ಉಡುಪಿಯ ಕೃಷ್ಣ ತಿರುಗಿ ನಿಂತಷ್ಟು ಸುಲಭವಲ್ಲ ’ಮಡೆ ಸ್ನಾನ’ ನಿಲ್ಲುವುದು…!
– ರಾಕೇಶ್ ಶೆಟ್ಟಿ
“ಮಡೆಸ್ನಾನ ಅಥವಾ ಎಂಜೆಲೆಲೆ ಮೇಲೆ ಉರುಳು ಸೇವೆ ಮಾಡುವುದನ್ನು ನಿಷೇಧಿಸುವುದರಿಂದ ಯಾವ ರೀತಿ ಲಾಭವೂ ಇಲ್ಲ ನಷ್ಟವೂ ಇಲ್ಲ. ನಾನು ಈ ವಿಷಯದಲ್ಲಿ ತಟಸ್ಥ ನೀತಿ ಅನುಸರಿಸುತ್ತೇನೆ” ಹೀಗಂತ ಹೇಳಿರೋದು ಪೇಜಾವರಶ್ರೀಗಳು…!
ಒಂದು ಕಡೆ ದಲಿತ ಕಾಲೋನಿಗಳಲ್ಲಿ ಓಡಾಡಿ ಹಿಂದೂ ಧರ್ಮವನ್ನು ಉದ್ಧರಿಸುವ ಮತ್ತು ಮತಾಂತರವನ್ನ ವಿರೋಧಿಸುವ ಮಾತನಾಡುವ ಶ್ರೀಗಳಿಗೆ ಮಡೆಸ್ನಾನದಿಂದ ಯಾವ ಧರ್ಮಕ್ಕೆ,ಹೇಗೆ ನಷ್ಟವಾಗಬಹುದು ಮತ್ತು ಹಿಂದೂ ಅನ್ನುವ ಧರ್ಮದ ಬಗ್ಗೆ ಮಾಧ್ಯಮಗಳ ಮೂಲಕ ಜಗತ್ತಿಗೆ ಯಾವ ಸಂದೇಶ ತಲುಪಬಹುದು ಅನ್ನುವುದರ ಅರಿವಿರಲಿಕ್ಕಿಲ್ಲವಾ? ಇದ್ದರೆ ಈ ರೀತಿ ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ಹೇಳಿಕೆ ನೀಡುತಿದ್ದರಾ?
’ಮಡೆ ಸ್ನಾನ’ ಅನ್ನುವ So Called ಧಾರ್ಮಿಕ ನಂಬಿಕೆ(!?) ನಡೆದುಕೊಂಡು ಬಂದ ಹಾದಿಗೆ ೪೦೦ ವರ್ಷಗಳ ಇತಿಹಾಸವಿದೆ.ಆದರೆ ತೀರಾ ಇದು ಮಾಧ್ಯಮಗಳಲ್ಲಿ ದೊಡ್ದ ಮಟ್ಟದ ಸುದ್ದಿ ಮಾಡಲಿಕ್ಕಾರಂಭಿಸಿದ್ದು ಬಹುಷಃ ಕಳೆದ ವರ್ಷದಿಂದಲೇ…! ಸದ್ಯ.ಈಗಲಾದರೂ ನಮ್ಮ ದನಿ ಕೇಳಿಬರುತ್ತಿದೆ ಅನ್ನುವ ಸಂತೋಷದ ಜೊತೆ ಜೊತೆಗೆ ಇಂತ ಅನಿಷ್ಟ ಪದ್ಧತಿಗಳಿಗೆ ಬ್ರೇಕ್ ಹಾಕಬೇಕಾದ ಸರ್ಕಾರ ಮತ್ತು ಸರ್ಕಾರದ ಸಚಿವರೇ ’ನೋ ಕಮೆಂಟ್ಸ್’ ಅನ್ನುವುದು ನೋಡಿ ಬೇಸರವೂ ಆಗುತ್ತದೆ.
ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ – ಒಂದು ಸಮೀಕ್ಷೆ
- ಇದೆ
- ಇಲ್ಲ
- ಹೌದು
- ಇಲ್ಲ
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 13- ಯಂತ್ರಗಳು, ಯಾಂತ್ರಿಕರು…
–ರಾಮಚಂದ್ರ ಪಿ
ಆಧುನಿಕ ವಿಜ್ಞಾನವು ಇತ್ತ ಕೊಡುಗೆಗಳನ್ನು ನಾವು ಜೀವನದಲ್ಲಿ ಉಪಯೋಗಿಸಿಕೊಳ್ಳಲೇ ಬೇಕಷ್ಟೆ. ಕಲೆಗೂ ಕೆಲವು ಕೊಡುಗೆಗಳನ್ನು ವಿಜ್ಞಾನವು ಇತ್ತಿದೆ. ಇತರ ಕಲೆಗಳಂತೆ ಯಕ್ಷಗಾನದಲ್ಲೂ ಅವುಗಳ ಉಪಯೋಗವಾಗುತ್ತಿದೆ.
ಸರಿಯಾಗಿ ಉಪಯೋಗ ಮಾಡಿಕೊಳ್ಳುವ ಮೊದಲು, ವಿಜ್ಞಾನವಿತ್ತ ಹಲವು ಸಲಕರಣೆಗಳೂ, ‘ಅನುಕೂಲಗಳೂ’ ನನಗೆ ಉಪಟಳವಿತ್ತಿವೆ.
ನಾವು ಉತ್ತರ ಕನ್ನಡ ಪ್ರವಾಸ ಕೈಕೊಂಡ ಮಾರನೆಯ ವರ್ಷ ಡೇರೆಯ ಅಗತ್ಯ ನಮಗಾಯಿತು. ಅದಕ್ಕೆ ಮೊದಲೇ ಶ್ರೀ ಕೊರಗಪ್ಪ ಶೆಟ್ಟರು ತಮ್ಮ ಮೇಳಕ್ಕೆ ಒಂದು ಡೇರೆಯನ್ನು ಮಾಡಿಸಿಕೊಂಡಿದ್ದರು. ನಮ್ಮ ಮನೆಯಲ್ಲೇ ಬೇಕಾದ ವಸ್ತುಗಳನ್ನು ತರಿಸಿ ಹೊಸ ಡೇರೆಯೊಂದನ್ನು ತಂದೆಯವರು ಮಾಡಿಸಲು ತೊಡಗಿದರು. ಮೊದಲು ಹೊರಗಿನ ಆವರಣ ಮಾತ್ರ ಸಾಕು ಎಂದಿದ್ದುದು, ಅನಂತರ- ಆಟವಾಡುವ ಸ್ಥಳದ ಅರ್ಧ ಬಯಲನ್ನು ಮುಚ್ಚುವ ದೊಡ್ಡ ಡೇರೆಯಾಗಿಯೇ ಪರಿವರ್ತನೆಗೊಂಡಿತು. ಆಗ ಅದಕ್ಕೆ ತಕ್ಕಂತೆ ಕಟ್ಟಿ- ಬಿಚ್ಚಿ- ಜೋಡಿಸಿ ಸಾಗಿಸಬಲ್ಲ ಒಂದು ರಂಗಸ್ಥಳವೂ ಬೇಕು ಎನಿಸಿತು. ಅನಂತರ ಬಂದುದು ವಿದ್ಯುತ್ತಿನ ವ್ಯವಸ್ಥೆ; ಧ್ವನಿವರ್ಧಕದ ಏರ್ಪಾಡು.
ವಿಶ್ವ ಸಂಸ್ಥೆ ಹೆಸರಲ್ಲಿ ಮತ್ತಿತರ ಮಿಂಚೆ ಮೋಸಗಳು!!!
–ಪ್ರಶಸ್ತಿ ಪಿ
ಶೀರ್ಷಿಕೆ ನೋಡಿ ಆಶ್ಚರ್ಯ ಆಗ್ತಾ ಇದೆಯಾ? ಜೊತೆಗಿರುವ ಚಿತ್ರಗಳನ್ನು ನೋಡಿ.. ವಿಶ್ವಸಂಸ್ಥೆಯಿಂದ ಎಂಬ ಸಂದೇಶವನ್ನು ಒಳಪಟ್ಟಿಯಲ್ಲಿ ನೋಡಿ ಒಮ್ಮೆ ಆಶ್ಚರ್ಯವಾಯಿತು.. ಅದು spam ಗೆ ಹೋಗದೇ ಒಳಪೆಟ್ಟಿಗೆಗೇ ಬಂದಿದೆಯೆಂದು ಒಮ್ಮೆ ಆಶ್ಚರ್ಯವಾಯಿತು..
ತೆಗೆದು ನೋಡಿದರೆ “ನಿಮಗೆ ಬರಬೇಕಾದ ಸಂಬಳ ಬಂದಿದೆಯಾ?” ಎಂಬ ಸಂದೇಶ. ತಕ್ಷಣ ನಿಮ್ಮ ಹೆಸರು, ವಿಳಾಸ, ಪಾಸಪೋರ್ಟು ನಂಬರ್, ಮೊಬೈಲು, ಸ್ಥಿರ ದೂರವಾಣಿ ನಂಬರುಗಳೊಂದಿಗೆ ಪ್ರತಿಕ್ರಯಿಸಿ ಎಂಬ ಒಕ್ಕಣೆ ಬೇರೆ. ಅವರು ಕೊಟ್ಟಿದ್ದ ವೆಬ್ ಕೊಂಡಿ ಸರಿಯಾಗೇ ಇದೆ.. ಸಂಶಯ ಶುರು ಆಯ್ತು..
ನಾನು ವಿಶ್ವಸಂಸ್ಥೆಗೆ ಯಾವ ರೀತಿಯಲ್ಲೂ ಸಂಬಂಧ ಪಟ್ಟವನಲ್ಲ..ಅಂತಹದರಲ್ಲಿ ಅವರೇಕೆ ನನಗೆ, ಯಾತಕ್ಕಾಗಿ ಸಂಬಳ ಕೊಡಬೇಕು? ಮೊಬೈಲ್ ನಂಬರು, ಇತರೆ ಮಾಹಿತಿಗಳನ್ನ ದುರುಪಯೋಗಪಡಿಸಿಕೊಳ್ಳುವ ಯಾವುದೋ ವ್ಯವಸ್ಥಿತ ಜಾಲ ಅದಿರಬೇಕು ಅಂತ ಆ ಮಿಂಚೆಯನ್ನು ನಾಶ ಮಾಡಿದೆ. ಅದಕ್ಕೂ ಮೊದಲು ಯಾವ ಸಂಬಳ ಎಂಬ ಉತ್ತರ ಕಳಿಸಿದೆ. ಯಾವ ಪ್ರತಿಕ್ರಿಯೆಯೂ ಬರಲಿಲ್ಲ..
ನಿಮಗೂ ಇಂಥಹ ಸಂದೇಶ ಬರಬಹುದು.. ಅವರು ಕೇಳಿದ ಮಾಹಿತಿ ಕೊಟ್ಟು ಮೋಸ ಹೋಗದಿರಿ.. ಮತ್ತು ಆ ಮಿಂಚೆಯನ್ನು ಈ ವಿಳಾಸಕ್ಕೆ forward ಮಾಡಿರಿ.. FraudDesk@city-of-london.pnn.police.uk
ಇಲ್ಲೂ ದೂರು ನೀಡಬಹುದು http://www.indiacyberlab.in/cybercrimes/report.htm. ಅದರಲ್ಲಿ ನೀಡಿರೋ ಕೊಂಡಿ ಕೆಲವೊಮ್ಮೆ ತೆರೆಯುವುದಿಲ್ಲ.. ಆಗ ಮತ್ತೆ ಪ್ರಯತ್ನಿಸಿ





