ವಿಷಯದ ವಿವರಗಳಿಗೆ ದಾಟಿರಿ

Archive for

5
ಏಪ್ರಿಲ್

ನಮೋ ಬ್ರಿಗೇಡ್ ಮೇಲಿನ ಕೋಪಕ್ಕೆ ನರೇಶ್ ತುತ್ತಾದರೇ?

– ಹನುಮ೦ತ ಕಾಮತ್

11143647_10204577244893080_67827641632082198_nವಿನಾಯಕ ಪಾಂಡುರಂಗ ಬಾಳಿಗಾ, ಇತ್ತೀಚೆಗೆ ಕೊಲೆಯಾದ ಆರ್‌ಟಿಐ ಕಾರ್ಯಕರ್ತ.ಬಹುಶಃ ಆರು ವರ್ಷಗಳ ಹಿಂದಿನ ಒಂದು ದಿನ. ವಿನಾಯಕ ಬಾಳಿಗಾ ನನ್ನ  ಹತ್ತಿರ  ಬಂದಿದ್ದರು.  ‘ನನಗೆ ಮಾಹಿತಿ  ಹಕ್ಕು  ಕಾಯ್ದೆಯಡಿ  ಮಾಹಿತಿ ಪಡೆಯುವುದು  ಹೇಗೆ  ಎನ್ನುವುದರ  ಬಗ್ಗೆ  ಒಂದಿಷ್ಟು ಮಾಹಿತಿ  ಬೇಕು’ ಎಂದರು. ಕಾರಣ ಕೇಳಿದೆ.. ವಿನಾಯಕ ಬಾಳಿಗಾ ಅವರಿಗೆ ತನ್ನ ಮನೆಯಿಂದ ಕೊಡಿಯಾಲ್  ಬೈಲ್‌ಗೆ  ಹೋಗುವ ರಸ್ತೆಯಲ್ಲಿರುವ  ಪ್ರಖ್ಯಾತ  ಬಿಲ್ಡರ್ ರಮೇಶ್ ಕುಮಾರ್ ಅವರ ಮೌರಿಷ್ಕಾ ವಸತಿ ಸಮುಚ್ಚಯ ಮತ್ತು ಅದರ ಎದುರಿರುವ  ಶಾರದಾ ವಿದ್ಯಾಲಯದ ಮೇಲೆ  ತುಂಬಾ  ಸಿಟ್ಟಿದ್ದಂತೆ ಕಾಣುತ್ತಿತ್ತು. ಸಾಮಾನ್ಯವಾಗಿ ಯಾವುದಾದರೂ  ಒಂದು  ಸಂಸ್ಥೆ ಅಥವಾ ವ್ಯವಸ್ಥೆಯಿಂದ ಸಾರ್ವಜನಿಕರ ಮೇಲೆ ಅನ್ಯಾಯ, ದೌರ್ಜನ್ಯ ನಡೆದಾಗ ಆ ಸಂಸ್ಥೆ ಅಥವಾ ವ್ಯವಸ್ಥೆ  ಎಷ್ಟರ  ಮಟ್ಟಿಗೆ ನಿಯಮ,  ಕಾನೂನುಗಳನ್ನು ಪರಿಪಾಲಿಸುತ್ತಿದೆ, ಯಾವ ಹಂತದಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತನ್ನ ಇಚ್ಚೆ ಬಂದಂತೆ ವರ್ತಿಸುತ್ತದೆ ಎಂದು ಲಿಖಿತ ದಾಖಲೆಗಳು ನಮ್ಮ ಬಳಿ ಇದ್ದಲ್ಲಿ ಆಗ ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಸುಲಭ. ಬಹುಶಃ  ಮೌರಿಷ್ಕಾ  ವಸತಿ  ಸಮುಚ್ಚಯ  ಮತ್ತು ಶಾರದಾ  ವಿದ್ಯಾಲಯದ ವಿರುದ್ಧ ಅಂತಹ ದಾಖಲೆಗಳನ್ನು ಪಡೆದು, ಕಾನೂನು ಹೋರಾಟ ಮಾಡಲು ಬಾಳಿಗಾ ತೀರ್ಮಾನಿಸಿದ್ದರು.ಮೌರಿಷ್ಕಾ ಅಪಾರ್ಟಮೆಂಟಿನಿಂದ  ಏನು  ಸಮಸ್ಯೆಯಾಗುತ್ತಿದೆ  ಎಂದು ಕೇಳಿದೆ. ಮತ್ತಷ್ಟು ಓದು »