ಹನಿ ಹನಿ ಪ್ರೇಂ ಕಹಾನಿ
– ಮಧು ಚಂದ್ರ, ಭದ್ರಾವತಿ
ಅತಿಥಿಗಳಿಗೆ ಕುಡಿಯಲು ನೀರು ಕೊಟ್ಟು ಉಪಚರಿಸುತ್ತಿರಿ. ಇದು ಅನಾದಿ ಕಾಲದಿಂದಲೂ ನಡೆದು ಬಂದ ಭಾರತೀಯ ಸಂಸ್ಕೃತಿ. ಈ ಸಂಸ್ಕೃತಿಯನ್ನು ತಪ್ಪದೆ ಪಾಲಿಸುವವರನ್ನು ನಾವು ಭಾರತೀಯನೆನ್ನಬಹುದು.ನೀರನ್ನು ಕೊಟ್ಟು ಉಪಚರಿಸುವುದು ಭಾರತೀಯತೆ, ನೀರು ಇಲ್ಲದಿದ್ದರೆ ಮತ್ತೇನು ಮಾಡುವಿರಿ ಎಂದು ಎಂದಾದರೂ ಯೋಚಿಸಿದ್ದಿರ? ಬಹುಶ ಇರಲಿಕ್ಕಿಲ್ಲ. ಕಾರಣ ಇಷ್ಟೇ ನಮ್ಮಲ್ಲಿ ನೀರಿನ ಮೂಲ ಮತ್ತು ಅಂತರ್ಜಲಕ್ಕೆ ಕೊರತೆ ಇಲ್ಲ ಎನ್ನುವ ಹುಚ್ಚು ಪ್ರಮೇಯ ಇರಬಹುದು. ಈ ಹುಚ್ಚು ಪ್ರಮೇಯವೇ ಇಂದಿನ “ಹನಿ ಹನಿ ಪ್ರೇಂ ಕಹಾನಿ” ಲೇಖನ. ಹಿಂದೆ ನಾನೊಂದು ಓದಿದದ ಕಥೆಯನ್ನು ನಿಮಗೆ ಹೇಳಬಯಸುತ್ತೇನೆ. ಇದು ನೈಜ ಘಟನೆಯೋ ಇಲ್ಲವೋ ನನಗೆ ಅರಿವಿಲ್ಲ ಅದರೂ ಲೇಖನಕ್ಕೆ ಸೂಕ್ತ ಎಂದೆನಿಸುತು.
ವಿಶ್ವವನ್ನೇ ಗೆದ್ದ ಅಲೆಗ್ಸಾಂಡರ್ ಯಾರಿಗೆ ಗೊತ್ತಿಲ್ಲ ಹೇಳಿ.
ಹಲವು ದೇಶಗಳನ್ನುಅಲೆಗ್ಸಾಂಡರ್ ಗೆದ್ದು ಮರುಭೂಮಿಯ ದಾರಿಯಲ್ಲಿ ಸಾಗುತ್ತಿರುವ ಸಮಯದಲ್ಲಿ ಅವನ ಉಗ್ರಾಣದಲ್ಲಿ ಇದ್ದ ಆಹಾರ ಸಾಮಗ್ರಿಗಳು ಖಾಲಿಯಾಗುತ್ತ ಬಂದವು. ಇನ್ನೇನು ಮುಂದಿನ ಊರಿನಲ್ಲಿ ಸಂಗ್ರಹಿಸಬಹುದು ಎಂದು ಮುಂದೆ ಮುಂದೆ ನಡೆದನು. ಆದರೆ ಎತ್ತ ನೋಡಿದರು, ಬರಿ ಮರುಭೂಮಿ ಎಲ್ಲಿಯೋ ಊರಿರುವ ಲಕ್ಷಣಗಳು ಕಾಣಲಿಲ್ಲ. ಕಡೆಗೆ ಅವನ ಹತ್ತಿರವಿದ್ದ ಆಹಾರ ಸಾಮಗ್ರಿಗಳು ಖಾಲಿಯಾದವು. ವಿಶ್ವವನ್ನು ಗೆದ್ದ ವೀರನಿಗೆ ಹೊಟ್ಟೆ ಹಸಿವನ್ನು ಗೆಲ್ಲಲಾಗಲಿಲ್ಲ.
ತಾನು ನೀರು ಕುಡಿಯದೆ ಇದ್ದರೆ ಬದುಕುವುದಿಲ್ಲ ಅರಿತನು. ಅದೇ ಸಮಯದಲ್ಲಿ ದಾರಿಹೋಕನೋಬ್ಬನು ಸಿಕ್ಕನು. ಅವನ ಹತ್ತಿರ ಇದ್ದ ನೀರನ್ನು ಕಂಡು ” ನನಗೆ ನಿನ್ನ ಹತ್ತಿರ ಇರುವ ನೀರು ಬೇಕು, ನನಗೆ ಕೊಡು. ದಯವಿಟ್ಟು, ಏನು ಬೇಕು ಕೇಳು ನಾನು ಕೊಡುತ್ತೇನೆ ” ಎಂದು ಅಲೆಗ್ಸಾಂಡರ್ ಹೇಳಿದನು.