ನಿಲೇಕಣಿಯವರ ದ್ವಂದ್ವ ಮತ್ತು ಬುದ್ದಿಜೀವಿಗಳ ಬೌದ್ಧಿಕ ಭ್ರಷ್ಟಚಾರ
– ರಾಕೇಶ್ ಶೆಟ್ಟಿ
೧.”ಎನ್.ಡಿ.ಎ ಸರ್ಕಾರದಲ್ಲಿ ಪ್ರಧಾನಿ ವಾಜಪೇಯಿಯವರು ಅಭಿವೃದ್ಧಿ ರಾಜಕಾರಣದ ಶಖೆಗೆ ಕಾರಣರಾದವರು,ಅವರಿಗಿಂತ ಮೊದಲಿಗೆ ಹಾಗೆ ಯಾರೂ ಮಾಡಿರಲಿಲ್ಲ” (Page 245)
೨.”ಅಭಿವೃದ್ಧಿ ರಾಜಕಾರಣವೆನ್ನುವುದು ನಮ್ಮ ರಾಜಕಾರಣಿಗಳು ಅಂದುಕೊಂಡಂತೆ ಕೆಲಸಕ್ಕೆ ಬಾರದ್ದೇನಲ್ಲ.ಇದಕ್ಕೆ ಉದಾಹರಣೆಯಾಗಿ ಗುಜರಾತಿನಲ್ಲಿ ನರೇಂದ್ರ ಮೋದಿಯವರು ತನ್ನ ಅಭಿವೃದ್ಧಿ ಮಂತ್ರದಿಂದಲೇ ಕಾಂಗ್ರೆಸ್ಸ್ ಪ್ರಣಾಳಿಕೆಯ ಉಚಿತ ವಿದ್ಯುತ್ ಅನ್ನು ಮತದಾರರ ಮುಂದೆಯೇ ಟೀಕಿಸಿ ಚಪ್ಪಾಳೆ ಗಿಟ್ಟಿಸಿದ್ದರು.ಮೋದಿಯವರ ಹಿಂದುತ್ವ ರಾಜಕಾರಣವೆಲ್ಲದರ ಮಧ್ಯೆಯೂ ಭ್ರಷ್ಟ ಸಬ್ಸಿಡಿ ಸಿಸ್ಟಂಗಿಂತಲೂ ಅಭಿವೃದ್ಧಿ ರಾಜಕಾರಣವೂ ಹೇಗೆ ವಿದ್ಯುತ್,ನೀರಾವರಿ ಮತ್ತು ಸಂಪರ್ಕ ಸೌಲಭ್ಯವನ್ನು ಜನರಿಗೆ ಕಲ್ಪಿಸುತ್ತವೆ ಅನ್ನುವುದನ್ನು ಮತದಾರರಿಗೆ ಹೇಳುವಲ್ಲಿ ಸಫಲರಾಗಿದ್ದಾರೆ.ಇದಕ್ಕಿಂತ ಮೊದಲಿಗೆ ಸುಧಾರಣವಾದಿ ರಾಜಕಾರಣಿಗಳ್ಯಾರು ಉದ್ಯಮ ಆಧಾರಿತ ಅಭಿವೃದ್ಧಿ ಯೋಜನೆಗಳಿಂದ ಬಡವರ ಬಾಳು ಹಸನಾಗುವುದರ ಬಗ್ಗೆ ತೋರಿಸುವಲ್ಲಿ ಸಫಲರಾಗಿರಲಿಲ್ಲ” – (Page 310)
೩.”ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸಲು ಶುರುಮಾಡಿದಾಗ,ನನ್ನ ತಂದೆಯವರ ಪ್ರತಿಪಾದಿಸುತಿದ್ದ ‘ನೆಹರೂ ಸೋಷಿಯಲಿಸಂ’ ಅನ್ನುವ ಭ್ರಮೆಯನ್ನು ಕಳಚಿ ಎಸೆಯಬೇಕಾಗಿ ಬಂತು”- (Page 17)
೪.”ಕಾಂಗ್ರೆಸ್ಸ್ ಸರ್ಕಾರಗಳು ಬಲಿಷ್ಟ ಜಾತಿಗಳ ತೆಕ್ಕೆಗೆ ಅಧಿಕಾರವನ್ನು ನೀಡಿ, ಕುಟುಂಬ ರಾಜಕಾರಣವನ್ನು ಜಾರಿಗೆ ತಂದವು.ಆ ಮೂಲಕ ಆಡಳಿತವನ್ನು ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ರಕ್ತಸಂಬಂಧದಲ್ಲೇ ಇರುವಂತೆ ನೋಡಿಕೊಂಡವು”- (Page 158)
ಮೇಲೆ ಉಲ್ಲೇಖಿಸಿರುವ ಅಂಶಗಳನ್ನು ನೋಡಿದರೆ ಇದ್ಯಾರೋ ಬಿಜೆಪಿಯ ಪರ ಒಲವುಳ್ಳ ಲೇಖಕನೋ,ಅಥವಾ ಬಿಜೆಪಿಯ ರಾಜಕಾರಣಿಯೋ ಬರೆದಿರುವುದು ಅನ್ನಿಸುತ್ತದಲ್ಲವೇ? ಮತ್ತಷ್ಟು ಓದು