ವಿಷಯದ ವಿವರಗಳಿಗೆ ದಾಟಿರಿ

Archive for

9
ಡಿಸೆ

‘ಶಿಕ್ಷಣ ಕ್ರಾಂತಿ’ಯ ಅನಿವಾರ್ಯತೆ

– ವಿನಾಯಕ ಪೈ
ಉಪನ್ಯಾಸಕರು
ಉಡುಪಿ

swami-vivekananda-quotes-educationಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು
– ಸ್ವಾಮಿ ವಿವೇಕಾನಂದ

ವಿವೇಕಾನಂದರು ಭಾರತ ಕಂಡಂತಹ ಶ್ರೇಷ್ಟ ಚಿಂತಕ, ಧೀರ ಸನ್ಯಾಸಿ, ಅಪ್ರತಿಮ ದೇಶ ಪ್ರೇಮಿ. ಸಾಮಾಜಿಕ ಒಡಕುಗಳ ವಿರುದ್ಧ ಪ್ರತಿಭಟಿಸಿ ಜಾಗೃತಿ ಸೃಷ್ಟಿಸಿದ ಸಮಾಜ ಸುಧಾರಕ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಹಿರಿಮೆಯನ್ನು, ದೇಶದ ಅಂತಃಸತ್ವವನ್ನು ಮನೆ ಮನೆಯಲ್ಲಿ ಪಸರಿಸಿ ರಾಷ್ಟ್ರ ದೀವಿಗೆಯ ಬೆಳಕನ್ನು ಎಲ್ಲೆಲ್ಲೂ ಚೆಲ್ಲಿದ ಯುಗಪುರುಷ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತದ ಬಗೆಗಿನ ದ್ವಂದ್ವಗಳನ್ನು, ಕೀಳರಿಮೆಯನ್ನು ಹೋಗಲಾಡಿಸಿ ಭಾರತ ಸರ್ವಕಾಲಕ್ಕೂ ಶ್ರೇಷ್ಟ ಎಂದು ಭೋಗರಾಷ್ಟ್ರಗಳಲ್ಲಿ ಜ್ಞಾನೋದಯಗೊಳಿಸಿದ  ಪವಿತ್ರ ಬೋಧಿವೃಕ್ಷದ ಪ್ರತಿರೂಪ ವಿವೇಕಾನಂದರು. ಮತ್ತಷ್ಟು ಓದು »