ವಿಷಯದ ವಿವರಗಳಿಗೆ ದಾಟಿರಿ

Archive for

16
ಡಿಸೆ

ಬೆಂಗಳೂರು ಸುಂದರವಾಗಬೇಕೇ – ಹಾಗಿದ್ದರೆ, ಒಂದು ಸಣ್ಣ SMS ಕಳುಹಿಸಿ!

Katte Sathyaಬೆಂಗಳೂರಿಗರೇ,

  • ನಿಮಗೆ ಬೆಂಗಳೂರಿನ ಕಿತ್ತು ಹೋಗಿರುವ ರಸ್ತೆಗಳನ್ನು ನೋಡಿ ಬೇಸರವಾಗಿದೆಯೇ?
  • ನಿಮಗೆ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಚೆಲ್ಲಿರುವ ಕಸವನ್ನು ಕಂಡು ರೋಸಿ ಹೋಗಿದೆಯೇ?
  • ಬೆಂಗಳೂರಿನಲ್ಲಿ BBMP ಕೆಲಸ ಮಾಡುತ್ತಿದೆಯೋ ಇಲ್ಲವೋ ಎನಿಸುತ್ತಿದೆಯೇ?

ಇದನ್ನೆಲ್ಲಾ ಸರಿಪಡಿಸಲು ನಾವು ಏನೂ ಮಾಡುವುದು ಬೇಡವೇ? ಎಲ್ಲಾ ಜವಾಬ್ದಾರಿಯನ್ನು BBMP ಮೇಲೆ ಹೊರಿಸಿ, ನಾವು ಮನೆಯಲ್ಲಿ ಕಣ್ಮುಚ್ಚಿ ಹಾಯಾಗಿ ನಿದ್ದೆ ಹೋದರೆ, ಎಲ್ಲವೂ ಸರಿ ಹೋಗುತ್ತದೆಯೇ? ಕನಿಷ್ಠ ಪಕ್ಷ ನಮ್ಮ ದೂರುಗಳನ್ನಾದರೂ BBMPಗೆ ತಲುಪಿಸುವುದನ್ನು ಮಾಡಿದ್ದೇವೆಯೇ? ಮನೆಯಲ್ಲೇ ಕುಳಿತು ಗೊಣಗಿದರೆ, ಗೋಳಾಡಿದರೆ, ಏನು ಪ್ರಯೋಜನ? ಅದನ್ನಾದರೂ ರಸ್ತೆಯಲ್ಲಿ ಮಾಡಿದರೆ ಸುದ್ದಿಯಾಗುತ್ತದೆ.

ನಮ್ಮೆಲ್ಲಾ ತೊಂದರೆಗಳನ್ನೂ ನಮ್ಮ ಮೇಯರ್ ಅವರಿಗೆ ತಿಳಿಸೋಣ. ಒಂದು ಸಣ್ಣ SMS ಕಳುಹಿಸಿದರೂ ಸಾಕು. ಅವರು, ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಜನರು ತಮ್ಮ ತೊಂದರೆಗಳನ್ನು ತಮಗೇ ನೇರವಾಗಿ ತಿಳಿಸಬಹುದೆಂದು ಹೇಳಿದ್ದಾರೆ.ಅವರು ಹೇಗೆ ಎಲ್ಲವನ್ನು ಸರಿಪಡಿಸುತ್ತಾರೋ ಗೊತ್ತಿಲ್ಲ. ಕನಿಷ್ಠಪಕ್ಷ ನಮ್ಮ ದೂರನ್ನಾದರೂ ಅವರಿಗೆ ತಿಳಿಸೋಣ.

ಮತ್ತಷ್ಟು ಓದು »

16
ಡಿಸೆ

ಸೆಕ್ಯುಲರ್ ಮೀಡಿಯಾದ ನವಕಣ್ಮಣಿ ’ಕೇಜ್ರಿವಾಲ್’

– ಪ್ರಹ್ಲಾದ್ ಜೋಷಿ

AAPಇನ್ನು 6 ತಿಂಗಳಲ್ಲಿಯೇ ಲೋಕಸಭಾ ಚುನಾವಣೆ ಬರಲಿದೆ ಬಹುತೇಕ ಎಲ್ಲ ಪಕ್ಷಗಳು ಇದಕ್ಕೆ ತಯಾರಿ ನಡೆಸಿವೆ, ದೇಶದ ೨ ಪಕ್ಷಗಳಾದ ಕಾಂಗ್ರೆಸ್ ಇಲ್ಲವೇ ಬಿಜೆಪಿ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿವೆ. ಕಾಂಗ್ರೆಸ್ಸಿನ ಜನ ವಿರೋಧಿ ನೀತಿಗಳು ಅಧಿಕಾರ ಹಿಡಿಯಲು ಮುಳುವಾಗಿದೆ, ಇನ್ನು ಬಿಜೆಪಿ ಮೋದಿಯನ್ನು ಅಖಾಡಕ್ಕೆ ಇಳಿಸುತ್ತಿದೆ ಇನ್ನು ಮೊನ್ನೆ ನಡೆದ ಚುನಾವಣಾ ಫಲಿತಾಂಶ ನೋಡಿದರೆ ಮೋದಿಯ ಕಾರ್ಯತಂತ್ರ ಫಲ ಕೊಟ್ಟಿದೆ, ಇದು ಇನ್ನು ಕಾಂಗ್ರೆಸ್ಸಗೆ ಚಿಂತೆಗಿಡುಮಾಡಿದೆ.ಮೋದಿಯ ಜನಪ್ರಿಯತೆ ಕಾಂಗ್ರೆಸ್ಸಿಗೆ ಚಿಂತೆ ಉಂಟು ಮಾಡಿದೆ, ಇಂತಹ ಸ್ಥಿತಿಯನ್ನು ಕಾಂಗ್ರೆಸ್ ಮೊದಲೇ ಊಹೆ ಮಾಡಿತ್ತು.

ಮೋದಿ ಮಾಡಿದ ಅಭಿವೃದ್ಧಿ ಯಾವಾಗ ಜನರ ತಲುಪಿತೋ ಯಾವಾಗ ಮೋದಿಯನ್ನು ಮುಸ್ಲಿಮರು ಬೆಂಬಲಿಸಿದರೋ ಕಾಂಗ್ರೆಸ್ ನಾಯಕರು ಸಣ್ಣದಾಗಿ ಬೆವರತೊಡಗಿದರು, ಮೋದಿಯ ಸಮನಾದ ನಾಯಕರನ್ನು ಹುಡುಕತೊಡಗಿದರು, ರಾಹುಲನಿಂದ ಉತ್ತರ ಪ್ರದೇಶ ಅದಾಗಲೇ ಸೋತಾಗಿತ್ತು, ಮೋದಿಯ ಮುಂದೆ ರಾಹುಲ್ ನಿಲ್ಲುವುದಿಲ್ಲ ಎಂಬುದು ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತಿತ್ತು, ಕಾಂಗ್ರೆಸ್ಸಿನ ಹಗರಣಗಳು ಜನರನ್ನು ಕಾಂಗ್ರೆಸ್ಸಿನಿಂದ ದೂರಮಾಡುತ್ತಿದ್ದವು, ಕಾಂಗ್ರೆಸ್ ಒಬ್ಬ ಸಮರ್ಥ ನಾಯಕನಿಗೆ ಹುಡುಕುತ್ತಿತ್ತು ಆಗ ಕಂಡವರೇ ಅರವಿಂದ ಕೇಜ್ರಿವಾಲ್.

ಮತ್ತಷ್ಟು ಓದು »