ಮಾದರೀ ಹೋರಾಟಗಾರರ ಮುಂದಾಳತ್ವದಲ್ಲಿ ಪ್ರಾಯೋಜಿತ ಪ್ರತಿಭಟನೆಗಳು
– ಎಸ್. ಎನ್. ಭಾಸ್ಕರ್
ದಲಿತಪರ ಹೋರಾಟ, ಚಳುವಳಿಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ದಲಿತ ಸಂಬಂಧಿ ಸಂಘಟನೆಯ ಮುಖಂಡರೊಬ್ಬರು ತಮ್ಮ ಚಳುವಳಿ, ಧ್ಯೇಯ ಗಳ ಬಗ್ಗೆ ಮಾತನಾಡುತ್ತಾ, ಈ ಹಿಂದೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರು ಹೇಳಿದ್ದ ಈ ಮಾತುಗಳನ್ನು ಉಲ್ಲೇಖಿಸುತ್ತಾರೆ.
“ಹಿಂದೂ ಧರ್ಮವೆಂಬುದು ಬಹು ಮಹಡಿಗಳನ್ನು ಹೊಂದಿರುವ ಒಂದು ಕಟ್ಟಡವಿರುವ ಹಾಗೆ. ವಿಪರ್ಯಾಸವೆಂದರೆ ಇಲ್ಲಿ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಹೋಗಲು ಯಾವುದೇ ಮೆಟ್ಟಿಲುಗಳಿಲ್ಲ. ನೆಲಮಹಡಿಯಲ್ಲಿರುವವನು ಕೊನೆಯ ತನಕ ಅಲ್ಲೇ ಇರಬೇಕಾಗುತ್ತದೆ. ಮೇಲ್ಮಹಡಿಯಲ್ಲಿರುವವನು ಕೊನೆಯವರೆಗೂ ಮೇಲ್ಮಟ್ಟದಲ್ಲಿಯೇ ಇರುವಂತೆ ನೋಡಿಕೊಳ್ಳಲಾಗುತ್ತದೆ” ಮತ್ತಷ್ಟು ಓದು