ವಿಷಯದ ವಿವರಗಳಿಗೆ ದಾಟಿರಿ

Archive for

5
ಡಿಸೆ

ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ

– ಮು.ಅ. ಶ್ರೀರಂಗ,ಬೆಂಗಳೂರು

ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕುನಾವುಗಳೆಲ್ಲರೂ “ಭೂತದ ಬಂಗಲೆ”ಯೊಳಗೆ ಬಂಧಿತರಾಗಿರುವಂತಹ ವ್ಯಕ್ತಿಗಳು. ಸೆಕೆಂಡು ಸೆಕೆಂಡುಗಳು ಜಾರಿದಂತೆ “ವರ್ತಮಾನ’ ಕಳೆದು “ಭೂತದ ಉಗ್ರಾಣಕ್ಕೆ “ಸೇರಿಹೋಗುತ್ತದೆ  ಗೋಪಾಲ ಕೃಷ್ಣ ಅಡಿಗರ ಕವಿತೆಯ ಈ ಸಾಲು –. “ವರ್ತಮಾನ ಪತ್ರಿಕೆಯ ತುಂಬಾ ಭೂತದ ಸುದ್ದಿಗಳೇ” — ಆಗಾಗ ನೆನಪಿಗೆ ಬರುತ್ತಿರುತ್ತದೆ. ನಮ್ಮೆಲ್ಲರ ನೆನಪಿನ ಪೆಟ್ಟಿಗೆ ತೆರೆದಿಟ್ಟರೆ ಕೆಲವು ಸಿಹಿ ಹಲವು ಕಹಿ ನೆನಪುಗಳು ಹೊರಕ್ಕೆ ಬರಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತವೆ. ನನ್ನ ಆ ಪೆಟ್ಟಿಗೆ ತರೆದು ಒಂದಷ್ಟನ್ನು ನಿಮ್ಮ ಜತೆ ಹಂಚಿಕೊಳ್ಳಬೇಕೆಂಬ ಆಸೆಯ ಫಲವೇ ಈ “ನಿನ್ನೆಗೆ ನನ್ನ ಮಾತು”.

ಸುಮಾರು ಮೂವತ್ತು ವರ್ಷಗಳ ಹಿಂದೆ ನಾನು ರಾಮನಗರದಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸ್ನೇಹಿತರೊಬ್ಬರು ಹೇಳಿದ “we  are all misplaced in our life”ಎಂಬ ಮಾತು ನನಗೆ ಆಗಾಗ ನೆನಪಿಗೆ ಬರುತ್ತಿರುತ್ತದೆ. ಇದು ಒಂದು ರೀತಿಯಲ್ಲಿ “ಅತೃಪ್ತಿಯ” ಸಂಕೇತವಾಗಿರಲೂಬಹುದು. ಈ ಅನುಮಾನದ ಪಿಶಾಚಿ ನಮ್ಮನ್ನು ಕಾಡದಿದ್ದರೆ ಆರಾಮವಾಗಿರಬಹುದು. ಅದೇ ಸರಿ ಎಂದು ಅನಿಸುತ್ತದೆ. ಆದರೆ ಆ ಅತೃಪ್ತಿ ನಮ್ಮ ಮುಂದಿನ ಸಾಧನೆಗೆ,ದಾರಿ ದೀಪವಾಗಬೇಕೇ ಹೊರತು ಇತರರ ಅಭಿವೃದ್ದಿಯನ್ನು ಕಂಡು ನಮ್ಮನ್ನು ನಾವೇ ಸುಟ್ಟಿಕೊಳ್ಳುವಂತಹ ಕಿಚ್ಚಾಗಬಾರದು.

ಮತ್ತಷ್ಟು ಓದು »