಬ್ರಾಹ್ಮಣರು ತುಂಬಾ ಇದ್ದಾರೆ ಅವರನ್ನು ಓಡಿಸಬೇಕು ಅಂತ ಹೇಳಿಲ್ಲ! ಏಕೆ ಪದೆ ಪದೆ ನಾನು ಹೇಳದೇ ಇರುವುದನ್ನು ಹೇಳಿದ್ದೇನೆ ಎಂದು ಸಾಧಿಸುತ್ತಿದ್ದೀರಿ???
[[ಮೋದಿ ತರುತ್ತಿರುವ ನಿರಂಕುಶ ಬಂಡವಾಳಶಾಹಿ ಆಡಳಿತ]]
ನಮ್ಮ ದೇಶದಲ್ಲಿ ಕಳೆದ 25 ವರ್ಷಗಳಿಂದ ಬಂಡವಾಳಶಾಹಿ ಆಡಳಿತ ನಡೆದಿದೆ. ಮೋದಿಯವರೇನೂ ಇದರ ಜನಕರಲ್ಲ.
ನೆಹರೂ ಪ್ರಣೀತ ಸಮಾಜವಾದಕ್ಕೆ ರಾಜೀವ ಗಾಂಧಿಯವರೇ ತಿಲಾಂಜಲಿ ಕೊಟ್ಟರು.
ನಿಮಗೆ ಈ ಸತ್ಯ ತಿಳಿದಿಲ್ಲವೇ?
ಅಥವಾ ನಿಮಗೆ ಮೋದಿಯವರ ಕುರಿತಾಗಿ ಇರುವ ಧ್ವೇಷವು ಈ ರೀತಿಯಲ್ಲಿ ಇಣುಕುತ್ತಿದೆಯೇ!?
[[ಸಾಮ್ರಾಜ್ಯಶಾಹಿ ಲೋಕ]]
ಸಾಮ್ರಾಜ್ಯಶಾಹಿ ಎನ್ನುವುದು ಬ್ರಿಟಿಷ್ ಆಡಳಿತದೊಂದಿಗೇ ಕೊನೆಗೊಂಡಿದೆ. ನಿಮಗೇಕೆ ಆ ಪದದ ಕುರಿತಾಗಿ ಇಷ್ಟೊಂದು ವ್ಯಾಮೋಹ?
ಕಮ್ಯುನಿಸಂ ಸಿದ್ಧಾಂತವನ್ನು ಅನುಸರಿಸುತ್ತಿದ್ದ ಸೋವಿಯತ್ ರಷ್ಯಾ, ಉತ್ತರ ಕೊರಿಯಾ, ಪೂರ್ವ ಜರ್ಮನಿ, ಇತ್ಯಾದಿ ದೇಶಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದದ್ದು ಎಲ್ಲರಿಗೂ ತಿಳಿದಿರುವ ಇತಿಹಾಸ.
ಅದೇ ಸಮಯದಲ್ಲಿ ಬಂಡವಾಳಶಾಹಿ ಸಿದ್ಧಾಂತವನ್ನು ಅನುಸರಿಸಿದ ರಾಷ್ಟ್ರಗಳು ಹೆಚ್ಚು ಅಭಿವೃದ್ಧಿ ಹೊಂದಿದ್ದೂ ಸಹ ಎಲ್ಲರಿಗೂ ತಿಳಿದಿರುವ ಇತಿಹಾಸ.
ಸ್ವಾತಂತ್ರ್ಯ ಬಂದ ನಂತರವೂ ಅನೇಕ ದಶಕಗಳ ಕಾಲ ನಮ್ಮ ದೇಶದಲ್ಲಿ ಅಭಿವೃದ್ಧಿ ಕುಂಠಿತಗೊಂಡದ್ದು ನೆಹರೂ ಪ್ರಣೀತ ಸಮಾಜವಾದದಿಂದಲೇ.
ಹೀಗಿದ್ದಾಗ್ಯೂ, ನೀವು ನಮ್ಮ ದೇಶದ ಮೇಲೆ ಸಮಾಜವಾದ/ಕಮ್ಯುನಿಸಂ ಹೇರಿ, ದೇಶವನ್ನು ಜಾಗತಿಕ ಮಟ್ಟದಲ್ಲಿ ಹಿಂದುಳಿಯುವಂತೆ ಮಾಡುತ್ತಿರುವುದರ ಹುನ್ನಾರವೇನು?