ವಿಷಯದ ವಿವರಗಳಿಗೆ ದಾಟಿರಿ

Archive for

18
ನವೆಂ

ಒಬ್ಬಳೇ ಒಬ್ಬಳು ಓಬವ್ವ…

– ಗಿರಿಪ್ರಸಾದ್

ಓಬವ್ವಅರಮನೆಯ ಒಡ್ಡೋಲಗದಲ್ಲಿ ಸಿಂಹಾಸನದಲ್ಲಿ ಕುಳಿತು, ಮದಕರಿನಾಯಕ ಸಭೆಯನ್ನುದ್ದೇಶಿಸಿ ನುಡಿದಿದ್ದ.”ನಲಿವೂ ಇದೆ, ನೋವೂ ಇದೆ ನಿನ್ನೆಯ ಘಟನಾವಳಿಗಳ ಸುತ್ತ. ಹೈದರಾಲಿಯನ್ನು ಮಣಿಸಿದ್ದಕ್ಕೆ ನಲಿವು, ಕೋಟೆಯ ನಿಜದತಾಯಿ ಓಬವ್ವಳನ್ನು ಕಳೆದುಕೊಂಡಿದ್ದಕ್ಕೆ ಅಗಾಧ ನೋವು. ಕಾಲನಾಯಕಾ….”..

ಕಾಲನಾಯಕ ತಲೆತಗ್ಗಿಸಿ ನಿಂತಿದ್ದ. ಅನ್ಯಮನಸ್ಕನಾಗಿದ್ದ, ಅಂಜಲೀಬದ್ಧನಾಗಿದ್ದ. ಯಾವುದೇ ಗುಣಗಾನ ಅವನಿಗೆ ಬೇಕಿರಲಿಲ್ಲ. ನಾಯಕ ಮುಂದುವರೆಸಿದ “ಕಾಲನಾಯಕಾ, ಧನ್ಯ ನೀನು ನಾಯಕಾ. ಧನ್ಯ ಈ ಹೆಬ್ಬುಲಿಯನ್ನು ನಮ್ಮ ಕೋಟೆ ಪಡೆದಿದ್ದಕ್ಕೆ. ನಮ್ಮ ಕನ್ನಡ ನಾಡು ಹಡೆದಿದ್ದಕ್ಕೆ”. ಕಾಲನಾಯಕನಿಗೆ ತಡೆಯಲಾಗಲಿಲ್ಲ, ಕಣ್ಣೀರ ಕಟ್ಟೆಯೊಡೆದಿತು, ಗದ್ಗದಿಸಿದ “ಎಲ್ಲಿಯಿನ್ನು ನನ್ನ ಓಬವ್ವ…ನೀರು ತರಲೆಂದು ಹೋದವಳು ಚರಿತ್ರೆಯಲ್ಲಿ ನೀರಾಗಿ ಹೋದಳು”. ಮೌನಿಯಾದ. ಮದಕರಿನಾಯಕನಿಗೆ ಚುರುಕ್ಕೆಂದಿತು, ನುಡಿದ “ನೀರಾಗಲಿಲ್ಲ ಓಬವ್ವ, ಕಲ್ಲಾದಳು. ಮುಂದೆ ಶತಮಾನಗಳನೇಕ ಕನ್ನಡಿಗರು ಸವರುವ ಕಲ್ಲಾದಳು”. ಸಭಿಕರು ಓಬವ್ವಳನ್ನು ನೆನೆದು ಮಾತನಾಡಲಾರಂಭಿಸಿದರು.ಕಾಲನಾಯಕ ಕಿವಿಯಾಗಲಿಲ್ಲ. ಅವನ ಮನಸ್ಸು ತುಂಬಿಕೊಂಡಿದ್ದು ಓಬವ್ವ…ಓಬವ್ವ…ಓಬವ್ವ…

ತನ್ನಲ್ಲಿಯೇ ಮಾತಾಗಿದ್ದ ಕಾಲನಾಯಕ. “ಓಬವ್ವಳ ಸಾವು, ಗೆಲುವಿನ ಹರ್ಷವನ್ನು ನುಂಗಿದೆ. ಇಲ್ಲಿ ಕೋಟೆ ಉಳಿದಿದೆ, ಅಲ್ಲಿ ಬದುಕು ಒಡೆದಿದೆ. ನನ್ನ ಕಹಳೆಯ ಕೂಗಿಗಿಂತ ಓಬವ್ವ, ಆಕೆಯ ಒನಕೆ ಇಂದು ಕೋಟೆಯನ್ನುಳಿಸಿದೆ.”. ತನ್ನ ಗುಡಿಸಲಿಗೆ ಮರಳಿದ ಕಾಲನಾಯಕನಿಗೆ ನಿದ್ದೆಯಿರಲಿಲ್ಲ. ಓಬವ್ವಳ ಚಿತ್ರವೇ, ಆಕೆಯ ಶೌರ್ಯವೇ ಮನದಲ್ಲಿ ಸುಳಿದಿತ್ತು.

ಮತ್ತಷ್ಟು ಓದು »

18
ನವೆಂ

ಅಕ್ಷರದ ಜಾಗದಲ್ಲಿ ಅಸಹನೆ ಬಿತ್ತುವುದು ನಿಜವಾದ ಕೇಡುಗಾಲ ಮಹಾದೇವ ಅವರೇ

– ರಾಕೇಶ್ ಶೆಟ್ಟಿ

ದೇವನೂರು ಮಹಾದೇವಹಿರಿಯರಾದ ದೇವನೂರು ಮಹಾದೇವ ಅವರಿಗೆ ನಮಸ್ಕಾರಗಳು,

ನೀವು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂದಿರುಗಿಸಿ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಓದಿದೆ.ಇಷ್ಟು ದಿವಸ ಪ್ರಶಸ್ತಿಗಳನ್ನು ಹಿಂತಿರುಗಿಸಿದವರು ಬರೆದಂತೆಯೇ ಯಾವುದೇ “ನಿರ್ದಿಷ್ಟ ಕಾರಣ”ಗಳಿಲ್ಲದೇ ವಿರೋಧಿಸಲೇಬೇಕು ಎಂಬ ಹಟಕ್ಕೆ ಬಿದ್ದ ಪತ್ರಗಳ ಸಾಲಿಗೇ ನಿಮ್ಮ ಪತ್ರವೂ ಸೇರುತ್ತದೆ.ಪತ್ರದ ಸಾರಾಂಶ,ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಭಾರತದಲ್ಲಿ ಭೂಮಿ ಬಾಯಿ ತೆರೆದು ಕುಳಿತಿದೆ ಎಂಬಂತಿದೆ.ಅದೇನೋ ಇದ್ದಕ್ಕಿದ್ದಂತೆ ದೇಶದಲ್ಲಿ ಅಸಹಿಷ್ಣುತೆಯ ವಾತವರಣ ಮೂಡಿದೆ ಎನ್ನುತ್ತೀರಿ.ಆದರೆ,ಅದನ್ನು ಸ್ಪಷ್ಟವಾಗಿ ವಿವರಿಸಿಲ್ಲ.ನಿಜವಾಗಿಯೂ ಅಂತದ್ದೊಂದು ವಾತವರಣ ಇದ್ದಿದ್ದೇ ಆದರೆ ನಿಮಗೇಕೆ ವಿವರಿಸಲಾಗಿಲ್ಲ?

ದಾದ್ರಿ ಘಟನೆ,ಕಲ್ಬುರ್ಗಿ ಹತ್ಯೆಯಂತ ಘಟನೆಗಳು ಆಯಾ ರಾಜ್ಯದ ಕಾನೂನು ಸುವ್ಯವಸ್ಥೆಯ ಹೊತ್ತವರ ಹೊಣೆಯೆಂದು ಕೇಂದ್ರ ಸರ್ಕಾರ ಹೇಳುವುದರಲ್ಲಿ ತಪ್ಪೇನಿದೆ? ಒಂದು ವೇಳೆ ರಾಜ್ಯ ಸರ್ಕಾರಗಳೇ ತಮ್ಮಿಂದ ಕಾನೂನು-ಸುವ್ಯವಸ್ಥೆ ನಿರ್ವಹಿಸಲಾಗುತ್ತಿಲ್ಲ ಎಂದು ಹೇಳಿಕೊಂಡ ಮೇಲೂ ಕೇಂದ್ರ ಕೈ ತೊಳೆದುಕೊಂಡಿದ್ದರೇ,ನೀವು ಹೇಳಿದಂತೆ “ದುರಂತ”ವಾಗುತಿತ್ತು.ಆದರೇ,ಸಂವಿಧಾನ ಬದ್ಧವಾಗಿ ಹೇಗೆ ನಡೆದುಕೊಳ್ಳಬೇಕಿತ್ತೋ ಅದೇ ರೀತಿಯೇ ಕೇಂದ್ರ ನಡೆದುಕೊಂಡಿದೆಯಲ್ಲವೇ ಮಹಾದೇವರೇ? ಹಾಗಿದ್ದ ಮೇಲೆ ನಿಮ್ಮ ಆಕ್ಷೇಪಕ್ಕೇನಾದರೂ ತರ್ಕವುಂಟೇ?ನಿಮ್ಮ ಪ್ರಕಾರ ಕೇಂದ್ರವೇನು ಮಾಡಬೇಕಿತ್ತು? ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನೇರಿ ಕಾನೂನು-ಸುವ್ಯವಸ್ಥೆಯನ್ನು ಪಾಲಿಸಬೇಕಿತ್ತೇ? ಸಂವಿಧಾನವೇ ಧರ್ಮಗ್ರಂಥವೆನ್ನುವ ಪ್ರಗತಿಪರರಿಗೆ ಪ್ರಸ್ತುತ ಕೇಂದ್ರ ಸರ್ಕಾರವೂ ಅದೇ ಸಂವಿಧಾನದ ಅನುಸಾರವೇ ಕಾರ್ಯ ನಿರ್ವಹಿಸುತ್ತಿದೆಯೆಂಬುದು ಮರೆತು ಹೋಗಿದೆಯೇ?

ಪ್ರಶಸ್ತಿ ಹಿಂತಿರುಗಿಸುವಿಕೆಗೆ ನೀವು ನೀಡಿರುವ ಬಹುಮುಖ್ಯವಾದ ಕಾರಣವೆಂದರೆ,ಪ್ರಶಸ್ತಿ ಹಿಂತಿರುಗಿಸುತ್ತಿರುವವರ ನಡೆಯನ್ನು ಕೆಲ ಲೇಖಕ-ಕಲಾವಿದರು ವಿರೋಧಿಸಿದ್ದು.ಆಳುವ ಸರ್ಕಾರದ ಪರ ಅವರು ನಿಂತದ್ದು ತಮಗೇ ಕೇಡಿನ ಲಕ್ಷಣದಂತೆ ಕಾಣಿಸಿತು ಎಂದಿದ್ದೀರಿ.ಅಂದರೇ,ನಿಮ್ಮ ಪ್ರಕಾರ ಯಾವುದೇ ಲೇಖಕರು-ಕಲಾವಿದರು ಅವರ ಐಡಿಯಾಲಜಿಗೆ ಹೊಂದಿಕೊಳ್ಳುವ ಪಕ್ಷ ಅಧಿಕಾರಕ್ಕೇರಿ ಸರ್ಕಾರ ರಚಿಸಿದ ಮೇಲೆ ಅದನ್ನು ಬೆಂಬಲಿಸುವುದು ಪ್ರಜಾಪ್ರಭುತ್ವದಲ್ಲಿ ಕೇಡಿನ ಲಕ್ಷಣವೆಂದಾಗುತ್ತದೆಯಲ್ಲವೇ?

ಇದೇ ಲಾಜಿಕ್ ನಮ್ಮ ರಾಜ್ಯದಲ್ಲಿಯೂ ಅನ್ವಯವಾದರೇ,ಈ ರಾಜ್ಯದ ಪ್ರಗತಿಪರರು-ಬುದ್ಧಿಜೀವಿಗಳು ನಿಂತಿರುವುದು ಸರ್ಕಾರದ ಪರವಾಗಿಯೋ? ಅಥವ ವಿರುದ್ಧವಾಗಿಯೋ?

ಮತ್ತಷ್ಟು ಓದು »