2015 ರ ಆಳ್ವಾಸ್ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಸಂದರ್ಶನ
ಸಂದರ್ಶನ : ಪ್ರಕಾಶ್.ಡಿ.ರಾಂಪೂರು,ರಮೇಶ್ ಕೆ.ಆರ್,ವೀರೇಶ್
ಚಿತ್ರ : ಶ್ರೀಧರ್ ಬಳ್ಳಾರಿ
ಕನ್ನಡ ಚಿತ್ರ ರಂಗದಲ್ಲಿ ಸುಮಾರು 39 ವರ್ಷಗಳ ಕಾಲ ಸಿನೆಮಾ ರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ತನ್ನದೇ ಆದ ಛಾಪನ್ನು ಮೂಡಿಸಿ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ತಮ್ಮ ಹೆಸರನ್ನು ಗುರುತಿಸಿಕೊಂಡಿರುವ ಪ್ರಸ್ತುತ ಕನ್ನಡ ಚಲನಚಿತ್ರೋದ್ಯಮದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರಾಜೇಂದ್ರ ಸಿಂಗ್ ಬಾಬು 2015 ರ ಆಳ್ವಾಸ್ ನುಡಿಸಿರಿಯ “ಆಳ್ವಾಸ್ ಪ್ರಶಸ್ತಿ” ಸ್ವೀಕರಿಸುವ ಮುನ್ನ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸಿದ ಸಂದರ್ಶನ..
ಪ್ರ: ಕನ್ನಡ ಚಿತ್ರ ರಂಗಕ್ಕೆ ಬಂದು ಮೊದಲ ಬಾರಿಗೆ ನಾಗರಹೊಳೆ ಅನ್ನೋ ಚಿತ್ರವನ್ನು ಮಾಡಿದಿರಿ. ನಿಮ್ಮ ಈ ಮೊದಲ ಚಿತ್ರ ಹಿಟ್ ಆಯಿತು ಇದರ ಬಗ್ಗೆ ನಿಮ್ಮ ಮಾತು?
ನಮ್ಮ ತಂದೆಯವರ ಕಾಲದಿಂದಲೂ ನಾನು ಸಿನೆಮಾ ಕ್ಷೇತ್ರದಲ್ಲಿದ್ದು, ಅವರನ್ನು ನೋಡಿ ಕಲಿತ ವಿಷಯಗಳನ್ನು ಸೇರಿಸಿ ಜನರಿಗೆ ಹೊಸ ರೀತಿಯ ಸಿನೆಮಾಗಳನ್ನು ಕೊಡಬೇಕು ಅಂತಾ ಅಂದುಕೊಂಡಿದ್ದೆ. ಆ ಸಂಧರ್ಭದಲ್ಲಿ ನನ್ನ ತಲೆಗೆ ಬಂದಿದ್ದು ನಾಗರಹೊಳೆ ಅನ್ನೋ ಚಿತ್ರ. ಅಲ್ಲಿಯವರೆಗೆ ಮಕ್ಕಳ ಪ್ರಧಾನ ಚಿತ್ರಗಳೇ ಇರಲಿಲ್ಲ. ಅದನ್ನು ನಾನು ಉಪಯೋಗ ಮಾಡಿಕೊಂಡೆ. ಸಿನೆಮಾ ಕೂಡ ಅದ್ಬುತ ಯಶಸ್ಸು ಖಂಡಿತು.
ಮತ್ತಷ್ಟು ಓದು