ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವ ಹಾಗೂ ಪ್ರತಿನಿಧಿಗಳು- ಭಾಗ:2
-ಶ್ರೀ. ಆಯನೂರು ಮಂಜುನಾಥ್, ರಾಜ್ಯಸಭಾ ಸದಸ್ಯರು (-ಅಕ್ಷರಕ್ಕೆ ಇಳಿಸಿದವರು: ಸಂತೋಷ ಈ. ಕುವೆಂಪು.ವಿ.ವಿ, ಶಂಕರಘಟ್ಟ)-ಭಾಗ 1
ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕ ಪಾಠ ಮಾಡುವಾಗ ಒಂದು ಹುಡಗಿಯ ಹೆಗಲ ಮೇಲೆ ಕೈ ಹಾಕಿಕೊಂಡು ಪಾಠ ಮಾಡಿದ್ದಾನೆ. ಇದರ ಪರಿಣಾಮ ದೊಡ್ಡ ಗಲಾಟೆಯಾಗಿ ನಾನು ಹೋಗಬೇಕಾಯಿತು. ಆದ್ದರಿಂದ ನಾನು ಹೋದೆ, ಡಿಡಿಪಿಐಗೆ ಹೇಳಿ ಅಮಾನತು ಮಾಡಿಸಿದೆ. ಆದರೆ ಗ್ರಹಚಾರಕ್ಕೆ ಅವನು ನನ್ನ ಜಾತಿಯವನು ಆಗಿದ್ದ, ಹಾಗಾಗಿ ನನ್ನ ಜಾತಿಯವರು ಎಲ್ಲಾ ಬಂದರು. ಯಾರು ಈ ರೀತಿಯ ಕೆಲಸ ಮಾಡಿಲ್ಲವೇನು? ಏನೋ ಹುಡುಗ ತಪ್ಪು ಮಾಡಿದ್ದಾನೆ. ಕಪಾಳಕ್ಕೆ ಹೊಡೆದು ಬುದ್ಧಿ ಹೇಳ್ತಿವಿ ಬಿಡು. ನೀನು ನಮ್ಮವನಾಗಿ ಹೀಗೆನಾ ಮಾಡೋದು? ಅಂತ ಮಾತನಾಡಿದ್ದರು. ಅದಕ್ಕೆ ನಾನು ಹೇಳಿದೆ ಅವನು ನನ್ನ ಮಗಳ ಮೇಲೆ, ನಿನ್ನ ಮಗಳ ಮೇಲೆ ಕೈ ಹಾಕಿಲ್ಲ ಹಾಗಾಗಿ ನಿನಗೆ ಏನೂ ಅನಿಸುತ್ತಿಲ್ಲ. ಅಕಸ್ಮಾತ್ ಅವನು ನಿನ್ನ ಮಗಳ ಮೇಲೆ ಕೈ ಹಾಕಿದ್ದರೆ? ಎಂದು ಕೇಳಿದೆ. ಅದಕ್ಕೆ ಅವರು ನನ್ನ ಮೇಲೆ ಕೋಪಗೊಂಡು ಹೋದರು. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಇಂಜಿನಿಯರನ ಅಮಾನತು ಮಾಡಿಸಿದೆ. ಅವನು ನನ್ನ ಜಾತಿಯವನೆ ಆಗಿದ್ದ. ಅದಕ್ಕೆ ನಮ್ಮ ಜಾತಿಯವರೆಲ್ಲ ಸೇರಿ ನಮ್ಮ ಜಾತಿಯ ವಿರುದ್ಧ ಇದ್ದಾನೆ ಎಂದು ಹಣೆಪಟ್ಟಿ ಕಟ್ಟುತ್ತಾರೆ. ಈ ರೀತಿಯ ಜನರ ಮಧ್ಯೆ ಹೇಗೆ ರಾಜಕಾರಣ ಮಾಡುವುದು? ಹೇಗೆ ಅಭಿವೃಧ್ಧಿ ರಾಜಕಾರಣ ಮಾಡುವುದು? ನಮ್ಮ ನಿಲವುಗಳನ್ನು ಹೇಗೆ ಪ್ರಕಟ ಮಾಡುವುದು? ನಾವು ನಂಬಿರುವ ಸಿದ್ಧಾಂತಗಳನ್ನು ಓರೆ ಹಚ್ಚಿ ಎಲ್ಲಿ ನೋಡಣ? ಒಂದು ರೀತಿಯಲ್ಲಿ ಶಾಸಕರಾದ ಮೇಲೆ ಸಂಸದರಾದ ಮೇಲೆ ನಮ್ಮ ವ್ಯಕ್ತಿತ್ವ ಎಲ್ಲಿ ಕರಿಗಿ ಹೋಗುತ್ತಿದೆಯೋ ಎಂಬ ಭಯ ನಮ್ಮಗಿದೆ.
ಇವತ್ತು ಮತದಾರರ ನಿರೀಕ್ಷೆ ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಜನರು ತಮ್ಮ ಖಾಸಗಿ ಜೀವನದ ಕೆಲವು ಕಾರ್ಯಕ್ರಮಗಳಿಗೆ ಹಣವನ್ನು ರಾಜಕಾರಣಿಗಳಿಂದ ನೀರಿಕ್ಷಿಸುತ್ತಾರೆ. ಉದಾ:- ಮದುವೆ, ಆಸ್ಪತ್ರೆ ಖರ್ಚು, ಸಾವುಗಳಿಗೆ. ಜೊತೆಗೆ ಜಾತಿಯ ನಿರೀಕ್ಷೆ, ಏರಿಯಾ ಮನೆ ಮುಂದೆ ರಸ್ತೆ ಮಾಡಿಕೊಡಿ. ಹೊಸ ಚರಂಡಿ ಮಾಡಿಸಿ ಎನ್ನುವ ಮೂಲಕ ಅವರಲ್ಲಿ ವ್ಯಕ್ತಿಗತವಾಗಿ ತಮ್ಮ ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸುತ್ತಾರೆಯೇ ಹೊರತು ಕ್ಷೇತ್ರದ ಮತದಾರನಾಗಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರ ನಿರೀಕ್ಷೆ ಇರುವುದಿಲ್ಲ. ಅವರ ನಿರೀಕ್ಷೆಗಳು ಯಾವ ಸ್ವರೂಪದಲ್ಲಿ ಇರುತ್ತವೆ ಎಂದರೆ, ನಮಗೆ ಓಟ್ ಬೇಕು ಅಂದರೆ ಅವರು ಕೇಳುವ ಕಾಲೇಜಿನಲ್ಲಿ ಸೀಟು ಕೊಡಿಸಬೇಕು. ಅವರ ಮಕ್ಕಳಿಗೆ ಕೆಲಸ ಕೊಡಿಸಬೇಕು. ಆಸ್ಪತ್ರೆಗೆ ಹೋದರೆ ಡಾಕ್ಟರಿಗೆ ಪೋನ್ ಮಾಡಿ ಹೇಳಬೇಕು. ಅವರ ಮಕ್ಕಳು ತಪ್ಪು ಮಾಡಿದರೆ ಅವರನ್ನು ಪೋಲಿಸ್ ಠಾಣೆಯಿಂದ ಬಿಡಿಸಬೇಕು. ಅರ್ಹತೆಯಿಲ್ಲದವನಿಗೆ ಸೀಟು ಮತ್ತು ಕೆಲಸ ಕೊಡಿಸಬೇಕು. ಎಲ್ಲಿಂದ ಎಲ್ಲಿಗೆ ನಿರೀಕ್ಷೆ ಅರ್ಥವಾಗುವುದಿಲ್ಲ. ಈ ರೀತಿಯ ವ್ಯವಸ್ಥೆಯ ಮಧ್ಯೆ ರಾಜಕಾರಣಿಗಳಿಗೆ ನಿತ್ಯ ಸವಾಲುಗಳಿವೆ. ಮತ್ತಷ್ಟು ಓದು
ಉಸಿರೇ ಭಾರ: ಇಲ್ಲದಿರೆ ಆಧಾರ!
– ತುರುವೇಕೆರೆ ಪ್ರಸಾದ್
ದೇಶದ ಶತಕೋಟಿ ನಾಗರಿಕರಿಗೆ ಬಯೋಮೆಟ್ರಿಕ್ ಮಾಹಿತಿ ಆಧಾರದಲ್ಲಿ ವಿಶಿಷ್ಟ ಗುರುತಿನ ಸಂಖ್ಯೆ( ಯುಐಡಿ) ನೀಡುವ ಯೋಜನೆಯೇ ಆಧಾರ್. ಈ ಯೋಜನೆ ವಿಶ್ವದಲ್ಲೇ ಪ್ರಥಮ ಮತ್ತು ವಿಶಿಷ್ಟವಾದುದು, ಗುರುತಿನ ದಾಖಲೆಗಳಿಲ್ಲದವರೂ ಆಧಾರ್ ಚೀಟಿ ಪಡೆಯಬಹುದು ಎಂದು ಹೇಳಲಾಗಿದೆ. ಈ ಚೀಟಿ ವಿತರಣೆಗೆ ಬೆರಳಚ್ಚು, ಅಕ್ಷಿಪಟಲ ಸ್ಕ್ಯಾನ್, ಭಾವಚಿತ್ರ ಈ ಮೂರು ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
‘ಆಧಾರ್ ಕಾರ್ಡ್ ಕಡ್ಡಾಯವಲ್ಲ, ಐಚ್ಚಿಕ’ ಎಂದು ಕೇಂದ್ರ ಸರ್ಕಾರ ಈಚೆಗೆ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದೆ. ಇದರಿಂದ ಆಧಾರ್ ಬಗೆಗಿದ್ದ ಗೊಂದಲ, ಅನಗತ್ಯ ಕಿರಿಕಿರಿಗಳಿಗೆ ಕೇಂದ್ರವೇ ಸ್ಪಷ್ಟನೆ ನೀಡಿದಂತಾಗಿದೆ. ಇದು ನಿಜಕ್ಕೂ ಸ್ವಾಗತಾರ್ಹ ಕ್ರಮ. ಉದ್ಯೋಗ ಖಾತ್ರಿ ಯೋಜನೆ, ಸರ್ವ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಗ್ರಾಮಿಣ ಆರೋಗ್ಯ ಕಾರ್ಯಕ್ರಮ, ಭಾರತ್ ನಿರ್ಮಾಣ್ನಂತಹ ಯೋಜನೆಗಳಡಿ ಉದ್ದೇಶಿತ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಚೀಟಿ ನೆರವಾಗುತ್ತದೆ ಎಂದು ಹೇಳಲಾಗಿತ್ತು. ಆಧಾರ್ ಚೀಟಿ ಪಡೆಯುವುದು ಸ್ವಯಂಪ್ರೇರಣೆಗೆ ಬಿಟ್ಟಿದ್ದು ಎಂದು ಆರಂಭದಲ್ಲಿ ಹೇಳಲಾಗಿತ್ತಾದರೂ ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಮಕ್ಕಳನ್ನು ಶಾಲೆಗೆ ಸೇರಿಸಲು, ಆರೋಗ್ಯ ಸೇವೆಗಳ ಲಾಭ ಪಡೆಯಲು, ಪಡಿತರ ಚೀಟಿ ಪಡೆಯಲು, ವಿದ್ಯಾರ್ಥಿ ವೇತನ ಪಡೆಯಲು ಆಧಾರ್ ಏಕೈಕ ಕಡ್ಡಾಯ ದಾಖಲೆ ಎಂಬಂತೆ ಬಿಂಬಿಸಲಾಗುತ್ತಿದೆ. ಆಧಾರ್ ಇಲ್ಲದಿದ್ದರೆ ಸಾರ್ವಜನಿಕರಿಗೆ ಈ ದೇಶದ ಪೌರತ್ವ ಮತ್ತು ನಾಗರಿಕ ಸೌಲಭ್ಯಗಳು ದಕ್ಕುವುದಿಲ್ಲ ಎಂದು ಬೆದರಿಕೆ ಹಾಕುವ ಮಟ್ಟಿಗೆ ಅಧಿಕಾರಿಗಳು ಸಾರ್ವಜನಿಕರ ಮೇಲೆ ಒತ್ತಡ ಹೇರಿದ್ದಾರೆ. ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯೊಂದರಲ್ಲಿ ಜಿಲ್ಲಾಧಿಕಾರಿಗಳು ಆಧಾರ್ ಇಲ್ಲದೆ ಯಾವ ಯೋಜನೆಯನ್ನೂ ಅನುಷ್ಠಾನಕ್ಕೆ ತರಕೂಡದು ಎಂದು ಕಟ್ಟಾಜ್ಞೆಯನ್ನೇ ಮಾಡಿದರು. ಅಧಿಕಾರಿಗಳೇ ಈ ರೀತಿ ಅಂಕುಶ ಹಿಡಿದು ಹೊರಟರೆ ಸಾರ್ವಜನಿಕರ ಗತಿ ಏನು ಎಂದು ಯೋಚಿಸಬೇಕಿದೆ.
ಮತ್ತಷ್ಟು ಓದು