ವಿಷಯದ ವಿವರಗಳಿಗೆ ದಾಟಿರಿ

Archive for

9
ನವೆಂ

ಕೇಂದ್ರದ ನೆರಳಿನಲ್ಲಿ ವಿಕೇಂದ್ರೀಕರಣದ ಸ್ವರೂಪ

images (2)ಸಂತೋಷ. ಈ. ಕುವೆಂಪು ವಿಶ್ವವಿದ್ಯಾನಿಲಯ

  ಭಾರತವು ಹಳ್ಳಿಗಳಿಂದ ಕೂಡಿದ ದೇಶ. ಸ್ವಯಂ ಆಡಳಿತವೇ ಅದರ ಜೀವಾಳ. ಗ್ರಾಮದ ಜನರ ಸಮುದಾಯಿಕ  ಭಾವನೆ ಸ್ವಯಂ ಆಡಳಿತದ ಪ್ರಧಾನವಾದ ಬಲವಾಗಿತ್ತು. ಗ್ರಾಮದ ಜನರ ನಡುವಿನ ಪರಸ್ಪರಾವಲಂಬನೆ ಮತ್ತು ತಮ್ಮ ದೈನಂದಿನ ಅವಶ್ಯಕತೆಗಳಲ್ಲಿ ಸ್ವಾವಲಂಬಿಗಳಾಗಿರುವುದು, ಗ್ರಾಮದ ಸ್ವಯಂ ಆಡಳಿತ ವ್ಯವಸ್ಥೆಯು ಸಾವಿರಾರು ಕಾಲ ಅಖಂಡವಾಗಿ ಮತ್ತು ಸ್ವಸಂಪೂರ್ಣವಾಗಿ ಉಳಿದುಕೊಂಡು ಬರಲು ಸಹಾಯವಾಗಿತ್ತು. ನಗರಗಳಲ್ಲಿ ಮತ್ತು ಪಟ್ಟಣಗಳಲ್ಲಿ ಅನೇಕ ರಾಜಕೀಯ ಬದಲಾವಣೆಗಳು ಸಂಭವಿಸಿದ್ದರೂ ಗ್ರಾಮಗಳ ಸ್ವಯಮಾಡಳಿತ ವ್ಯವಸ್ಥೆ ಪ್ರಕ್ಷುಬ್ಧಗೊಳ್ಳದಷ್ಟು ಸ್ವತಂತ್ರವಾಗಿದ್ದವು. ಆದರೆ ಭಾರತದಲ್ಲಿ ಬ್ರಿಟಿಷ್ ಆಡಳಿತದ ಆಗಮನದಿಂದ ಗ್ರಾಮದ ಸ್ವಯಮಾಡಳಿತ ಪದ್ಧತಿ ಕ್ಷೀಣಿಸುತ್ತ ಬಂದಿತು. ಏಕೆಂದರೆ ಭಾರತದಲ್ಲಿ ತಮ್ಮ ಆಡಳಿತದ ಪ್ರಾರಂಭಿಸಿದ ಬ್ರಿಟಿಷರಿಗೆ ಗ್ರಾಮಗಳನ್ನು ತಮ್ಮ ವ್ಯವಸ್ಥೆಗೆ ಒಳಪಡಿಸಿಕೊಳ್ಳದೆ ಇಡೀ ದೇಶವನ್ನು ಪರಿಣಾಮಕಾರಿಯಾಗಿ ಆಳಲು ಸಾಧ್ಯವಿಲ್ಲ ಎಂದು ತಿಳಿದಿತ್ತು. ಅದರ ಸಲುವಾಗಿ ‘ಗ್ರಾಮಗಳ ಕೈಯಲ್ಲಿದ್ದ ಹಿಂದಿನ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಂಡು ಅದನ್ನು ಬ್ರಿಟಿಷ್ ಅಧಿಕಾರಿಯ ಅಧೀನಕ್ಕೆ ಬರುವಂತೆ ಕಾನೂನುಗಳನ್ನು ಜಾರಿಗೆ ತಂದರು’. ಆದರೆ ಬ್ರಿಟಿಷರ ಆಡಳಿತದಲ್ಲಿ ಗ್ರಾಮ ಸಮುದಾಯ ಪಾಲ್ಗೊಳ್ಳಲೇ ಇಲ್ಲ. ಅವರ ನೀರಿಕ್ಷೆ ಮಟ್ಟಕ್ಕೆ ಗ್ರಾಮೀಣ ಜನರು ಸಹಕಾರ ತೋರಲಿಲ್ಲ. ಗ್ರಾಮಗಳು ಈ ರೀತಿ ಪ್ರತಿಭಟಿಸಿದ್ದರಿಂದ ಕಾಲಕ್ರಮೇಣ ಬ್ರಿಟಿಷರು ಗ್ರಾಮಗಳ ಮೇಲಿನ ತಮ್ಮ ಅಧಿಕಾರವನ್ನು ಮೊಟುಕುಗೊಳಿಸುತ್ತ ಬಂದರು. ಆದರೆ ಬ್ರಿಟಿಷರ ಆಡಳಿತ ಗ್ರಾಮಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದಂತು ನಿಜ.

  ಸ್ವಾತಂತ್ರದ ನಂತರ, ಭಾರತದ ರಾಷ್ಟ್ರೀಯ ಆಂದೋಲನದಲ್ಲಿ ಗ್ರಾಮ ಪಂಚಾಯತಿಯು ಕೇಂದ್ರಬಿಂದುವಾಗಿದ್ದರಿಂದ  ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಇರುವಂತೆ ಗ್ರಾಮೀಣ ಮಟ್ಟದಲ್ಲೂ ಪ್ರಜಾಸತ್ತಾತ್ಮಕ ಪ್ರಕ್ರಿಯೆಯು ಕಾರ್ಯಪ್ರವೃತ್ತವಾಗಬೇಕು ಎನ್ನುವುದು ಬಹುತೇಕರ ಉದ್ದೇಶವಾಗಿತ್ತು. ಆದರೆ ಸಂವಿಧಾನ ರಚನಕಾರರಿಗೆ ಭಾರತಕ್ಕೆ ಸಶಕ್ತ ಕೇಂದ್ರವಿದ್ದು, ಅದರ ಸುತ್ತ ಇಡೀ ವ್ಯವಸ್ಥೆ ರೂಪುಗೊಳ್ಳಬೇಕೆಂದು ಬಯಸಿದ್ದರು. ಅದರಲ್ಲಿ ಯಶಸ್ವಿ ಕೂಡ ಅದರು. ಮತ್ತಷ್ಟು ಓದು »

9
ನವೆಂ

ಅವಾರ್ಡು ವಾಪಸಿಯೂ ,ಜನಸಾಮಾನ್ಯನೊಬ್ಬನ ಬಡಬಡಿಕೆಯೂ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಪ್ರಶಸ್ತಿನೀವು ದೆಹಲಿಯಲ್ಲಿ ಕಾಣಿಸಿಕೊ೦ಡ ಮ೦ಕಿ ಮ್ಯಾನ್ ಬಗ್ಗೆ ಕೇಳಿರಬಹುದು.2001 ವರ್ಷವದು.ಮೈತು೦ಬ ಕಪ್ಪು ರೋಮಗಳಿ೦ದ ತು೦ಬಿದ್ದ ಈ ವಾನರ ಮಾನವ ರಾತ್ರಿ ವೇಳೆಯಲ್ಲಿ ಒ೦ಟಿಯಾಗಿ ದೆಹಲಿಯ ಬೀದಿಗಳಲ್ಲಿ ಓಡಾಡುತ್ತಿದ್ದ ಜನರ ಮೇಲೆ ದಾಳಿಯಿಡುತ್ತಿದ್ದನ೦ತೆ.ಮೊದಮೊದಲು ಈ ಸುದ್ದಿ ಅಷ್ಟಾಗಿ ಸದ್ದು ಮಾಡಿರಲಿಲ್ಲ.ಆದರೆ ಕೆಲವೇ ದಿನಗಳಲ್ಲಿ ಈ ವಿಷಯ ಕಾಳ್ಗಿಚ್ಚಿನ೦ತೆ ದೆಹಲಿಯ ತು೦ಬೆಲ್ಲ ವ್ಯಾಪಿಸಿತು.ಕೆಲವರು ತಮ್ಮ ಮೇಲೆಯೂ ಈ ಕೋತಿ ದಾಳಿ ಮಾಡಿದೆ ಎ೦ದರು.ಕೆಲವರು ಅದರ ಚಹರೆಗಳ ಬಗ್ಗೆ ವಿವರಿಸಿದರು.ಆದರೆ ಯಾರೊಬ್ಬರಿಗೂ ಸಹ ಕೋತಿಮಾನವನ ರೂಪದ ವರ್ಣನೆಯನ್ನು ಸ್ಪಷ್ಟವಾಗಿ ವಿವರಿಸುವುದು ಸಾಧ್ಯವಾಗಿರಲಿಲ್ಲ.ಒಬ್ಬರು ಅದರ ಎತ್ತರ ನಾಲ್ಕು ಅಡಿ ಎ೦ದರೇ,ಮತ್ತೊಬ್ಬರು ಅದು ಎ೦ಟು ಅಡಿ ಉದ್ದವಿದೆ.ಎ೦ದರು ಒ೦ದಿಬ್ಬರು ಅದು ಭಯ೦ಕರ ಕೆ೦ಪು ಕಣ್ಣುಗಳ ಪ್ರಾಣಿ ಎ೦ದರು.ಉಳಿದವರು ಅದು ಹೆಲ್ಮೆಟ್ ಧರಿಸುತ್ತದೆ ಎ೦ದರು.ಒಟ್ಟಾರೆಯಾಗಿ ಯಾರಿಗೂ ಸಹ ಅದರ ರೂಪದ ಬಗ್ಗೆ ಸ್ಪಷ್ಟತೆಯನ್ನು ನಿಖರವಾಗಿ ನೀಡುವುದು ಸಾಧ್ಯವಾಗಲಿಲ್ಲ.ಪೋಲಿಸರು ಅದೆಷ್ಟೇ ಕಷ್ಟಪಟ್ಟರೂ ಇ೦ಥದ್ದೊ೦ದು,’ಮ೦ಗ ಮಾನವ’ನನ್ನು ಗುರುತಿಸುವುದಾಗಲಿ ,ಬ೦ಧಿಸುವುದಾಗಲಿ ಸಾಧ್ಯವಾಗಲಿಲ್ಲ.ಕೊನೆಗೊಮ್ಮೆ ಕೋತಿ ಮಾನವನ ಕತೆಯೇ ’ಸಮೂಹ ಸನ್ನಿ’ಎನ್ನುವುದು ಪೋಲಿಸರಿಗೆ ಮನವರಿಕೆಯಾಯಿತು.ಮೊದಲೆಲ್ಲ ಭಯ ಬಿದ್ದು ರಾತ್ರಿಗಳಲ್ಲಿನ ಓಡಾಟವನ್ನೇ ಕಡಿಮೆ ಮಾಡಿಕೊ೦ಡಿದ್ದ ದೆಹಲಿಯ ನಾಗರೀಕರು ಕೆಲವೇ ದಿನಗಳಲ್ಲಿ ’ಇದೆಲ್ಲವೂ ಸಮಾಜದಲ್ಲಿ ಅನವಶ್ಯಕ ಭ್ರಮೆಯನ್ನು ಸೃಷ್ಟಿಸಿ ತಮ್ಮ ಬೇಳೆ ಬೆಯಿಸಿಕೊಳ್ಳಲು ಕಿಡಿಗೇಡಿಗಳು ಮಾಡಿದ ಕೆಲಸ’ಎ೦ಬುದನ್ನು ಅರಿತುಕೊ೦ಡರು.ಜನಜೀವನ ದೆಹಲಿಯಲ್ಲಿ ಮು೦ಚಿನ೦ತೆಯೇ ಸಾಮಾನ್ಯವಾಯಿತು.ಈ ಕತೆ ಈಗೇಕೆ ನೆನಪಾಯಿತೆ೦ದರೇ ,ಇ೦ಥದ್ದೊ೦ದು ವಿಲಕ್ಷಣ ಕಾಲ್ಪನಿಕ ಜೀವಿ ಈಗಲೂ ದೇಶದಲ್ಲೆಲ್ಲ ಅಲೆದಾಡಿಕೊ೦ಡಿದೆ.ಜನಸಾಮಾನ್ಯರ ಕಣ್ಣಿಗೆ ಅದು ಗೋಚರಿಸದಿದ್ದರೂ ಕೆಲವು ಬುದ್ಧಿವ೦ತರು ಅದನ್ನು ನೋಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ.ಅ೦ದ ಹಾಗೆ ಆ ಕಾಣದ ಕಾಲ್ಪನಿಕ ಸೃಷ್ಟಿಯ ಹೆಸರು ’ಅಸಹಿಷ್ಣುತೆ’

ಮತ್ತಷ್ಟು ಓದು »