ವಿಷಯದ ವಿವರಗಳಿಗೆ ದಾಟಿರಿ

Archive for

26
ಜುಲೈ

ಅರಿವೇ ಗುರು

– ಗೀತಾ ಹೆಗ್ಡೆ

imagesಗುರು ಬ್ರಹ್ಮ ಗುರು ವಿಷ್ಣುಃ ಗುರು ದೇವೊ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುಭ್ಯೋನಮಃ

ಕೆಲವೊಮ್ಮೆ ಅನಿರೀಕ್ಷಿತವಾಗಿ ಮನಸ್ಸನ್ನು ಕಲಕುವ ಬೇಸರದ ಸಂಗತಿಗಳು ಎದುರಾದಾಗ ಯಾವ ರೀತಿ ಸ್ವೀಕರಿಸಬೇಕು ಎನ್ನುವ ಗೊಂದಲ ಕಾಡುತ್ತದೆ. ತಪ್ಪು ಎಲ್ಲಿ ನಡೆದಿದೆ ಅನ್ನುವ ಹುಡುಕಾಟದಲ್ಲಿ ಅರಿವಾಗದೆ ಕಣ್ಣು ಮಂಜಾಗುವುದು ಸ್ವಾಭಾವಿಕ. ಇದುವರೆಗೆ ಸ್ನೇಹಿತರಂತೆ, ಹಿತೈಷಿಗಳಂತೆ ಜೊತೆಯಾಗಿದ್ದವರ ನಡೆ ಒಗಟಾಗಿ ಕಾಣುತ್ತದೆ. ನಾನು ನನ್ನವರು ಅನ್ನುವ ಮಮಕಾರ ಹೃದಯದಲ್ಲಿ ಮನೆ ಮಾಡಿ ಅನೇಕ ಸಂತಸದ ಕ್ಷಣಗಳು, ಮಾತುಗಳು ಮನಃಪಟದಲ್ಲಿ ಸರಿದಾಡಿ ದುಃಖಿಸಲು ಎಡೆಮಾಡಿಕೊಡುತ್ತದೆ. “ಹೊಡೆದವನಿಗೆ ನೋವು ಗೊತ್ತಾಗುವುದೇ ಇಲ್ಲ. ಆದರೆ ಹೊಡೆಸಿಕೊಂಡವನಿಗೆ ಮೌನದ ಪೆಟ್ಟು ಮನಸ್ಸನ್ನು ಘಾಸಿಗೊಳಿಸುತ್ತದೆ.” ಮತ್ತಷ್ಟು ಓದು »

26
ಜುಲೈ

ಪುಸ್ತಕ ವಿಮರ್ಶೆ: ನಭಾರಣ್ಯದ ಮಾಯಾಮೃಗ

– ನಾಗೇಶ್ ಕುಮಾರ್ ಸಿ ಎಸ್

4597ಬಾಹ್ಯಾಕಾಶ ವಿಜ್ಞಾನದ ಅಧ್ಯಯನವನ್ನು “ರಾಕೆಟ್ ಸೈನ್ಸ್” ಎಂಬ ಲೇಬಲ್ ಹಚ್ಚಿ ಕ್ಲಿಷ್ಟಾತಿ-ಕ್ಲಿಷ್ಟ ವಿಷಯವೆನ್ನುವಂತೆ  ವಿಡಂಬನೆಗಾಗಿಯೂ ನಾವು ಸಾಮಾನ್ಯವಾಗಿ ಬಳಸುವುದುಂಟು. ಇಂತಹ ಖಗೋಳ ಶಾಸ್ತ್ರದ ಬೆರಗುಗೊಳಿಸುವಂತಾ ಹಲವು ಬಾಹ್ಯಾಕಾಶ ಸಂಬಂಧಿ ವೈವಿಧ್ಯಮಯ ಲೇಖನಗಳನ್ನು ಹೊಂದಿ ಮೈವೆತ್ತಿಕೊಂಡಿರುವ ಪುಸ್ತಕ: ಚಿರಪರಿಚಿತ ಜನಪ್ರಿಯ ಲೇಖಕ ರೋಹಿತ್ ಚಕ್ರತೀರ್ಥರವರ ನಭಾರಣ್ಯದ ಮಾಯಾಮೃಗ.

ಯಾವನೇ ಮನುಷ್ಯನಾದರೂ ಬುದ್ದಿ ತಿಳಿದ ಮೇಲೆ ಸಹಜವಾಗಿಯೇ ತಾರೆಗಳ ವರ್ಣರಂಜಿತ ಪರದೆಯಾದ ಆಗಸವನ್ನು ದಿಟ್ಟಿಸಿ ” ಅಲ್ಲೇನಿರಬಹುದು?” ಎಂದು  ಸೋಜಿಗದಿಂದ ವಿಚಾರ ಮಾಡಲಿಕ್ಕೆ ಸಾಧ್ಯ. ಇಂದಿನ ಖಗೋಳ ಶಾಸ್ತ್ರದ ಪ್ರಚಲಿತ ವಿಷಯಗಳನ್ನು ಆಯ್ದುಕೊಂಡು, ದೇಶ-ಕಾಲ(space time), ಕಪ್ಪು ಕುಳಿ( black hole). ಅದೃಶ್ಯ ಶಕ್ತಿ ಡಾರ್ಕ್ ಎನರ್ಜಿ, ಕ್ವಾನ್ಟಮ್ ಮೆಕಾನಿಕ್ಸ್ ಬಗೆಗಿನ ಹಲವಾರು ಕಠಿಣ ಪ್ರಶ್ನೆಗಳಿಗೆ ಲೇಖಕರು ಒಂದೊಂದಾಗಿ ತಮ್ಮದೇ ಆದ ಮಣ್ಣಿನ ಸೊಗಡಿನ ಸರಳ ದಿನಬಳಕೆಯ ಕನ್ನಡದ ಉಪಮೆ ಉದಾಹರಣೆಗಳ ಮೂಲಕ ಉತ್ತರಿಸುತ್ತಾ ಹೋಗಿದ್ದಾರೆ. ಹಲವು ವೈಜ್ಞಾನಿಕ ಸಿದ್ಧಾಂತಗಳನ್ನೂ, ಆವಿಷ್ಕಾರಗಳನ್ನೂ ಸವಿವರವಾಗಿ ಪಟ್ಟಿ ಮಾಡಿ, ಎಲ್ಲವನ್ನೂ ನಿರ್ದಿಷ್ಟವಾದ ವಾದಸರಣಿಯಲ್ಲಿ ಮಂಡಿಸುತ್ತಾ, ಅಲ್ಲಲ್ಲಿ ಚಿತ್ರಲೇಖನಗಳನ್ನು ಅದಕ್ಕೆ ಬೆಂಬಲವಾಗಿ ನೀಡಿ, ಸಾಮಾನ್ಯ ಓದುಗನೂ ಕುತೂಹಲದಿಂದ ‘ಕವರ್ ಟು ಕವರ್’ ಓದಿಕೊಂಡು ಹೋಗುವಂತೆ ಪ್ರೇರೇಪಿಸಿದ್ದಾರೆ.

ರೋಹಿತ್ ಲೇಖನಿಯಿಂದ ಚಿಮ್ಮುವ ಕ್ಲಿಷ್ಟ ವಿಚಾರಗಳೂ ಸರಳ ಸುಂದರವಾಗಿ ನಮಗೆ ಸ್ಪಷ್ಟವಾಗುತ್ತಾ ಹೋಗುತ್ತವೆ. ವಿಜ್ಞಾನಿಗಳ ಅನ್ವೇಷಣೆಗಳ ಇತಿಹಾಸದಿಂದ ಸಂಗ್ರಹಿಸಲ್ಪಟ್ಟ ಉಪಯುಕ್ತ ವೈಜ್ಞಾನಿಕ ವಿಚಾರಗಳ ರೋಚಕ ಚಿತ್ರ ಈ ಪುಸ್ತಕದಲ್ಲಿದೆ, ಅದರಲ್ಲಿ ಆಸಕ್ತಿಯಿದ್ದ ಓದುಗರಿಗೆ ಇದು ಮೃಷ್ಟಾನ್ನ ಭೋಜನವೇ ಸರಿ!

ನನ್ನ ಮತ : 5/5