ಆಪ್ ಎಂಬ ನೀರಮೇಲಣ ಗುಳ್ಳೆ …
– ಅವಿನಾಶ್ ಹೆಗ್ಡೆ
ಒಂದು ರಾಜಕೀಯ ಪಕ್ಷಕ್ಕೆ ಸೈದ್ದಾಂತಿಕ ಹಿನ್ನೆಲೆ ಇಲ್ಲದೆ ಇದ್ದರೆ, ಮತ್ತು ಸ್ಪಷ್ಟ ಗುರಿಯಿಲ್ಲದೆ ಇದ್ದರೆ ಏನಾಗಬಹುದು ಅನ್ನುವುದಕ್ಕೆ ಒಂದು ಸ್ಪಷ್ಟ ಉದಾಹರಣೆ ಆಮ್ ಆದ್ಮಿ ಪಾರ್ಟಿ …. ಆಪ್ ರಾಜಕೀಯಕ್ಕೆ ಪ್ರವೇಶ ಕೊಡುತ್ತೇವೆ ಅಂದಾಗ ಅವರನ್ನ ಗಂಭೀರವಾಗಿ ಪರಿಗಣಿಸಿದವರ ಸಂಖ್ಯೆ ತುಂಬಾ ಕಡಿಮೆ.ಆದರೆ ದೆಹಲಿ ಚುನಾವಣಾ ಆಪ್ ಕಡೆ ದೇಶ ನೋಡುವಂತೆ ಮಾಡಿದ್ದು ಸುಳ್ಳಲ್ಲ ..
ಆದರೆ ಬಂಗಾಳದಲ್ಲಿ ೩೪ ವರ್ಷದ ಸರಕಾರವನ್ನ ಬೇರು ಸಮೇತ ಕಿತ್ತು ಹಾಕಿದ್ದ ಮಮತಾ ಬ್ಯಾನರ್ಜಿಗೆ ಕೂಡ ಕೊಡದ ಪ್ರಚಾರವನ್ನ ಮಾಧ್ಯಮಗಳು ಆಪ್ ಗೆ ಕೊಟ್ಟಿದ್ದವು ಮತ್ತು ಅದರ ಹಿಂದೆ ಮಾದ್ಯಮಗಳ ಸ್ಪಷ್ಟ ಕಮ್ಯುನಿಸ್ಟ್ ಹಿತಾಸಕ್ತಿ ಇತ್ತು,ಬಿಜೆಪಿಯ ಗೆಲುವನ್ನ ಮರೆಮಾಚುವ ಉದ್ದೇಶ ಸ್ಪಷ್ಟವಾಗಿತ್ತು. ಲೋಕಪಾಲ್ ಚಳುವಳಿಯ ಹೋರಾಟವನ್ನ ಮತ್ತು ಅಣ್ಣ ಹಜಾರೆಯವರನ್ನ ಬಳಸಿಕೊಂಡಿದರ ಬಗ್ಗೆ ಮಾಧ್ಯಮಗಳು ಈ ಸಂದರ್ಭದಲ್ಲಿ ಯಾಕೆ ಕಣ್ಣು ಮುಚ್ಚಿಕೊಂಡವು ಅನ್ನುವುದು ಎಲ್ಲರಿಗು ಗೊತ್ತಿರುವಂತದೆ.ಇರಲಿ …..